Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಂಗಳಗೌರಿಗೆ ಹೆಸರು ಬೇಳೆ ಪಾಯಸದ ನೈವೇದ್ಯ

ಶ್ರಾವಣದ ಮೊದಲ ಮಂಗಳಗೌರಿ ಹಬ್ಬಕ್ಕೆ ನೈವೇದ್ಯ ಮಾಡಲೇಬೇಕು. ಹೀಗಿದ್ದ ಮೇಲೆ ಏನಾದರೂ ವಿಶೇಷವಾಗಿರುವುದನ್ನೇ ನೈವೇದ್ಯಕ್ಕೆ ಮಾಡಿದರೆ ದೇವಿಗೆ ಸಂತೃಪ್ತಿ. ಈ ರುಚಿ ರುಚಿಯಾದ ಪಾಯಸವನ್ನು ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
* ಹೆಸರು ಬೇಳೆ 1 ಕಪ್
* ಸಬ್ಬಕ್ಕಿ- 2 ಚಮಚ
* ಬೆಲ್ಲದ ಪುಡಿ 2 ಕಪ್
* ಅರ್ಧ ಚಮಚ ಏಲಕ್ಕಿ ಪುಡಿ
* ಗೋಡಂಬಿ ಮತ್ತು ದ್ರಾಕ್ಷಿ 10
* 2 ಚಮಚ ಹಾಲಿನಲ್ಲಿ ನೆನೆಸಿಟ್ಟ 2 ದಳ ಕೇಸರಿ
* ತುಪ್ಪ ಮತ್ತು ತೆಂಗಿನಕಾಯಿ 1
ಮಾಡುವ ವಿಧಾನ : ಒಂದು ತೆಂಗಿನ ಕಾಯಿಯಲ್ಲಿ ಸ್ವಲ್ಪ ಕಾಯಿ ಕತ್ತರಿಸಿಕೊಂಡು ಚಿಕ್ಕ ಚೂರುಗಳಾಗಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದು ಸ್ವಲ್ಪ ತೆಂಗಿನ ಕಾಯಿಯನ್ನು ತುರಿದಿಟ್ಟುಕೊಂಡು ಒಂದು ಕಪ್ ನೀರು ಬೆರೆಸಿ ತೆಂಗಿನ ಹಾಲು ತೆಗೆದಿಡಬೇಕು. ಮತ್ತೆ ಅದಕ್ಕೆ ಇನ್ನೊಂದು ಕಪ್ ನೀರು ಬೆರೆಸಿ ಇದರಿಂದಲೂ ತೆಂಗಿನ ಹಾಲು ತೆಗೆದುಕೊಂಡು ಇನ್ನೊಂದು ಬಟ್ಟಲಿನಲ್ಲಿ ಎತ್ತಿಟ್ಟುಕೊಳ್ಳಬೇಕು.
ಹೆಸರು ಬೇಳೆಯನ್ನು ಚೆನ್ನಾಗಿ ಹುರಿದುಕೊಂಡು ಹೆಸರುಬೇಳೆ ಮತ್ತು ಸಬ್ಬಕ್ಕಿಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. ಇಳಿಸಿದ ನಂತರ ಇವೆರಡರ ಮಿಶ್ರಣವನ್ನು ಚೆನ್ನಾಗಿ ಮಸೆಯಬೇಕು. ನಂತರ ಪಾತ್ರೆಯೊಂದಕ್ಕೆ ಬೇಳೆ ಮಿಶ್ರಣ ಮತ್ತು ಬೆಲ್ಲದ ಪಾಕವನ್ನು ಒಟ್ಟಿಗೆ ಬೆರೆಸಿಕೊಂಡು 10 ನಿಮಿಷ ಬೇಯಿಸಬೇಕು. ಈಗ ಎರಡನೇ ಬಾರಿ ಎತ್ತಿಟ್ಟಿದ್ದ ತೆಂಗಿನಹಾಲನ್ನು ಇದಕ್ಕೆ ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ಮೊದಲನೆ ಬಾರಿ ಎತ್ತಿಟ್ಟಿದ್ದ ತೆಂಗಿನ ಹಾಲನ್ನು ಬೆರೆಸಿ ಒಲೆ ಆರಿಸಬೇಕು.
ಪ್ರತ್ಯೇಕ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಗೋಡಂಬಿ ಚೂರು, ತೆಂಗಿನ ಚೂರು ಮತ್ತು ಒಣದ್ರಾಕ್ಷಿಯನ್ನು ಅದಕ್ಕೆ ಹಾಕಿ ಹುರಿದುಕೊಂಡು ಬೇಳೆಗೆ ಬೆರೆಸಿ, ಕೇಸರಿ ದಳ ಹಾಗೂ ಏಲಕ್ಕಿ ಪುಡಿ ಸೇರಿಸಬೇಕು. ಈಗ ರುಚಿಕಟ್ಟಾದ ಹೆಸರು ಬೇಳೆ ಪಾಯಸ ನೈವೇದ್ಯಕ್ಕೆ ತಯಾರಾಗಿದೆ.



Click it and Unblock the Notifications