Latest Updates
-
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್
ವಡಾ ಪಾವ್ ಅಲ್ಲ, ಇದು ಬಾಯಿ ನೀರೂರಿಸುವ ದಾಬೆಲಿ

ಬಾಯಿಯಲ್ಲಿ ನೀರೂರಿಸುವಂತಹ ಈ ತಿಂಡಿಯನ್ನು ಸುಲಭವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1 ಕೆಂಪು ಮೆಣಸು
1 ಚಮಚ ಕೊತ್ತಂಬರಿ
1/2 ಇಂಚಿನಷ್ಟು ಚಕ್ಕೆ
2 ಲವಂಗ
1/4 ಚಮಚ ಜೀರಿಗೆ
ಇತರ ಸಾಮಾಗ್ರಿಗಳು:
1 ಕಪ್ ಆಲೂಗೆಡ್ಡೆ (ಬೇಯಿಸಿ ಹಿಸುಕಿದ್ದು)
ಅರ್ಧ ಚಮಚ ಜೀರಿಗೆ
ಚಿಟಿಕೆಯಷ್ಟು ಇಂಗು
ಈರುಳ್ಳಿ (ಕತ್ತರಿಸಿದ್ದು)
ಖರ್ಜೂರದ ಅಥವಾ ಹುಣಸೆ ಹಣ್ಣಿನ ಚಟ್ನಿ
2 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ಬನ್ಸ್
1 ಚಮಚ ಬೆಲ್ಲದ ಪಾಕ
ಅಲಂಕಾರಕ್ಕೆ
1 ಈರುಳ್ಳಿ
ಸ್ವಲ್ಪ ನೆಲೆಗಡಲೆ (ರೋಸ್ಟ್ ಮಾಡಿದ್ದು)
ಅರ್ಧ ಕಪ್ ಸೇವ್
ತಯಾರಿಸುವ ವಿಧಾನ:
* ಮೇಲೆ ಹೇಳಿದ ಸಾಮಾಗ್ರಿಗಳನ್ನು 2-3 ನಿಮಿಷ ಹುರಿಯಬೇಕು. ನಂತರ ಅವುಗಳನ್ನು ನುಣ್ಣಗೆ ಪುಡಿ ಮಾಡಬೇಕು. (ಇದೇ ದಾಬೆಲಿ ಮಸಾಲ)
* ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ, ದಾಬೆಲಿ ಮಸಾಲ, ಆಲೂಗೆಡ್ಡೆ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಬೇಕು. ನಂತರ ಉರಿಯಿಂದ ತೆಗೆಯಬೇಕು.
* ನಂತರ ಈ ಮಿಶ್ರಣಕ್ಕೆ 1 ಚಮಚ ಖರ್ಜೂರ ಚಟ್ನಿ ಅಥವಾ ಹುಣಸೆ ಹಣ್ಣಿನ ಚಟ್ನಿ ಹಾಕಬೇಕು.
* ಈಗ ಬರ್ಗರ್ ಬನ್ಸ್ ಕಟ್ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ.
* ಈಗ ಬನ್ ಒಳಗೆ ಆಲೂಗೆಡ್ಡೆ ಮಿಶ್ರಣ, ಸೇವ್, ಕತ್ತರಿಸಿದ ಈರುಳ್ಳಿ, ಹುರಿದ ನೆಲಗಡಲೆ, ಮೇಲೆ ಸ್ವಲ್ಪ ಬೆಲ್ಲದ ಪಾಕ (ಬೆಲ್ಲದ ಪಾಕ ನಿಮ್ಮ ಆಯ್ಕೆಗೆ ಬಿಟ್ಟದ್ದು) ಹಾಕಿದರೆ ದಾಬೆಲಿ ರೆಡಿ.



Click it and Unblock the Notifications