Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಇಡ್ಲಿ ಜೊತೆಗೆ ಘಮ್ಮೆನ್ನುವ ಉಡುಪಿ ಸಾಂಬಾರು

ಶುಚಿರುಚಿಯಾದ ಅಡುಗೆಗೆ ಉಡುಪಿಯವರು ಫೇಮಸ್ಸು. ಆದ್ದರಿಂದಲೇ ಉಡುಪಿ ಭಟ್ಟರು ಭಾರತದ ಯಾವುದೇ ಮೂಲೆಯಲ್ಲಿ ಹೋಗಿ ಹೋಟೆಲ್ ಪ್ರಾರಂಭಿಸಿದರೂ ಬಿಸಿನೆಸ್ ಚೆನ್ನಾಗಿ ಆಗತ್ತೆ. ಅವರಿಗೆ ಶುಭಕೋರುತ್ತ, ಇವತ್ತು, ಗುರುವಾರ ನಾವುಗಳು ಉಡುಪಿ ಬ್ರಾಹ್ಮಣರ ಬ್ರಾಂಡೆಡ್ ಪದಾರ್ಥ ಸಾಂಬಾರು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
* ಸಾಂಬಾರು ಮಾಡಲು ಬಳಸುವ ಬೇಳೆ 1/2 ಕಪ್
* ಎಣ್ಣೆ (ಸಾರಿಗೆ ಬೇಕಾದಷ್ಟು)
* ಮೆಂತೆ 1/2 ಚಮಚ
* ಉದ್ದಿನ ಬೇಳೆ 1 ಚಮಚ
* ಒಣ ಕೆಂಪು ಮೆಣಸಿನ ಕಾಯಿ
* ಕೊತ್ತಂಬರಿ ಬೀಜ 1 ಚಮಚ
* ಜೀರಿಗೆ 1/2 ಚಮಚ
* ಕರಿಬೇವಿನ ಎಲೆ ಸ್ವಲ್ಪ
* ತುರಿದ ತೆಂಗಿನಕಾಯಿ 1/2 ಕಪ್
* ಚಿಕ್ಕ ಈರುಳ್ಳಿ ಒಂದು ಹಿಡಿಯಷ್ಟು
* ಹಸಿ ಮೆಣಸು 2
* ಸಾಸಿವೆ 1/2 ಚಮಚ
* ಮೆಂತೆ 1/4 ಚಮಚ
* ಹುಳಿ (ರುಚಿಗೆ ತಕ್ಕಷ್ಟು)
* ಉಪ್ಪು ರುಚಿಗೆ ತಕ್ಕಷ್ಟು
* ಪುಡಿ ಮಾಡಿದ ಬೆಲ್ಲ 1 ಚಮಚ
ತಯಾರಿಸುವ ವಿಧಾನ:
1. ಬೇಳೆಯನ್ನು ಚೆನ್ನಾಗಿ ಬೇಯಿಸಿ ಸೌಟ್ ನಿಂದ ಅದನ್ನು ಚೆನ್ನಾಗಿ ಹಿಸುಕಬೇಕು.
2. ಒಂದು ಚಮಚ ಕಡಲೆಣ್ಣೆ ಅಥವಾ ಸನ್ ಫ್ಲವರ್ ಅನ್ನು ಬಾಣಲೆಗೆ ಹಾಕಿ ಮೆಂತೆ ಮತ್ತು ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಬೇಕು.
3. ಈಗ ಒಣಮೆಣಸಿನ ಕಾಯಿ ಮತ್ತು ಕೊತ್ತಂಬರಿ ಬೀಜನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು. ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು ತುರಿದ ತೆಂಗಿನಕಾಯಿ ಹಾಕಬೇಕು. ತೆಂಗಿನಕಾಯಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ನಂತರ ಹುರಿದ ಈ ಮೇಲಿನ ಮಿಶ್ರಣವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಅರಿದು ಪಕ್ಕದಲ್ಲಿಡಿ.
5. ಈರುಳ್ಳಿಯ ಸಿಪ್ಪೆ ಸುಲಿದು ಕತ್ತರಿಸಿಡಬೇಕು.
6. ದೊಡ್ಡ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಸಾಸಿವೆಯನ್ನು ಹಾಕಬೇಕು.
7. ಸಾಸಿವೆ ಚಿಟಾಪಟಾ ಶಬ್ದ ಬರುವಾಗ 1/2 ಚಮಚ ಉದ್ದಿನ ಬೇಳೆ ಮತ್ತು ಇಂಗು ಸೇರಿಸಬೇಕು.
8. ಈಗ ಈರುಳ್ಳಿ, ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಬೇಕು.
9. ಟೊಮೆಟೊ ಮತ್ತು ಇತರ ತರಕಾರಿಯನ್ನು ಬೇಕಾದರೆ ಬೇಕಾದರೆ ಸೇರಿಸಬಹುದು.
10. ನಂತರ ಇವುಗಳನ್ನು ಟೊಮೆಟೊ ಮೆತ್ತೆಗಾಗುವರೆಗೂ ಹುರಿಯಬೇಕು. ನಂತರ ಸ್ವಲ್ಪ ನೀರು ಸೇರಿಸಿ ತರಕಾರಿಯನ್ನು ಬೇಯಿಸಬೇಕು.
11. ಹುಣಸೆ ಹುಳಿಯನ್ನು ಚಿಕ್ಕ ಪಾತ್ರೆಯಲ್ಲಿ ನೀರು ತೆಗೆದು ಅದರಲ್ಲಿ ಕಲೆಸಿ ಅದನ್ನು ತರಕಾರಿ ಮಿಶ್ರಣಕ್ಕೆ ಸೇರಿಸಬೇಕು.
12. ನಂತರ ಆ ಮಿಶ್ರಣವನ್ನು ಕುದಿಸಬೇಕು.
13. ಈಗ ರುಚಿಗೆ ತಕ್ಕ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು.
14. ಈಗ ಬೇಯಿಸಿ ಸೌಟ್ ನಿಂದ ಚೆನ್ನಾಗಿ ಹಿಸುಕಿದ ಬೇಳೆ ಮತ್ತು ಮಸಾಲೆಯನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ ಉಪ್ಪು ಸಾಲದಿದ್ದರೆ ಸ್ವಲ್ಪ ಉಪ್ಪು ಹಾಕಿ. ಗಟ್ಟಿ ಸಾಂಬಾರು ಬೇಡ ಅಂದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ಸಾಂಬಾರುರೆಡಿ.
ಈ ಸಾಂಬಾರನ್ನು ದೋಸೆ, ಇಡ್ಲಿ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿರವಾಗಿರುತ್ತದೆ.
(ತರಕಾರಿಗಳಾಗಿ ಕುಂಬಳಕಾಯಿ, ಸೌತೆಕಾಯಿ, ಬೆಂಡೆಕಾಯಿ, ಬದನೆಕಾಯಿ, ನುಗ್ಗೆ ಕಾಯಿ, ಸೇರಿಸಬಹುದು)



Click it and Unblock the Notifications
