Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಮಂಗಳಗೌರಿಗೆ ಹೆಸರು ಬೇಳೆ ಪಾಯಸದ ನೈವೇದ್ಯ

ಶ್ರಾವಣದ ಮೊದಲ ಮಂಗಳಗೌರಿ ಹಬ್ಬಕ್ಕೆ ನೈವೇದ್ಯ ಮಾಡಲೇಬೇಕು. ಹೀಗಿದ್ದ ಮೇಲೆ ಏನಾದರೂ ವಿಶೇಷವಾಗಿರುವುದನ್ನೇ ನೈವೇದ್ಯಕ್ಕೆ ಮಾಡಿದರೆ ದೇವಿಗೆ ಸಂತೃಪ್ತಿ. ಈ ರುಚಿ ರುಚಿಯಾದ ಪಾಯಸವನ್ನು ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
* ಹೆಸರು ಬೇಳೆ 1 ಕಪ್
* ಸಬ್ಬಕ್ಕಿ- 2 ಚಮಚ
* ಬೆಲ್ಲದ ಪುಡಿ 2 ಕಪ್
* ಅರ್ಧ ಚಮಚ ಏಲಕ್ಕಿ ಪುಡಿ
* ಗೋಡಂಬಿ ಮತ್ತು ದ್ರಾಕ್ಷಿ 10
* 2 ಚಮಚ ಹಾಲಿನಲ್ಲಿ ನೆನೆಸಿಟ್ಟ 2 ದಳ ಕೇಸರಿ
* ತುಪ್ಪ ಮತ್ತು ತೆಂಗಿನಕಾಯಿ 1
ಮಾಡುವ ವಿಧಾನ : ಒಂದು ತೆಂಗಿನ ಕಾಯಿಯಲ್ಲಿ ಸ್ವಲ್ಪ ಕಾಯಿ ಕತ್ತರಿಸಿಕೊಂಡು ಚಿಕ್ಕ ಚೂರುಗಳಾಗಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದು ಸ್ವಲ್ಪ ತೆಂಗಿನ ಕಾಯಿಯನ್ನು ತುರಿದಿಟ್ಟುಕೊಂಡು ಒಂದು ಕಪ್ ನೀರು ಬೆರೆಸಿ ತೆಂಗಿನ ಹಾಲು ತೆಗೆದಿಡಬೇಕು. ಮತ್ತೆ ಅದಕ್ಕೆ ಇನ್ನೊಂದು ಕಪ್ ನೀರು ಬೆರೆಸಿ ಇದರಿಂದಲೂ ತೆಂಗಿನ ಹಾಲು ತೆಗೆದುಕೊಂಡು ಇನ್ನೊಂದು ಬಟ್ಟಲಿನಲ್ಲಿ ಎತ್ತಿಟ್ಟುಕೊಳ್ಳಬೇಕು.
ಹೆಸರು ಬೇಳೆಯನ್ನು ಚೆನ್ನಾಗಿ ಹುರಿದುಕೊಂಡು ಹೆಸರುಬೇಳೆ ಮತ್ತು ಸಬ್ಬಕ್ಕಿಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. ಇಳಿಸಿದ ನಂತರ ಇವೆರಡರ ಮಿಶ್ರಣವನ್ನು ಚೆನ್ನಾಗಿ ಮಸೆಯಬೇಕು. ನಂತರ ಪಾತ್ರೆಯೊಂದಕ್ಕೆ ಬೇಳೆ ಮಿಶ್ರಣ ಮತ್ತು ಬೆಲ್ಲದ ಪಾಕವನ್ನು ಒಟ್ಟಿಗೆ ಬೆರೆಸಿಕೊಂಡು 10 ನಿಮಿಷ ಬೇಯಿಸಬೇಕು. ಈಗ ಎರಡನೇ ಬಾರಿ ಎತ್ತಿಟ್ಟಿದ್ದ ತೆಂಗಿನಹಾಲನ್ನು ಇದಕ್ಕೆ ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ಮೊದಲನೆ ಬಾರಿ ಎತ್ತಿಟ್ಟಿದ್ದ ತೆಂಗಿನ ಹಾಲನ್ನು ಬೆರೆಸಿ ಒಲೆ ಆರಿಸಬೇಕು.
ಪ್ರತ್ಯೇಕ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಗೋಡಂಬಿ ಚೂರು, ತೆಂಗಿನ ಚೂರು ಮತ್ತು ಒಣದ್ರಾಕ್ಷಿಯನ್ನು ಅದಕ್ಕೆ ಹಾಕಿ ಹುರಿದುಕೊಂಡು ಬೇಳೆಗೆ ಬೆರೆಸಿ, ಕೇಸರಿ ದಳ ಹಾಗೂ ಏಲಕ್ಕಿ ಪುಡಿ ಸೇರಿಸಬೇಕು. ಈಗ ರುಚಿಕಟ್ಟಾದ ಹೆಸರು ಬೇಳೆ ಪಾಯಸ ನೈವೇದ್ಯಕ್ಕೆ ತಯಾರಾಗಿದೆ.



Click it and Unblock the Notifications