Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಂಗಳಗೌರಿಗೆ ಹೆಸರು ಬೇಳೆ ಪಾಯಸದ ನೈವೇದ್ಯ

ಶ್ರಾವಣದ ಮೊದಲ ಮಂಗಳಗೌರಿ ಹಬ್ಬಕ್ಕೆ ನೈವೇದ್ಯ ಮಾಡಲೇಬೇಕು. ಹೀಗಿದ್ದ ಮೇಲೆ ಏನಾದರೂ ವಿಶೇಷವಾಗಿರುವುದನ್ನೇ ನೈವೇದ್ಯಕ್ಕೆ ಮಾಡಿದರೆ ದೇವಿಗೆ ಸಂತೃಪ್ತಿ. ಈ ರುಚಿ ರುಚಿಯಾದ ಪಾಯಸವನ್ನು ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
* ಹೆಸರು ಬೇಳೆ 1 ಕಪ್
* ಸಬ್ಬಕ್ಕಿ- 2 ಚಮಚ
* ಬೆಲ್ಲದ ಪುಡಿ 2 ಕಪ್
* ಅರ್ಧ ಚಮಚ ಏಲಕ್ಕಿ ಪುಡಿ
* ಗೋಡಂಬಿ ಮತ್ತು ದ್ರಾಕ್ಷಿ 10
* 2 ಚಮಚ ಹಾಲಿನಲ್ಲಿ ನೆನೆಸಿಟ್ಟ 2 ದಳ ಕೇಸರಿ
* ತುಪ್ಪ ಮತ್ತು ತೆಂಗಿನಕಾಯಿ 1
ಮಾಡುವ ವಿಧಾನ : ಒಂದು ತೆಂಗಿನ ಕಾಯಿಯಲ್ಲಿ ಸ್ವಲ್ಪ ಕಾಯಿ ಕತ್ತರಿಸಿಕೊಂಡು ಚಿಕ್ಕ ಚೂರುಗಳಾಗಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದು ಸ್ವಲ್ಪ ತೆಂಗಿನ ಕಾಯಿಯನ್ನು ತುರಿದಿಟ್ಟುಕೊಂಡು ಒಂದು ಕಪ್ ನೀರು ಬೆರೆಸಿ ತೆಂಗಿನ ಹಾಲು ತೆಗೆದಿಡಬೇಕು. ಮತ್ತೆ ಅದಕ್ಕೆ ಇನ್ನೊಂದು ಕಪ್ ನೀರು ಬೆರೆಸಿ ಇದರಿಂದಲೂ ತೆಂಗಿನ ಹಾಲು ತೆಗೆದುಕೊಂಡು ಇನ್ನೊಂದು ಬಟ್ಟಲಿನಲ್ಲಿ ಎತ್ತಿಟ್ಟುಕೊಳ್ಳಬೇಕು.
ಹೆಸರು ಬೇಳೆಯನ್ನು ಚೆನ್ನಾಗಿ ಹುರಿದುಕೊಂಡು ಹೆಸರುಬೇಳೆ ಮತ್ತು ಸಬ್ಬಕ್ಕಿಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. ಇಳಿಸಿದ ನಂತರ ಇವೆರಡರ ಮಿಶ್ರಣವನ್ನು ಚೆನ್ನಾಗಿ ಮಸೆಯಬೇಕು. ನಂತರ ಪಾತ್ರೆಯೊಂದಕ್ಕೆ ಬೇಳೆ ಮಿಶ್ರಣ ಮತ್ತು ಬೆಲ್ಲದ ಪಾಕವನ್ನು ಒಟ್ಟಿಗೆ ಬೆರೆಸಿಕೊಂಡು 10 ನಿಮಿಷ ಬೇಯಿಸಬೇಕು. ಈಗ ಎರಡನೇ ಬಾರಿ ಎತ್ತಿಟ್ಟಿದ್ದ ತೆಂಗಿನಹಾಲನ್ನು ಇದಕ್ಕೆ ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ಮೊದಲನೆ ಬಾರಿ ಎತ್ತಿಟ್ಟಿದ್ದ ತೆಂಗಿನ ಹಾಲನ್ನು ಬೆರೆಸಿ ಒಲೆ ಆರಿಸಬೇಕು.
ಪ್ರತ್ಯೇಕ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಗೋಡಂಬಿ ಚೂರು, ತೆಂಗಿನ ಚೂರು ಮತ್ತು ಒಣದ್ರಾಕ್ಷಿಯನ್ನು ಅದಕ್ಕೆ ಹಾಕಿ ಹುರಿದುಕೊಂಡು ಬೇಳೆಗೆ ಬೆರೆಸಿ, ಕೇಸರಿ ದಳ ಹಾಗೂ ಏಲಕ್ಕಿ ಪುಡಿ ಸೇರಿಸಬೇಕು. ಈಗ ರುಚಿಕಟ್ಟಾದ ಹೆಸರು ಬೇಳೆ ಪಾಯಸ ನೈವೇದ್ಯಕ್ಕೆ ತಯಾರಾಗಿದೆ.



Click it and Unblock the Notifications











