Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹಬ್ಬದ ಮಾರನೆದಿನ ಮಾಡುವ ನಿರುಮ್ಮಳ ತಿಳಿಸಾರು
ತಿಳಿಸಾರು ರೆಸಿಪಿಗಳಲ್ಲಿ ಛಪ್ಪನ್ನಾರು ವೈವಿಧ್ಯವಿದೆ. ಈ ವಿಧಾನ ನಿಮಗೆ ಗೊತ್ತಿತ್ತಾ?
ಬೇವು ಬೆಲ್ಲ ತಿಂದು ಸರ್ವಜಿತ್ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾಯಿತು. 28 ತರಹ ಹಬ್ಬದ ಅಡುಗೆ ಮಾಡಿ ಬಡಿಸಿ ತಿಂದು ಉಂಡು ಸುಸ್ತಾಯಿತು! ಅಬ್ಬ ಸೊಂಟ ನೋವು...ಅದು ಸುಸ್ತಲ್ಲರೀ. ಒಂದು ಬಗೆಯ ಆಲಸ್ಯ. . ನಾನು ಹೇಳ್ತಾಯಿರೋದು ಕರೆಕ್ಟಾ? ಇವತ್ತು ಸ್ವಲ್ಪ ಆರಾಮ ತೊಗೊಳ್ಳಿ.
ಇವತ್ತು ಬಿಸಿ ಅನ್ನ ಮತ್ತು ಸಾರು ಮಾಡಿ ಊಟ ಮಾಡಿ ಸಿಂಪಲ್ಲಾಗಿ. ತಿಳಿ ಸಾರು ತಯಾರಿಸುವ ಒಂದು ವಿಧಾನವನ್ನು ಬರೆಯುತ್ತೇನೆ. ಗುರುತು ಮಾಡಿಕೊಳ್ಳಿ.
ನಿಮ್ಮ ಮನೆಯಲ್ಲಿ 4 ಜನ ಇದ್ದೀರಾ ಅಂದುಕೊಂಡರೆ ಒಂದು ಹಿಡಿ ತೊಗರಿ ಬೇಳೆ, 6 ಒಣಮೆಣಸಿನಕಾಯಿ ಮತ್ತು ಒಂದು ಚಮಚ ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು. ಚೆನ್ನಾಗಿ ಕೆಂಪಾಗುವತನಕ ಹುರಿದು ಆರಲು ಬಿಡಬೇಕು.
ಹುರಿದದ್ದನ್ನ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕಬಾರದು. ಪೌಡರ್ ಆಗಬೇಕು. ಆನಂತರ ಸಾರು ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸಾಸಿವೆ ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಒಗ್ಗರಣೆ ಆಗುವಾಗ ಹುಣಿಸೆ ಹಣ್ಣಿನ ನೀರು ಮತ್ತು ಸ್ವಲ್ಪ ಬೆಲ್ಲ ಕೊನೆಗೆ ಉಪ್ಪು ಇಂಗು ಹಾಕಿ ಕುದಿಸಬೇಕು.
ಈಗಾಗಲೇ ನೀವು ಮಾಡಿಟ್ಟುಕೊಂಡಿರುವ ಪೊಡರ್ ಅನ್ನು ಸಾರಿನ ಪಾತ್ರೆಗೆ ಹಾಕಿ ಮತ್ತೆ ಕುದಿಸಬೇಕು. ಅಷ್ಟೆ. ಸ್ಟೌವ್ ಆಫ್ ಮಾಡಿದ ಮೇಲೆ ಮೂರು ನಾಕು ಐದು ಬಾರಿ ತೊಳೆದ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸಾರಿನ ಮೇಲೆ ಚೆಲ್ಲಬೇಕು. ಈಗ ಸಿಂಪಲ್ ಆದ ತಿಳಿಸಾರು ಸೇವಿಸಲು ರೆಡಿ.



Click it and Unblock the Notifications
