Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯಪೂರ್ಣ ಸ್ವಾಸ್ಥ್ಯಕ್ಕಾಗಿ ರುಚಿಕರ ಈರುಳ್ಳಿ ಅನ್ನ
ನಾವು ತಿನ್ನುವ ಆಹಾರ ಪೋಷಕಾಂಶ ಭರಿತವಾಗಿದ್ದರೆ ನಾವು ಆರೋಗ್ಯಪೂರ್ಣ ಜೀವನವನ್ನು ಹೊಂದಬಹುದು. ಹಣ್ಣು ಹಂಪಲುಗಳು ತರಕಾರಿಗಳ ಬಳಕೆಯನ್ನು ನಾವು ಹೆಚ್ಚು ಹೆಚ್ಚು ಮಾಡಿದಂತೆ ರೋಗ ಮುಕ್ತ ಆರೋಗ್ಯವನ್ನು ನಾವು ಹೊಂದಬಹುದಾಗಿದೆ. ಎಣ್ಣೆಯುಕ್ತ ಮತ್ತು ರಾಸಾಯನಿಕ ಸತ್ವವಿರುವ ಆಹಾರಗಳು ದೇಹದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಹಾಗಿದ್ದರೆ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಹೆಚ್ಚು ಹೆಚ್ಚು ಪೋಷಕಾಂಶಭರಿತ ಸತ್ವಭರಿತ ಅಂಶಗಳು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಬೆಳಗ್ಗಿನ ಉಪಹಾರದಿಂದ ಹಿಡಿದು ರಾತ್ರಿಯ ಊಟದ ವೇಳೆಯಲ್ಲೂ ಕೂಡ ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ದೇಹಕ್ಕೆ ಆಹಾರವನ್ನು ಒದಗಿಸುತ್ತಿರಬೇಕು .ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ನಿಮ್ಮ ದೇಹಕ್ಕೆ ಆರೋಗ್ಯಕಾರಿಯಾಗಿರುವ ಸೊಗಸಾಸ ಖಾದ್ಯದೊಂದಿಗೆ ನಾವು ಬಂದಿರುವೆವು. ಈರುಳ್ಳಿಯ ಸತ್ವವನ್ನು ಹೇರಳವಾಗಿ ಹೊಂದಿರುವ ಈ ಖಾದ್ಯವು ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜೊತೆಗೆ ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ಹಾಗಿದ್ದರೆ ತಡ ಯಾಕೆ? ತಯಾರಿಕೆ ವಿಧಾನ ತಿಳಿಸಲು ನಾವು ರೆಡಿ. ಮಾಡಲು ನೀವು ರೆಡಿನಾ..?

*ಪ್ರಮಾಣ - 2
*ಅಡುಗೆಗೆ ಬೇಕಾದ ಸಮಯ: 20-25 ನಿಮಿಷಗಳು ಮಲಬಾರ್ ಶೈಲಿಯಲ್ಲಿ ಘೀ ರೈಸ್
ಬೇಕಾಗುವ ಸಾಮಗ್ರಿಗಳು
*ಅನ್ನ - 2 ಕಪ್
*ಈರುಳ್ಳಿ - 2 (ಕತ್ತರಿಸಲಾಗಿರುವ)
*ಬೆಳ್ಳುಳ್ಳಿ - 2 (ಜಜ್ಜಿದ್ದು)
*ಸಾಸಿವೆ - ½ ಚಮಚ
*ಹಸಿ ಮೆಣಸಿನಕಾಯಿ - 2-3 (ಕತ್ತರಿಸಲಾಗಿರುವ)
*ಕಾಳು ಮೆಣಸು - 2 ಚಮಚ (ಪುಡಿ)
*ಅಡಿಗೆ ಎಣ್ಣೆ - 3 ಚಮಚ
*ನಿಂಬೆರಸ - 2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
* ಮೊದಲು ಅನ್ನವನ್ನು ಮಾಡಿಟ್ಟುಕೊಳ್ಳಿ.
* ತದನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿರಿ.
*ಇನ್ನು ಕಾದ ಎಣ್ಣೆಗೆ ಸಾಸಿವೆಯನ್ನು ಹಾಕಿ.
*ಅವು ಚಟ್ ಚಟ್ ಎನ್ನುತ್ತಿರುವಾಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯನ್ನು ಹಾಕಿರಿ. ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಮಿಶ್ರಣವನ್ನು ಕದಡುತ್ತಿರಿ.
*ಈಗ ಅನ್ನವನ್ನು ಮಿಶ್ರಣವಿರುವ ಬಾಣಲೆಗೆ ಹಾಕಿ. ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಬೆರಸಿರಿ.
*ಈರುಳ್ಳಿ ಹಾಗೂ ಮಸಾಲೆಯ ಘಮ ಬರುವವರೆಗೆ ಈ ಮಿಶ್ರಣವನ್ನು ಕಡಿಮೆ ಉರಿಯ ಮೇಲಿಟ್ಟು ಕಲಸುತ್ತಾ ಬಿಸಿ ಮಾಡಿರಿ.
*ಇನ್ನು ಗ್ಯಾಸ್ ಆಫ್ ಮಾಡಿ, ನಿಂಬೆ ರಸವನ್ನು ಬೆರಸಿ ಚನ್ನಾಗಿ ಕಲಸಿರಿ.
*ಈಗ ಈರುಳ್ಳಿ ಅನ್ನ ಸವಿಯಲು ರೆಡಿ. ದಕ್ಷಿಣ ಭಾರತದ ಮಾವಿನಕಾಯಿ ಅಥವಾ ನಿಂಬೆಕಾಯಿ ಉಪ್ಪಿನಕಾಯಿ ಜೊತೆ ಸವಿದರೆ ಆಹಾ ಸಕ್ಕತ್ತಾಗಿರುತ್ತೆ. ಮನೆಯಲ್ಲಿ ಮಾಡಿರೋ ಉಪ್ಪಿನಕಾಯಾಗಿದ್ದರಂತೂ ನಮ್ಮ ಈರುಳ್ಳಿ ಅನ್ನದ ರುಚಿಗೆ ಸಾಟಿಯೇ ಇಲ್ಲ.
ಪೋಷಕಾಂಶಗಳ ಪ್ರಮಾಣ
*ಇದರಲ್ಲಿ ಅತ್ಯಧಿಕ ಕಾರ್ಬೋಹೈಡ್ರೆಟ್ ಇರುವುದರಿಂದ ನಿಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅನ್ನವನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಇದು ನಿಮ್ಮ ದೇಹಕ್ಕೆ ಕ್ಯಾಲೋರಿಗಳನ್ನು ಸೇರಿಸುವದಿಲ್ಲ. ಹಾಗೂ ನಾವು ಇತಿಮಿತಿಯಲ್ಲಿ ತಿಂದರೆ ಇದು ಒಳ್ಳೆಯ ಆಹಾರವಾಗಬಲ್ಲದು.
*ನಮ್ಮ ದೇಹಕ್ಕೆ ಅತಿಮುಖ್ಯವಾಗಿ ಬೇಕಾಗುವ "ಎ" ಜೀವಸತ್ವವು ಈರುಳ್ಳಿಯಲ್ಲಿ ಯತೇಚ್ಚವಾಗಿದೆ.



Click it and Unblock the Notifications