Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಹುರುಳಿಕಾಳಿನ ರಸಂ ರೆಸಿಪಿ
ಹುರುಳಿಕಾಳಿನಲ್ಲಿ ಪ್ರೊಟೀನ್ ಅಂಶಗಳಿದ್ದು ಡಯಟ್ ನಲ್ಲಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದಾಗಿದ್ದು ಇವತ್ತು ನಾವು ಹುರುಳಿಕಾಳಿನ ರಸಂ(ಸಾರು) ಮಾಡುವ ವಿಧಾನ ತಿಳಿಯೋಣ.
ಈ ಸಾರಿಗೆ ಹುರುಳಿಕಾಳನ್ನು ಅರೆದು ಸೇರಿಸುವುದರಿಂದ ಸವಿಯಲು ಮತ್ತಷ್ಟು ರುಚಿಕರವಾಗಿರುತ್ತದೆ. ಇದರ ರುಚಿಕರವಾದ ರಸಂ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಹುರುಳಿಕಾಳು ಅರ್ಧ ಕಪ್
* ಟೊಮೆಟೊ 2
* ಬೆಳ್ಳುಳ್ಳಿ 3-4 ಎಸಳು
* ನಿಂಬೆ ಹಣ್ಣಿನ ಗಾತ್ರದಷ್ಟು ದೊಡ್ಡದಿರುವ ಹುಣಸೆ ಹಣ್ಣಿನ ಉಂಡೆ
* ಚಿಟಿಕೆಯಷ್ಟು ಇಂಗು
* ಕರಿಮೆಣಸಿನ ಪುಡಿ 1 ಚಮಚ
* ಜೀರಿಗೆ 1 ಚಮಚ
* ಸಾಸಿವೆ 1 ಚಮಚ
* ಒಣ ಮೆಣಸು 2
* ಸ್ವಲ್ಪ ಕರಿಬೇವಿನ ಎಲೆ
* ಅರ್ಧ ಚಮಚ ಸಕ್ಕರೆ
* ಎಣ್ಣೆ
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಹುರುಳಿಕಾಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದು ನಂತರ ಬದಿಯಲ್ಲಿ ತೆಗೆದು ಇಡಬೇಕು.
2. ನಂತರ ಕುಕ್ಕರ್ ನಲ್ಲಿ ಹಾಕಿ ಒಂದೂವರೆ ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಕೊಡುವವರಿಗೆ ಬೇಯಿಸಬೇಕು.
3. ಹುಣಸೆಹಣ್ಣಿನಿಂದ ರಸ ಮಾಡಿ ಆ ರಸಕ್ಕೆ ಸಕ್ಕರೆ ಹಾಕಿ ಬದಿಯಲ್ಲಿಡಬೇಕು.
4. ಈಗ ಹುರುಳಿಕಾಳನ್ನು ತೆಗೆದು ಜೀರಿಗೆ, ಕರಿಮೆಣಸಿನ ಪುಡಿ ಮತ್ತು ಬೆಳ್ಳುಳ್ಳಿ ಹಾಕಿ ನುಣ್ಣನೆ ಅರೆಯಬೇಕು. (ಹುರುಳಿಕಾಳು ಬೇಯಿಸಿದ ನೀರನ್ನು ತೆಗೆದಿಡಿ)
5. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಒಣಮೆಣಸನ್ನು ಮುರಿದು ಹಾಕಬೇಕು ನಂತರ ಸ್ವಲ್ಪ ಇಂಗು ಮತ್ತು ಕರಿಬೇವಿನ ಎಲೆ ಹಾಕಿ ನುಣ್ಣನೆ ಅರೆದ ಹುರುಳಿಕಾಳು ಪೇಸ್ಟ್ ಅನ್ನು ಹಾಕಿ, ಹುರುಳಿಕಾಳು ಬೇಯಿಸಿದ ನೀರನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ಸಾರು ಕುದಿ ಬರುವಾಗ ಹುಣಸೆಹಣ್ಣಿನ ರಸ ಹಾಕಿ 5 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ಉರುಳಿಕಾಳಿನ ಸಾರು(ರಸಂ) ರೆಡಿ.



Click it and Unblock the Notifications











