Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಂಗಿಭಾತ್ ಅಲ್ಲ ಬದ್ನೇಕಾಯಿ ಅನ್ನ

ವಾಂಗಿ ಎಂಬ ಪದವನ್ನು ಕನ್ನಡಕ್ಕೆ ಬದನೆ ಎಂದು ತರ್ಜುಮೆ ಮಾಡಿಕೊಂಡು ಆನಂತರ ಅಡುಗೆಯನ್ನು ಯಾವ ಕನ್ನಡಿಗ ಕನ್ನಡತಿಯೂ ಇದುವರೆಗೆ ಮಾಡಿದ ಉದಾಹರಣೆ ನಮ್ಮ ವೆಬ್ ಸೈಟಿಗೆ ಗೊತ್ತಿಲ್ಲ. ಹೋಟೆಲುಗಳು ಅಷ್ಟೆ, ಮನೆಗಳೂ ಅಷ್ಟೆ, ಛತ್ರಗಳು ಅಷ್ಟೆ, ಮಠಗಳೂ ಅಷ್ಟೆ. ತಿನ್ನುವಾಗಲೂ ಕೂಡ ವಾಂಗೀಭಾತ್ ಎನ್ನುತ್ತಾರೆಯೇ ವಿನಾ ಅಪ್ಪಿತಪ್ಪಿ ಕನ್ನಡ ಸ್ಮರಣೆಯ ಬದನೇಕಾಯಿ ಅನ್ನ ಎನ್ನುವುದಿಲ್ಲ.
ನಮ್ಮ ಮನೇಲಿ ಇವತ್ತು ಬದನೇ ಕಾಯಿ ಅನ್ನ ಮಾಡಿದ್ದರು ಎಂದು ಯಾವ ಕುಮಾರವ್ಯಾಸ, ಕುವೆಂಪು, ಕಾರ್ನಾಡ್ , ಚಿಮೂ, ಕರವೇ ನಾರಾಯಣಗೌಡರಾಗಲೀ, ಮುತ್ತಪ್ಪ ರೈ ಆಗಲೀ ಅಥವಾ ದೇಜಗೌ, ಕಲ್ಬುರ್ಗಿ, ಪಂಪ, ಚಂಪಾ, ನಲ್ಲೂರು ಪ್ರಸಾದ್, ಪಂಡಿತಾರಾಧ್ಯ, ಶಿಕಾರಿಪುರ ಹರಿಹರೇಶ್ವರರು ಹೇಳಿದ್ದಿಲ್ಲ. ವಾಂಗೀಭಾತ್ ಪದದ ಗೌಡಿಕೆ ಹಾಗಿದೆ.
ಈ ಹಿನ್ನೆಲೆಯಲ್ಲಿ ಇವತ್ತು ದಟ್ಸ್ ಕನ್ನಡದ ಸಂಪಾದಕೀಯ ಸಭೆಯಲ್ಲಿ ಬದನೆಕಾಯಿ ಅನ್ನವನ್ನೇ ಮಾಡಬೇಕೆಂದು ಠರಾವು ಸ್ವೀಕರಿಸಲಾಯಿತು. ಇದನ್ನು ಮಾಡುವುದಕ್ಕೆ ಮುಖ್ಯವಾಗಿ ಬದನೇಕಾಯಿ ಅನ್ನದ ಪುಡಿ ಬೇಕು. ಈ ಪುಡಿ ಮಾಡುವ ವಿಧಾನವನ್ನು ಪಬ್ಲಿಷ್ ಮಾಡುವುದೆಂದು ತೀರ್ಮಾನಿಸಲಾಯಿತು. ಹಾಗಾಗಿ ಅದನ್ನು ಇದೇ ಪುಟದಲ್ಲಿ ವಿವರಿಸಲಾಗಿದೆ.
ಈ ಪುಡಿ ಮಾಡಿಟ್ಟುಕೊಂಡು ಮಹಾಜನತೆ ಬದನೆಕಾಯಿ ಅನ್ನವನ್ನು ಮಾಡಬಹುದೆಂದು ಸೂಚಿಸಲಾಗಿದೆ. ಒಂದು ಸೇರು ಅಕ್ಕಿ ಬದನೆಕಾಯಿ ಅನ್ನ ಮಾಡುವುದಕ್ಕೆ ಬೇಕಾಗುವಷ್ಟು ಪುಡಿ ಮಾಡಲು ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು.
ಸಾಮಗ್ರಿ ಮತ್ತು ವಿಧಾನ ಹೀಗಿದೆ :
100 ಗ್ರಾಂ ಒಣಮೆಣಸಿನಕಾಯಿ, ತಲಾ ಹತ್ತತ್ತು ಗ್ರಾಂ ಕೊತ್ತಂಬರಿ ಬೀಜ, ಕಡಲೆಬೇಳೆ, ಉದ್ದಿನಬೇಳೆ ಮತ್ತು ಜೀರಿಗೆ. 5ಅಥವಾ 6 ಲವಂಗ, ಎರಡು ತುಂಡು ದಾಲ್ಚಿನ್ನಿ ಚಕ್ಕೆ. ನಾಕು ಹನಿ ಎಣ್ಣೆ ಬಿಸಿ ಮಾಡಿಕೊಂಡು ಪ್ರತ್ಯೇಕವಾಗಿ ಮೆಣಸಿನಕಾಯಿಯನ್ನು ಘಾಟು ಬರುವವರೆಗೆ ಹುರಿಯಬೇಕು. ಮತ್ತೆ ಪ್ರತ್ಯೇಕವಾಗಿ ಉಳಿದ ಪದಾರ್ಥಗಳನ್ನು ನಾಕಾರು ಹನಿ ಎಣ್ಣೆಯಲ್ಲಿ ಹುರಿದುಕೊಂಡು ಆನಂತರದಲ್ಲಿ ಎರಡನ್ನೂ ಬೆರೆಸಿ, ಸ್ವಲ್ಪ ಉಪ್ಪು ಹಾಕ್ಕೊಂಡು ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು.
ಮೈಸೂರು ಬದನೆಕಾಯಿಯನ್ನು ಸೀಳುಸೀಳಾಗಿ ಹೆಚ್ಚಿಕೊಂಡು ಎಣ್ಣೆ ಸಾಸಿವೆ ಕರಿಬೇವು ಒಗ್ಗರಣೆಯಲ್ಲಿ ಹಾಕಿ ಬಾಡಿಸಬೇಕು. ಬದನೆ ಬೇಯುವಾಗ ಸ್ವಲ್ಪ ನೀರು ಚಿಮುಕಿಸಿ ಮುಚ್ಚಳ ಮುಚ್ಚಬೇಕು. ಬೆಂದನಂತರ ಅದಕ್ಕೆ ಪುಡಿ ಹಾಕಿ ಸ್ವಲ್ಪ ಹೊತ್ತು ಪಲ್ಯ ಸಂಸ್ಕಾರ ಆಗಬೇಕು. ಉದುರುದುರಾಗಿ ಮಾಡಿದ ಹಳೆ ಅಕ್ಕಿ ಅನ್ನವನ್ನು ಹರಿವಾಣಕ್ಕೆ ಹಾಕಿ ಆರಿದ ನಂತರ ಅದಕ್ಕೆ ಅಳತೆ ನೋಡಿಕೊಂಡು ಪುಡಿ ಪಲ್ಯ ಉದುರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು, ಒಂದೆರಡು ನಿಂಬೆಹಣ್ಣಿನ ರಸ ಮತ್ತು ಒಣಕೊಬ್ಬರಿ ತುರಿ ಹಾಕಿ ಎರಡು ಸೌಟುಗಳ ನೆರವಿನಿಂದ ಕಲಸಬೇಕು. ಪುಡಿ ಉಳಿದರೆ ಚಿಂತೆ ಇಲ್ಲ. ಅದರ ಆಯಸ್ಸು ಒಂದು ತಿಂಗಳು.



Click it and Unblock the Notifications