Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ಉರಿ ಶೀತ, ಗಂಟಲು ನೋವಿಗೆ ಸುಲಭದ ಕಷಾಯ ಮಾಡಿ! 2 ನಿಮಿಷ ಸಾಕು!
ಚಳಿಗಾಲದ ಆರಂಭದಿಂದಲೂ ಹಲವು ರೀತಿ ಅನಾರೋಗ್ಯಗಳು ಕಾಡುವುದು ನೋಡಬಹುದು. ಅದ್ರಲ್ಲೂ ಶೀತ, ಕೆಮ್ಮು, ಗಂಟಲು ನೋವಿನಂತಹ ಕಾಲೋಚಿತ ಸಮಸ್ಯೆಗಳು ಈ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಚಳಿಯು ಹೆಚ್ಚಾಗಿರುವ ಪ್ರದೇಶದಲ್ಲಿ ತಲೆನೋವು, ಸಂಧಿವಾತ, ಕೀಲು ನೋವು, ಶೀತ, ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರಲಿದೆ.
ಹಗಲಿನಲ್ಲಿ ಮಿತಿಮೀರಿದ ಬಿಸಿಲು ಹಾಗೆ ರಾತ್ರಿ, ಬೆಳಗ್ಗೆ ಸಮಯದಲ್ಲಿನ ವಿಪರೀತ ಚಳಿಯ ವಾತಾವರಣಕ್ಕೆ ನಿಮ್ಮ ದೇಹವು ಹೊಂದಿಕೊಳ್ಳುವುದು ಕಷ್ಟವಾಗಬಹುದು, ಅದ್ರಲ್ಲೂ ಹಲವು ಬಾರಿ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಇದು ಮಕ್ಕಳು ಮತ್ತು ಹಿರಿಯರ ಸಂಖ್ಯೆಯಲ್ಲಿ ಹೆಚ್ಚಾಗಿರಲಿದೆ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದ್ಯೋ ಅವರಲ್ಲಿ ಈ ಅನಾರೋಗ್ಯ ಸಮಸ್ಯೆ ಹೆಚ್ಚಾಗಿರಲಿದೆ.

ಅದ್ರಲ್ಲೂ ಈ ಚಳಿಗಾಲದ ಸಮಯದಲ್ಲಿ ಎಲ್ಲರಿಗೂ ಸಮಸ್ಯೆ ನೀಡುವುದು ಉರಿಶೀತದ ಸಮಸ್ಯೆ. ನೀವು ಬಿಸಿಲಿನಲ್ಲಿ ಹೆಚ್ಚು ಸಮಯ ಇದ್ದು ಬಳಿಕ ತಣ್ಣೀರು ಕುಡಿಯುವುದು, ಐಸ್ಕ್ರೀಮ್ ಅಥವಾ ದೇಹದ ಉಷ್ಣತೆಯಲ್ಲಿ ಏರುಪೇರು ಸಂಭವಿಸಿದಾಗ ಈ ಉರಿಶೀತ ಕಾಣಿಸಿಕೊಳ್ಳುತ್ತದೆ. ಇದು ಸಹಿಸಲಾಗದ ತಲೆನೋವು, ಕಿರಿಕಿರಿ ತರಬಹುದು. ಆದ್ರೆ ಇದನ್ನು ಮನೆಯಲ್ಲಿ ಸಿಂಪಲ್ ಕಷಾಯದ ಮೂಲಕ ನಿವಾರಣೆ ಮಾಡಿಕೊಳ್ಳಬಹುದು.
ಹಾಗಾದ್ರೆ ಉರಿಶೀತ ತಡೆಯಲು ಹೇಗೆ ಕಷಾಯ ಮಾಡಿಕೊಳ್ಳಬೇಕು? ಈ ಕಷಾಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಶುಂಠಿ ಕಾಳು ಮೆಣಸಿನ ಕಷಾಯ ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶುಂಠಿ, ಕಾಳು ಮೆಣಸಿನ ಕಷಾಯ ಮಾಡಲು ಅಗತ್ಯ ವಸ್ತುಗಳು?
- ಶುಂಠಿ
- ಹಾಲು
- ತುಳಸಿ ಎಲೆ
- ಕಾಳು ಮೆಣಸು
- ಅರಿಶಿನ ಪುಡಿ
- ಲವಂಗ
- ಏಲಕ್ಕಿ
- ಬೆಲ್ಲ
ಶುಂಠಿ, ಕಾಳು ಮೆಣಸಿನ ಕಷಾಯ ಮಾಡುವ ಸುಲಭದ ವಿಧಾನವೇನು?
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಒಂದು ಗ್ಲಾಸ್ ಹಾಲು ಹಾಕಿ ಬಳಿಕ ಅಷ್ಟೇ ಅಳತೆಯಲ್ಲಿ ನೀರು ಹಾಕಿಕೊಂಡು ಕುದಿಬರಲು ಬಿಡಿ. ಚೆನ್ನಾಗಿ ಕುದಿಬರುವಾಗ, 8 ತುಳಸಿ ಎಲೆ, 4 ಲವಂಗ, 6 ಕಾಳು ಮೆಣಸು, 1 ಏಲಕ್ಕಿ, 1 ಸ್ಪೂನ್ ಹೆಚ್ಚಿಕೊಂಡ ಶುಂಠಿ, ಸಣ್ಣ ಉಂಡೆ ಬೆಲ್ಲ (ಸಕ್ಕರೆ ಬಳಸಬೇಡಿ)
ಇಷ್ಟು ಪದಾರ್ಥ ಹಾಕಿಕೊಂಡು ಚೆನ್ನಾಗಿ ಕುದಿಬರಲು ಬಿಡಬೇಕು. ಹಾಗೆ ಕಾಲು ಚಮಚ ಅರಶಿಣ ಪುಡಿ ಹಾಕಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು. ಈಗ ಒಂದು ಗ್ಲಾಸ್ಗೆ ಈ ಕಷಾಯವನ್ನು ಜರಡಿ ಹಿಡಿದು ಇಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಆರೋಗ್ಯಕರ ಕಷಾಯ ಸಿದ್ದವಾಗುತ್ತೆ. ಇದನ್ನು ನೀವು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಮಕ್ಕಳಿಗೆ ನೀಡುವುದಾದರೆ ಎಲ್ಲಾ ಪದಾರ್ಥಗಳನ್ನು ಅರ್ಧದಷ್ಟು ಬಳಸಿಕೊಳ್ಳಿ. ಇದು ಒಂದು ಗಂಟೆಯಲ್ಲಿ ನಿಮ್ಮ ಉರಿ ಶೀತ, ಕೆಮ್ಮು, ನೆಗಡಿ, ಗಂಟಲು ನೋವಿನಂತಹ ಸಮಸ್ಯೆಯನ್ನು ನಿವಾರಣೆ ಮಾಡಲಿದೆ. ಹಾಗೆ ಇದನ್ನು ಮಾಡಿಕೊಳ್ಳುವುದು ಸಹ ಬಹಳ ಸುಲಭವಾಗಿದೆ.
ನೀವು ಸಹ ಈ ಚಳಿಗಾಲದ ಸಮಯದಲ್ಲಿ ಯಾವುದಾದರು ಸಣ್ಣ ಪುಟ್ಟ ಅನಾರೋಗ್ಯ ಎದುರಿಸಿದ್ದರೆ ಈ ಕಷಾಯ ಮಾಡಿ ಸವಿದು ನೋಡಿ. ಸುಲಭವಾಗಿ ಅನಾರೋಗ್ಯ ನಿವಾರಣೆ ಮಾಡಬಹುದು.



Click it and Unblock the Notifications