ಮಿಸ್ ಮಾಡ್ಬೇಡಿ! ಮಾನ್ಸೂನ್‌ಗೆ ಹೇಳಿ ಮಾಡಿಸಿದ ಊಟಗಳಿವು.. ಆರೋಗ್ಯಕ್ಕೂ ಬೆಸ್ಟ್​

Posted By:

ಸದ್ಯ ಮಳೆಗಾಲ (Monsoon) ಆರಂಭವಾಗಿದೆ. ವಾತಾವರಣವು ತಂಪಾಗಿದೆ. ಹೊರಗೆ ಜೋರಾಗಿ ಮಳೆ ಸುರಿಯುತ್ತಿರುವಾಗ ಅನೇಕರಿಗೆ ಮನೆಯಲ್ಲಿ ಬೆಚ್ಚಗೆ ಕುಳಿತು ಚಹಾ ಅಥವಾ ಕುರುಕಲು ತಿಂಡಿಗಳನ್ನು ತಿನ್ನುವುದು ಅಚ್ಚುಮೆಚ್ಚಿನ ಕೆಲಸ. ಹೌದು, ಕಾಲಕ್ಕೆ ತಕ್ಕಂತೆ ನಮ್ಮ ಆಹಾರ (Food) ಪದ್ಧತಿಯೂ ಬದಲಾಗಲಾಗಬೇಕು. ಊಟ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಎಲ್ಲಾ ಬಗೆಯ ಊಟಗಳು ಮಳೆಗಾಲದ ಆಹಾರದ ಪದ್ಧತಿಗೆ ಸೂಕ್ತವಲ್ಲ. ನಾವು ಮಳೆಗಾಲಕ್ಕೆ ಆಹಾ ಎನ್ನುವ ಈ 5 ದಕ್ಷಿಣ ಭಾರತೀಯ ಅಡುಗೆಗಳ (South Indian Food) ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.

ನಿಮಗೂ ಸಹ ಮಳೆಗಾಲದಲ್ಲಿ ಬಿಸಿಬಿಸಿಯಾದ, ಸಮಾಧಾನಕರವಾದ ಮತ್ತು ರುಚಿಕರವಾದ ಊಟ ಬೇಕೆ ಮಳೆಗಾಲಕ್ಕೆ ಎಂದೇ ಹೇಳಿ ಮಾಡಿಸಿದ ಆಹಾರಗಳಿವು, ಆರೋಗ್ಯಕ್ಕೂ ಹಿತ. ಈ ದಕ್ಷಿಣ ಭಾರತದ ತಿನಿಸುಗಳು ನಿಮಗೆ ಎಲ್ಲವನ್ನೂ ಒದಗಿಸುತ್ತವೆ. ಮಸಾಲೆಗಳು, ಬೇಳೆಕಾಳುಗಳು ಮತ್ತು ತರಕಾರಿಗಳನ್ನು ಹೇರಳವಾಗಿ ಬಳಸಿ ತಯಾರಿಸಲಾಗುವ ಸಸ್ಯಾಹಾರಿ ಭಕ್ಷ್ಯಗಳು ಮಳೆಗಾಲದ ಮಧ್ಯಾಹ್ನದ ಊಟಕ್ಕೆ (Lunch) ಹೇಳಿ ಮಾಡಿಸಿದಂತಿವೆ. ನಿಮ್ಮ ಮಾನ್ಸೂನ್ ಊಟಕ್ಕೆ ಬೆಚ್ಚಗಿನ ಅನುಭವ ನೀಡುವ ಐದು ದಕ್ಷಿಣ ಭಾರತೀಯ ಸಸ್ಯಾಹಾರಿ ಅಡುಗೆಗಳ ವಿವರ ಇಲ್ಲಿದೆ.

5 monsoon special south indian veg lunch

ಬಿಸಿಬೇಳೆಬಾತ್

ಬಿಸಿಬೇಳೆಬಾತ್ (Bisibelebath) ಕರ್ನಾಟಕದ ಒಂದು ವಿಶಿಷ್ಟ ಖಾದ್ಯ. ಮಳೆಗಾಲದಲ್ಲಿ ಮಧ್ಯಾಹ್ನದ ಲಂಚ್‌ಗೆ ಹೇಳಿಮಾಡಿಸಿದ ಒಂದು ಊಟವಾಗಿದೆ. ಅನ್ನ, ತೊಗರಿ ಬೇಳೆ ಮತ್ತು ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಗಳಂತಹ ತರಕಾರಿಗಳ ಮಿಶ್ರಣವನ್ನು ಮಸಾಲೆ ಪದಾರ್ಥಗಳೊಂದಿಗೆ ಸೇರಿಸಲಾಗುತ್ತದೆ. ಹುಣಸೆಹಣ್ಣು ರುಚಿಯನ್ನು ಹೆಚ್ಚಿಸುತ್ತದೆ. ತುಪ್ಪ, ಸಾಸಿವೆ, ಗೋಡಂಬಿ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ತೃಪ್ತಿಕರವಾದ ರುಚಿಯನ್ನು ನೀಡುತ್ತದೆ. ಒಟ್ಟಾರೆ, ಬಿಸಿಬೇಳೆಬಾತ್ ರುಚಿಕರವಾಗಿರುತ್ತದೆ.

ಅನ್ನ ಮತ್ತು ತರಕಾರಿ ಸಾಂಬಾರ್

ತುಂತುರು ಮಳೆಯ ಮಧ್ಯಾಹ್ನದಂದು ಬಿಸಿ ಅನ್ನದೊಂದಿಗೆ ತರಕಾರಿ ಸಾಂಬಾರ್‌ನ (Vegetable Sambar with Rice) ಬಟ್ಟಲು ಇದ್ದರೆ ಸ್ವರ್ಗವೇ ಧರೆಗಿಳಿದಂತೆ. ಈ ದಕ್ಷಿಣ ಭಾರತದ ಪ್ರಧಾನ ಆಹಾರವು ಪರಿಮಳಯುಕ್ತ, ಬೇಳೆ-ಆಧಾರಿತ ಸ್ಟ್ಯೂ ಆಗಿದ್ದು, ಇದು ಪೌಷ್ಟಿಕ ಮತ್ತು ಹಿತಕರವಾಗಿರುತ್ತದೆ. ತೊಗರಿ ಬೇಳೆ ಮತ್ತು ಕ್ಯಾರೆಟ್, ಡ್ರಮ್‌ಸ್ಟಿಕ್, ಬೀನ್ಸ್ ಮತ್ತು ಕುಂಬಳಕಾಯಿಯಂತಹ ತರಕಾರಿಗಳೊಂದಿಗೆ ಮಾಡಿದ ಸಾಂಬಾರ್, ಹುಣಸೆಹಣ್ಣಿನಿಂದ ವಿಶಿಷ್ಟವಾದ ರುಚಿಯನ್ನು ಮತ್ತು ಸಾಂಬಾರ್ ಪುಡಿಯಿಂದ ಹೆಚ್ಚು ಪರಿಮಳ ನೀಡುತ್ತದೆ. ಬಿಸಿ ಎಣ್ಣೆಯಲ್ಲಿ ಸಾಸಿವೆ, ಒಣ ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಸುವಾಸನೆ ಹೆಚ್ಚಿಸುತ್ತದೆ. ಮೃದು, ಮ್ಯಾಶ್ ಮಾಡಿದ ಬೇಳೆ ತರಕಾರಿಗಳೊಂದಿಗೆ ಬೆರೆತು ದಪ್ಪವಾದ ಗ್ರೇವಿಯನ್ನು ಸೃಷ್ಟಿಸುತ್ತದೆ. ಮಳೆಗಾಲ ಪ್ರಾರಂಭವಾದಾಗ, ಸಾಂಬಾರ್‌ನ ಮಸಾಲೆಯುಕ್ತ ಮತ್ತು ಖಾರದ ರುಚಿ ಪರಿಪೂರ್ಣ ಭಕ್ಷ್ಯವಾಗಿದೆ.

monsoon south indian veg

ತೆಂಗಿನ ಹಾಲು ತರಕಾರಿ ಪಲಾವ್

ಮಳೆಗಾಲಕ್ಕೆ ಇದು ಹೇಳಿಮಾಡಿಸಿದ ತಿನಿಸು. ಈ ಒಂದು ಪಾತ್ರೆಯಲ್ಲಿ ತಯಾರಿಸುವ ಪಲಾವ್ (Coconut Milk Vegetable Pulao) ರುಚಿಕರವಾಗಿರುತ್ತದೆ. ಸೌಮ್ಯವಾದ ಪರಿಮಳವನ್ನು ಹೊಂದಿದ್ದು, ತಿನ್ನಲು ಹಿತವಾಗಿರುತ್ತದೆ. ಮಳೆಗಾಲದ ಮಧ್ಯಾಹ್ನದ ಊಟಕ್ಕೆ ಇದು ಸೂಕ್ತವಾಗಿದೆ. ಪರಿಮಳಯುಕ್ತ ಬಾಸುಮತಿ ಅಕ್ಕಿಯನ್ನು ಬಟಾಣಿ, ಕ್ಯಾರೆಟ್ ಮತ್ತು ಬೀನ್ಸ್ ನಂತಹ ತರಕಾರಿಗಳೊಂದಿಗೆ ಬೆರೆಸಿ, ತೆಂಗಿನ ಹಾಲಿನಲ್ಲಿ ಬೇಯಿಸಲಾಗುತ್ತದೆ. ತೆಂಗಿನ ಹಾಲಿನ ಸಿಹಿ ರುಚಿಯನ್ನು ದಾಲ್ಚಿನ್ನಿ, ಲವಂಗ ಮತ್ತು ಜೀರಿಗೆಯಂತಹ ಮಸಾಲೆಗಳು ಸಮತೋಲನಗೊಳಿಸುತ್ತವೆ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸಿನಕಾಯಿ ಬೆಚ್ಚಗಿನ ಅನುಭವ ನೀಡುತ್ತದೆ. ಈರುಳ್ಳಿ ರುಚಿಯನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಬೈಟ್ ರುಚಿಕರವಾಗಿರುತ್ತದೆ.

ಅವಿಯಲ್

ಅವಿಯಲ್ (Avial) ಕೇರಳದ ಒಂದು ವಿಶಿಷ್ಟ ಖಾದ್ಯ. ಇದು ಮಳೆಗಾಲಕ್ಕೆ ಹೇಳಿಮಾಡಿಸಿದ ತರಕಾರಿ ಮಿಶ್ರಣ. ಅವಿಯಲ್ ಒಂದು ಆರೋಗ್ಯಕರ ಮತ್ತು ಹಿತವಾದ ಊಟವಾಗಿದ್ದು, ಬಿಸಿ ಅನ್ನದೊಂದಿಗೆ ಅಥವಾ ಮೃದುವಾದ ಪರೋಟದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ. ಇದು ಗೆಣಸು, ಬಾಳೆಕಾಯಿ, ಬೀನ್ಸ್, ಕ್ಯಾರೆಟ್ ಮತ್ತು ಡ್ರಮ್‌ಸ್ಟಿಕ್‌ಗಳಂತಹ ತರಕಾರಿಗಳನ್ನು ಒಳಗೊಂಡಿರುತ್ತದೆ. ತೆಂಗಿನಕಾಯಿ, ಹಸಿ ಮೆಣಸಿನಕಾಯಿ ಮತ್ತು ಜೀರಿಗೆಯಿಂದ ಮಾಡಿದ ಮಸಾಲೆಯನ್ನು ಮೊಸರಿನೊಂದಿಗೆ ಸೇರಿಸಿ ಬೇಯಿಸಲಾಗುತ್ತದೆ. ಕೊನೆಯಲ್ಲಿ ತೆಂಗಿನ ಎಣ್ಣೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ವಿಶಿಷ್ಟ ಪರಿಮಳ ಬರುತ್ತದೆ.

monsoon south indian veg lunch

ಟೊಮೆಟೊ ರಸಂ ವಿತ್ ಪಪ್ಪಡ್

ಮಳೆಗಾಲದಲ್ಲಿ ಬಿಸಿಬಿಸಿಯಾದ ಟೊಮೆಟೊ ರಸಂನ (Tomato Rasam with Papad) ಬಟ್ಟಲು ಅತ್ಯಂತ ಆರಾಮದಾಯಕ ಆಹಾರ. ಈ ದಕ್ಷಿಣ ಭಾರತೀಯ ಸೂಪ್ ಟೊಮೆಟೊ ಪ್ಯೂರಿ, ಹುಣಸೆಹಣ್ಣು, ಕರಿಮೆಣಸು ಮತ್ತು ರಸಂ ಪುಡಿಯ ಮಸಾಲೆಯುಕ್ತ ಮಿಶ್ರಣವಾಗಿದೆ. ತುಪ್ಪದಲ್ಲಿ ಸಾಸಿವೆ, ಜೀರಿಗೆ, ಒಣ ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಬಾಯಲ್ಲಿ ನೀರೂರಿಸುವ ಪರಿಮಳ ನೀಡುತ್ತದೆ. ಮೆಣಸಿನಕಾಯಿಯ ಸುವಾಸನೆ ಮಳೆಗಾಲಕ್ಕೆ ಪರಿಪೂರ್ಣ. ಇದು ಕಾಯಿಲೆಗಳನ್ನು ದೂರವಿರಿಸುತ್ತದೆ.

ಈ ಮೇಲಿನ ಐದು ಸಸ್ಯಾಹಾರಿ ಭಕ್ಷ್ಯಗಳು ಮಳೆಗಾಲಕ್ಕೆ ಹೇಳಿ ಮಾಡಿಸಿದಂತುವೆ. ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರವಾಗಿರುತ್ತವೆ.

[ of 5 - Users]
Story first published: Saturday, July 5, 2025, 17:00 [IST]
X
Desktop Bottom Promotion