Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಪ್ಪಟ ಮಂಗಳೂರು ಶೈಲಿಯಲ್ಲಿ ಮೀನಿನ ಸಾರು
ಮಂಗಳೂರು ಮೀನು ಸಾರಿಗೆ ಪ್ರಸಿದ್ಧ. ಇಲ್ಲಿ ಅನೇಕ ರುಚಿಯಲ್ಲಿ ಮೀನು ಸಾರನ್ನು ಮಾಡಲಾಗುವುದು. ಬರೀ ಉಪ್ಪು, ಮೆಣಸು ಹುಳಿ ಹಾಕಿ ತಯಾರಿಸಲಾಗುವುದು, ಹಸಿ ತೆಂಗಿನಕಾಯಿಯನ್ನು ರುಬ್ಬಿ ಹಾಕಿ ಮಾಡುತ್ತಾರೆ, ಮತ್ತೆ ಕೆಲವರು , ಮೊದಲು ತೆಂಗಿನ ತುರಿಯನ್ನು ಹುರಿದು ನಂತರ ರುಬ್ಬಿ ಸಾರು ಮಾಡುತ್ತಾರೆ.
ಇಲ್ಲಿ ನಾವು ಒಂದು ಬಗೆಯ ಮೀನು ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
1/4 ಚಮಚ ಮೆಂತೆ ಮತ್ತು ಸ್ವಲ್ಪ ಅಜ್ವೈನ್
ಶುಚಿ ಮಾಡಿದ ಮೀನು 1 ಕೆಜಿ(ಮೀನು ನಿಮಗೆ ಇಷ್ಟವಾದದು)
6-8 ಎಸಳು ಬೆಳ್ಳುಳ್ಳಿ
1 ಈರುಳ್ಳಿ
1ಚಮಚ ಕೊತ್ತಂಬರಿ ಬೀಜ
1 ಚಮಚ ಜೀರಿಗೆ
ಕಾಲು ಚಮಚ ಅರಿಶಿಣ
6 ಕೆಂಪು ಮೆಣಸು(ನಿಮ್ಮ ಖಾರಕ್ಕೆ ತಕ್ಕಷ್ಟು)
1 ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಹುಣಸೆ ಹಣ್ಣಿನ ರಸ
2 ಚಮಚ ಎಣ್ಣೆ
ಕರಿ ಬೇವಿನ ಎಲೆ
ತಯಾರಿಸುವ ವಿಧಾನ:
* ಈಗ ಹಸಿ ತೆಂಗಿನ ತುರಿ, ಅರಿಶಿಣ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಣ ಮೆಣಸು ಹಾಕಿ ಪೇಸ್ಟ್ ಮಾಡಿ.
* ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿ ಹುಣೆಸೆ ಹಣ್ಣಿನ ರಸ ತಯಾರಿಸಿಡಿ.
* ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಮೆಂತೆ, ಅಜ್ವೈನ್, ಕತ್ತರಿಸಿ ಬೆಳ್ಳುಳ್ಳಿ, ಕತ್ತರಿಸಿ ಈರುಳ್ಳಿ ಹಾಕಿ ಚೆನ್ನಾಗಿ ಆಡಿಸಿ.
* ಈಗ ಕೊತ್ತಂಬರಿ ಬೀಜ, ಜೀರಿಗೆ , ಕರಿ ಬೇವಿನ ಎಲೆ ಹಾಕಿ 2-3 ನಿಮಿಷ ಹುರಿಯಿರಿ.
* ಈಗ ರುಬ್ಬಿದ ಮಿಶ್ರಣ ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ, ಒಂದು ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ.
* ಮಿಶ್ರಣ ಕುದಿ ಬಂದಾಗ ಹುಣಸೆ ಹಣ್ಣಿನ ರಸ ಹಾಕಿ ಹಾಕಿ ಮತ್ತೆ 5 ನಿಮಿಷ ಕುದಿಸಿ.
* ನಂತರ ಮೀನನ್ನು ಹಾಕಿ ಬೇಯಿಸಿದರೆ ಮೀನು ಸಾರು ರೆಡಿ.



Click it and Unblock the Notifications











