Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯಿ ಬೀಜಗಳ ಹಲ್ವಾವನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಗಸಗಸೆ:1ಕಪ್
ಸಕ್ಕರೆ:ಒಂದುಕಾಲು ಕಪ್
ತುಪ್ಪ : 2 ಟೇಬಲ್ ಚಮಚ
ಹಾಲು: ಗಸಗಸೆಯನ್ನು ರುಬ್ಬಲು ಸ್ವಲ್ಪ
ಜಾಕಾಯಿಪುಡಿ ಸ್ವಲ್ಪ
ಮಾಡುವ ವಿಧಾನ:
*ಗಸಗಸೆಯನ್ನು ಬಿಸಿ ನೀರಿನಲ್ಲಿ 4 ಅಥವಾ 5 ಗಂಟೆ ನೆನೆಸಿರಿ .
*ಅಧಿಕವಾದ ನೀರನ್ನು ಬಸಿದು, ಸ್ವಲ್ಪ ಹಾಲು ಸೇರಿಸಿ ಗಸಗಸೆಯನ್ನು ಮೃದುವಾದ ಪೇಸ್ಟ್ ನಂತೆ ರುಬ್ಬಿರಿ.
*ಈ ಪೇಸ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ, ಕುಕ್ಕರ್ ನಲ್ಲಿಟ್ಟು ಒಂದು ವಿಷಲ್ ಬರುವವರೆಗೂ ಬೇಯಿಸಿ.
*ಇದನ್ನು ತಣ್ಣಗಾಗಿಸಿ, ಸಕ್ಕರೆ ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಸತತವಾಗಿ ಕಲೆಸುತ್ತಾ ಕುದಿಸಿರಿ.
*ಇದು ಬಾಣಲೆಯ ಅಡಿಭಾಗಕ್ಕೆ ಅಂಟಿಕೊಳ್ಳುವಾಗ, ಸ್ವಲ್ಪಸ್ವಲ್ಪವಾಗಿ ತುಪ್ಪವನ್ನು ಸೇರಿಸಿ.
*ತೇವವೆಲ್ಲವೂ ಹೋಗಿ, ಹಲ್ವಾಗೆ ಹೊಳಪು ಬಂದ ನಂತರ, ಉಳಿದ ತುಪ್ಪ, ಜಾಕಾಯಿಪುಡಿ ಸೇರಿಸಿ, ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ.
ಬದಲಿ ವಿಧಾನ:
ಕಲ್ಲಂಗಡಿ ಹಣ್ಣಿನ ಬೀಜಗಳ ಹಲ್ವಾ:
ಸಿಪ್ಪೆ ಸುಲಿದ ಕಲ್ಲಂಗಡಿಹಣ್ಣಿನ ಬೀಜಗಳಿಗೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಕುಕ್ಕರಿನಲ್ಲಿ ಬೇಯಿಸಬೇಡಿ. ಈ ಮಿಶ್ರಣಕ್ಕೆ ಸಕ್ಕರೆ ಸೇರಿಸಿ. ಉಳಿದ ವಿಧಾನವನ್ನು ಮುಂದುವರೆಸಿರಿ. ಜಾಕಾಯಿಪುಡಿಯನ್ನು ಸೇರಿಸುವ ಅಗತ್ಯವಿರುವುದಿಲ್ಲ.
ಕುಂಬಳಕಾಯಿ ಬೀಜಗಳ ಹಲ್ವಾ :
ಸಿಪ್ಪೆ ಸುಲಿದಬೀಜಗಳನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ಬೀಜಗಳನ್ನು ನೀರಿನಿಂದ ಹೊರತಗೆದು, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಅವುಗಳನ್ನು ಒರಟಾದ ಕಲ್ಲಿನ ಮೇಲೆ ಉಜ್ಜಿರಿ. ಬೀಜಗಳ ಮೇಲಿರುವ ಬಣ್ಣ ಹಾಗು ಹೊಟ್ಟು ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿ. ನಂತರ ಬೀಜಗಳನ್ನು ಚೆನ್ನಾಗಿ ತೊಳೆದು, ಮೇಲೆ ಹೇಳಿದ ವಿಧಾನವನ್ನು ಮುಂದುವರೆಸಿರಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications











