Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ ಜೊತೆಗೆ ಘಮ್ಮೆನ್ನುವ ಉಡುಪಿ ಸಾಂಬಾರು

ಶುಚಿರುಚಿಯಾದ ಅಡುಗೆಗೆ ಉಡುಪಿಯವರು ಫೇಮಸ್ಸು. ಆದ್ದರಿಂದಲೇ ಉಡುಪಿ ಭಟ್ಟರು ಭಾರತದ ಯಾವುದೇ ಮೂಲೆಯಲ್ಲಿ ಹೋಗಿ ಹೋಟೆಲ್ ಪ್ರಾರಂಭಿಸಿದರೂ ಬಿಸಿನೆಸ್ ಚೆನ್ನಾಗಿ ಆಗತ್ತೆ. ಅವರಿಗೆ ಶುಭಕೋರುತ್ತ, ಇವತ್ತು, ಗುರುವಾರ ನಾವುಗಳು ಉಡುಪಿ ಬ್ರಾಹ್ಮಣರ ಬ್ರಾಂಡೆಡ್ ಪದಾರ್ಥ ಸಾಂಬಾರು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
* ಸಾಂಬಾರು ಮಾಡಲು ಬಳಸುವ ಬೇಳೆ 1/2 ಕಪ್
* ಎಣ್ಣೆ (ಸಾರಿಗೆ ಬೇಕಾದಷ್ಟು)
* ಮೆಂತೆ 1/2 ಚಮಚ
* ಉದ್ದಿನ ಬೇಳೆ 1 ಚಮಚ
* ಒಣ ಕೆಂಪು ಮೆಣಸಿನ ಕಾಯಿ
* ಕೊತ್ತಂಬರಿ ಬೀಜ 1 ಚಮಚ
* ಜೀರಿಗೆ 1/2 ಚಮಚ
* ಕರಿಬೇವಿನ ಎಲೆ ಸ್ವಲ್ಪ
* ತುರಿದ ತೆಂಗಿನಕಾಯಿ 1/2 ಕಪ್
* ಚಿಕ್ಕ ಈರುಳ್ಳಿ ಒಂದು ಹಿಡಿಯಷ್ಟು
* ಹಸಿ ಮೆಣಸು 2
* ಸಾಸಿವೆ 1/2 ಚಮಚ
* ಮೆಂತೆ 1/4 ಚಮಚ
* ಹುಳಿ (ರುಚಿಗೆ ತಕ್ಕಷ್ಟು)
* ಉಪ್ಪು ರುಚಿಗೆ ತಕ್ಕಷ್ಟು
* ಪುಡಿ ಮಾಡಿದ ಬೆಲ್ಲ 1 ಚಮಚ
ತಯಾರಿಸುವ ವಿಧಾನ:
1. ಬೇಳೆಯನ್ನು ಚೆನ್ನಾಗಿ ಬೇಯಿಸಿ ಸೌಟ್ ನಿಂದ ಅದನ್ನು ಚೆನ್ನಾಗಿ ಹಿಸುಕಬೇಕು.
2. ಒಂದು ಚಮಚ ಕಡಲೆಣ್ಣೆ ಅಥವಾ ಸನ್ ಫ್ಲವರ್ ಅನ್ನು ಬಾಣಲೆಗೆ ಹಾಕಿ ಮೆಂತೆ ಮತ್ತು ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಬೇಕು.
3. ಈಗ ಒಣಮೆಣಸಿನ ಕಾಯಿ ಮತ್ತು ಕೊತ್ತಂಬರಿ ಬೀಜನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು. ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು ತುರಿದ ತೆಂಗಿನಕಾಯಿ ಹಾಕಬೇಕು. ತೆಂಗಿನಕಾಯಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ನಂತರ ಹುರಿದ ಈ ಮೇಲಿನ ಮಿಶ್ರಣವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಅರಿದು ಪಕ್ಕದಲ್ಲಿಡಿ.
5. ಈರುಳ್ಳಿಯ ಸಿಪ್ಪೆ ಸುಲಿದು ಕತ್ತರಿಸಿಡಬೇಕು.
6. ದೊಡ್ಡ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಸಾಸಿವೆಯನ್ನು ಹಾಕಬೇಕು.
7. ಸಾಸಿವೆ ಚಿಟಾಪಟಾ ಶಬ್ದ ಬರುವಾಗ 1/2 ಚಮಚ ಉದ್ದಿನ ಬೇಳೆ ಮತ್ತು ಇಂಗು ಸೇರಿಸಬೇಕು.
8. ಈಗ ಈರುಳ್ಳಿ, ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಬೇಕು.
9. ಟೊಮೆಟೊ ಮತ್ತು ಇತರ ತರಕಾರಿಯನ್ನು ಬೇಕಾದರೆ ಬೇಕಾದರೆ ಸೇರಿಸಬಹುದು.
10. ನಂತರ ಇವುಗಳನ್ನು ಟೊಮೆಟೊ ಮೆತ್ತೆಗಾಗುವರೆಗೂ ಹುರಿಯಬೇಕು. ನಂತರ ಸ್ವಲ್ಪ ನೀರು ಸೇರಿಸಿ ತರಕಾರಿಯನ್ನು ಬೇಯಿಸಬೇಕು.
11. ಹುಣಸೆ ಹುಳಿಯನ್ನು ಚಿಕ್ಕ ಪಾತ್ರೆಯಲ್ಲಿ ನೀರು ತೆಗೆದು ಅದರಲ್ಲಿ ಕಲೆಸಿ ಅದನ್ನು ತರಕಾರಿ ಮಿಶ್ರಣಕ್ಕೆ ಸೇರಿಸಬೇಕು.
12. ನಂತರ ಆ ಮಿಶ್ರಣವನ್ನು ಕುದಿಸಬೇಕು.
13. ಈಗ ರುಚಿಗೆ ತಕ್ಕ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು.
14. ಈಗ ಬೇಯಿಸಿ ಸೌಟ್ ನಿಂದ ಚೆನ್ನಾಗಿ ಹಿಸುಕಿದ ಬೇಳೆ ಮತ್ತು ಮಸಾಲೆಯನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ ಉಪ್ಪು ಸಾಲದಿದ್ದರೆ ಸ್ವಲ್ಪ ಉಪ್ಪು ಹಾಕಿ. ಗಟ್ಟಿ ಸಾಂಬಾರು ಬೇಡ ಅಂದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ಸಾಂಬಾರುರೆಡಿ.
ಈ ಸಾಂಬಾರನ್ನು ದೋಸೆ, ಇಡ್ಲಿ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿರವಾಗಿರುತ್ತದೆ.
(ತರಕಾರಿಗಳಾಗಿ ಕುಂಬಳಕಾಯಿ, ಸೌತೆಕಾಯಿ, ಬೆಂಡೆಕಾಯಿ, ಬದನೆಕಾಯಿ, ನುಗ್ಗೆ ಕಾಯಿ, ಸೇರಿಸಬಹುದು)



Click it and Unblock the Notifications