Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅರಿಶಿಣವು ಸರ್ವರೋಗಗಳನ್ನು ನಿವಾರಿಸಿ ತಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೌಂದರ್ಯವರ್ಧಕವೂ ಹೌದು, ಆರೋಗ್ಯವರ್ಧಕವೂ ಹೌದು. ಹಾಗಾಗಿ ಗಾಯ ನಿವಾರಕವೂ ಹೌದು, ಅಲರ್ಜಿ ನಿವಾರಕವೂ ಹೌದು. ಇದರ ಪ್ರಯೋಜನಗಳ ಪಟ್ಟಿ ಬಹಳ ಉದ್ದವಿದೆ.
ಅಡುಗೆಯಲ್ಲೂ ಕೂಡ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅಡುಗೆ ಮನೆಯ ಸಾಂಬಾರ ಪದಾರ್ಥಗಳಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನ. ಅರಿಶಿಣದ ಗಡ್ಡೆಗಳಿಂದ ತಯಾರಿಸುವ ಪುಡಿ ಮಾತ್ರವಲ್ಲ ಬದಲಾಗಿ ಅರಿಶಿಣದ ಎಲೆಗಳಲ್ಲೂ ಕೂಡ ಬಹಳ ಶಕ್ತಿ ಇದೆ. ಅದರ ಘಮವೇ ಬಹಳ ಉತ್ತಮವಾಗಿರುತ್ತದೆ. ಅರಿಶಿಣದ ಎಲೆಯನ್ನು ಬಳಸಿ ಮಾಡುವ ಕಡುಬು ನೀವು ಕೇಳಿರಬಹುದು.
ಪಾಯಸ ಮಾಡುವಾಗ ಅರಿಶಿಣದ ಎಲೆಯನ್ನು ಪಾಯಸಕ್ಕೆ ಘಮ ಹೆಚ್ಚಿಸುವುದಕ್ಕೆ ಬಳಸಲಾಗುತ್ತದೆ. ಅದೇ ರೀತಿ ಅರಿಶಿಣದ ಎಲೆಯಿಂದ ತಂಬಳಿಯನ್ನೂ ಮಾಡಬಹುದು. ಅರೆ ಅರಿಶಿಣದ ಎಲೆಯ ತಂಬಳಿಯೇ ಎಂದು ಹುಬ್ಬೇರಿಸಬೇಡಿ. ಹೌದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ತಂಬಳಿಯನ್ನು ಮಾಡುವುದು ಹೇಗ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Tambuli
Serves: 3
-
ಬೇಕಾಗುವ ಸಾಮಗ್ರಿಗಳು
ಅರಿಶಿಣದ ಎಲೆಯ ಎಳೆಯ ಕುಡಿಗಳು- ಐದರಿಂದ ಆರು
ಕಾಳುಮೆಣಸು- ಐದಾರು
ಜೀರಿಗೆ- ಒಂದು ಸ್ಪೂನ್
ತೆಂಗಿನ ಕಾಯಿತುರಿ- ಒಂದು ಮುಷ್ಠಿ
ಕಡೆದ ಮಜ್ಜಿಗೆ- ಕಾಲು ಲೀಟರ್
ಬೆಲ್ಲ- ನಾಲ್ಕು ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಬೆಣ್ಣೆ - ನಾಲ್ಕು ಸ್ಪೂನ್
-
ಮಾಡುವ ವಿಧಾನ
ಅರಿಶಿನಣದ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ನಂತರ ಅದನ್ನು ಚಿಟಿಕೆ ಬೆಣ್ಣೆ ಹಾಕಿ ಹುರಿಯಿರಿ.
ಅದಕ್ಕೆ ಕಾಳುಮೆಣಸು, ಕಾಯಿತುರಿ,ಜೀರಿಗೆ ಹಾಕಿ ಹುರಿಯಿರಿ.
ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣದ ಜೊಗಟಿಯನ್ನು ಸೋಸಿಕೊಳ್ಳಿ.
ಸೋಸದೆಯೂ ಬಳಸಬಹುದು. ನಂತರ ಈ ರಸಕ್ಕೆ ಉಪ್ಪು,ಬೆಲ್ಲ ಮತ್ತು ಕಡೆದ ಮಜ್ಜಿಗೆ ಸೇರಿಸಿ ಚೆನ್ನಾಗಿ ಕೈಯಾಡಿ.
ನಂತರ ಬೆಣ್ಣೆಗೆ ಸ್ವಲ್ಪ ಜೀರಿಗೆ ಹಾಕಿ ಒಗ್ಗರಣೆ ಮಾಡಿದರೆ ಅರಿಶಿಣದ ಎಲೆ ತಂಬಳಿ ಸವಿಯಲು ಸಿದ್ಧ.
- ಅರಿಶಿಣದ ಎಲೆಯ ತಂಬಳಿ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಗಾಯವನ್ನು ಗುಣಗೊಳಿಸುವ ಶಕ್ತಿ ಇದಕ್ಕಿದೆ. ಊರಿಯೂತ ತಡೆಯುವ ಶಕ್ತಿ ಇದೆ. ಚರ್ಮದ ಕಾಂತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
- ಕ್ಯಾಲೋರಿ - - 29
- ಪ್ರೊಟೀನ್ - - 0.91ಗ್ರಾಮ್