Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಬಿಸಿಲಿನ ದಾಹಕ್ಕೆ-ತಂಪು ತಂಪು ಪುದೀನಾ ಮಸಾಲ ಮಜ್ಜಿಗೆ
ಬೇಸಿಗೆಯ ಜೊತೆಗೇ ಮಕ್ಕಳ ಪರೀಕ್ಷೆ ಮತ್ತು ರಜೆಗಳೂ ಸಾಲಾಗಿ ಬಂದಿವೆ. ನಿಧಾನಕ್ಕೆ ಕೆಲವು ಹಣ್ಣುಗಳೂ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ಹೊತ್ತಿನಲ್ಲಿ ಹೊರಹೋಗದೇ ಮಳೆ ಬಂದಾಗ ಹೋಗಲಿಕ್ಕಾಗುತ್ತದೆಯೇ? ಆದರೆ ಸೆಖೆಗೆ ಏನು ಮಾಡುವುದು? ಇದಕ್ಕೆ ಏಸಿಯಲ್ಲಿ ಕುಳಿತುಕೊಳ್ಳುವುದು. ಆದರೆ ಇದರಿಂದ ಹೊರ ಹೋದಂತಾಗುವುದಿಲ್ಲವಲ್ಲ! ಇನ್ನೊಂದು ಪರ್ಯಾಯವೆಂದರೆ ಐಸ್ ಕ್ರೀಂ ತಿನ್ನುವುದು, ಇದರಿಂದ ತೂಕ ಹೆಚ್ಚಾಗುತ್ತದಲ್ಲ! ಎಲ್ಲವೂ ನೋಡಬೇಕೆಂದರೆ ತಣ್ಣನೆಯ ಮಜ್ಜಿಗೆ ಕುಡಿಯುವುದೇ ಉತ್ತಮ. ಆದರೆ ಇದಕ್ಕಿಂತಲೂ ಉತ್ತಮವಾದ ಪೇಯವೊಂದಿದೆ. ಇದೇ ಪುದೀನಾ ಮಸಾಲಾ ಮಜ್ಜಿಗೆ.
ಬಿಸಿಲಿಗೆ ಏರಿದ್ದ ತಾಪವನ್ನು ತಣಿಸಿ ದೇಹವನ್ನು ಬಿಸಿಲಿನಲ್ಲಿಯೂ ಲವವಲಿಕೆಯಿಂಡುವ ಕ್ಷಮತೆಯೇ ಇದರ ನಿಜವಾದ ಶಕ್ತಿ. ಇದಕ್ಕೆ ಹೆಚ್ಚೇನೂ ಅಗತ್ಯವಿಲ್ಲ, ಕೊಂಚ ಮೊಸರು, ಕೊಂಚ ಪುದಿನಾ ಎಲೆಗಳು ಮತ್ತು ಕೊಂಚ ಕೊತ್ತಂಬರಿ ಸೊಪ್ಪು, ಉಪ್ಪು, ಆಮ್ಚೂರ್, ಹಸಿಮೆಣಸು, ಕಾಳುಮೆಣಸು ಅಷ್ಟೇ. ಪೋಷಕಾಂಶಗಳ ಆಗರವಾಗಿರುವ ಪುದೀನಾ ಮತ್ತು ಮೊಸರಿನ ಮೂಲಕ ಈ ಪೇಯವೂ ಅತಿ ಸಮೃದ್ಧ ಪೋಷಕಾಂಶಭರಿತ ಪೇಯವಾಗುತ್ತದೆ. ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ
ವಿಶೇಷವಾಗಿ ಬೇಸಿಗೆಗೆ ಈ ಪೇಯ ಹೇಳಿ ಮಾಡಿಸಿದಂತಿದ್ದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ಹೆಚ್ಚು ಕಾಲ ಬಿಸಿಲಿನಲ್ಲಿರುವ ವೇಳೆ ಇದನ್ನು ಸೇವಿಸಿ ಹೊರಡುವ ಮೂಲಕ, ಸಾಧ್ಯವಾದರೆ ಫ್ಲಾಸ್ಕ್ ನಲ್ಲಿ ಕೊಂಡು ಹೋಗಿ ಆಗಾಗ ಕುಡಿಯುವ ಮೂಲಕ ಬಿಸಿಲಿನ ಝಳಕ್ಕೆ ತಲೆತಿರುಗಿ ಬೀಳುವ ಸಂಭವ ಅಪಾರವಾಗಿ ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲ, ಇದರಲ್ಲಿರುವ ಪುದೀನಾ ರುಚಿಯನ್ನು ಹೆಚ್ಚಿಸುವ ಜೊತೆಗೇ ಜೀರ್ಣಕ್ರಿಯೆಯಲ್ಲಿಯೂ ಸಹಕರಿಸುತ್ತದೆ. ಅಲ್ಲದೇ ಬಿಸಿಲಿನ ತಾಪಕ್ಕೆ ದಣಿದ ದೇಹದ ಕಾರಣ ನೋವು ಕಾಣಿಸಿಕೊಳ್ಳುವ ಸಂಭವವೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಕೆಲವು ಪೋಷಕಾಂಶಗಳು ಮೆದುಳಿಗೆ ಆಹ್ಲಾದಕರ ಅನುಭವ ನೀಡುವ ಮೂಲಕ ದಿನವಿಡೀ ಉಲ್ಲಾಸಕರವಾಗಿರಲು ನೆರವಾಗುತ್ತದೆ. ಬರೆಯ ಬೇಸಿಗೆಗೆ ಮಾತ್ರವಲ್ಲ, ಇಡಿಯ ವರ್ಷವೂ ಈ ಪೇಯವನ್ನು ನಿತ್ಯವೂ ಸೇವಿಸಿದರೆ ಆರೋಗ್ಯವೂ ವೃದ್ಧಿಸುತ್ತದೆ. ಬನ್ನಿ, ಈ ಅದ್ಭುತ ಪೇಯವನ್ನು ಮಾಡುವುದು ಹೇಗೆ ಎಂದು ನೋಡೋಣ:
*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕೆಗೆ ಸಮಯ: ಹತ್ತು ನಿಮಿಷಗಳು ವಾವ್..ದೇಹಕ್ಕೆ ತಂಪುಣಿಸುವ ಮಜ್ಜಿಗೆ ಸಾ೦ಬಾರ್ ರೆಸಿಪಿ!
ಅಗತ್ಯವಿರುವ ಸಾಮಾಗ್ರಿಗಳು:
*ಪುದೀನಾ ಎಲೆಗಳು: ಒಂದು ಕಪ್
*ಮೊಸರು: ಕಾಲು ಲೀಟರ್
*ಕೊತ್ತಂಬರಿ ಸೊಪ್ಪು - 1/2 ಕಪ್ (ಬರೆಯ ಎಲೆಗಳಾದರೆ ಉತ್ತಮ. ಸಮಯವಿಲ್ಲದಿದ್ದಲ್ಲಿ ಮಾತ್ರ ದಂಟಿನೊಂದಿಗೇ ಕತ್ತರಿಸಬಹುದು)
ಹಸಿಮೆಣಸು - 2
*ಮಾವಿನ ಪುಡಿ (ಅಥವಾ ಆಮ್ ಚೂರ್ ಪುಡಿ ) - 1/4ಚಿಕ್ಕ ಚಮಚ
*ಕಾಳುಮೆಣಸಿನ ಪುಡಿ - 1/4ಚಿಕ್ಕ ಚಮಚ
*ಉಪ್ಪು ರುಚಿಗನುಸಾರ
ವಿಧಾನ:
1) ಮೊದಲು ಪುದೀನಾ ಮತ್ತು ಕೊತ್ತಂಬರಿ ಎಲೆಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯ ದೊಡ್ಡ ಜಾರಿನಲ್ಲಿ ಹಾಕಿ.
2) ಇದಕ್ಕೆ ಮೊಸರು ಸೇರಿಸಿ, ಹಸಿಮೆಣಸು, ಆಮ್ಚೂರ್ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ.
3) ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ಈಗ ಟೀ ಸೋಸುವ ಸೋಸುಕ ಬಳಸಿ ಸೋಸಿ.
4) ಜಗ್ ಒಂದರಲ್ಲಿ ದ್ರವವನ್ನು ಸಂಗ್ರಹಿಸಿ. ತಕ್ಷಣವೇ ಸೇವಿಸಬೇಕಾದರೆ ಐಸ್ ತುಂಡುಗಳನ್ನು ಸೇರಿಸಬಹುದು, ಆದರೆ ಐಸ್ ಇಲ್ಲದೇ ಕುಡಿಯುವುದೇ ಹೆಚ್ಚು ರುಚಿಕರ ಎಂದು ಹೆಚ್ಚಿನವರು ಭಾವಿಸುತ್ತಾರೆ.
4) ಬಳಿಕ ಸೇವಿಸುವುದಾದರೆ ಫ್ರಿಜ್ಜಿನಲ್ಲಿಟ್ಟು ಬಿಸಿಲಿನಿಂದ ಬಂದ ಬಳಿಕ ಕುಡಿಯಬಹುದು. ಈ ಪೇಯ ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕೆ ಕೆಳಗಿನ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.



Click it and Unblock the Notifications