Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಹಬ್ಬದ ಮಾರನೆದಿನ ಮಾಡುವ ನಿರುಮ್ಮಳ ತಿಳಿಸಾರು
ತಿಳಿಸಾರು ರೆಸಿಪಿಗಳಲ್ಲಿ ಛಪ್ಪನ್ನಾರು ವೈವಿಧ್ಯವಿದೆ. ಈ ವಿಧಾನ ನಿಮಗೆ ಗೊತ್ತಿತ್ತಾ?
ಬೇವು ಬೆಲ್ಲ ತಿಂದು ಸರ್ವಜಿತ್ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾಯಿತು. 28 ತರಹ ಹಬ್ಬದ ಅಡುಗೆ ಮಾಡಿ ಬಡಿಸಿ ತಿಂದು ಉಂಡು ಸುಸ್ತಾಯಿತು! ಅಬ್ಬ ಸೊಂಟ ನೋವು...ಅದು ಸುಸ್ತಲ್ಲರೀ. ಒಂದು ಬಗೆಯ ಆಲಸ್ಯ. . ನಾನು ಹೇಳ್ತಾಯಿರೋದು ಕರೆಕ್ಟಾ? ಇವತ್ತು ಸ್ವಲ್ಪ ಆರಾಮ ತೊಗೊಳ್ಳಿ.
ಇವತ್ತು ಬಿಸಿ ಅನ್ನ ಮತ್ತು ಸಾರು ಮಾಡಿ ಊಟ ಮಾಡಿ ಸಿಂಪಲ್ಲಾಗಿ. ತಿಳಿ ಸಾರು ತಯಾರಿಸುವ ಒಂದು ವಿಧಾನವನ್ನು ಬರೆಯುತ್ತೇನೆ. ಗುರುತು ಮಾಡಿಕೊಳ್ಳಿ.
ನಿಮ್ಮ ಮನೆಯಲ್ಲಿ 4 ಜನ ಇದ್ದೀರಾ ಅಂದುಕೊಂಡರೆ ಒಂದು ಹಿಡಿ ತೊಗರಿ ಬೇಳೆ, 6 ಒಣಮೆಣಸಿನಕಾಯಿ ಮತ್ತು ಒಂದು ಚಮಚ ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು. ಚೆನ್ನಾಗಿ ಕೆಂಪಾಗುವತನಕ ಹುರಿದು ಆರಲು ಬಿಡಬೇಕು.
ಹುರಿದದ್ದನ್ನ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕಬಾರದು. ಪೌಡರ್ ಆಗಬೇಕು. ಆನಂತರ ಸಾರು ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸಾಸಿವೆ ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಒಗ್ಗರಣೆ ಆಗುವಾಗ ಹುಣಿಸೆ ಹಣ್ಣಿನ ನೀರು ಮತ್ತು ಸ್ವಲ್ಪ ಬೆಲ್ಲ ಕೊನೆಗೆ ಉಪ್ಪು ಇಂಗು ಹಾಕಿ ಕುದಿಸಬೇಕು.
ಈಗಾಗಲೇ ನೀವು ಮಾಡಿಟ್ಟುಕೊಂಡಿರುವ ಪೊಡರ್ ಅನ್ನು ಸಾರಿನ ಪಾತ್ರೆಗೆ ಹಾಕಿ ಮತ್ತೆ ಕುದಿಸಬೇಕು. ಅಷ್ಟೆ. ಸ್ಟೌವ್ ಆಫ್ ಮಾಡಿದ ಮೇಲೆ ಮೂರು ನಾಕು ಐದು ಬಾರಿ ತೊಳೆದ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸಾರಿನ ಮೇಲೆ ಚೆಲ್ಲಬೇಕು. ಈಗ ಸಿಂಪಲ್ ಆದ ತಿಳಿಸಾರು ಸೇವಿಸಲು ರೆಡಿ.



Click it and Unblock the Notifications