Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇಡ್ಲಿ ಜೊತೆಗೆ ಘಮ್ಮೆನ್ನುವ ಉಡುಪಿ ಸಾಂಬಾರು

ಶುಚಿರುಚಿಯಾದ ಅಡುಗೆಗೆ ಉಡುಪಿಯವರು ಫೇಮಸ್ಸು. ಆದ್ದರಿಂದಲೇ ಉಡುಪಿ ಭಟ್ಟರು ಭಾರತದ ಯಾವುದೇ ಮೂಲೆಯಲ್ಲಿ ಹೋಗಿ ಹೋಟೆಲ್ ಪ್ರಾರಂಭಿಸಿದರೂ ಬಿಸಿನೆಸ್ ಚೆನ್ನಾಗಿ ಆಗತ್ತೆ. ಅವರಿಗೆ ಶುಭಕೋರುತ್ತ, ಇವತ್ತು, ಗುರುವಾರ ನಾವುಗಳು ಉಡುಪಿ ಬ್ರಾಹ್ಮಣರ ಬ್ರಾಂಡೆಡ್ ಪದಾರ್ಥ ಸಾಂಬಾರು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
* ಸಾಂಬಾರು ಮಾಡಲು ಬಳಸುವ ಬೇಳೆ 1/2 ಕಪ್
* ಎಣ್ಣೆ (ಸಾರಿಗೆ ಬೇಕಾದಷ್ಟು)
* ಮೆಂತೆ 1/2 ಚಮಚ
* ಉದ್ದಿನ ಬೇಳೆ 1 ಚಮಚ
* ಒಣ ಕೆಂಪು ಮೆಣಸಿನ ಕಾಯಿ
* ಕೊತ್ತಂಬರಿ ಬೀಜ 1 ಚಮಚ
* ಜೀರಿಗೆ 1/2 ಚಮಚ
* ಕರಿಬೇವಿನ ಎಲೆ ಸ್ವಲ್ಪ
* ತುರಿದ ತೆಂಗಿನಕಾಯಿ 1/2 ಕಪ್
* ಚಿಕ್ಕ ಈರುಳ್ಳಿ ಒಂದು ಹಿಡಿಯಷ್ಟು
* ಹಸಿ ಮೆಣಸು 2
* ಸಾಸಿವೆ 1/2 ಚಮಚ
* ಮೆಂತೆ 1/4 ಚಮಚ
* ಹುಳಿ (ರುಚಿಗೆ ತಕ್ಕಷ್ಟು)
* ಉಪ್ಪು ರುಚಿಗೆ ತಕ್ಕಷ್ಟು
* ಪುಡಿ ಮಾಡಿದ ಬೆಲ್ಲ 1 ಚಮಚ
ತಯಾರಿಸುವ ವಿಧಾನ:
1. ಬೇಳೆಯನ್ನು ಚೆನ್ನಾಗಿ ಬೇಯಿಸಿ ಸೌಟ್ ನಿಂದ ಅದನ್ನು ಚೆನ್ನಾಗಿ ಹಿಸುಕಬೇಕು.
2. ಒಂದು ಚಮಚ ಕಡಲೆಣ್ಣೆ ಅಥವಾ ಸನ್ ಫ್ಲವರ್ ಅನ್ನು ಬಾಣಲೆಗೆ ಹಾಕಿ ಮೆಂತೆ ಮತ್ತು ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಬೇಕು.
3. ಈಗ ಒಣಮೆಣಸಿನ ಕಾಯಿ ಮತ್ತು ಕೊತ್ತಂಬರಿ ಬೀಜನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು. ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು ತುರಿದ ತೆಂಗಿನಕಾಯಿ ಹಾಕಬೇಕು. ತೆಂಗಿನಕಾಯಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ನಂತರ ಹುರಿದ ಈ ಮೇಲಿನ ಮಿಶ್ರಣವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಅರಿದು ಪಕ್ಕದಲ್ಲಿಡಿ.
5. ಈರುಳ್ಳಿಯ ಸಿಪ್ಪೆ ಸುಲಿದು ಕತ್ತರಿಸಿಡಬೇಕು.
6. ದೊಡ್ಡ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಸಾಸಿವೆಯನ್ನು ಹಾಕಬೇಕು.
7. ಸಾಸಿವೆ ಚಿಟಾಪಟಾ ಶಬ್ದ ಬರುವಾಗ 1/2 ಚಮಚ ಉದ್ದಿನ ಬೇಳೆ ಮತ್ತು ಇಂಗು ಸೇರಿಸಬೇಕು.
8. ಈಗ ಈರುಳ್ಳಿ, ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಬೇಕು.
9. ಟೊಮೆಟೊ ಮತ್ತು ಇತರ ತರಕಾರಿಯನ್ನು ಬೇಕಾದರೆ ಬೇಕಾದರೆ ಸೇರಿಸಬಹುದು.
10. ನಂತರ ಇವುಗಳನ್ನು ಟೊಮೆಟೊ ಮೆತ್ತೆಗಾಗುವರೆಗೂ ಹುರಿಯಬೇಕು. ನಂತರ ಸ್ವಲ್ಪ ನೀರು ಸೇರಿಸಿ ತರಕಾರಿಯನ್ನು ಬೇಯಿಸಬೇಕು.
11. ಹುಣಸೆ ಹುಳಿಯನ್ನು ಚಿಕ್ಕ ಪಾತ್ರೆಯಲ್ಲಿ ನೀರು ತೆಗೆದು ಅದರಲ್ಲಿ ಕಲೆಸಿ ಅದನ್ನು ತರಕಾರಿ ಮಿಶ್ರಣಕ್ಕೆ ಸೇರಿಸಬೇಕು.
12. ನಂತರ ಆ ಮಿಶ್ರಣವನ್ನು ಕುದಿಸಬೇಕು.
13. ಈಗ ರುಚಿಗೆ ತಕ್ಕ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು.
14. ಈಗ ಬೇಯಿಸಿ ಸೌಟ್ ನಿಂದ ಚೆನ್ನಾಗಿ ಹಿಸುಕಿದ ಬೇಳೆ ಮತ್ತು ಮಸಾಲೆಯನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ ಉಪ್ಪು ಸಾಲದಿದ್ದರೆ ಸ್ವಲ್ಪ ಉಪ್ಪು ಹಾಕಿ. ಗಟ್ಟಿ ಸಾಂಬಾರು ಬೇಡ ಅಂದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ಸಾಂಬಾರುರೆಡಿ.
ಈ ಸಾಂಬಾರನ್ನು ದೋಸೆ, ಇಡ್ಲಿ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿರವಾಗಿರುತ್ತದೆ.
(ತರಕಾರಿಗಳಾಗಿ ಕುಂಬಳಕಾಯಿ, ಸೌತೆಕಾಯಿ, ಬೆಂಡೆಕಾಯಿ, ಬದನೆಕಾಯಿ, ನುಗ್ಗೆ ಕಾಯಿ, ಸೇರಿಸಬಹುದು)



Click it and Unblock the Notifications