Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯಿ ಬೀಜಗಳ ಹಲ್ವಾವನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಗಸಗಸೆ:1ಕಪ್
ಸಕ್ಕರೆ:ಒಂದುಕಾಲು ಕಪ್
ತುಪ್ಪ : 2 ಟೇಬಲ್ ಚಮಚ
ಹಾಲು: ಗಸಗಸೆಯನ್ನು ರುಬ್ಬಲು ಸ್ವಲ್ಪ
ಜಾಕಾಯಿಪುಡಿ ಸ್ವಲ್ಪ
ಮಾಡುವ ವಿಧಾನ:
*ಗಸಗಸೆಯನ್ನು ಬಿಸಿ ನೀರಿನಲ್ಲಿ 4 ಅಥವಾ 5 ಗಂಟೆ ನೆನೆಸಿರಿ .
*ಅಧಿಕವಾದ ನೀರನ್ನು ಬಸಿದು, ಸ್ವಲ್ಪ ಹಾಲು ಸೇರಿಸಿ ಗಸಗಸೆಯನ್ನು ಮೃದುವಾದ ಪೇಸ್ಟ್ ನಂತೆ ರುಬ್ಬಿರಿ.
*ಈ ಪೇಸ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ, ಕುಕ್ಕರ್ ನಲ್ಲಿಟ್ಟು ಒಂದು ವಿಷಲ್ ಬರುವವರೆಗೂ ಬೇಯಿಸಿ.
*ಇದನ್ನು ತಣ್ಣಗಾಗಿಸಿ, ಸಕ್ಕರೆ ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಸತತವಾಗಿ ಕಲೆಸುತ್ತಾ ಕುದಿಸಿರಿ.
*ಇದು ಬಾಣಲೆಯ ಅಡಿಭಾಗಕ್ಕೆ ಅಂಟಿಕೊಳ್ಳುವಾಗ, ಸ್ವಲ್ಪಸ್ವಲ್ಪವಾಗಿ ತುಪ್ಪವನ್ನು ಸೇರಿಸಿ.
*ತೇವವೆಲ್ಲವೂ ಹೋಗಿ, ಹಲ್ವಾಗೆ ಹೊಳಪು ಬಂದ ನಂತರ, ಉಳಿದ ತುಪ್ಪ, ಜಾಕಾಯಿಪುಡಿ ಸೇರಿಸಿ, ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ.
ಬದಲಿ ವಿಧಾನ:
ಕಲ್ಲಂಗಡಿ ಹಣ್ಣಿನ ಬೀಜಗಳ ಹಲ್ವಾ:
ಸಿಪ್ಪೆ ಸುಲಿದ ಕಲ್ಲಂಗಡಿಹಣ್ಣಿನ ಬೀಜಗಳಿಗೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಕುಕ್ಕರಿನಲ್ಲಿ ಬೇಯಿಸಬೇಡಿ. ಈ ಮಿಶ್ರಣಕ್ಕೆ ಸಕ್ಕರೆ ಸೇರಿಸಿ. ಉಳಿದ ವಿಧಾನವನ್ನು ಮುಂದುವರೆಸಿರಿ. ಜಾಕಾಯಿಪುಡಿಯನ್ನು ಸೇರಿಸುವ ಅಗತ್ಯವಿರುವುದಿಲ್ಲ.
ಕುಂಬಳಕಾಯಿ ಬೀಜಗಳ ಹಲ್ವಾ :
ಸಿಪ್ಪೆ ಸುಲಿದಬೀಜಗಳನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ಬೀಜಗಳನ್ನು ನೀರಿನಿಂದ ಹೊರತಗೆದು, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಅವುಗಳನ್ನು ಒರಟಾದ ಕಲ್ಲಿನ ಮೇಲೆ ಉಜ್ಜಿರಿ. ಬೀಜಗಳ ಮೇಲಿರುವ ಬಣ್ಣ ಹಾಗು ಹೊಟ್ಟು ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿ. ನಂತರ ಬೀಜಗಳನ್ನು ಚೆನ್ನಾಗಿ ತೊಳೆದು, ಮೇಲೆ ಹೇಳಿದ ವಿಧಾನವನ್ನು ಮುಂದುವರೆಸಿರಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
