Latest Updates
-
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯಿ ಬೀಜಗಳ ಹಲ್ವಾವನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಗಸಗಸೆ:1ಕಪ್
ಸಕ್ಕರೆ:ಒಂದುಕಾಲು ಕಪ್
ತುಪ್ಪ : 2 ಟೇಬಲ್ ಚಮಚ
ಹಾಲು: ಗಸಗಸೆಯನ್ನು ರುಬ್ಬಲು ಸ್ವಲ್ಪ
ಜಾಕಾಯಿಪುಡಿ ಸ್ವಲ್ಪ
ಮಾಡುವ ವಿಧಾನ:
*ಗಸಗಸೆಯನ್ನು ಬಿಸಿ ನೀರಿನಲ್ಲಿ 4 ಅಥವಾ 5 ಗಂಟೆ ನೆನೆಸಿರಿ .
*ಅಧಿಕವಾದ ನೀರನ್ನು ಬಸಿದು, ಸ್ವಲ್ಪ ಹಾಲು ಸೇರಿಸಿ ಗಸಗಸೆಯನ್ನು ಮೃದುವಾದ ಪೇಸ್ಟ್ ನಂತೆ ರುಬ್ಬಿರಿ.
*ಈ ಪೇಸ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ, ಕುಕ್ಕರ್ ನಲ್ಲಿಟ್ಟು ಒಂದು ವಿಷಲ್ ಬರುವವರೆಗೂ ಬೇಯಿಸಿ.
*ಇದನ್ನು ತಣ್ಣಗಾಗಿಸಿ, ಸಕ್ಕರೆ ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಸತತವಾಗಿ ಕಲೆಸುತ್ತಾ ಕುದಿಸಿರಿ.
*ಇದು ಬಾಣಲೆಯ ಅಡಿಭಾಗಕ್ಕೆ ಅಂಟಿಕೊಳ್ಳುವಾಗ, ಸ್ವಲ್ಪಸ್ವಲ್ಪವಾಗಿ ತುಪ್ಪವನ್ನು ಸೇರಿಸಿ.
*ತೇವವೆಲ್ಲವೂ ಹೋಗಿ, ಹಲ್ವಾಗೆ ಹೊಳಪು ಬಂದ ನಂತರ, ಉಳಿದ ತುಪ್ಪ, ಜಾಕಾಯಿಪುಡಿ ಸೇರಿಸಿ, ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ.
ಬದಲಿ ವಿಧಾನ:
ಕಲ್ಲಂಗಡಿ ಹಣ್ಣಿನ ಬೀಜಗಳ ಹಲ್ವಾ:
ಸಿಪ್ಪೆ ಸುಲಿದ ಕಲ್ಲಂಗಡಿಹಣ್ಣಿನ ಬೀಜಗಳಿಗೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಕುಕ್ಕರಿನಲ್ಲಿ ಬೇಯಿಸಬೇಡಿ. ಈ ಮಿಶ್ರಣಕ್ಕೆ ಸಕ್ಕರೆ ಸೇರಿಸಿ. ಉಳಿದ ವಿಧಾನವನ್ನು ಮುಂದುವರೆಸಿರಿ. ಜಾಕಾಯಿಪುಡಿಯನ್ನು ಸೇರಿಸುವ ಅಗತ್ಯವಿರುವುದಿಲ್ಲ.
ಕುಂಬಳಕಾಯಿ ಬೀಜಗಳ ಹಲ್ವಾ :
ಸಿಪ್ಪೆ ಸುಲಿದಬೀಜಗಳನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ಬೀಜಗಳನ್ನು ನೀರಿನಿಂದ ಹೊರತಗೆದು, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಅವುಗಳನ್ನು ಒರಟಾದ ಕಲ್ಲಿನ ಮೇಲೆ ಉಜ್ಜಿರಿ. ಬೀಜಗಳ ಮೇಲಿರುವ ಬಣ್ಣ ಹಾಗು ಹೊಟ್ಟು ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿ. ನಂತರ ಬೀಜಗಳನ್ನು ಚೆನ್ನಾಗಿ ತೊಳೆದು, ಮೇಲೆ ಹೇಳಿದ ವಿಧಾನವನ್ನು ಮುಂದುವರೆಸಿರಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications