Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅರಿಶಿಣವು ಸರ್ವರೋಗಗಳನ್ನು ನಿವಾರಿಸಿ ತಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೌಂದರ್ಯವರ್ಧಕವೂ ಹೌದು, ಆರೋಗ್ಯವರ್ಧಕವೂ ಹೌದು. ಹಾಗಾಗಿ ಗಾಯ ನಿವಾರಕವೂ ಹೌದು, ಅಲರ್ಜಿ ನಿವಾರಕವೂ ಹೌದು. ಇದರ ಪ್ರಯೋಜನಗಳ ಪಟ್ಟಿ ಬಹಳ ಉದ್ದವಿದೆ.

ಅಡುಗೆಯಲ್ಲೂ ಕೂಡ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅಡುಗೆ ಮನೆಯ ಸಾಂಬಾರ ಪದಾರ್ಥಗಳಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನ. ಅರಿಶಿಣದ ಗಡ್ಡೆಗಳಿಂದ ತಯಾರಿಸುವ ಪುಡಿ ಮಾತ್ರವಲ್ಲ ಬದಲಾಗಿ ಅರಿಶಿಣದ ಎಲೆಗಳಲ್ಲೂ ಕೂಡ ಬಹಳ ಶಕ್ತಿ ಇದೆ. ಅದರ ಘಮವೇ ಬಹಳ ಉತ್ತಮವಾಗಿರುತ್ತದೆ. ಅರಿಶಿಣದ ಎಲೆಯನ್ನು ಬಳಸಿ ಮಾಡುವ ಕಡುಬು ನೀವು ಕೇಳಿರಬಹುದು.

ಪಾಯಸ ಮಾಡುವಾಗ ಅರಿಶಿಣದ ಎಲೆಯನ್ನು ಪಾಯಸಕ್ಕೆ ಘಮ ಹೆಚ್ಚಿಸುವುದಕ್ಕೆ ಬಳಸಲಾಗುತ್ತದೆ. ಅದೇ ರೀತಿ ಅರಿಶಿಣದ ಎಲೆಯಿಂದ ತಂಬಳಿಯನ್ನೂ ಮಾಡಬಹುದು. ಅರೆ ಅರಿಶಿಣದ ಎಲೆಯ ತಂಬಳಿಯೇ ಎಂದು ಹುಬ್ಬೇರಿಸಬೇಡಿ. ಹೌದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ತಂಬಳಿಯನ್ನು ಮಾಡುವುದು ಹೇಗ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Tambuli
Serves: 3
-
ಬೇಕಾಗುವ ಸಾಮಗ್ರಿಗಳು
ಅರಿಶಿಣದ ಎಲೆಯ ಎಳೆಯ ಕುಡಿಗಳು- ಐದರಿಂದ ಆರು
ಕಾಳುಮೆಣಸು- ಐದಾರು
ಜೀರಿಗೆ- ಒಂದು ಸ್ಪೂನ್
ತೆಂಗಿನ ಕಾಯಿತುರಿ- ಒಂದು ಮುಷ್ಠಿ
ಕಡೆದ ಮಜ್ಜಿಗೆ- ಕಾಲು ಲೀಟರ್
ಬೆಲ್ಲ- ನಾಲ್ಕು ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಬೆಣ್ಣೆ - ನಾಲ್ಕು ಸ್ಪೂನ್
-
ಮಾಡುವ ವಿಧಾನ
ಅರಿಶಿನಣದ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ನಂತರ ಅದನ್ನು ಚಿಟಿಕೆ ಬೆಣ್ಣೆ ಹಾಕಿ ಹುರಿಯಿರಿ.
ಅದಕ್ಕೆ ಕಾಳುಮೆಣಸು, ಕಾಯಿತುರಿ,ಜೀರಿಗೆ ಹಾಕಿ ಹುರಿಯಿರಿ.
ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣದ ಜೊಗಟಿಯನ್ನು ಸೋಸಿಕೊಳ್ಳಿ.
ಸೋಸದೆಯೂ ಬಳಸಬಹುದು. ನಂತರ ಈ ರಸಕ್ಕೆ ಉಪ್ಪು,ಬೆಲ್ಲ ಮತ್ತು ಕಡೆದ ಮಜ್ಜಿಗೆ ಸೇರಿಸಿ ಚೆನ್ನಾಗಿ ಕೈಯಾಡಿ.
ನಂತರ ಬೆಣ್ಣೆಗೆ ಸ್ವಲ್ಪ ಜೀರಿಗೆ ಹಾಕಿ ಒಗ್ಗರಣೆ ಮಾಡಿದರೆ ಅರಿಶಿಣದ ಎಲೆ ತಂಬಳಿ ಸವಿಯಲು ಸಿದ್ಧ.
- ಅರಿಶಿಣದ ಎಲೆಯ ತಂಬಳಿ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಗಾಯವನ್ನು ಗುಣಗೊಳಿಸುವ ಶಕ್ತಿ ಇದಕ್ಕಿದೆ. ಊರಿಯೂತ ತಡೆಯುವ ಶಕ್ತಿ ಇದೆ. ಚರ್ಮದ ಕಾಂತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
- ಕ್ಯಾಲೋರಿ - - 29
- ಪ್ರೊಟೀನ್ - - 0.91ಗ್ರಾಮ್



Click it and Unblock the Notifications