Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ನೀವು ಮಂಗಳೂರು ಬನ್ಸ್ ರೆಸಿಪಿಯ ರುಚಿ ನೋಡಿದಿರಾ?
ಸಂಜೆಗೆ ಬಿಸಿ ಬಿಸಿ ಚಹಾದೊಂದಿಗೆ ರುಚಿ ರುಚಿ ಖಾದ್ಯ ಇದ್ದರೆ ಅದರ ಅನುಭವವೇ ಬೇರೆ. ಊಟಕ್ಕೆ ಉಪ್ಪಿನಕಾಯಿ ಎಂಬಂತೆ ಚಹಾದ ರುಚಿಯನ್ನು ಸಂಜೆಯ ಕುರುಕಲು ಹೆಚ್ಚಿಸುತ್ತದೆ. ಹಿತಮಿತವಾಗಿ ತಯಾರಿಸಬಹುದಾದ ಸಂಜೆಯ ಸ್ನ್ಯಾಕ್ಸ್ ಐಟಂಗಳು ನಿಮಗೆ ಕೊಬ್ಬಿನ ತೊಂದರೆಯನ್ನು ಖಂಡಿತ ಉಂಟು ಮಾಡುವುದಿಲ್ಲ.
ಬೆಳಗ್ಗಿನ ಉಪಹಾರಕ್ಕಾಗಿ ರುಚಿಕರವಾದ ಆಮ್ಲೇಟ್ ರೆಸಿಪಿ!
ಇಲ್ಲಿ ನಾವು ನೀಡಿರುವ ತಿಂಡಿಯು ಖಂಡಿತ ನಿಮಗೆ ಸಂಜೆಗೆ ಒಂದು ಒಳ್ಳೆಯ ಸಂಗಾತಿಯಾಗುತ್ತದೆ. ಹೆಚ್ಚು ಎಣ್ಣೆಯನ್ನು ಎಳೆಯದೇ ಮನೆಯಲ್ಲೇ ಆರೋಗ್ಯವಾಗಿ ತಯಾರಿಸಬಹುದಾದ ಈ ತಿಂಡಿ ಆರೋಗ್ಯಕ್ಕೂ ಉತ್ತಮ.
ಬನ್ನಿ ಹಾಗಿದ್ದರೆ ಇಂದಿನ ಸವಿಯಾದ ಬಿಸಿಯಾದ ಸಂಜೆಯ ಸ್ನ್ಯಾಕ್ಸ್ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಸ್ನ್ಯಾಕ್ಸ್ ಬೇರಾವುದೂ ಅಲ್ಲ ದಕ್ಷಿಣ ಕನ್ನಡದಲ್ಲಿ ಪ್ರಸಿದ್ಧಿ ಪಡೆದಿರುವ ಬನ್ಸ್ ಆಗಿದೆ. ಕೆಳಗೆ ಅದನ್ನು ಹೇಗೆ ತಯಾರಿಸುವುದು ಎಂಬ ಸರಳವಾದ ವಿವರಣೆಯ ಮಾಹಿತಿಯನ್ನು ನಾವು ನೀಡಿದ್ದು ನೀವೂ ಒಮ್ಮೆ ಪ್ರಯತ್ನಿಸಿ
ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!

ಹಾಗಾದರೆ ಇನ್ನೇಕೆ ತಡ? ಬನ್ನಿ ಈವತ್ತು ಸಂಜೆ ಇದರಿಂದಲೇ ಒಂದು ರುಚಿಕರವಾದ ತಿಂಡಿ ಮಾಡಿ ಹಾಗೂ ನಿಮ್ಮ ಮನೆಯವರನ್ನು ಇನ್ನಷ್ಟು ಸಂತೋಷಗೊಳಿಸಿ.
ಬೇಕಾಗುವ ಸಾಮಾಗ್ರಿಗಳು:
*ಬಾಳೆಹಣ್ಣು -2
*ಮೈದಾ- 1 ಕಪ್
*ಸಕ್ಕರೆ - 3 ಚಮಚ
*ಉಪ್ಪು- ರುಚಿಗೆ ತಕ್ಕಷ್ಟು
*ಎಳ್ಳು- 1 ಚಮಚ
*ಓಮ- 1 ಚಮಚ
*ಜೀರಿಗೆ - 1 ಚಮಚ
*ಮೊಸರು - 1 ಕಪ್
*ಕರಿಯಲು ಎಣ್ಣೆ
ಬಾಯಿಯಲ್ಲಿ ನೀರೂರಿಸುವ ಮಂಗಳೂರು ಬಜ್ಜಿ ರೆಸಿಪಿ
ಮಾಡುವ ವಿಧಾನ:
*ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು. ಸಂಜೆಯ ಚಹಾ ಜೊತೆ ಮಾಡಬೇಕಾದಲ್ಲಿ ಎಂಟು ಗಂಟೆ ಮೊದಲು ಹಿಟ್ಟು ತಯಾರಿಸಿ ಇಡಬೇಕು.
* ಹಿಟ್ಟನ್ನು ಸಣ್ಣ ಗಾತ್ರದ ಉಂಡೆಗಳನ್ನಾಗಿ ಮಾಡಿ ಹಾಗೂ ಮೈದಾಹಿಟ್ಟಿನಲ್ಲಿ ಹೊರಳಿಸಿ ಪೂರಿ ಆಕಾರಕ್ಕೆ ತನ್ನಿ. ಲಟ್ಟಣಿಗೆ ಏನೂ ಬೇಕಾಗಿಲ್ಲ, ಕೈಯಲ್ಲೇ ತಟ್ಟಿಕೊಳ್ಳಬಹುದು. ಹೆಚ್ಚು ತೆಳ್ಳಗಾಗುವ ಅಗತ್ಯವೂ ಇಲ್ಲ.
* ಬಾಣಲೆಗೆ ಎಣ್ಣೆ ಎರೆದು ಒಲೆಯ ಮೇಲೆ ಇಡಿ. ಬಿಸಿ ಎಣ್ಣೆಗೆ ಒಂದೊಂದೇ ಹಾಕಿ. ಉಬ್ಬಿ ಬರುತ್ತಿದ್ದ ಹಾಗೇ ಸೌಟಿನಿಂದ ಬಿಸಿ ಎಣ್ಣೆ ಚಿಮುಕಿಸುತ್ತಿರಿ. ಕೆಂಪಗಾಗಿ ಉಬ್ಬಿ ಬಂದ ಮೇಲೆ ಕವುಚಿ ಹಾಕಿ ಕೂಡಲೇ ತೆಗೆಯಿರಿ. ಎಲ್ಲವನ್ನೂ ಹೀಗೆ ಒಂದೊಂದೇ ಬೇಯಿಸಿ.
* ಬಿಸಿ ಬಿಸಿಯಾಗಿರುಬ ಬನ್ಸ್ ಅನ್ನು ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬರ್ ಜೊತೆ ಸವಿಯಿರಿ.



Click it and Unblock the Notifications