Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
ರಂಧ್ರರಹಿತ ಉದ್ದಿನವಡೆ + ನೀರುಳ್ಳಿ ಸಾಸಿವೆ

ಬೇಕಾದ ಪದಾರ್ಥಗಳು:
ಉದ್ದಿನಬೇಳೆ -1/4 ಕೆಜಿ
ಹಸಿಮೆಣಸಿನಕಾಯಿ 6
ಸ್ವಲ್ಪ ಹಸಿ ಶುಂಠಿ
ಕೊಬ್ಬರಿ/ ಕಡ್ಲೇಕಾಯಿ ಎಣ್ಣೆ 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಉದ್ದಿನಬೇಳೆಯನ್ನು 1 ಗಂಟೆ ಕಾಲ ನೆನಸಿಡಿ. ನಂತರ ಚೆನ್ನಾಗಿ ತೊಳೆದು ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ ಸ್ವಲ್ಪ ನೀರು ಹಾಕುತ್ತಿರಬೇಕು. ನಂತರ ಉಪ್ಪು ಹಾಕಿ ಕಲೆಸಿ. ಹಸಿ ಮೆಣಸಿನಕಾಯಿ ಮತ್ತು ಹಸಿ ಶುಂಠಿಯನ್ನು ಸಣ್ಣಗೆ ಹೆಚ್ಚಿ ಹಾಕಿ. ಇಂಗನ್ನು ಸ್ವಲ್ಪ ನೀರಿನಲ್ಲಿ ಕದಡಿ ಹಾಕಿ ಬೆರೆಸಿ. ಎಣ್ಣೆಯನ್ನು ಕಾಯಲು ಬಿಡಿ. ಸಣ್ಣ ನಿಂಬೆ ಗಾತ್ರದಷ್ಟು ವಡೆಯನ್ನು ಎಣ್ಣೆಗೆ ಹಾಕಿ. ಸ್ವಲ್ಪ ಹೊತ್ತು ಮಗಚುತ್ತಾ ಇದ್ದು, ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಬೇಕು.
ಆಲೂಗೆಡ್ಡೆ ನೀರುಳ್ಳಿ ಹಾಕಿದ ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಚಟ್ನಿಯೊಂದಿಗೂ ಕೂಡ ತಿನ್ನಬಹುದು. ಇದೇ ಆಂಬೊಡೆಯನ್ನು ಮೊಸರಿಗೆ ಹಾಕಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಹಾಕಿ ಅರ್ಧ ಗಂಟೆ ನಂತರ ತಿನ್ನಬಹುದು.
ಕೊಸರು ಅಡಿಗೆ: ನೀರುಳ್ಳಿ ಸಾಸಿವೆ
ಬೇಕಾದ ಪದಾರ್ಥಗಳು:
ಈರುಳ್ಳಿ 6
ತೆಂಗಿನಕಾಯಿ ಅರ್ಧ ಹೋಳು
ಹಸಿಮೆಣಸಿನಕಾಯಿ 3
ರುಚಿಗೆ ತಕ್ಕಷ್ಟು ಉಪ್ಪು
ಮೊಸರು 1ಕಪ್
ಒಗ್ಗರಣೆಗೆ ಎಣ್ಣೆ 4 ಚಮಚ
ಮಾಡುವ ವಿಧಾನ:
ನೀರುಳ್ಳಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ..ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಎಣ್ಣೆ ಕಾಯಿಸಿಕೊಂಡು ಸಾಸಿವೆ ಒಗ್ಗರಣೆ ಮಾಡಿಕೊಳ್ಳಿ. ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ತೆಂಗಿನಕಾಯಿಗೆ ಸಾಸಿವೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ(ಬೇಕಾದರೆ ಒಂದು ಕಾಳು ಮೆಣಸು ಹಾಕಬಹುದು) ನಂತರ ಇದಕ್ಕೆ ಮೊಸರು ಬೆರೆಸಿ. ಹುರಿದಿಟ್ಟ ಈರುಳ್ಳಿಯನ್ನು ರುಬ್ಬಿಕೊಂಡ ಪದಾರ್ಥಗಳೊಡನೆ ಹಾಕಿ ಮೊಸರು ಹಾಕಿ ಚೆನ್ನಾಗಿ ಕಲಕಿ ಉಪಯೋಗಿಸಿ.



Click it and Unblock the Notifications











