Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗಳಗೌರಿಗೆ ಹೆಸರು ಬೇಳೆ ಪಾಯಸದ ನೈವೇದ್ಯ

ಶ್ರಾವಣದ ಮೊದಲ ಮಂಗಳಗೌರಿ ಹಬ್ಬಕ್ಕೆ ನೈವೇದ್ಯ ಮಾಡಲೇಬೇಕು. ಹೀಗಿದ್ದ ಮೇಲೆ ಏನಾದರೂ ವಿಶೇಷವಾಗಿರುವುದನ್ನೇ ನೈವೇದ್ಯಕ್ಕೆ ಮಾಡಿದರೆ ದೇವಿಗೆ ಸಂತೃಪ್ತಿ. ಈ ರುಚಿ ರುಚಿಯಾದ ಪಾಯಸವನ್ನು ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
* ಹೆಸರು ಬೇಳೆ 1 ಕಪ್
* ಸಬ್ಬಕ್ಕಿ- 2 ಚಮಚ
* ಬೆಲ್ಲದ ಪುಡಿ 2 ಕಪ್
* ಅರ್ಧ ಚಮಚ ಏಲಕ್ಕಿ ಪುಡಿ
* ಗೋಡಂಬಿ ಮತ್ತು ದ್ರಾಕ್ಷಿ 10
* 2 ಚಮಚ ಹಾಲಿನಲ್ಲಿ ನೆನೆಸಿಟ್ಟ 2 ದಳ ಕೇಸರಿ
* ತುಪ್ಪ ಮತ್ತು ತೆಂಗಿನಕಾಯಿ 1
ಮಾಡುವ ವಿಧಾನ : ಒಂದು ತೆಂಗಿನ ಕಾಯಿಯಲ್ಲಿ ಸ್ವಲ್ಪ ಕಾಯಿ ಕತ್ತರಿಸಿಕೊಂಡು ಚಿಕ್ಕ ಚೂರುಗಳಾಗಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದು ಸ್ವಲ್ಪ ತೆಂಗಿನ ಕಾಯಿಯನ್ನು ತುರಿದಿಟ್ಟುಕೊಂಡು ಒಂದು ಕಪ್ ನೀರು ಬೆರೆಸಿ ತೆಂಗಿನ ಹಾಲು ತೆಗೆದಿಡಬೇಕು. ಮತ್ತೆ ಅದಕ್ಕೆ ಇನ್ನೊಂದು ಕಪ್ ನೀರು ಬೆರೆಸಿ ಇದರಿಂದಲೂ ತೆಂಗಿನ ಹಾಲು ತೆಗೆದುಕೊಂಡು ಇನ್ನೊಂದು ಬಟ್ಟಲಿನಲ್ಲಿ ಎತ್ತಿಟ್ಟುಕೊಳ್ಳಬೇಕು.
ಹೆಸರು ಬೇಳೆಯನ್ನು ಚೆನ್ನಾಗಿ ಹುರಿದುಕೊಂಡು ಹೆಸರುಬೇಳೆ ಮತ್ತು ಸಬ್ಬಕ್ಕಿಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. ಇಳಿಸಿದ ನಂತರ ಇವೆರಡರ ಮಿಶ್ರಣವನ್ನು ಚೆನ್ನಾಗಿ ಮಸೆಯಬೇಕು. ನಂತರ ಪಾತ್ರೆಯೊಂದಕ್ಕೆ ಬೇಳೆ ಮಿಶ್ರಣ ಮತ್ತು ಬೆಲ್ಲದ ಪಾಕವನ್ನು ಒಟ್ಟಿಗೆ ಬೆರೆಸಿಕೊಂಡು 10 ನಿಮಿಷ ಬೇಯಿಸಬೇಕು. ಈಗ ಎರಡನೇ ಬಾರಿ ಎತ್ತಿಟ್ಟಿದ್ದ ತೆಂಗಿನಹಾಲನ್ನು ಇದಕ್ಕೆ ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ಮೊದಲನೆ ಬಾರಿ ಎತ್ತಿಟ್ಟಿದ್ದ ತೆಂಗಿನ ಹಾಲನ್ನು ಬೆರೆಸಿ ಒಲೆ ಆರಿಸಬೇಕು.
ಪ್ರತ್ಯೇಕ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಗೋಡಂಬಿ ಚೂರು, ತೆಂಗಿನ ಚೂರು ಮತ್ತು ಒಣದ್ರಾಕ್ಷಿಯನ್ನು ಅದಕ್ಕೆ ಹಾಕಿ ಹುರಿದುಕೊಂಡು ಬೇಳೆಗೆ ಬೆರೆಸಿ, ಕೇಸರಿ ದಳ ಹಾಗೂ ಏಲಕ್ಕಿ ಪುಡಿ ಸೇರಿಸಬೇಕು. ಈಗ ರುಚಿಕಟ್ಟಾದ ಹೆಸರು ಬೇಳೆ ಪಾಯಸ ನೈವೇದ್ಯಕ್ಕೆ ತಯಾರಾಗಿದೆ.



Click it and Unblock the Notifications