Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಹಬ್ಬದ ಮಾರನೆದಿನ ಮಾಡುವ ನಿರುಮ್ಮಳ ತಿಳಿಸಾರು
ತಿಳಿಸಾರು ರೆಸಿಪಿಗಳಲ್ಲಿ ಛಪ್ಪನ್ನಾರು ವೈವಿಧ್ಯವಿದೆ. ಈ ವಿಧಾನ ನಿಮಗೆ ಗೊತ್ತಿತ್ತಾ?
ಬೇವು ಬೆಲ್ಲ ತಿಂದು ಸರ್ವಜಿತ್ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾಯಿತು. 28 ತರಹ ಹಬ್ಬದ ಅಡುಗೆ ಮಾಡಿ ಬಡಿಸಿ ತಿಂದು ಉಂಡು ಸುಸ್ತಾಯಿತು! ಅಬ್ಬ ಸೊಂಟ ನೋವು...ಅದು ಸುಸ್ತಲ್ಲರೀ. ಒಂದು ಬಗೆಯ ಆಲಸ್ಯ. . ನಾನು ಹೇಳ್ತಾಯಿರೋದು ಕರೆಕ್ಟಾ? ಇವತ್ತು ಸ್ವಲ್ಪ ಆರಾಮ ತೊಗೊಳ್ಳಿ.
ಇವತ್ತು ಬಿಸಿ ಅನ್ನ ಮತ್ತು ಸಾರು ಮಾಡಿ ಊಟ ಮಾಡಿ ಸಿಂಪಲ್ಲಾಗಿ. ತಿಳಿ ಸಾರು ತಯಾರಿಸುವ ಒಂದು ವಿಧಾನವನ್ನು ಬರೆಯುತ್ತೇನೆ. ಗುರುತು ಮಾಡಿಕೊಳ್ಳಿ.
ನಿಮ್ಮ ಮನೆಯಲ್ಲಿ 4 ಜನ ಇದ್ದೀರಾ ಅಂದುಕೊಂಡರೆ ಒಂದು ಹಿಡಿ ತೊಗರಿ ಬೇಳೆ, 6 ಒಣಮೆಣಸಿನಕಾಯಿ ಮತ್ತು ಒಂದು ಚಮಚ ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು. ಚೆನ್ನಾಗಿ ಕೆಂಪಾಗುವತನಕ ಹುರಿದು ಆರಲು ಬಿಡಬೇಕು.
ಹುರಿದದ್ದನ್ನ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕಬಾರದು. ಪೌಡರ್ ಆಗಬೇಕು. ಆನಂತರ ಸಾರು ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸಾಸಿವೆ ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಒಗ್ಗರಣೆ ಆಗುವಾಗ ಹುಣಿಸೆ ಹಣ್ಣಿನ ನೀರು ಮತ್ತು ಸ್ವಲ್ಪ ಬೆಲ್ಲ ಕೊನೆಗೆ ಉಪ್ಪು ಇಂಗು ಹಾಕಿ ಕುದಿಸಬೇಕು.
ಈಗಾಗಲೇ ನೀವು ಮಾಡಿಟ್ಟುಕೊಂಡಿರುವ ಪೊಡರ್ ಅನ್ನು ಸಾರಿನ ಪಾತ್ರೆಗೆ ಹಾಕಿ ಮತ್ತೆ ಕುದಿಸಬೇಕು. ಅಷ್ಟೆ. ಸ್ಟೌವ್ ಆಫ್ ಮಾಡಿದ ಮೇಲೆ ಮೂರು ನಾಕು ಐದು ಬಾರಿ ತೊಳೆದ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸಾರಿನ ಮೇಲೆ ಚೆಲ್ಲಬೇಕು. ಈಗ ಸಿಂಪಲ್ ಆದ ತಿಳಿಸಾರು ಸೇವಿಸಲು ರೆಡಿ.



Click it and Unblock the Notifications