Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾಂಗಿಭಾತ್ ಅಲ್ಲ ಬದ್ನೇಕಾಯಿ ಅನ್ನ

ವಾಂಗಿ ಎಂಬ ಪದವನ್ನು ಕನ್ನಡಕ್ಕೆ ಬದನೆ ಎಂದು ತರ್ಜುಮೆ ಮಾಡಿಕೊಂಡು ಆನಂತರ ಅಡುಗೆಯನ್ನು ಯಾವ ಕನ್ನಡಿಗ ಕನ್ನಡತಿಯೂ ಇದುವರೆಗೆ ಮಾಡಿದ ಉದಾಹರಣೆ ನಮ್ಮ ವೆಬ್ ಸೈಟಿಗೆ ಗೊತ್ತಿಲ್ಲ. ಹೋಟೆಲುಗಳು ಅಷ್ಟೆ, ಮನೆಗಳೂ ಅಷ್ಟೆ, ಛತ್ರಗಳು ಅಷ್ಟೆ, ಮಠಗಳೂ ಅಷ್ಟೆ. ತಿನ್ನುವಾಗಲೂ ಕೂಡ ವಾಂಗೀಭಾತ್ ಎನ್ನುತ್ತಾರೆಯೇ ವಿನಾ ಅಪ್ಪಿತಪ್ಪಿ ಕನ್ನಡ ಸ್ಮರಣೆಯ ಬದನೇಕಾಯಿ ಅನ್ನ ಎನ್ನುವುದಿಲ್ಲ.
ನಮ್ಮ ಮನೇಲಿ ಇವತ್ತು ಬದನೇ ಕಾಯಿ ಅನ್ನ ಮಾಡಿದ್ದರು ಎಂದು ಯಾವ ಕುಮಾರವ್ಯಾಸ, ಕುವೆಂಪು, ಕಾರ್ನಾಡ್ , ಚಿಮೂ, ಕರವೇ ನಾರಾಯಣಗೌಡರಾಗಲೀ, ಮುತ್ತಪ್ಪ ರೈ ಆಗಲೀ ಅಥವಾ ದೇಜಗೌ, ಕಲ್ಬುರ್ಗಿ, ಪಂಪ, ಚಂಪಾ, ನಲ್ಲೂರು ಪ್ರಸಾದ್, ಪಂಡಿತಾರಾಧ್ಯ, ಶಿಕಾರಿಪುರ ಹರಿಹರೇಶ್ವರರು ಹೇಳಿದ್ದಿಲ್ಲ. ವಾಂಗೀಭಾತ್ ಪದದ ಗೌಡಿಕೆ ಹಾಗಿದೆ.
ಈ ಹಿನ್ನೆಲೆಯಲ್ಲಿ ಇವತ್ತು ದಟ್ಸ್ ಕನ್ನಡದ ಸಂಪಾದಕೀಯ ಸಭೆಯಲ್ಲಿ ಬದನೆಕಾಯಿ ಅನ್ನವನ್ನೇ ಮಾಡಬೇಕೆಂದು ಠರಾವು ಸ್ವೀಕರಿಸಲಾಯಿತು. ಇದನ್ನು ಮಾಡುವುದಕ್ಕೆ ಮುಖ್ಯವಾಗಿ ಬದನೇಕಾಯಿ ಅನ್ನದ ಪುಡಿ ಬೇಕು. ಈ ಪುಡಿ ಮಾಡುವ ವಿಧಾನವನ್ನು ಪಬ್ಲಿಷ್ ಮಾಡುವುದೆಂದು ತೀರ್ಮಾನಿಸಲಾಯಿತು. ಹಾಗಾಗಿ ಅದನ್ನು ಇದೇ ಪುಟದಲ್ಲಿ ವಿವರಿಸಲಾಗಿದೆ.
ಈ ಪುಡಿ ಮಾಡಿಟ್ಟುಕೊಂಡು ಮಹಾಜನತೆ ಬದನೆಕಾಯಿ ಅನ್ನವನ್ನು ಮಾಡಬಹುದೆಂದು ಸೂಚಿಸಲಾಗಿದೆ. ಒಂದು ಸೇರು ಅಕ್ಕಿ ಬದನೆಕಾಯಿ ಅನ್ನ ಮಾಡುವುದಕ್ಕೆ ಬೇಕಾಗುವಷ್ಟು ಪುಡಿ ಮಾಡಲು ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು.
ಸಾಮಗ್ರಿ ಮತ್ತು ವಿಧಾನ ಹೀಗಿದೆ :
100 ಗ್ರಾಂ ಒಣಮೆಣಸಿನಕಾಯಿ, ತಲಾ ಹತ್ತತ್ತು ಗ್ರಾಂ ಕೊತ್ತಂಬರಿ ಬೀಜ, ಕಡಲೆಬೇಳೆ, ಉದ್ದಿನಬೇಳೆ ಮತ್ತು ಜೀರಿಗೆ. 5ಅಥವಾ 6 ಲವಂಗ, ಎರಡು ತುಂಡು ದಾಲ್ಚಿನ್ನಿ ಚಕ್ಕೆ. ನಾಕು ಹನಿ ಎಣ್ಣೆ ಬಿಸಿ ಮಾಡಿಕೊಂಡು ಪ್ರತ್ಯೇಕವಾಗಿ ಮೆಣಸಿನಕಾಯಿಯನ್ನು ಘಾಟು ಬರುವವರೆಗೆ ಹುರಿಯಬೇಕು. ಮತ್ತೆ ಪ್ರತ್ಯೇಕವಾಗಿ ಉಳಿದ ಪದಾರ್ಥಗಳನ್ನು ನಾಕಾರು ಹನಿ ಎಣ್ಣೆಯಲ್ಲಿ ಹುರಿದುಕೊಂಡು ಆನಂತರದಲ್ಲಿ ಎರಡನ್ನೂ ಬೆರೆಸಿ, ಸ್ವಲ್ಪ ಉಪ್ಪು ಹಾಕ್ಕೊಂಡು ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು.
ಮೈಸೂರು ಬದನೆಕಾಯಿಯನ್ನು ಸೀಳುಸೀಳಾಗಿ ಹೆಚ್ಚಿಕೊಂಡು ಎಣ್ಣೆ ಸಾಸಿವೆ ಕರಿಬೇವು ಒಗ್ಗರಣೆಯಲ್ಲಿ ಹಾಕಿ ಬಾಡಿಸಬೇಕು. ಬದನೆ ಬೇಯುವಾಗ ಸ್ವಲ್ಪ ನೀರು ಚಿಮುಕಿಸಿ ಮುಚ್ಚಳ ಮುಚ್ಚಬೇಕು. ಬೆಂದನಂತರ ಅದಕ್ಕೆ ಪುಡಿ ಹಾಕಿ ಸ್ವಲ್ಪ ಹೊತ್ತು ಪಲ್ಯ ಸಂಸ್ಕಾರ ಆಗಬೇಕು. ಉದುರುದುರಾಗಿ ಮಾಡಿದ ಹಳೆ ಅಕ್ಕಿ ಅನ್ನವನ್ನು ಹರಿವಾಣಕ್ಕೆ ಹಾಕಿ ಆರಿದ ನಂತರ ಅದಕ್ಕೆ ಅಳತೆ ನೋಡಿಕೊಂಡು ಪುಡಿ ಪಲ್ಯ ಉದುರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು, ಒಂದೆರಡು ನಿಂಬೆಹಣ್ಣಿನ ರಸ ಮತ್ತು ಒಣಕೊಬ್ಬರಿ ತುರಿ ಹಾಕಿ ಎರಡು ಸೌಟುಗಳ ನೆರವಿನಿಂದ ಕಲಸಬೇಕು. ಪುಡಿ ಉಳಿದರೆ ಚಿಂತೆ ಇಲ್ಲ. ಅದರ ಆಯಸ್ಸು ಒಂದು ತಿಂಗಳು.



Click it and Unblock the Notifications











