Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಪಾಕಶಾಲೆ: ಘಂ ಎನ್ನುವ ಮೈಸೂರು ಹುಳಿ
ಈ ಸಾರನ್ನು ನಮ್ಮ ಅಜ್ಜಿ ಕಲಿಸಿದ್ದು. ಮೈಸೂರು ಹುಳಿ ಮಾಡುವುದನ್ನು ಇಂದಿಗೂ ನಾನು ಮರೆತಿಲ್ಲ. ದಟ್ಸ್ ಕನ್ನಡ ಓದುಗರಿಗೆ ಇಷ್ಟ ಆಗಬಹುದು ಅಂತ ನಿಮಗೂ ತಿಳಿಸುತ್ತಿದ್ದೇನೆ.ಇಲ್ಲಿ ಬಳಸಿರುವ ತರಕಾರಿಗಳಿಗೆ ಬದಲಾಗಿ ನಿಮಗಿಷ್ಟವಾದ ತರಕಾರಿಗಳನ್ನು ಉಪಯೋಗಿಸಿಕೊಳ್ಳಬಹುದು.
*ರೇಶ್ಮಾ, ಮೈಸೂರು
ಬೇಕಾಗುವ ಸಾಮಗ್ರಿಗಳು:
ತೊಗರಿ ಬೇಳೆ: 1 ಕಪ್ಪು
ಈರುಳ್ಳಿ: 1
ಟೊಮ್ಯಾಟೊ: 2
ಹುರಳಿಕಾಯಿ: ¼ ಕೆ.ಜಿ
ಆಲೂಗಡ್ಡೆ:'
ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ಹಣ್ಣಿನ ರಸ: 1 ಟೇಬಲ್ ಚಮಚ
ಮಸಾಲೆ ಪದಾರ್ಥಗಳು
ಕೊತ್ತಂಬರಿ ಬೀಜ: 2 ಟೇಬಲ್ ಚಮಚ
ತೊಗರಿ ಬೇಳೆ: 2 ಟೇಬಲ್ ಚಮಚ
ಜೀರಿಗೆ: 1 ಟೀ ಚಮಚ
ಹಸಿ ಅಕ್ಕಿ: 1ಟೀ ಚಮಚ
ಸಾಸಿವೆ: 1 ಟೀ ಚಮಚ
ಒಣ ಮೆಣಸಿನ ಕಾಯಿ: 2
ಮೆಂತ್ಯ: ' ಟೀ ಚಮಚ
ಒಣ ಕೊಬ್ಬರಿ: 2 ಟೇಬಲ್ ಚಮಚ
ಚಕ್ಕೆ: 1 ಇಂಚು
ಹರಿಶಿಣ ಪುಡಿ: ' ಟೀ ಚಮಚ
ಒಗ್ಗರಣೆಗೆ
ಎಣ್ಣೆ: 1 ಟೀ ಚಮಚ
ಸಾಸಿವೆ: 1 ಟೀ ಚಮಚ
ಮೆಂತ್ಯ: 1 ಟೀ ಚಮಚ
ಕರಿಬೇವು: ಒಗ್ಗರಣೆಗೆ
ಇಂಗು:¼ ಟೀ ಚಮಚ
ಮಾಡುವ ವಿಧಾನ
1. ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಅರೆದುಕೊಳ್ಳ ಬೇಕು ಆಗ ಸಾರಿನ ಪುಡಿ ಸಿದ್ಧವಾಗುತ್ತದೆ. ಹುಳಿಗೆ ಉಪಯೋಗಿಸಿಕೊಂಡು ನಂತರಉಳಿದದ್ದನ್ನು ಗಾಳಿಯಾಡದ ಡಬ್ಬಿಗೆ ಹಾಕಿಡಿ.
2. ಈರುಳ್ಳಿ, ಟೊಮ್ಯಾಟೊ ಹಾಗೂ ಇತರೆ ತರಕಾರಿಗಳನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ಬೇಯಿಸಿಕೊಳ್ಳಿ
3. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಒಗ್ಗರಣೆ ಸಾಮಗ್ರಿಗಳನ್ನು ಎಣ್ಣೆಗೆ ಹಾಕಿ. ಸಾಸಿವೆ ಚಿಟಗುಟ್ಟುವ ಸಮಯಕ್ಕೆ 2 ಟೇಬಲ್ ಚಮಚ ಸಾಂಬಾರು ಪುಡಿ, ಹುಣಸೆಹಣ್ಣಿನ ರಸ, ಉಪ್ಪನು ಸೇರಿಸಿ.
4. ಬೇಯಿಸಿಕೊಂಡ ಬೇಳೆ ತರಕಾರಿಗಳನ್ನು ಹಾಕಿ.
5. ಈಗ ಬಿಸಿಬಿಸಿ ಅನ್ನ, ಹಪ್ಪಳ, ವ್ಯಂಜನಗಳೊಂದಿಗೆ ಬಡಿಸಿರಿ.



Click it and Unblock the Notifications
