Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಒಬ್ಬಟ್ಟು ಸಾರು ರೆಸಿಪಿ Happy VML

ಬೇಕಾಗುವ ಸಾಮಾಗ್ರಿಗಳು:
* ಒಂದು ಇಂಚಿನ ಚಕ್ಕೆ
* ಸ್ವಲ್ಪ ಕರಿಬೇವಿನ ಎಲೆ
* ಹಸಿಮೆಣಸಿನ ಕಾಯಿ 4
* ಬೆಲ್ಲ ಅರ್ಧ ಚಮಚ
* ಗಟ್ಟಿಯಾದ ಹುಣಸೆ ರಸ ಒಂದು ಚಮಚದಷ್ಟು
* ತುರಿದ ತೆಂಗಿನ ಕಾಯಿ 1 ಚಮಚ (ಒಣ ಕೊಬ್ಬರಿ ಬೇಕಾದರೂ ಬಳಸಬಹುದು)
* ಕೊತ್ತಂಬರಿ ಪುಡಿ 1/2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ 2 ಚಮಚ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಹೂರಣ 3 ಚಮಚ
( ಒಂದು ಕಪ್ ಕಡಲೆ ಬೇಳೆ ಬೇಯಿಸಿ, ಮತ್ತೊಂದು ಪಾತ್ರೆಯಲ್ಲಿ ಒಂದು ಕಪ್ ಬೆಲ್ಲವನ್ನು ನೀರು ಹಾಕದೆ ಕರಗಿಸಿ. ಕರಗಿದ ಬೆಲ್ಲದ ಪಾಕಕ್ಕೆ ಬೇಯಿಸಿದ ಕಡಲೆಬೇಳೆಯನ್ನು ಹಾಕಿ ಮಿಶ್ರಮಾಡಿ. ಮಿಶ್ರಣ ತುಂಬಾ ಗಟ್ಟಿಯಾಗಿರಲಿ, ನೀರಾದರೆ ಈ ಮಿಶ್ರಣವನ್ನು ಸ್ವಲ್ಪ ಕುದಿಸಿ, ಕುದಿಸಿದ ಮಿಶ್ರಣವನ್ನು ಆರಲು ಬಿಡಿ, ಆರಿದ ಮಿಶ್ರಣವನ್ನು ನುಣ್ಣಗೆ ರುಬ್ಬಿ. ಈ ರೀತಿ ಮಾಡಿದರೆ ಹೂರಣ ರೆಡಿ. 3 ಚಮಚ ಹೂರಣವನ್ನು ಸಾರಿಗೆ ತೆಗೆದಿಟ್ಟು ಉಳಿದ ಮಿಶ್ರಣದಿಂದ ಒಬ್ಬಟ್ಟು ತಯಾರಿಸಿಕೊಳ್ಳಿ).
ತಯಾರಿಸುವ ವಿಧಾನ:
1. ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಚಕ್ಕೆ, ಕರಿಬೇವು, ಹಸಿಮೆಣಸಿನ ಕಾಯಿ ಹುರಿಯಬೇಕು.
2. ನಂತರ ಕತ್ತರಿಸಿದ ತುರಿದ ತೆಂಗಿನಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ನಂತರ ಈ ಮಿಶ್ರಣವನ್ನು ಅರಿಯಬೇಕು.
4. ನಂತರ ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ಕುದಿಸಬೇಕು. ನಂತರ ಬೆಲ್ಲ, ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕ ಉಪ್ಪು ಕೊತ್ತಂಬರಿ ಪುಡಿ ಮತ್ತು ಹೂರಣ ಹಾಕಿ ಚೆನ್ನಾಗಿ ಕುದಿಸಬೇಕು.
5. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಒಬ್ಬಟ್ಟು ಸಾರು ರೆಡಿ.
ವಿಸೂ : ಈರುಳ್ಳಿ ಬೆಳ್ಳುಳ್ಳಿ ಹಾಕಿಯೂ ಮಾಡಬಹುದು. ಆದರೆ ಅದು ನಿಮ್ಮಿಷ್ಟ.



Click it and Unblock the Notifications











