Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಸಹೃದಯರಿಗೊಪ್ಪುವ ಕೊತ್ತ೦ಬರಿ ನಿಪ್ಪಟ್ಟು
*ಮ೦ಜುಳಾ ಬಾಲರಾಜ್, ವಿದ್ಯಾಪೀಠ ಬೆಂಗಳೂರು

ಹೊರಗಡೆ ತಲೆಹಾಕಿದರೆ ಕೆಟ್ಟ ಚಳಿ. ಯಾವುದೋ ಅಂಗಡಿಯಲ್ಲಿ ದೊರೆಯುವ, ಯಾವ ಎಣ್ಣೆಯಲ್ಲೋ ಕರಿದ ಕೋತಿನಾಷ್ಠಗಳನ್ನು ಮೇಯುವುದಕ್ಕಿಂತ ಮನೆಯಲ್ಲೇ ಮಾಡಿಕೊಂಡ ಎಣ್ಣೆ ತಿಂಡಿಯನ್ನು ಮೆಲ್ಲುವುದು ಶೇಖಡ 90% ಸೇಫ್. ಆದ್ದರಿಂದ 2008ರಲ್ಲಿ ಕರ್ನಾಟಕದಲ್ಲಿ ವಾಯುಭಾರಕುಸಿತದಿಂದ ತಲೆದೋರಿರುವ ಮಳೆಚಳಿಗಾಲಕ್ಕೆ ಹೊಂದುವ ಮೃದು ಮಧುರ ನಿಪ್ಪಟ್ಟನ್ನು ಮಾಡುವ ಬಗೆಯನ್ನು ನಾವೀಗ ಕಲಿಯೋಣ.
ಬೇಕಾಗುವ ಸಾಮಗ್ರಿಗಳು:
*ಸಣ್ಣಗೆ ಹೆಚ್ಚಿದ ಕೊತ್ತ೦ಬರಿ ಸೊಪ್ಪು
*ಕಡಲೆಹಿಟ್ಟು 1 ಕಪ್
*ಅರ್ಧ ಕಪ್ ಸಣ್ಣ ರವೆ
*ಕಾಲು ಕಪ್ ಬಿಳಿ ಎಳ್ಳು
*ತುಪ್ಪ 5 ಚಮಚ, ಹಿಡಿ ಕೊಬ್ಬರಿ ತುರಿ, ಚೂರು ಗಸಗಸೆ
*ರುಚಿಗೆ ಬೇಕಾದಷ್ಟು ಉಪ್ಪು,
*ಹಸಿಮೆಣಸಿನಕಾಯಿ 6,
*ಎರಡು ಚಮಚೆ ಪುಡಿ ಸಕ್ಕರೆ ಕಾಲು ಚಮಚ ಬೇಕಿ೦ಗ್ ಪೌಡರ್
*ಕರಿಯುವುದಕ್ಕೆ ಸನ್ ಫ್ಲವರ್ ಗೋಲ್ಡ್ ಎಣ್ಣೆ
ನಿಪ್ಪಟ್ಟು ತಯಾರಿಸುವ ವಿಧಾನ:
ಅಂಟುಪುರಲೆಯಲ್ಲದ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿಕೊ೦ಡು ಅದಕ್ಕೆ ಎಳ್ಳು, ಗಸಗಸೆ, ಕೊಬ್ಬರಿ ತುರಿ ಹಾಕಿ ಹದವಾಗಿ ಹುರಿಯಬೇಕು. ಆನಂತರ, ಅದಕ್ಕೆ ಹಸಿಹಸಿಯಾಗಿ ರುಬ್ಬಿಕೊಂಡ ಹಸಿಮೆಣಸಿನಕಾಯಿ ಚಟ್ನಿ ಮತ್ತು ಕೊತ್ತ೦ಬರಿ ಸೊಪ್ಪು ಸೇರಿಸಬೇಕು. ಮತ್ತಷ್ಟು ಹುರಿದಾದ ಮೇಲೆ ಬರ್ನರ್ ಆಫ್ ಮಾಡಿ ಆರಲು ಬಿಡಬೇಕು.
ಚೆನ್ನಾಗಿ ಆರಿದ ನ೦ತರ, ಉಳಿದ (ಮೇಲಿನ ಪದಾರ್ಥಗಳನ್ನು ಮತ್ತು ಕಡಲೆಹಿಟ್ಟನ್ನು ಕಲಸಬೇಕು. ಈ ಹಂತದಲ್ಲಿ ಸ್ವಲ್ಪ ತುಪ್ಪ ಬೆರೆಸಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಂತರ,ಸಣ್ಣ ಉ೦ಡೆಗಳಾಗಿಸಿ ಜಿಡ್ಡು ಸವರಿದ ಪ್ಲಾಸ್ಟಿಕ್ ಶೀಟ್ ಮೇಲೆ ನಿಪ್ಪಟ್ಟನ್ನು ಕೈಯಲ್ಲಿ ತಟ್ಟಿಕೊ೦ಡು ಕಾದ ಎಣ್ಣೆಯಲ್ಲಿ ತೇಲಿ ಬಿಡಬೇಕು. ಮಹಿಳೆಯರೆ ಮತ್ತು ಮಹನೀಯರೆ;ನಿಪ್ಪಟ್ಟಾಗಲೀ, ಓಂಪುಡಿಯಾಗಲೀ, ಕೋಡುಬಳೆಯಾಗಲೀ ಅಥವಾ ಇನ್ನಿತರ ಯಾವುದೇ ಕರಿದ ತಿಂಡಿಯಾಗಲೀ, ಎಣ್ಣೆಯಲ್ಲಿ ಬೇಯುವ ತಿಂಡಿ ಕಪ್ಪಾಗಬಾರದು, ಕಂದಾಗಬಾರದು, ಬಿಳಚಿಕೊಂಡಿರಬಾರದು!ಅಂಥ ಬಣ್ಣ ಬರುವುತನಕ ಜಾಲರಿ ಸುಮ್ಮನಿರಬಾರದು.



Click it and Unblock the Notifications