Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಎನ್ಡೇನ್ಜರ್ಡ್ ಕರ್ನಾಟಕ ಸ್ವೀಟ್ ಸ್ಪೀಸೀಸ್ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.
ಬೇಕಾದ ಪದಾರ್ಥ :
ಕುಚ್ಚಲು ಅಕ್ಕಿ - 1 ಕೇಜಿ
ಬೆಲ್ಲ - 1 ಕೇಜಿ
ಕೊಬ್ಬರಿ ತುರಿ- 1 ದಪ್ಪನೆ ಗಿಟುಕಿನದು
ಕಡಲೆ ಬೀಜ- 1ಪಾವು
ಹೆಚ್ಚಿನ ರುಚಿಗೆ ಹುರಿಗಡಲೆ, ಬಿಳಿ ಎಳ್ಳು ಸೇರಿಸಬಹುದು.
ಮಾಡುವ ವಿಧಾನ :
ತೊಳೆದು ನೆರಳಿನಲ್ಲಿ ಒಣಗಿಸಿದ ಅಕ್ಕಿಯನ್ನು ಹುರಿದು, ಹಿಟ್ಟು ಮಾಡಿಕೊಳ್ಳಿ. ಅಕ್ಕಿ ಹಿಟ್ಟು ಜೊತೆ ಕೊಬ್ಬರಿ ತುರಿ, ಹುರಿದು ಸಿಪ್ಪೆ ತೆರೆದ ಕಡಲೆಬೀಜ, ಹುರಿಗಡಲೆ, ಬಿಸಿ ಮಾಡಿದ ಎಳ್ಳು ಬೆರೆಸಿ. ಮಿಶ್ರಣವನ್ನು ಒಂದು ಅಗಲವಾದ ತಟ್ಟೆಯಲ್ಲಿ ಇಟ್ಟುಕೊಳ್ಳಿ. ಬೆಲ್ಲವನ್ನು ದಬರಿಗೆ ಸುರಿದು, ಅರ್ಧ ಕಪ್ ನೀರು ಸೇರಿಸಿ ಸ್ಟವ್ ಮೇಲಿಡಿ. ಹದಕ್ಕೆ ಬಂದ ಪಾಕವನ್ನು ಮಿಶ್ರಣಕ್ಕೆ ಸೇರಿಸಿ, ಉಂಡೆ ಕಟ್ಟಲು ಶುರು ಹಚ್ಚಿಕೊಳ್ಳಿ. ಪಾಕವನ್ನು ಹಿಟ್ಟಿನಲ್ಲಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟಬೇಕು. ಪಾಕವನ್ನು ಮತ್ತೆ ಬಿಸಿ ಮಾಡುವುದು, ಮತ್ತೆ ಬಗ್ಗಿಸಿಕೊಂಡು ಉಂಡೆ ಕಟ್ಟುವುದು- ಇದು ತಂಬಿಟ್ಟು ಕಟ್ಟುವ ಕ್ರಮ. ಉಂಡೆಯ ಗಾತ್ರ ನಿಮ್ಮಿಷ್ಟಕ್ಕೆ ಬಿಟ್ಟಿದ್ದು.
ಉಂಡೆ ಸ್ವಲ್ಪ ಆರಿದ ನಂತರ ಡಬ್ಬಿಯಲ್ಲಿ ಎತ್ತಿಟ್ಟುಕೊಳ್ಳಬಹುದು. ಪೌಷ್ಠಿಕಾಂಶಗಳನ್ನುಳ್ಳ ಈ ತಂಬಿಟ್ಟು ರುಚಿಗಟ್ಟೂ ಹೌದು. ಕೊಬ್ಬರಿ ತುರಿ ಚೆನ್ನಾಗಿ ಒಣಗಿದ್ದರೆ ತಂಬಿಟ್ಟು ತಿಂಗಳುಗಟ್ಟಲೆ ಹಾಳಾಗುವುದಿಲ್ಲ . ಶಿವರಾತ್ರಿ ಜಾಗರಣೆಗೆ ಮಾಡುವುದು ಇದೇ ತಂಬಿಟ್ಟನ್ನು!



Click it and Unblock the Notifications