Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಸಹೃದಯರಿಗೊಪ್ಪುವ ಕೊತ್ತ೦ಬರಿ ನಿಪ್ಪಟ್ಟು
*ಮ೦ಜುಳಾ ಬಾಲರಾಜ್, ವಿದ್ಯಾಪೀಠ ಬೆಂಗಳೂರು

ಹೊರಗಡೆ ತಲೆಹಾಕಿದರೆ ಕೆಟ್ಟ ಚಳಿ. ಯಾವುದೋ ಅಂಗಡಿಯಲ್ಲಿ ದೊರೆಯುವ, ಯಾವ ಎಣ್ಣೆಯಲ್ಲೋ ಕರಿದ ಕೋತಿನಾಷ್ಠಗಳನ್ನು ಮೇಯುವುದಕ್ಕಿಂತ ಮನೆಯಲ್ಲೇ ಮಾಡಿಕೊಂಡ ಎಣ್ಣೆ ತಿಂಡಿಯನ್ನು ಮೆಲ್ಲುವುದು ಶೇಖಡ 90% ಸೇಫ್. ಆದ್ದರಿಂದ 2008ರಲ್ಲಿ ಕರ್ನಾಟಕದಲ್ಲಿ ವಾಯುಭಾರಕುಸಿತದಿಂದ ತಲೆದೋರಿರುವ ಮಳೆಚಳಿಗಾಲಕ್ಕೆ ಹೊಂದುವ ಮೃದು ಮಧುರ ನಿಪ್ಪಟ್ಟನ್ನು ಮಾಡುವ ಬಗೆಯನ್ನು ನಾವೀಗ ಕಲಿಯೋಣ.
ಬೇಕಾಗುವ ಸಾಮಗ್ರಿಗಳು:
*ಸಣ್ಣಗೆ ಹೆಚ್ಚಿದ ಕೊತ್ತ೦ಬರಿ ಸೊಪ್ಪು
*ಕಡಲೆಹಿಟ್ಟು 1 ಕಪ್
*ಅರ್ಧ ಕಪ್ ಸಣ್ಣ ರವೆ
*ಕಾಲು ಕಪ್ ಬಿಳಿ ಎಳ್ಳು
*ತುಪ್ಪ 5 ಚಮಚ, ಹಿಡಿ ಕೊಬ್ಬರಿ ತುರಿ, ಚೂರು ಗಸಗಸೆ
*ರುಚಿಗೆ ಬೇಕಾದಷ್ಟು ಉಪ್ಪು,
*ಹಸಿಮೆಣಸಿನಕಾಯಿ 6,
*ಎರಡು ಚಮಚೆ ಪುಡಿ ಸಕ್ಕರೆ ಕಾಲು ಚಮಚ ಬೇಕಿ೦ಗ್ ಪೌಡರ್
*ಕರಿಯುವುದಕ್ಕೆ ಸನ್ ಫ್ಲವರ್ ಗೋಲ್ಡ್ ಎಣ್ಣೆ
ನಿಪ್ಪಟ್ಟು ತಯಾರಿಸುವ ವಿಧಾನ:
ಅಂಟುಪುರಲೆಯಲ್ಲದ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿಕೊ೦ಡು ಅದಕ್ಕೆ ಎಳ್ಳು, ಗಸಗಸೆ, ಕೊಬ್ಬರಿ ತುರಿ ಹಾಕಿ ಹದವಾಗಿ ಹುರಿಯಬೇಕು. ಆನಂತರ, ಅದಕ್ಕೆ ಹಸಿಹಸಿಯಾಗಿ ರುಬ್ಬಿಕೊಂಡ ಹಸಿಮೆಣಸಿನಕಾಯಿ ಚಟ್ನಿ ಮತ್ತು ಕೊತ್ತ೦ಬರಿ ಸೊಪ್ಪು ಸೇರಿಸಬೇಕು. ಮತ್ತಷ್ಟು ಹುರಿದಾದ ಮೇಲೆ ಬರ್ನರ್ ಆಫ್ ಮಾಡಿ ಆರಲು ಬಿಡಬೇಕು.
ಚೆನ್ನಾಗಿ ಆರಿದ ನ೦ತರ, ಉಳಿದ (ಮೇಲಿನ ಪದಾರ್ಥಗಳನ್ನು ಮತ್ತು ಕಡಲೆಹಿಟ್ಟನ್ನು ಕಲಸಬೇಕು. ಈ ಹಂತದಲ್ಲಿ ಸ್ವಲ್ಪ ತುಪ್ಪ ಬೆರೆಸಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಂತರ,ಸಣ್ಣ ಉ೦ಡೆಗಳಾಗಿಸಿ ಜಿಡ್ಡು ಸವರಿದ ಪ್ಲಾಸ್ಟಿಕ್ ಶೀಟ್ ಮೇಲೆ ನಿಪ್ಪಟ್ಟನ್ನು ಕೈಯಲ್ಲಿ ತಟ್ಟಿಕೊ೦ಡು ಕಾದ ಎಣ್ಣೆಯಲ್ಲಿ ತೇಲಿ ಬಿಡಬೇಕು. ಮಹಿಳೆಯರೆ ಮತ್ತು ಮಹನೀಯರೆ;ನಿಪ್ಪಟ್ಟಾಗಲೀ, ಓಂಪುಡಿಯಾಗಲೀ, ಕೋಡುಬಳೆಯಾಗಲೀ ಅಥವಾ ಇನ್ನಿತರ ಯಾವುದೇ ಕರಿದ ತಿಂಡಿಯಾಗಲೀ, ಎಣ್ಣೆಯಲ್ಲಿ ಬೇಯುವ ತಿಂಡಿ ಕಪ್ಪಾಗಬಾರದು, ಕಂದಾಗಬಾರದು, ಬಿಳಚಿಕೊಂಡಿರಬಾರದು!ಅಂಥ ಬಣ್ಣ ಬರುವುತನಕ ಜಾಲರಿ ಸುಮ್ಮನಿರಬಾರದು.



Click it and Unblock the Notifications