Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸಹೃದಯರಿಗೊಪ್ಪುವ ಕೊತ್ತ೦ಬರಿ ನಿಪ್ಪಟ್ಟು
*ಮ೦ಜುಳಾ ಬಾಲರಾಜ್, ವಿದ್ಯಾಪೀಠ ಬೆಂಗಳೂರು

ಹೊರಗಡೆ ತಲೆಹಾಕಿದರೆ ಕೆಟ್ಟ ಚಳಿ. ಯಾವುದೋ ಅಂಗಡಿಯಲ್ಲಿ ದೊರೆಯುವ, ಯಾವ ಎಣ್ಣೆಯಲ್ಲೋ ಕರಿದ ಕೋತಿನಾಷ್ಠಗಳನ್ನು ಮೇಯುವುದಕ್ಕಿಂತ ಮನೆಯಲ್ಲೇ ಮಾಡಿಕೊಂಡ ಎಣ್ಣೆ ತಿಂಡಿಯನ್ನು ಮೆಲ್ಲುವುದು ಶೇಖಡ 90% ಸೇಫ್. ಆದ್ದರಿಂದ 2008ರಲ್ಲಿ ಕರ್ನಾಟಕದಲ್ಲಿ ವಾಯುಭಾರಕುಸಿತದಿಂದ ತಲೆದೋರಿರುವ ಮಳೆಚಳಿಗಾಲಕ್ಕೆ ಹೊಂದುವ ಮೃದು ಮಧುರ ನಿಪ್ಪಟ್ಟನ್ನು ಮಾಡುವ ಬಗೆಯನ್ನು ನಾವೀಗ ಕಲಿಯೋಣ.
ಬೇಕಾಗುವ ಸಾಮಗ್ರಿಗಳು:
*ಸಣ್ಣಗೆ ಹೆಚ್ಚಿದ ಕೊತ್ತ೦ಬರಿ ಸೊಪ್ಪು
*ಕಡಲೆಹಿಟ್ಟು 1 ಕಪ್
*ಅರ್ಧ ಕಪ್ ಸಣ್ಣ ರವೆ
*ಕಾಲು ಕಪ್ ಬಿಳಿ ಎಳ್ಳು
*ತುಪ್ಪ 5 ಚಮಚ, ಹಿಡಿ ಕೊಬ್ಬರಿ ತುರಿ, ಚೂರು ಗಸಗಸೆ
*ರುಚಿಗೆ ಬೇಕಾದಷ್ಟು ಉಪ್ಪು,
*ಹಸಿಮೆಣಸಿನಕಾಯಿ 6,
*ಎರಡು ಚಮಚೆ ಪುಡಿ ಸಕ್ಕರೆ ಕಾಲು ಚಮಚ ಬೇಕಿ೦ಗ್ ಪೌಡರ್
*ಕರಿಯುವುದಕ್ಕೆ ಸನ್ ಫ್ಲವರ್ ಗೋಲ್ಡ್ ಎಣ್ಣೆ
ನಿಪ್ಪಟ್ಟು ತಯಾರಿಸುವ ವಿಧಾನ:
ಅಂಟುಪುರಲೆಯಲ್ಲದ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿಕೊ೦ಡು ಅದಕ್ಕೆ ಎಳ್ಳು, ಗಸಗಸೆ, ಕೊಬ್ಬರಿ ತುರಿ ಹಾಕಿ ಹದವಾಗಿ ಹುರಿಯಬೇಕು. ಆನಂತರ, ಅದಕ್ಕೆ ಹಸಿಹಸಿಯಾಗಿ ರುಬ್ಬಿಕೊಂಡ ಹಸಿಮೆಣಸಿನಕಾಯಿ ಚಟ್ನಿ ಮತ್ತು ಕೊತ್ತ೦ಬರಿ ಸೊಪ್ಪು ಸೇರಿಸಬೇಕು. ಮತ್ತಷ್ಟು ಹುರಿದಾದ ಮೇಲೆ ಬರ್ನರ್ ಆಫ್ ಮಾಡಿ ಆರಲು ಬಿಡಬೇಕು.
ಚೆನ್ನಾಗಿ ಆರಿದ ನ೦ತರ, ಉಳಿದ (ಮೇಲಿನ ಪದಾರ್ಥಗಳನ್ನು ಮತ್ತು ಕಡಲೆಹಿಟ್ಟನ್ನು ಕಲಸಬೇಕು. ಈ ಹಂತದಲ್ಲಿ ಸ್ವಲ್ಪ ತುಪ್ಪ ಬೆರೆಸಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಂತರ,ಸಣ್ಣ ಉ೦ಡೆಗಳಾಗಿಸಿ ಜಿಡ್ಡು ಸವರಿದ ಪ್ಲಾಸ್ಟಿಕ್ ಶೀಟ್ ಮೇಲೆ ನಿಪ್ಪಟ್ಟನ್ನು ಕೈಯಲ್ಲಿ ತಟ್ಟಿಕೊ೦ಡು ಕಾದ ಎಣ್ಣೆಯಲ್ಲಿ ತೇಲಿ ಬಿಡಬೇಕು. ಮಹಿಳೆಯರೆ ಮತ್ತು ಮಹನೀಯರೆ;ನಿಪ್ಪಟ್ಟಾಗಲೀ, ಓಂಪುಡಿಯಾಗಲೀ, ಕೋಡುಬಳೆಯಾಗಲೀ ಅಥವಾ ಇನ್ನಿತರ ಯಾವುದೇ ಕರಿದ ತಿಂಡಿಯಾಗಲೀ, ಎಣ್ಣೆಯಲ್ಲಿ ಬೇಯುವ ತಿಂಡಿ ಕಪ್ಪಾಗಬಾರದು, ಕಂದಾಗಬಾರದು, ಬಿಳಚಿಕೊಂಡಿರಬಾರದು!ಅಂಥ ಬಣ್ಣ ಬರುವುತನಕ ಜಾಲರಿ ಸುಮ್ಮನಿರಬಾರದು.



Click it and Unblock the Notifications