Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಊಟದ ರುಚಿ ಹೆಚ್ಚಿಸುವ ಟೊಮೆಟೊ, ಈರುಳ್ಳಿ ರಾಯತ

( ಈ ಕೆಳಗಿನ ಅಳತೆಯಲ್ಲಿ ಸಾಮಾಗ್ರಿಗಳನ್ನು ಹಾಕಿ ಮಾಡಿದರೆ 2-3 ಜನಕ್ಕೆ ಸಾಕಾಗುವುದು.)
ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಮೊಸರು
* ಒಂದು ಕಪ್ ಈರುಳ್ಳಿ ಮತ್ತು ಟೊಮೆಟೊ
* 1 ಚಮಚ ತುರಿದ ಶುಂಠಿ
* ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)
* ರುಚಿಗೆ ತಕ್ಕ ಉಪ್ಪು
* ಚಿಟಿಕೆಯಷ್ಟು ಸಕ್ಕರೆ
* 2 ಚಮಚ ಎಣ್ಣೆ
* 1/4 ಚಮಚ ಜೀರಿಗೆ
* 1/4 ಚಮಚ ಸಾಸಿವೆ
* 1 ಹಸಿ ಮೆಣಸಿನಕಾಯಿ
* 2-3 ಕರಿಬೇವಿನ ಎಲೆ
ಮಾಡುವ ವಿಧಾನ:
1. ಟೊಮೆಟೊ, ಈರುಳ್ಳಿ, ಶುಂಠಿ, ರುಚಿಗೆ ತಕ್ಕ ಉಪ್ಪು, ಚಿಟಿಕೆಯಷ್ಟು ಸಕ್ಕರೆ ಹಾಕಿ ಮಿಶ್ರ ಮಾಡಬೇಕು.
2. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ ಹಾಕಿ ಅದು ಚಟಾಪಟ ಶಬ್ದ ಬರುವಾಗ ಜೀರಿಗೆ ಮತ್ತು ಕರಿಬೇವಿನ ಎಲೆ ಮತ್ತು ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.
3. ಈಗ ಈ ಒಗ್ಗರಣೆಯನ್ನು ಟೊಮೆಟೊ ಮತ್ತು ಈರುಳ್ಳಿ ಮಿಶ್ರಣಕ್ಕೆ ಸುರಿದು, ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ರುಚಿಕರವಾದ ರಾಯತ ರೆಡಿ.
ಇದನ್ನು ರೊಟ್ಟಿ ಅಥವಾ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications











