Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ರಸಗುಲ್ಲಾವನ್ನು ಮೀರಿಸೋ ಜೈನರಿ ಸಿಹಿ
ಸಿಹಿತಿನಿಸು ಅಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಸ್ವೀಟ್ ತಿನ್ನೋಣ ಅಂದರೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಬೇಕರಿ ಅಂಗಡಿಗಳು ಬಾಗಿಲು ಮುಚ್ಚಿವೆ. ಮಕ್ಕಳೋ ಆಗಾಗ ಏನಾದ್ರು ಕೊಡಮ್ಮ ಅಂತ ದುಂಬಾಲು ಬೀಳುತ್ತವೆ. ಹೀಗಿರುವಾಗ ರುಚಿರುಚಿ ಸಿಹಿತಿನಿಸು ಮಾಡೋದಕ್ಕೆ ನಿಮಗೆ ಐಡಿಯಾ ಹೊಳೆಯುತ್ತಿಲ್ಲವೇ? ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ.

ಇಲ್ಲೊಂದು ರುಚಿರುಚಿಯಾದ ಫಟಾಫಟ್ ಸಿಹಿತಿಂಡಿಯನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ. ಅದುವೇ ಜೈನರಿ. ನೋಡುವುದಕ್ಕೆ ರಸಗುಲ್ಲಾದಂತೆ ಕಂಡರೂ ಇದು ರಸಗುಲ್ಲಾ ಅಲ್ಲ. ಸಕ್ಕರೆ ಪಾಕವಿದ್ದರೂ ಜಾಮೂನಲ್ಲ. ಹಾಗಾದ್ರೆ ಹೇಗೆ ಮಾಡುವುದು ಈ ಜೈನರಿ ಎಂಬುದನ್ನು ತಿಳಿದುಕೊಳ್ಳಬೇಕೇ? ಮುಂದೆ ಓದಿ.
Recipe By: Sushma
Recipe Type: Sweet
Serves: 4
-
ಬೇಕಾಗುವ ಸಾಮಗ್ರಿಗಳು
. ಉದ್ದಿನ ಬೇಳೆ - ಒಂದುವರೆ ಕಪ್
. ಅಕ್ಕಿ- ಮುಕ್ಕಾಲುಕಪ್
. ಸಕ್ಕರೆ - ನಾಲ್ಕು ಕಪ್
. ಕೇಸರಿ - 10 ದಳಗಳು
. ಏಲಕ್ಕಿ - ನಾಲ್ಕು
. ಉಪ್ಪು- ರುಚಿಗೆ ತಕ್ಕಷ್ಟು
. ಅಡುಗೆ ಎಣ್ಣೆ- ನಾಲ್ಕರಿಂದ ಐದು ಕಪ್
-
ಮಾಡುವ ವಿಧಾನ -
ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಚಿಟಿಕೆ ಉಪ್ಪು ಸೇರಿಸಿ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ.( ನೀರು ಸೇರಿಸುವುದು ಬೇಡ)
. ಒಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಹಾಕಿ, ಕೇಸರಿ ದಳಗಳನ್ನು ಸೇರಿಸಿ ಪಾಕ ಮಾಡಿಕೊಳ್ಳಿ. ಜಾಮೂನು ತಯಾರಿಸುವುದಕ್ಕೆ ಸಕ್ಕರೆ ಪಾಕ ಮಾಡಿದಂತೆಯೇ ಮಾಡಿಕೊಳ್ಳಬೇಕು.
. ಪಾಕ ತಯಾರಾಗುತ್ತಿದ್ದಂತೆ ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನೊಂದೆರಡು ಬಾರಿ ಕುದಿಸಿ. ಬಿಸಿ ಬಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
. ಈಗಾಗಲೇ ರುಬ್ಬಿಕೊಂಡಿರುವ ಮಿಶ್ರಣವನ್ನು ಅಡುಗೆ ಎಣ್ಣೆಯಲ್ಲಿ ಸಣ್ಣಸಣ್ಣ ಉಂಡೆಗಾತ್ರ ಬರುವಂತೆ ಬಿಟ್ಟು ಕರಿಯಿರಿ. ಉದ್ದಿನ ವಡೆ ತಯಾರಿಸುವಾಗ ಕರಿಯುವಂತೆಯೇ ಕರಿಯಬೇಕು. ಹೆಚ್ಚು ಕೆಂಬಣ್ಣ ಮಾಡಬೇಡಿ. ಸಣ್ಣ ಉರಿಯಲ್ಲಿ ಕರಿಯುವುದು ಒಳ್ಳೆಯದು.
. ಕರಿದ ಉಂಡೆಯನ್ನು ಬಿಸಿಬಿಸಿ ಸಕ್ಕರೆ ಪಾಕಕ್ಕೆ ಹಾಕಿ.
.ಒಂದರ್ಧ ಘಂಟೆ ನೆನೆಯಲು ಬಿಡಿ.
. ಸಕ್ಕರೆ ಪಾಕದಲ್ಲಿ ನೆನೆದ ಉಂಡೆಗಳನ್ನು ಸಕ್ಕರೆ ಪಾಕದ ಜೊತೆಗೆ ಸರ್ವ್ ಮಾಡಿದರೆ ಜೈನರಿ ಸಿದ್ಧ.
- ಉದ್ದು ಮತ್ತು ಅಕ್ಕಿ ಮಿಶ್ರಿತ ಸಿಹಿಯಾಗಿರುವುದರಿಂದ ಕಾರ್ಬೋಹೈಡ್ರೇಟ್ಸ್ ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ . ಕೇಸರಿ ದಳಗಳನ್ನು ಸೇರಿಸಿರುವ ಸಿಹಿಯಾಗಿರುವುದರಿಂದ ಬಸುರಿ ಮಹಿಳೆಯರಿಗೂ ಕೂಡ ಒಳ್ಳೆಯದು. . ರಸಗುಲ್ಲಾದಲ್ಲಿರುವಂತೆ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ. ಕಡಿಮೆ ಕೊಬ್ಬಿನಂಶ ಇರುವ ಸಿಹಿ ತಿನಿಸಾಗಿದೆ.



Click it and Unblock the Notifications