Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣಪನಿಗೆ ಇಷ್ಟವಾದ ಕಡುಬು ನಿಮಗಿಷ್ಟ ತಾನೆ?

ಕಡುಬು ಮಾಡಲು ಏನೇನು ಬೇಕು?
* 1 ಪಾವು ಬೆಲ್ಲ
* 1 ಪಾವು ತೊಗರಿಬೇಳೆ
* 1 ಪಾವು ಚಿರೋಟಿರವೆ
* ಒಣಕೊಬ್ಬರಿ, ಗಸಗಸೆ
* ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಪಚ್ಚಕರ್ಪೂರ
* ಚೂರು ಒಣಶುಂಠಿ
*ತುಪ್ಪ ಅಥವಾ ಎಣ್ಣೆ
ಕಡುಬು ಮಾಡುವುದು ಹೇಗೆ?
* ಹೂರಣ: ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿ ನೀರು ಬಸಿದು ತಣ್ಣಗಾದ ಮೇಲೆ ಬೆಲ್ಲದ ಜತೆಗೆ ಹೋಳಿಗೆ ಹೂರಣಕ್ಕಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ತುಪ್ಪದಲ್ಲಿ ಹುರಿದ ಗಸಗಸೆ, ದ್ರಾಕ್ಷಿಗೆ ಕೊಬ್ಬರಿ ತುರಿ ಬೆರಸಿ ಹೂರಣದೊಂದಿಗೆ ಕಲಸಿ. ಕೊನೆಗೆ ಏಲಕ್ಕಿ ಪುಡಿ, ಪಚ್ಚಕರ್ಪೂರ, ಒಣಶುಂಠಿ ಬೆರೆಸಿದರೆ ಹೂರಣ ಘಮಘಮ ಎನ್ನುತ್ತದೆ.
* ಕಣಕ: ಚಿರೋಟಿ ರವೆಗೆ ಎರಡು ಚಮಚ ತುಪ್ಪ, ಸ್ವಲ್ಪ ಎಣ್ಣೆ , ಚೂರು ಉಪ್ಪು ಬೆರೆಸಿ ಪೂರಿಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಹಿಟ್ಟಿನ ಮೇಲೆ ಒದ್ದೆ ಬಟ್ಟೆ ಮುಚ್ಚಿಡಬೇಕು. ಹಿಟ್ಟು ಒಂದು ಗಂಟೆ ನೆನೆದ ನಂತರ ಪೂರಿ ತರಹ ತೆಳುವಾಗಿ ಲಟ್ಟಿಸಬೇಕು. ಹೂರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿದ ಹಿಟ್ಟಿನ ಮೇಲಿಟ್ಟು ಕಡುಬಿನಾಕಾರಕ್ಕೆ ಮಡಿಚಿ, ಅಂಚನ್ನು ಒತ್ತಿ ಕಾದ ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿಯಬೇಕು.
ಈಗ ಘಮ ಘಮ ಎನ್ನುವ ಗರಿಗರಿಯಾದ ಕಡುಬು ರೆಡಿಯಾಗಿದೆ. ಗಣಪನ ಮುಂದೆ ನೈವೇದ್ಯಕ್ಕೆ ಇಟ್ಟು ನಂತರ ಮನೆಗೆ ಬಂದವರೊಂದಿಗೂ ಹಂಚಿ ತಿನ್ನಿ. ನೀವು ಮಾಡಿದ ಕಡುಬನ್ನು ತಿಂದವರು ಹೊಗಳದೆ ಹಿಂದಿರುಗುವುದಿಲ್ಲ.



Click it and Unblock the Notifications









