Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಎನ್ಡೇನ್ಜರ್ಡ್ ಕರ್ನಾಟಕ ಸ್ವೀಟ್ ಸ್ಪೀಸೀಸ್ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.
ಬೇಕಾದ ಪದಾರ್ಥ :
ಕುಚ್ಚಲು ಅಕ್ಕಿ - 1 ಕೇಜಿ
ಬೆಲ್ಲ - 1 ಕೇಜಿ
ಕೊಬ್ಬರಿ ತುರಿ- 1 ದಪ್ಪನೆ ಗಿಟುಕಿನದು
ಕಡಲೆ ಬೀಜ- 1ಪಾವು
ಹೆಚ್ಚಿನ ರುಚಿಗೆ ಹುರಿಗಡಲೆ, ಬಿಳಿ ಎಳ್ಳು ಸೇರಿಸಬಹುದು.
ಮಾಡುವ ವಿಧಾನ :
ತೊಳೆದು ನೆರಳಿನಲ್ಲಿ ಒಣಗಿಸಿದ ಅಕ್ಕಿಯನ್ನು ಹುರಿದು, ಹಿಟ್ಟು ಮಾಡಿಕೊಳ್ಳಿ. ಅಕ್ಕಿ ಹಿಟ್ಟು ಜೊತೆ ಕೊಬ್ಬರಿ ತುರಿ, ಹುರಿದು ಸಿಪ್ಪೆ ತೆರೆದ ಕಡಲೆಬೀಜ, ಹುರಿಗಡಲೆ, ಬಿಸಿ ಮಾಡಿದ ಎಳ್ಳು ಬೆರೆಸಿ. ಮಿಶ್ರಣವನ್ನು ಒಂದು ಅಗಲವಾದ ತಟ್ಟೆಯಲ್ಲಿ ಇಟ್ಟುಕೊಳ್ಳಿ. ಬೆಲ್ಲವನ್ನು ದಬರಿಗೆ ಸುರಿದು, ಅರ್ಧ ಕಪ್ ನೀರು ಸೇರಿಸಿ ಸ್ಟವ್ ಮೇಲಿಡಿ. ಹದಕ್ಕೆ ಬಂದ ಪಾಕವನ್ನು ಮಿಶ್ರಣಕ್ಕೆ ಸೇರಿಸಿ, ಉಂಡೆ ಕಟ್ಟಲು ಶುರು ಹಚ್ಚಿಕೊಳ್ಳಿ. ಪಾಕವನ್ನು ಹಿಟ್ಟಿನಲ್ಲಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟಬೇಕು. ಪಾಕವನ್ನು ಮತ್ತೆ ಬಿಸಿ ಮಾಡುವುದು, ಮತ್ತೆ ಬಗ್ಗಿಸಿಕೊಂಡು ಉಂಡೆ ಕಟ್ಟುವುದು- ಇದು ತಂಬಿಟ್ಟು ಕಟ್ಟುವ ಕ್ರಮ. ಉಂಡೆಯ ಗಾತ್ರ ನಿಮ್ಮಿಷ್ಟಕ್ಕೆ ಬಿಟ್ಟಿದ್ದು.
ಉಂಡೆ ಸ್ವಲ್ಪ ಆರಿದ ನಂತರ ಡಬ್ಬಿಯಲ್ಲಿ ಎತ್ತಿಟ್ಟುಕೊಳ್ಳಬಹುದು. ಪೌಷ್ಠಿಕಾಂಶಗಳನ್ನುಳ್ಳ ಈ ತಂಬಿಟ್ಟು ರುಚಿಗಟ್ಟೂ ಹೌದು. ಕೊಬ್ಬರಿ ತುರಿ ಚೆನ್ನಾಗಿ ಒಣಗಿದ್ದರೆ ತಂಬಿಟ್ಟು ತಿಂಗಳುಗಟ್ಟಲೆ ಹಾಳಾಗುವುದಿಲ್ಲ . ಶಿವರಾತ್ರಿ ಜಾಗರಣೆಗೆ ಮಾಡುವುದು ಇದೇ ತಂಬಿಟ್ಟನ್ನು!



Click it and Unblock the Notifications