Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಗಣಪನಿಗೆ ಇಷ್ಟವಾದ ಕಡುಬು ನಿಮಗಿಷ್ಟ ತಾನೆ?

ಕಡುಬು ಮಾಡಲು ಏನೇನು ಬೇಕು?
* 1 ಪಾವು ಬೆಲ್ಲ
* 1 ಪಾವು ತೊಗರಿಬೇಳೆ
* 1 ಪಾವು ಚಿರೋಟಿರವೆ
* ಒಣಕೊಬ್ಬರಿ, ಗಸಗಸೆ
* ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಪಚ್ಚಕರ್ಪೂರ
* ಚೂರು ಒಣಶುಂಠಿ
*ತುಪ್ಪ ಅಥವಾ ಎಣ್ಣೆ
ಕಡುಬು ಮಾಡುವುದು ಹೇಗೆ?
* ಹೂರಣ: ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿ ನೀರು ಬಸಿದು ತಣ್ಣಗಾದ ಮೇಲೆ ಬೆಲ್ಲದ ಜತೆಗೆ ಹೋಳಿಗೆ ಹೂರಣಕ್ಕಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ತುಪ್ಪದಲ್ಲಿ ಹುರಿದ ಗಸಗಸೆ, ದ್ರಾಕ್ಷಿಗೆ ಕೊಬ್ಬರಿ ತುರಿ ಬೆರಸಿ ಹೂರಣದೊಂದಿಗೆ ಕಲಸಿ. ಕೊನೆಗೆ ಏಲಕ್ಕಿ ಪುಡಿ, ಪಚ್ಚಕರ್ಪೂರ, ಒಣಶುಂಠಿ ಬೆರೆಸಿದರೆ ಹೂರಣ ಘಮಘಮ ಎನ್ನುತ್ತದೆ.
* ಕಣಕ: ಚಿರೋಟಿ ರವೆಗೆ ಎರಡು ಚಮಚ ತುಪ್ಪ, ಸ್ವಲ್ಪ ಎಣ್ಣೆ , ಚೂರು ಉಪ್ಪು ಬೆರೆಸಿ ಪೂರಿಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಹಿಟ್ಟಿನ ಮೇಲೆ ಒದ್ದೆ ಬಟ್ಟೆ ಮುಚ್ಚಿಡಬೇಕು. ಹಿಟ್ಟು ಒಂದು ಗಂಟೆ ನೆನೆದ ನಂತರ ಪೂರಿ ತರಹ ತೆಳುವಾಗಿ ಲಟ್ಟಿಸಬೇಕು. ಹೂರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿದ ಹಿಟ್ಟಿನ ಮೇಲಿಟ್ಟು ಕಡುಬಿನಾಕಾರಕ್ಕೆ ಮಡಿಚಿ, ಅಂಚನ್ನು ಒತ್ತಿ ಕಾದ ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿಯಬೇಕು.
ಈಗ ಘಮ ಘಮ ಎನ್ನುವ ಗರಿಗರಿಯಾದ ಕಡುಬು ರೆಡಿಯಾಗಿದೆ. ಗಣಪನ ಮುಂದೆ ನೈವೇದ್ಯಕ್ಕೆ ಇಟ್ಟು ನಂತರ ಮನೆಗೆ ಬಂದವರೊಂದಿಗೂ ಹಂಚಿ ತಿನ್ನಿ. ನೀವು ಮಾಡಿದ ಕಡುಬನ್ನು ತಿಂದವರು ಹೊಗಳದೆ ಹಿಂದಿರುಗುವುದಿಲ್ಲ.



Click it and Unblock the Notifications











