Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಪಾಕಶಾಲೆ: ಘಂ ಎನ್ನುವ ಮೈಸೂರು ಹುಳಿ
ಈ ಸಾರನ್ನು ನಮ್ಮ ಅಜ್ಜಿ ಕಲಿಸಿದ್ದು. ಮೈಸೂರು ಹುಳಿ ಮಾಡುವುದನ್ನು ಇಂದಿಗೂ ನಾನು ಮರೆತಿಲ್ಲ. ದಟ್ಸ್ ಕನ್ನಡ ಓದುಗರಿಗೆ ಇಷ್ಟ ಆಗಬಹುದು ಅಂತ ನಿಮಗೂ ತಿಳಿಸುತ್ತಿದ್ದೇನೆ.ಇಲ್ಲಿ ಬಳಸಿರುವ ತರಕಾರಿಗಳಿಗೆ ಬದಲಾಗಿ ನಿಮಗಿಷ್ಟವಾದ ತರಕಾರಿಗಳನ್ನು ಉಪಯೋಗಿಸಿಕೊಳ್ಳಬಹುದು.
*ರೇಶ್ಮಾ, ಮೈಸೂರು
ಬೇಕಾಗುವ ಸಾಮಗ್ರಿಗಳು:
ತೊಗರಿ ಬೇಳೆ: 1 ಕಪ್ಪು
ಈರುಳ್ಳಿ: 1
ಟೊಮ್ಯಾಟೊ: 2
ಹುರಳಿಕಾಯಿ: ¼ ಕೆ.ಜಿ
ಆಲೂಗಡ್ಡೆ:'
ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ಹಣ್ಣಿನ ರಸ: 1 ಟೇಬಲ್ ಚಮಚ
ಮಸಾಲೆ ಪದಾರ್ಥಗಳು
ಕೊತ್ತಂಬರಿ ಬೀಜ: 2 ಟೇಬಲ್ ಚಮಚ
ತೊಗರಿ ಬೇಳೆ: 2 ಟೇಬಲ್ ಚಮಚ
ಜೀರಿಗೆ: 1 ಟೀ ಚಮಚ
ಹಸಿ ಅಕ್ಕಿ: 1ಟೀ ಚಮಚ
ಸಾಸಿವೆ: 1 ಟೀ ಚಮಚ
ಒಣ ಮೆಣಸಿನ ಕಾಯಿ: 2
ಮೆಂತ್ಯ: ' ಟೀ ಚಮಚ
ಒಣ ಕೊಬ್ಬರಿ: 2 ಟೇಬಲ್ ಚಮಚ
ಚಕ್ಕೆ: 1 ಇಂಚು
ಹರಿಶಿಣ ಪುಡಿ: ' ಟೀ ಚಮಚ
ಒಗ್ಗರಣೆಗೆ
ಎಣ್ಣೆ: 1 ಟೀ ಚಮಚ
ಸಾಸಿವೆ: 1 ಟೀ ಚಮಚ
ಮೆಂತ್ಯ: 1 ಟೀ ಚಮಚ
ಕರಿಬೇವು: ಒಗ್ಗರಣೆಗೆ
ಇಂಗು:¼ ಟೀ ಚಮಚ
ಮಾಡುವ ವಿಧಾನ
1. ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಅರೆದುಕೊಳ್ಳ ಬೇಕು ಆಗ ಸಾರಿನ ಪುಡಿ ಸಿದ್ಧವಾಗುತ್ತದೆ. ಹುಳಿಗೆ ಉಪಯೋಗಿಸಿಕೊಂಡು ನಂತರಉಳಿದದ್ದನ್ನು ಗಾಳಿಯಾಡದ ಡಬ್ಬಿಗೆ ಹಾಕಿಡಿ.
2. ಈರುಳ್ಳಿ, ಟೊಮ್ಯಾಟೊ ಹಾಗೂ ಇತರೆ ತರಕಾರಿಗಳನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ಬೇಯಿಸಿಕೊಳ್ಳಿ
3. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಒಗ್ಗರಣೆ ಸಾಮಗ್ರಿಗಳನ್ನು ಎಣ್ಣೆಗೆ ಹಾಕಿ. ಸಾಸಿವೆ ಚಿಟಗುಟ್ಟುವ ಸಮಯಕ್ಕೆ 2 ಟೇಬಲ್ ಚಮಚ ಸಾಂಬಾರು ಪುಡಿ, ಹುಣಸೆಹಣ್ಣಿನ ರಸ, ಉಪ್ಪನು ಸೇರಿಸಿ.
4. ಬೇಯಿಸಿಕೊಂಡ ಬೇಳೆ ತರಕಾರಿಗಳನ್ನು ಹಾಕಿ.
5. ಈಗ ಬಿಸಿಬಿಸಿ ಅನ್ನ, ಹಪ್ಪಳ, ವ್ಯಂಜನಗಳೊಂದಿಗೆ ಬಡಿಸಿರಿ.



Click it and Unblock the Notifications











