Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಇಡ್ಲಿ ಮತ್ತು ಕ್ಯಾರೆಟ್ನ ಸ್ವಾದಿಷ್ಟಕರ ಉಪ್ಪಿಟ್ಟು

ಶಾಲೆಯಿಂದ ಮಕ್ಕಳು ಹೊಟ್ಟೆ ಹಸಿದು ಬಂದಾಗ ಈ ರೀತಿ ಮಾಡಿಕೊಟ್ಟರೆ ಹೊಟ್ಟೆಯೂ ತುಂಬುವುದು ಮತ್ತು ಇದರ ರುಚಿ ಎಲ್ಲರಿಗೆ ಇಷ್ಟವಾಗುತ್ತದೆ. ಇದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 8-10 ಇಡ್ಲಿ
* 2-3 ಹಸಿಮೆಣಸಿನ ಕಾಯಿ (ಕತ್ತರಿಸಿದ್ದು)
* ಸಾಸಿವೆ
* ಒಂದು ಕತ್ತರಿಸಿದ ಈರುಳ್ಳಿ
* ಒಂದು ತುರಿದ ಕ್ಯಾರೆಟ್
* ಸ್ವಲ್ಪ ಕೊತ್ತಂಬರಿ ಸೊಪ್ಪು
* 1/4 ಚಮಚ ಅರಿಶಿಣ ಪುಡಿ
* 1/2 ಚಮಚ ಕೆಂಪು ಮೆಣಸಿನ ಪುಡಿ'
* ಚಿಟಿಕೆಯಷ್ಟು ಗರಂ ಮಸಾಲ ಪುಡಿ
* 1/4 ಚಮಚ ಮೆಂತೆ ಕಾಳು ಅಥವಾ ಸ್ವಲ್ಪ ಮೆಂತೆ ಸೊಪ್ಪು
* ಒಂದು ಟೊಮೆಟೊ (ಕತ್ತರಿಸಿದ್ದು)
* ಸ್ವಲ್ಪ ತುರಿದ ತೆಂಗಿನ ಕಾಯಿ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಕರಿಬೇವಿನ ಎಲೆ
ತಯಾರಿಸುವ ವಿಧಾನ:
1. ಇಡ್ಲಿಯನ್ನು ಕೈಯಿಂದ ಹಿಸುಕಿ ಪುಡಿಪುಡಿ ಮಾಡಬೇಕು.
2. ಈಗ ಬಾಣಲೆಯನ್ನು ಬಿಸಿಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಬರುವಾಗ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನ ಕಾಯಿ ಮತ್ತು ಟೊಮೆಟೊ ಹಾಕಬೇಕು.
3. ಈರುಳ್ಳಿ ಕಂದು ಬಣ್ಣ ಬರುವವರೆಗೆ ಮತ್ತು ಟೊಮೆಟೊ ಮೆತ್ತಗಾಗುವವರೆಗೆ ಚೆನ್ನಾಗಿ ಹುರಿಯಬೇಕು. ನಂತರ ಸೌಟ್ ನಿಂದ ಕುಟ್ಟಿ ಟೊಮೆಟೊವನ್ನು ಪೇಸ್ಟ್ ರೀತಿ ಮಾಡಬೇಕು.
4. ಈಗ ಮೆಂತೆ ಕಾಳು ಅಥವಾ ಮೆಂತೆ ಸೊಪ್ಪು, ಕರಿಬೇವಿನ ಎಲೆ ಹಾಕಿ ನಂತರ , ಚಿಟಿಕೆಯಷ್ಟು ಗರಂ ಮಸಾಲ, ತುರಿದ ಕ್ಯಾರೆಟ್ ,ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿದರೆ ಗೊಜ್ಜು ರೀತಿಯಾಗುತ್ತದೆ. ಬೇಕಿದ್ದರೆ 1/4 ಗ್ಲಾಸ್ ಸ್ವಲ್ಪ ನೀರು ಹಾಕಬಹುದು.
5. ಇದಕ್ಕೆ ಪುಡಿ ಮಾಡಿದ ಇಡ್ಲಿ ಹಾಕಿ ಹಾಕಿ ಮಿಶ್ರ ಮಾಡಿ ತೆಂಗಿನ ತುರಿ ಹಾಕಿ 3-4 ನಿಮಿಷ ಬಿಸಿ ಮಾಡಿದರೆ ರುಚಿಕರವಾದ ಇಡ್ಲಿ ಉಪ್ಪಿಟ್ಟು ರೆಡಿ. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು.



Click it and Unblock the Notifications