Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಸಾಬುದಾನ ತಾಲಿಪಟ್ -ವ್ರತ ರೆಸಿಪಿ
ನವರಾತ್ರಿ ಸಮಯದಲ್ಲಿ ಮತ್ತು ಇತರ ಹಬ್ಬ, ವ್ರತ ಸಮಯದಲ್ಲಿ ಉಪವಾಸ ಮಾಡುವವರಿಗಾಗಿ ಈ ತಾಲಿಪಟ್ ರೆಸಿಪಿ ನೀಡಲಾಗಿದೆ. ನೀವು ಕೂಡ ನವರಾತ್ರಿ ಉಪವಾಸ ಸಮಯದಲ್ಲಿ ಮಾಡಬಹುದಾದ ಅಡುಗೆಯ ರೆಸಿಪಿ ಹುಡುಕಾಟದಲ್ಲಿದ್ದರೆ, ಈ ಲೇಖನದತ್ತ ಕಣ್ಣಾಡಿಸಿ.
ಇದನ್ನು ಮಾಡುವ ವಿಧಾನ ಸರಳವಾಗಿದ್ದು ಮಾಡುವುದು ಹೇಗೆಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ಸಾಬುದಾನ 1 ಕಪ್
ಆಲೂಗಡ್ಡೆ ಅರ್ಧ ಕಪ್ (ಬೇಯಿಸಿ, ತುರಿದ ಆಲೂಗಡ್ಡೆ)
ಕೊತ್ತಂಬರಿ 2 ಚಮಚ(ಕತ್ತರಿಸಿದ್ದು)
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸಿನಕಾಯಿ 1
ರೋಸ್ಟ್ ಮಾಡಿದ ನೆಲಗಡಲೆ ಅರ್ಧ ಕಪ್
ನಿಂಬೆ ರಸ 1 ಚಮಚ
ಗೋಧಿ ಹಿಟ್ಟು ಅರ್ಧ ಕಪ್
ಎಣ್ಣೆ
ತಯಾರಿಸುವ ವಿಧಾನ:
* ಸಾಬುದಾನವನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ(8 ಗಂಟೆಗಳ ನೆನೆ ಹಾಕಿ).
* ಗೋಧಿ ಹಿಟ್ಟು ಬಿಟ್ಟು ಈಗ ಸಾಬುದಾನ ಮತ್ತು ಉಳಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.
* ನಂತರ ಅದನ್ನು ಕಡಲೆ ಹಿಟ್ಟಿನ ಜೊತೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕೆಲೆಸಿ(ಹಿಟ್ಟು ತುಂಬಾ ನೀರಾಗಬಾರದು, ಗಟ್ಟಿಯಾಗಿಯೂ ಇರಬಾರದು). ನಂತರ ಮೀಡಿಯಂ ಗಾತ್ರದಲ್ಲಿ ಉಂಡೆ ಕಟ್ಟಿ.
* ಈಗ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ ಅದರಲ್ಲಿ ಸ್ವಲ್ಪ ಉಂಡೆ ಕಟ್ಟಿದ ಹಿಟ್ಟು ಹಾಕಿ ಕೈಯಿಂದ ವೃತ್ತಾಕಾರವಾಗಿ ತಟ್ಟಿ.
* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ, ನಂತರ ತಟ್ಟಿದ ಹಿಟ್ಟನ್ನು ಹಾಕಿ ಅದರ ಮೇಲೆ ಎಣ್ಣೆ ಸವರಿ 1 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ ಬೇಯಿಸಿ. ತಾಲಿಪಟ್ ಬೆಂದ ನಂತರ ತೆಗೆಯಿರಿ.
ರೆಡಿಯಾದ ತಾಲಿಪಟ್ ಅಥವಾ ತಾಲಿಪಿಟ್ಟು ಅನ್ನು ಕೊತ್ತಂಬರಿ ಚಟ್ನಿ ಜೊತೆ ಸವಿಯಿರಿ.



Click it and Unblock the Notifications











