Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯಿ ಬೀಜಗಳ ಹಲ್ವಾವನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಗಸಗಸೆ:1ಕಪ್
ಸಕ್ಕರೆ:ಒಂದುಕಾಲು ಕಪ್
ತುಪ್ಪ : 2 ಟೇಬಲ್ ಚಮಚ
ಹಾಲು: ಗಸಗಸೆಯನ್ನು ರುಬ್ಬಲು ಸ್ವಲ್ಪ
ಜಾಕಾಯಿಪುಡಿ ಸ್ವಲ್ಪ
ಮಾಡುವ ವಿಧಾನ:
*ಗಸಗಸೆಯನ್ನು ಬಿಸಿ ನೀರಿನಲ್ಲಿ 4 ಅಥವಾ 5 ಗಂಟೆ ನೆನೆಸಿರಿ .
*ಅಧಿಕವಾದ ನೀರನ್ನು ಬಸಿದು, ಸ್ವಲ್ಪ ಹಾಲು ಸೇರಿಸಿ ಗಸಗಸೆಯನ್ನು ಮೃದುವಾದ ಪೇಸ್ಟ್ ನಂತೆ ರುಬ್ಬಿರಿ.
*ಈ ಪೇಸ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ, ಕುಕ್ಕರ್ ನಲ್ಲಿಟ್ಟು ಒಂದು ವಿಷಲ್ ಬರುವವರೆಗೂ ಬೇಯಿಸಿ.
*ಇದನ್ನು ತಣ್ಣಗಾಗಿಸಿ, ಸಕ್ಕರೆ ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಸತತವಾಗಿ ಕಲೆಸುತ್ತಾ ಕುದಿಸಿರಿ.
*ಇದು ಬಾಣಲೆಯ ಅಡಿಭಾಗಕ್ಕೆ ಅಂಟಿಕೊಳ್ಳುವಾಗ, ಸ್ವಲ್ಪಸ್ವಲ್ಪವಾಗಿ ತುಪ್ಪವನ್ನು ಸೇರಿಸಿ.
*ತೇವವೆಲ್ಲವೂ ಹೋಗಿ, ಹಲ್ವಾಗೆ ಹೊಳಪು ಬಂದ ನಂತರ, ಉಳಿದ ತುಪ್ಪ, ಜಾಕಾಯಿಪುಡಿ ಸೇರಿಸಿ, ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ.
ಬದಲಿ ವಿಧಾನ:
ಕಲ್ಲಂಗಡಿ ಹಣ್ಣಿನ ಬೀಜಗಳ ಹಲ್ವಾ:
ಸಿಪ್ಪೆ ಸುಲಿದ ಕಲ್ಲಂಗಡಿಹಣ್ಣಿನ ಬೀಜಗಳಿಗೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಕುಕ್ಕರಿನಲ್ಲಿ ಬೇಯಿಸಬೇಡಿ. ಈ ಮಿಶ್ರಣಕ್ಕೆ ಸಕ್ಕರೆ ಸೇರಿಸಿ. ಉಳಿದ ವಿಧಾನವನ್ನು ಮುಂದುವರೆಸಿರಿ. ಜಾಕಾಯಿಪುಡಿಯನ್ನು ಸೇರಿಸುವ ಅಗತ್ಯವಿರುವುದಿಲ್ಲ.
ಕುಂಬಳಕಾಯಿ ಬೀಜಗಳ ಹಲ್ವಾ :
ಸಿಪ್ಪೆ ಸುಲಿದಬೀಜಗಳನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ಬೀಜಗಳನ್ನು ನೀರಿನಿಂದ ಹೊರತಗೆದು, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಅವುಗಳನ್ನು ಒರಟಾದ ಕಲ್ಲಿನ ಮೇಲೆ ಉಜ್ಜಿರಿ. ಬೀಜಗಳ ಮೇಲಿರುವ ಬಣ್ಣ ಹಾಗು ಹೊಟ್ಟು ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿ. ನಂತರ ಬೀಜಗಳನ್ನು ಚೆನ್ನಾಗಿ ತೊಳೆದು, ಮೇಲೆ ಹೇಳಿದ ವಿಧಾನವನ್ನು ಮುಂದುವರೆಸಿರಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications