Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಎನ್ಡೇನ್ಜರ್ಡ್ ಕರ್ನಾಟಕ ಸ್ವೀಟ್ ಸ್ಪೀಸೀಸ್ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.
ಬೇಕಾದ ಪದಾರ್ಥ :
ಕುಚ್ಚಲು ಅಕ್ಕಿ - 1 ಕೇಜಿ
ಬೆಲ್ಲ - 1 ಕೇಜಿ
ಕೊಬ್ಬರಿ ತುರಿ- 1 ದಪ್ಪನೆ ಗಿಟುಕಿನದು
ಕಡಲೆ ಬೀಜ- 1ಪಾವು
ಹೆಚ್ಚಿನ ರುಚಿಗೆ ಹುರಿಗಡಲೆ, ಬಿಳಿ ಎಳ್ಳು ಸೇರಿಸಬಹುದು.
ಮಾಡುವ ವಿಧಾನ :
ತೊಳೆದು ನೆರಳಿನಲ್ಲಿ ಒಣಗಿಸಿದ ಅಕ್ಕಿಯನ್ನು ಹುರಿದು, ಹಿಟ್ಟು ಮಾಡಿಕೊಳ್ಳಿ. ಅಕ್ಕಿ ಹಿಟ್ಟು ಜೊತೆ ಕೊಬ್ಬರಿ ತುರಿ, ಹುರಿದು ಸಿಪ್ಪೆ ತೆರೆದ ಕಡಲೆಬೀಜ, ಹುರಿಗಡಲೆ, ಬಿಸಿ ಮಾಡಿದ ಎಳ್ಳು ಬೆರೆಸಿ. ಮಿಶ್ರಣವನ್ನು ಒಂದು ಅಗಲವಾದ ತಟ್ಟೆಯಲ್ಲಿ ಇಟ್ಟುಕೊಳ್ಳಿ. ಬೆಲ್ಲವನ್ನು ದಬರಿಗೆ ಸುರಿದು, ಅರ್ಧ ಕಪ್ ನೀರು ಸೇರಿಸಿ ಸ್ಟವ್ ಮೇಲಿಡಿ. ಹದಕ್ಕೆ ಬಂದ ಪಾಕವನ್ನು ಮಿಶ್ರಣಕ್ಕೆ ಸೇರಿಸಿ, ಉಂಡೆ ಕಟ್ಟಲು ಶುರು ಹಚ್ಚಿಕೊಳ್ಳಿ. ಪಾಕವನ್ನು ಹಿಟ್ಟಿನಲ್ಲಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟಬೇಕು. ಪಾಕವನ್ನು ಮತ್ತೆ ಬಿಸಿ ಮಾಡುವುದು, ಮತ್ತೆ ಬಗ್ಗಿಸಿಕೊಂಡು ಉಂಡೆ ಕಟ್ಟುವುದು- ಇದು ತಂಬಿಟ್ಟು ಕಟ್ಟುವ ಕ್ರಮ. ಉಂಡೆಯ ಗಾತ್ರ ನಿಮ್ಮಿಷ್ಟಕ್ಕೆ ಬಿಟ್ಟಿದ್ದು.
ಉಂಡೆ ಸ್ವಲ್ಪ ಆರಿದ ನಂತರ ಡಬ್ಬಿಯಲ್ಲಿ ಎತ್ತಿಟ್ಟುಕೊಳ್ಳಬಹುದು. ಪೌಷ್ಠಿಕಾಂಶಗಳನ್ನುಳ್ಳ ಈ ತಂಬಿಟ್ಟು ರುಚಿಗಟ್ಟೂ ಹೌದು. ಕೊಬ್ಬರಿ ತುರಿ ಚೆನ್ನಾಗಿ ಒಣಗಿದ್ದರೆ ತಂಬಿಟ್ಟು ತಿಂಗಳುಗಟ್ಟಲೆ ಹಾಳಾಗುವುದಿಲ್ಲ . ಶಿವರಾತ್ರಿ ಜಾಗರಣೆಗೆ ಮಾಡುವುದು ಇದೇ ತಂಬಿಟ್ಟನ್ನು!



Click it and Unblock the Notifications