Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎನ್ಡೇನ್ಜರ್ಡ್ ಕರ್ನಾಟಕ ಸ್ವೀಟ್ ಸ್ಪೀಸೀಸ್ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.
ಬೇಕಾದ ಪದಾರ್ಥ :
ಕುಚ್ಚಲು ಅಕ್ಕಿ - 1 ಕೇಜಿ
ಬೆಲ್ಲ - 1 ಕೇಜಿ
ಕೊಬ್ಬರಿ ತುರಿ- 1 ದಪ್ಪನೆ ಗಿಟುಕಿನದು
ಕಡಲೆ ಬೀಜ- 1ಪಾವು
ಹೆಚ್ಚಿನ ರುಚಿಗೆ ಹುರಿಗಡಲೆ, ಬಿಳಿ ಎಳ್ಳು ಸೇರಿಸಬಹುದು.
ಮಾಡುವ ವಿಧಾನ :
ತೊಳೆದು ನೆರಳಿನಲ್ಲಿ ಒಣಗಿಸಿದ ಅಕ್ಕಿಯನ್ನು ಹುರಿದು, ಹಿಟ್ಟು ಮಾಡಿಕೊಳ್ಳಿ. ಅಕ್ಕಿ ಹಿಟ್ಟು ಜೊತೆ ಕೊಬ್ಬರಿ ತುರಿ, ಹುರಿದು ಸಿಪ್ಪೆ ತೆರೆದ ಕಡಲೆಬೀಜ, ಹುರಿಗಡಲೆ, ಬಿಸಿ ಮಾಡಿದ ಎಳ್ಳು ಬೆರೆಸಿ. ಮಿಶ್ರಣವನ್ನು ಒಂದು ಅಗಲವಾದ ತಟ್ಟೆಯಲ್ಲಿ ಇಟ್ಟುಕೊಳ್ಳಿ. ಬೆಲ್ಲವನ್ನು ದಬರಿಗೆ ಸುರಿದು, ಅರ್ಧ ಕಪ್ ನೀರು ಸೇರಿಸಿ ಸ್ಟವ್ ಮೇಲಿಡಿ. ಹದಕ್ಕೆ ಬಂದ ಪಾಕವನ್ನು ಮಿಶ್ರಣಕ್ಕೆ ಸೇರಿಸಿ, ಉಂಡೆ ಕಟ್ಟಲು ಶುರು ಹಚ್ಚಿಕೊಳ್ಳಿ. ಪಾಕವನ್ನು ಹಿಟ್ಟಿನಲ್ಲಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟಬೇಕು. ಪಾಕವನ್ನು ಮತ್ತೆ ಬಿಸಿ ಮಾಡುವುದು, ಮತ್ತೆ ಬಗ್ಗಿಸಿಕೊಂಡು ಉಂಡೆ ಕಟ್ಟುವುದು- ಇದು ತಂಬಿಟ್ಟು ಕಟ್ಟುವ ಕ್ರಮ. ಉಂಡೆಯ ಗಾತ್ರ ನಿಮ್ಮಿಷ್ಟಕ್ಕೆ ಬಿಟ್ಟಿದ್ದು.
ಉಂಡೆ ಸ್ವಲ್ಪ ಆರಿದ ನಂತರ ಡಬ್ಬಿಯಲ್ಲಿ ಎತ್ತಿಟ್ಟುಕೊಳ್ಳಬಹುದು. ಪೌಷ್ಠಿಕಾಂಶಗಳನ್ನುಳ್ಳ ಈ ತಂಬಿಟ್ಟು ರುಚಿಗಟ್ಟೂ ಹೌದು. ಕೊಬ್ಬರಿ ತುರಿ ಚೆನ್ನಾಗಿ ಒಣಗಿದ್ದರೆ ತಂಬಿಟ್ಟು ತಿಂಗಳುಗಟ್ಟಲೆ ಹಾಳಾಗುವುದಿಲ್ಲ . ಶಿವರಾತ್ರಿ ಜಾಗರಣೆಗೆ ಮಾಡುವುದು ಇದೇ ತಂಬಿಟ್ಟನ್ನು!



Click it and Unblock the Notifications