Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಎಷ್ಟೇ ಆಗಲಿ ನಮ್ಮದು ಬಿಸಿಬೇಳೆ ಭಾತ್ ಘರಾನ ಅಲ್ವೇನ್ರಿ!
ದೇಶವಿದೇಶಗಳಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಕನ್ನಡಿಗರ ಕುಲದೇವತಾ ಪ್ರಸನ್ನ !
ಒಂದು ಕವಿಗೋಷ್ಠಿ, ಚೆನ್ನಾದ ರಸಸಂಜೆ, ಒಂದು ಸೆಮಿನಾರು, ಗೆಳೆಯರ ಗೆಟ್ ಟು ಗೆದರ್ರು, ಸ್ಥಳೀಯ ಕನ್ನಡ ಸಂಘದ ಮಾಹೆ ಮಂಥನ, ಶುಕ್ರವಾರದ ಬ್ರೇಕ್ಫಾಸ್ಟ್, ಶನಿವಾರದ ಡಿನ್ನರ್, ಭಾನುವಾರದ ಬ್ರಂಚ್.. ನಾಮಕರಣ, ನಿಶ್ಚಿತಾರ್ಥ, ಹುಟ್ಟಿದಹಬ್ಬ, ಇವೆಲ್ಲವೂ ಆರಂಭವಾಗುವುದು ಅಥವಾ ಕೊನೆಗೊಳ್ಳುವುದು ಬಹುತೇಕ ಬಿಸಿಬೇಳೆ ಭಾತ್ ಭಕ್ಷಣೆಯಾಂದಿಗೆ.
ಬಿಸಿಬೇಳೆ ಭಾತ್ ಗಂಡ, ಮೊಸರನ್ನ ಹೆಂಡತಿ- ಅದು ಕನ್ನಡದೂಟದ ಸಂಸ್ಕೃತಿ. ಈ ಪಾಕ ನಮ್ಮ ಸಂಸ್ಕೃತಿಯ ರೂಪಕ. ಒಂದೊಮ್ಮೆ ಸಂಗೀತ ಕಚೇರಿ ನಡೆಸಿಕೊಟ್ಟ ನಂತರ ತಟ್ಟೆ ಮುಂದೊಡ್ಡಿ ನಿಂತ ಮೈಸೂರು ಅನಂತಸ್ವಾಮಿ ಹೇಳಿದ್ದರು- ‘ನನಗೆ ಇಷ್ಟವಾಗುವ ಘರಾನವೇ ಬಿಸಿಬೇಳೆ ಭಾತ್ ಘರಾನ. ಭಾತು ಸಾಹಿತ್ಯ, ಮೊಸರನ್ನ ಲಾಲಿತ್ಯ’ !
ನಿಮಗೆ ಬಿಸಿಬೇಳೆ ಭಾತ್ ಮಾಡೋಕೆ ಬರುತ್ತಾ ? ಬರುತ್ತೆ. ನಮಗೆ ಗೊತ್ತು. ಆದರೆ ಇಲ್ಲಿರುವ ಶೈಲಿ ಡಿಫರೆಂಟ್ ಆಗಿದೆ. ಗಮನಿಸಿ.
ಬೇಕಾದ ಪದಾರ್ಥಗಳು :
1. ಒಂದೂವರೆ ಲೋಟ ಅಕ್ಕಿ (ಇಷ್ಟಕ್ಕೆ 6 ಲೋಟ ನೀರು ಬೇಕಾಗುತ್ತದೆ)
2. ಒಂದೂವರೆ ಲೋಟ ತೊಗರಿ ಬೇಳೆ.
3. ಹುರುಳಿಕಾಯಿ, ಕ್ಯಾರೆಟ್ಟು, ಆಲೂಗಡ್ಡೆ ಅಥವಾ ಗೆಡ್ಡೆಕೋಸು, ದೊಣ್ಣೆ ಮೆಣಸಿನಕಾಯಿ (ಎಲ್ಲವನ್ನೂ ತೊಳೆದು, ಒರೆಸಿ ಮಧ್ಯಮ ಆಕಾರಕ್ಕೆ ಹೆಚ್ಚಿ. ಪ್ರತಿಯಾಂದೂ ಒಂದೊಂದು ಲೋಟದಷ್ಟಿರಲಿ).
4. ಕಾಲು ಲೋಟಕ್ಕಿಂತ ಹೆಚ್ಚು, ಅರ್ಧ ಲೋಟಕ್ಕಿಂತ ಕಡಿಮೆ ಅಳತೆಯಷ್ಟು ಹಸಿರು ಬಟಾಣಿ.
5. ಸಣ್ಣದಾಗಿ ಉದ್ದುದ್ದ ಹೆಚ್ಚಿದ ಈರುಳ್ಳಿ (ಬಟಾಣಿಯಷ್ಟೇ ಅಳತೆಯ ಪ್ರಮಾಣ).
6. ಒಂದೂವರೆ ಚಮಚದಷ್ಟು ಹುಣಸೇ ಹಣ್ಣಿನ ಪೇಸ್ಟು
7. ರುಚಿಗೆ ತಕ್ಕಷ್ಟು ಉಪ್ಪು
8. ನಾಲ್ಕರಿಂದ ಐದು ಚಮಚ ಸಾಂಬಾರು ಪುಡಿ (ಹೆಚ್ಚಿಗೆ ಖಾರ ಬೇಕೆಂದರೆ, ಅದು ನಿಮ್ಮ ಯಜಮಾನರ ಕೋಪಕ್ಕೆ ಬಿಟ್ಟದ್ದು. )
9. ಕಾಲು ಲೋಟಕ್ಕಿಂತ ಸ್ವಲ್ಪ ಹೆಚ್ಚು ರಿಫೈಂಡ್ ಅಡುಗೆ ಎಣ್ಣೆ
10. ಒಗ್ಗರಣೆಗೆ- 2 ಒಣ ಮೆಣಸಿನಕಾಯಿ, ಸಾಸಿವೆ, ಸಣ್ಣದಾಗಿ ಮುರಿದ ಗೋಡಂಬಿ ಮತ್ತು ಫ್ರೆಶ್ ಆಗಿರೋ ಕರಿಬೇವಿನ ಸೊಪ್ಪು.
ಮಾಡುವ ವಿಧಾನ :
ತೊಗರಿಬೇಳೆ ಹಾಗೂ ಅಕ್ಕಿಯನ್ನು ತೊಳೆಯಿರಿ. ಒಂದು ಕುಕ್ಕರಿನಲ್ಲಿ ಇವನ್ನು ಹಾಕಿ. ಹೆಚ್ಚಿಟ್ಟ್ಟುಕೊಂಡ ತರಕಾರಿಗಳನ್ನೂ ಹಾಕಿ. ನೀರು, ಸಾಂಬಾರ ಪುಡಿ ಹಾಗೂ ಎಣ್ಣೆ ಬೆರೆಸಿ ಒಲೆ ಮೇಲೆ ಬೇಯಲು ಬಿಡಿ. ಮೂರು ಸಲ ಕುಕ್ಕರ್ ಕೂಗಲಿ. ಸಣ್ಣ ಬಾಣಲೆಯಲ್ಲಿ ವಗ್ಗರಣೆ ಹಾಕಿಕೊಂಡು, ಸಾಸಿವೆ ಚಿಟಿಗುಟ್ಟಿದ ನಂತರ ಈರುಳ್ಳಿಯನ್ನು ಸೇರಿಸಿ, ಹದವಾಗಿ ಬಾಡಿಸಿ. ಕುಕ್ಕರ್ ಮುಚ್ಚಳ ತೆಗೆದು, ಬೆಂದಿರುವ ಪದಾರ್ಥಕ್ಕೆ ವಗ್ಗರಣೆ, ಹುಣಸೇ ಪೇಸ್ಟು ಸೇರಿಸಿ, ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬಿಸಿಬೇಳೆ ಭಾತ್ ತಯಾರ್.
ಸಾಮಾನ್ಯವಾಗಿ ಬಿಸಿಬೇಳೆ ಭಾತ್ ನೀರುನೀರಾಗಿರುತ್ತದೆ. ಅಕ್ಕಿ- ಬೇಳೆ- ತರಕಾರಿಗಳನ್ನು ಒಟ್ಟಾಗಿ ಬೇಯಿಸುವುದರಿಂದ ತರಕಾರಿ ಸುಳಿವೇ ಸಿಕ್ಕದಂತೆ ಕರಗಿ ಹೋಗಬಹುದು. ಹೀಗಾಗದಂತೆ ತಡೆಯಬೇಕಾದರೆ, ತರಕಾರಿಗಳನ್ನು ಬೇರೆಯಾಗಿ ಬೇಯಿಸಿ, ಆಮೇಲೆ ಬೆಂದ ಅಕ್ಕಿ-ಬೇಳೆ ಮಿಶ್ರಣಕ್ಕೆ ಬೆರೆಸಬಹುದು. ತರಕಾರಿಗಳ ಜೊತೆಗೆ ಕಡಲೆಬೀಜವನ್ನು ಪಪ್ ಮಾಡಿಕೊಂಡು, ಸಣ್ಣಗೆ ಹುರಿದು ಅದನ್ನೂ ಬೇಯಿಸಬಹುದು. ಕೆಲವರಿಗೆ ಕಡಲೇಬೀಜ ಇರುವ ಬಿಸಿಬೇಳೆ ಭಾತ್ ರುಚಿ ಹಿಡಿಸುವುದಿಲ್ಲ.
ಬಿಸಿಬೇಳೆ ಭಾತ್ ಹೆಸರಿಗೆ ತಕ್ಕಂಥದ್ದು. ಅದನ್ನು ಬಿಸಿಯಾಗಿ ತಿಂದರೆ ಬಲು ರುಚಿ. ತುಪ್ಪ ಹಾಕಿಕೊಂಡು ಹೊಡೆದರೆ, ಇನ್ನಷ್ಟು ಬೇಕು ಎನ್ನುತ್ತೀರಿ. ಚಿಪ್ಸು, ಕಾರಾಬೂಂದಿ ಹಾಗೂ ಈರುಳ್ಳಿ- ಸೌತೇಕಾಯಿ ಸಲಾಡ್, ಹರಟೆ, ಭಾತ್ಗೆ ಒಗ್ಗುವ ನೆಂಚಿಗೆ ಪದಾರ್ಥಗಳು.
(ವಿ. ಸೂ : ಬಿಸಿಬೇಳೆ ಭಾತ್ ಬಿಸಿ ಆಗಿದ್ದಾಗ ಹೆಚ್ಚೂಕಡಿಮೆ ಚೆನ್ನಾಗಿರತ್ತೆ. ಆದರೆ, ಆರುತ್ತಾ ಆರುತ್ತಾ ಸಿಮೆಂಟ್ ಥರ ಆಗತ್ತೆ ಯಾಕೆ? -ಬೇಳೆ ಜತೆ ಬೇಯುವಾಗ ಅಕ್ಕಿಗೆ ಸ್ವಲ್ಪ ಸೋಮಾರಿತನ ಇರತ್ತೆ. ಆದ್ದರಿಂದ . ನಿಮಗೆ ಸ್ವಲ್ಪ ಕೆಲಸ ಜಾಸ್ತಿ ಆದರೂ ಪರವಾಗಿಲ್ಲ, ನೀವು ಏನು ಮಾಡಬೇಕು ಅಂದ್ರೆ, ಅಕ್ಕೀನ ಬೇರೆ ಕುಕ್ಕರ್ನಲ್ಲಿ ಅರ್ಧದಷ್ಟು ಬೇಯಿಸಿ (ಒಂದು ವಿಷಲ್) ಆಮೇಲೆ ಬೇಳೆ ಜತೆ ಬೇಯಲು ಹಾಕಿ ಬಿಡಿ. ಬೆಳಗ್ಗೆ ಮಾಡಿದ ಬಿಬೇಬಾ ರಾತ್ರೀ ತನಕ ಮೃದುವಾಗಿರತ್ತೆ.)



Click it and Unblock the Notifications











