Latest Updates
-
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ!
ಹಬ್ಬದ ಮಾರನೆದಿನ ಮಾಡುವ ನಿರುಮ್ಮಳ ತಿಳಿಸಾರು
ತಿಳಿಸಾರು ರೆಸಿಪಿಗಳಲ್ಲಿ ಛಪ್ಪನ್ನಾರು ವೈವಿಧ್ಯವಿದೆ. ಈ ವಿಧಾನ ನಿಮಗೆ ಗೊತ್ತಿತ್ತಾ?
ಬೇವು ಬೆಲ್ಲ ತಿಂದು ಸರ್ವಜಿತ್ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾಯಿತು. 28 ತರಹ ಹಬ್ಬದ ಅಡುಗೆ ಮಾಡಿ ಬಡಿಸಿ ತಿಂದು ಉಂಡು ಸುಸ್ತಾಯಿತು! ಅಬ್ಬ ಸೊಂಟ ನೋವು...ಅದು ಸುಸ್ತಲ್ಲರೀ. ಒಂದು ಬಗೆಯ ಆಲಸ್ಯ. . ನಾನು ಹೇಳ್ತಾಯಿರೋದು ಕರೆಕ್ಟಾ? ಇವತ್ತು ಸ್ವಲ್ಪ ಆರಾಮ ತೊಗೊಳ್ಳಿ.
ಇವತ್ತು ಬಿಸಿ ಅನ್ನ ಮತ್ತು ಸಾರು ಮಾಡಿ ಊಟ ಮಾಡಿ ಸಿಂಪಲ್ಲಾಗಿ. ತಿಳಿ ಸಾರು ತಯಾರಿಸುವ ಒಂದು ವಿಧಾನವನ್ನು ಬರೆಯುತ್ತೇನೆ. ಗುರುತು ಮಾಡಿಕೊಳ್ಳಿ.
ನಿಮ್ಮ ಮನೆಯಲ್ಲಿ 4 ಜನ ಇದ್ದೀರಾ ಅಂದುಕೊಂಡರೆ ಒಂದು ಹಿಡಿ ತೊಗರಿ ಬೇಳೆ, 6 ಒಣಮೆಣಸಿನಕಾಯಿ ಮತ್ತು ಒಂದು ಚಮಚ ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು. ಚೆನ್ನಾಗಿ ಕೆಂಪಾಗುವತನಕ ಹುರಿದು ಆರಲು ಬಿಡಬೇಕು.
ಹುರಿದದ್ದನ್ನ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕಬಾರದು. ಪೌಡರ್ ಆಗಬೇಕು. ಆನಂತರ ಸಾರು ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸಾಸಿವೆ ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಒಗ್ಗರಣೆ ಆಗುವಾಗ ಹುಣಿಸೆ ಹಣ್ಣಿನ ನೀರು ಮತ್ತು ಸ್ವಲ್ಪ ಬೆಲ್ಲ ಕೊನೆಗೆ ಉಪ್ಪು ಇಂಗು ಹಾಕಿ ಕುದಿಸಬೇಕು.
ಈಗಾಗಲೇ ನೀವು ಮಾಡಿಟ್ಟುಕೊಂಡಿರುವ ಪೊಡರ್ ಅನ್ನು ಸಾರಿನ ಪಾತ್ರೆಗೆ ಹಾಕಿ ಮತ್ತೆ ಕುದಿಸಬೇಕು. ಅಷ್ಟೆ. ಸ್ಟೌವ್ ಆಫ್ ಮಾಡಿದ ಮೇಲೆ ಮೂರು ನಾಕು ಐದು ಬಾರಿ ತೊಳೆದ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸಾರಿನ ಮೇಲೆ ಚೆಲ್ಲಬೇಕು. ಈಗ ಸಿಂಪಲ್ ಆದ ತಿಳಿಸಾರು ಸೇವಿಸಲು ರೆಡಿ.



Click it and Unblock the Notifications