Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಪಾಕಶಾಲೆ: ಘಂ ಎನ್ನುವ ಮೈಸೂರು ಹುಳಿ
ಈ ಸಾರನ್ನು ನಮ್ಮ ಅಜ್ಜಿ ಕಲಿಸಿದ್ದು. ಮೈಸೂರು ಹುಳಿ ಮಾಡುವುದನ್ನು ಇಂದಿಗೂ ನಾನು ಮರೆತಿಲ್ಲ. ದಟ್ಸ್ ಕನ್ನಡ ಓದುಗರಿಗೆ ಇಷ್ಟ ಆಗಬಹುದು ಅಂತ ನಿಮಗೂ ತಿಳಿಸುತ್ತಿದ್ದೇನೆ.ಇಲ್ಲಿ ಬಳಸಿರುವ ತರಕಾರಿಗಳಿಗೆ ಬದಲಾಗಿ ನಿಮಗಿಷ್ಟವಾದ ತರಕಾರಿಗಳನ್ನು ಉಪಯೋಗಿಸಿಕೊಳ್ಳಬಹುದು.
*ರೇಶ್ಮಾ, ಮೈಸೂರು
ಬೇಕಾಗುವ ಸಾಮಗ್ರಿಗಳು:
ತೊಗರಿ ಬೇಳೆ: 1 ಕಪ್ಪು
ಈರುಳ್ಳಿ: 1
ಟೊಮ್ಯಾಟೊ: 2
ಹುರಳಿಕಾಯಿ: ¼ ಕೆ.ಜಿ
ಆಲೂಗಡ್ಡೆ:'
ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ಹಣ್ಣಿನ ರಸ: 1 ಟೇಬಲ್ ಚಮಚ
ಮಸಾಲೆ ಪದಾರ್ಥಗಳು
ಕೊತ್ತಂಬರಿ ಬೀಜ: 2 ಟೇಬಲ್ ಚಮಚ
ತೊಗರಿ ಬೇಳೆ: 2 ಟೇಬಲ್ ಚಮಚ
ಜೀರಿಗೆ: 1 ಟೀ ಚಮಚ
ಹಸಿ ಅಕ್ಕಿ: 1ಟೀ ಚಮಚ
ಸಾಸಿವೆ: 1 ಟೀ ಚಮಚ
ಒಣ ಮೆಣಸಿನ ಕಾಯಿ: 2
ಮೆಂತ್ಯ: ' ಟೀ ಚಮಚ
ಒಣ ಕೊಬ್ಬರಿ: 2 ಟೇಬಲ್ ಚಮಚ
ಚಕ್ಕೆ: 1 ಇಂಚು
ಹರಿಶಿಣ ಪುಡಿ: ' ಟೀ ಚಮಚ
ಒಗ್ಗರಣೆಗೆ
ಎಣ್ಣೆ: 1 ಟೀ ಚಮಚ
ಸಾಸಿವೆ: 1 ಟೀ ಚಮಚ
ಮೆಂತ್ಯ: 1 ಟೀ ಚಮಚ
ಕರಿಬೇವು: ಒಗ್ಗರಣೆಗೆ
ಇಂಗು:¼ ಟೀ ಚಮಚ
ಮಾಡುವ ವಿಧಾನ
1. ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಅರೆದುಕೊಳ್ಳ ಬೇಕು ಆಗ ಸಾರಿನ ಪುಡಿ ಸಿದ್ಧವಾಗುತ್ತದೆ. ಹುಳಿಗೆ ಉಪಯೋಗಿಸಿಕೊಂಡು ನಂತರಉಳಿದದ್ದನ್ನು ಗಾಳಿಯಾಡದ ಡಬ್ಬಿಗೆ ಹಾಕಿಡಿ.
2. ಈರುಳ್ಳಿ, ಟೊಮ್ಯಾಟೊ ಹಾಗೂ ಇತರೆ ತರಕಾರಿಗಳನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ಬೇಯಿಸಿಕೊಳ್ಳಿ
3. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಒಗ್ಗರಣೆ ಸಾಮಗ್ರಿಗಳನ್ನು ಎಣ್ಣೆಗೆ ಹಾಕಿ. ಸಾಸಿವೆ ಚಿಟಗುಟ್ಟುವ ಸಮಯಕ್ಕೆ 2 ಟೇಬಲ್ ಚಮಚ ಸಾಂಬಾರು ಪುಡಿ, ಹುಣಸೆಹಣ್ಣಿನ ರಸ, ಉಪ್ಪನು ಸೇರಿಸಿ.
4. ಬೇಯಿಸಿಕೊಂಡ ಬೇಳೆ ತರಕಾರಿಗಳನ್ನು ಹಾಕಿ.
5. ಈಗ ಬಿಸಿಬಿಸಿ ಅನ್ನ, ಹಪ್ಪಳ, ವ್ಯಂಜನಗಳೊಂದಿಗೆ ಬಡಿಸಿರಿ.



Click it and Unblock the Notifications