Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಪುಷ್ಪಿತಾ-ಬಾಳೆ ಹೂವಿನ ಖಾದ್ಯ
ಬಾಳೆಹೂವಿನಲ್ಲಿರುವ ಆರೋಗ್ಯಕರ ಗುಣದ ಬಗ್ಗೆ ನೀವು ತಿಳಿದಿರಬಹುದು. ಇದು ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ, ಪೈಲ್ಸ್, ಮಲಬದ್ಧತೆ, ಮಧುಮೇಹಿಗಳಿಗೆ ಬೆಸ್ಟ್ ಆಹಾರ ಇದಾಗಿದೆ. ಇಲ್ಲಿ ನಾವು ಬಾಳೆಹೂವಿನಿಂದ ತಯಾರಿಸುವ ಪುಷ್ಪಿತಾ ಖಾದ್ಯದ ರೆಸಿಪಿ ನೀಡಿದ್ದೇನೆ.
ಬಾಳೆಯಲ್ಲಿ ಊಟ ಬಡಿಸುವುದು ನಮ್ಮ ಸಂಪ್ರದಾಯ. ಇಲ್ಲಿ ನಾವು ಬಾಳೆಹೂ ಮತ್ತು ಬಾಳೆ ಎಲೆ ಎರಡು ಬಳಸಿ ಮಾಡುವ ಆರೋಗ್ಯಕರವಾದ ಹಾಗೂ ರುಚಿಕರವಾದ ಖಾದ್ಯದ ರೆಸಿಪಿ ನೀಡಿದ್ದೇನೆ ನೋಡಿ:
ಬೇಕಾಗುವ ಸಾಮಾಗ್ರಿಗಳು
ಬಾಳೆ ಹೂ 2
ಬೆಳ್ಳುಳ್ಳಿ 4-6 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸಿನ ಕಾಯಿ 2-3
ಒಣ ಮೆಣಸು 4
ಜೀರಿಗೆ 2 ಚಮಚ
ಕೊತ್ತಂಬರಿ ಬೀಜ 1 ಚಮಚ
ಸೋಂಪು ಅರ್ಧ ಚಮಚ
ಮೆಂತೆ 1/4 ಚಮಚ
ಚಕ್ಕೆ 1
ಅರಿಶಿಣ ಪುಡಿ 1 ಚಮಚ
ಕಲ್ಲುಪ್ಪು
ಬೆಲ್ಲದ ತುರಿ ಅರ್ಧ ಚಮಚ
ತುಪ್ಪ ಅಥವಾ ಬೆಣ್ಣೆ(2 ಚಮಚ)
ನಿಂಬೆ ರಸ

ಮಾಡುವ ವಿಧಾನ
* ಬಾಳೆಹೂವನ್ನು ಸ್ವಚ್ಛ ಮಾಡಿ. ಅಂದವಾದ ಕೆಂಪು ಪದರಗಳನ್ನು ತೆಗೆದು ಹಾಕಿ. ಹೂವಿನಲ್ಲಿರುವ ಕಪ್ಪು-ಕಪ್ಪಾಗಿರುವ ವಸ್ತುಗಳನ್ನು ತೆಗೆದು ಹಾಕಿ.
* ಹೂವಿನ ಪ್ರತಿಯೊಂದು ಎಸಳನ್ನು ಶುದ್ಧ ಮಾಡಿ.
* ನಂತರ ಚಿಕ್ಕದಾಗಿ ಕತ್ತರಿಸಿ.

ಮಾಡುವ ವಿಧಾನ
* ಕತ್ತರಿಸಿದ ಬಾಳೆ ಹೂವನ್ನು ತಕ್ಷಣವೇ ಬಿಸಿ ನೀರಿಗೆ ಹಾಕಿ, ನಂತರ ಅರಿಶಿಣ ಪುಡಿ, ಕಲ್ಲುಪ್ಪು ಮತ್ತು ನಿಂಬೆ ರಸ ಹಾಕಿ 3-4 ಗಂಟೆಗಳ ಕಾಲ ಇಡಿ.
* ನಂತರ ನೀರನ್ನು ಬಸಿದು, ಬಿಸಿ ನೀರನ್ನು ಹಾಕಿ ಸಾಧರಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಹೂ ಮೃದುವಾಗುವವರೆಗೆ ಬೇಯಿಸಿ. ನಂತರ ನೀರನ್ನು ಬಸಿದು ಹೂವನ್ನು ತಣ್ಣೀರಿನಲ್ಲಿ ಹಾಕಿಡಿ.
* ನಂತರ ಹೂವಿನಿಂದ ನೀರನ್ನು ಹಿಂಡಿ, ಇದರಿಂದ ಹೂವಿನಲ್ಲಿರುವ ಕಹಿಯನ್ನು ಹೋಗಲಾಡಿಸಬಹುದು.

ಮಾಡುವ ವಿಧಾನ
* ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಪೇಸ್ಟ್ ಮಾಡಿ.
* ಮಸಾಲೆ ಸಾಮಾಗ್ರಿಗಳನ್ನು ಹುರಿದು ಪುಡಿ(ಕಲ್ಲಿನಲ್ಲಿ ಪುಡಿ ಮಾಡಿದರೆ ಒಳ್ಳೆಯದು).

ಮಾಡುವ ವಿಧಾನ
* ಪ್ರೆಶರ್ ಕುಕ್ಕರ್ ನಲ್ಲಿ 1 ಚಮಚ ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.
* ಈಗ ಇಂಗನ್ನು ಹಾಕಿ, ನಂತರ ಹಸಿ ಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಹಾಕಿ.
* ಅರಿಶಿಣ ಪುಡಿ ಹಾಕಿ , ನಂತರ ಕತ್ತರಿಸಿದ ಬಾಳೆ ಹೂವನ್ನು ಹಾಕಿ, ನಂತರ ಸಂಬಾರ ಪದಾರ್ಥಗಳನ್ನು ಸೇರಿಸಿ.

ಮಾಡುವ ವಿಧಾನ
* ಈಗ ಅರ್ಧ ಚಮಚ ಬೆಲ್ಲ ಹಾಕಿ, ಸಿಹಿ ಇಷ್ಟ ಪಡುವವರಾದರೆ 1 ಚಮಚ ಬೆಲ್ಲ ಬೇಕಾದರೂ ಹಾಕಬಹುದು.
* ನಂತರ ಸೌಟ್ ನಿಂದ ಆಡಿಸಿ, ಬಿಸಿ ನೀರು ಹಾಕಿ ಮಿಕ್ಸ್ ಮಾಡಿ ಪ್ರೆಶರ್ ಕುಕ್ಕರ್ ನಲ್ಲಿ ಸಾಧಾರಣ ಉರಿಯಲ್ಲಿ 2 ವಿಶಲ್ ಬರುವವರೆಗೆ ಬೇಯಿಸಿ.

ಮಾಡುವ ವಿಧಾನ
* ನಂತರ ಪ್ರೆಶರ್ ಕುಕ್ಕರ್ ನಿಂದ ಇಳಿಸಿ, ಅದರ ಆವಿ ಹೋದ ಮೇಲೆ ಮುಚ್ಚಳ ಓಪನ್ ಮಾಡಿ, 1/4 ಚಮಚ ರೋಸ್ಟ್ ಮಾಡಿದ ಮಸಾಲೆ ಹಾಕಿ, ಅರ್ಧ ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿ ಎಲ್ಲಾ ಸರಿಯಾಗಿ ಇದೆಯೇ ಎಂದು ಟೇಸ್ಟ್ ಮಾಡಿ, ಏನಾದರೂ ಕಮ್ಮಿಯಾಗಿದ್ದರೆ ಅದನ್ನು ಸೇರಿಸಿ.

ಮಾಡುವ ವಿಧಾನ
* ನಂತರ ಈ ಮಿಶ್ರಣವನ್ನು ಬಾಳೆ ಎಲೆಯಲ್ಲಿ ಹಾಕಿ ಕಟ್ಟಿ.
* ನಾನ್ ಸ್ಟಿಕ್ ಪ್ಯಾನ್ ಗೆ ತುಪ್ಪ ಸವರಿ ಅದರಲ್ಲಿ ಈ ಬಾಳೆ ಎಲೆಯಿಂದ ಕಟ್ಟಿದ ಮಿಶ್ರಣವನ್ನು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ನಂತರ ಪಾತ್ರೆಯ ಮುಚ್ಚಳ ತೆಗೆದು ಮತ್ತೆ ಮತ್ತೊಮ್ಮೆ ಅದನ್ನು ಮೆಲ್ಲನೆ ಆಡಿಸಿ, ಮತ್ತೆ 5 ನಿಮಿಷ ಬೇಯಿಸಿ.

ಮಾಡುವ ವಿಧಾನ
* ನಂತರ ಬಾಳೆ ಎಲೆಗೆ ಕಟ್ಟಿದ ದಾರವನ್ನು ಬಿಚ್ಚಿ, ಅದರ ಬಿಸಿ ಸ್ವಲ್ಪ ಆರಿದ ಮೇಲೆ ರುಚಿ ಮಾಡಿ.
* ಇಷ್ಟು ಮಾಡಿದರೆ ಸವಿರುಚಿಯ ಪುಷ್ಪಿತಾ ರೆಡಿ.
ಇದನ್ನು ಅನ್ನ, ಚಪಾತಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.
*ತುಪ್ಪದ ಬದಲು ಆಲೀವ್ ಎಣ್ಣೆಯನ್ನು ಬಳಸಬಹುದು.



Click it and Unblock the Notifications