Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು

ಜತೆಯಲ್ಲಿ ಊಟಮಾಡೋಣ ಎಂದು ನಾನು ಎಷ್ಟೇ ಕೇಳಿಕೊಂಡರೂ ಅವರು ಜಪ್ಪಯ್ಯ ಎನಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣಗಳು ಎರಡು. ರಾತ್ರಿ ಮನೆಯಲ್ಲಿ ಊಟ ಮಾಡದಿದ್ದರೆ ಅವರ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಎರಡನೆಯದು ಆಕಸ್ಮಾತ್ ಹೊರಗಡೆ ಊಟ ಮಾಡಿಬಿಡೋಣ ಎಂದರೆ ಇವತ್ತು ಅವರ ಮನಸ್ಸು ಒಪ್ಪುತ್ತಿಲ್ಲ. ಕಾರಣ, ಮನೆಯಲ್ಲಿ ವಿಶೇಷ ತಿಂಡಿ ಮಾಡಿದ್ದಾರಂತೆ. ಏನು ವಿಶೇಷ ಎಂದು ಕೇಳಲಾಗಿ ಅವರು ಹೇಳಿದ್ದು ಉಪ್ಪಿಟ್ಟು! ಅಯ್ಯೋ ದೇವರೆ, ಉಪ್ಪಿಟ್ಟು ದಿನಾ ಇದ್ದದ್ದೇ. ಅದರಲ್ಲೇನು ಸ್ಪೆಷಲ್ ಎಂದು ಕೇಳಿದಾಗ ಅವರು ಹೇಳಿದ್ದು ಹೀಗಿತ್ತು.
ಮನೆಯಲ್ಲಿ ಅವರ ಹೆಂಡತಿ ಅಪರೂಪಕ್ಕೆ ವಿಶೇಷ ಉಪ್ಪಿಟ್ಟು ಮಾಡುತ್ತಾರಂತೆ. ಅದರ ಹೆಸರು ಅಮಲ್ದಾರ್ ಉಪ್ಪಿಟ್ಟು! ಹಾಗಂದರೇನು? ನಿಮ್ಮಂತೆ ನನಗೂ ಆಶ್ಚರ್ಯವಾಯಿತು.
ನನ್ನ ಸ್ನೇಹಿತನ ಮಾವನವರು ಆಗಿನ ಕಾಲದಲ್ಲಿ ಅಮಲ್ದಾರ್ ಆಗಿದ್ದರಂತೆ. ಊರಿನ ಜನ ಅವರಿಗೆ ತುಂಬಾ ಗೌರವ ಮತ್ತು ಭಯ ಇಟ್ಟುಕೊಟ್ಟಿದ್ದರಂತೆ. ಅಮಲ್ದಾರ್ ಜಗನ್ನಾಥರಾಯರಿಗೆ ಉಪ್ಪಿಟ್ಟೆಂದರೆ ಪ್ರಾಣ. ಆದರೆ ಖಂಡಿತ ನಾವು ನೀವು ಮಾಡುವ ಉಪ್ಪಿಟ್ಟಲ್ಲ. ದಪ್ಪ ರವೆಯನ್ನು ಚೆನ್ನಾಗಿ ಹುರಿದು(over fry)ಅದಕ್ಕೆ ಯಥಾಪ್ರಕಾರ ಪದಾರ್ಥಗಳನ್ನು ಕಲೆಸಿ ಉಪ್ಪಿಟ್ಟು ಮಾಡುವುದು ಕ್ರಮ. ಆದರೆ, ಉಪ್ಪಿಟ್ಟು ತಯಾರಿಕೆಗೆ ಮನೆಯಲ್ಲೇ ತಯಾರಿಸಿದ ಬೆಣ್ಣೆಕಾಯಿಸಿದ ತುಪ್ಪವನ್ನೇ ಬಳಸಬೇಕು. ತುಪ್ಪವನ್ನು ಯಥೇಶ್ಚವಾಗಿ ಹಾಕಿ ಮಾಡಿದ ಬನ್ಸಿ ರವೆ ಉಪ್ಪಿಟ್ಟು ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಯಾರೂ ಮಾಡುವುದಿಲ್ಲ. ಅದೂನೂವೆ ಮನೆಯಲ್ಲಿ ಕಾಯಿಸಿದ ತುಪ್ಪ. ಛೆ ಛೆ ಎಲ್ಲಾದರೂ ಉಂಟೆ ಅನ್ನಬೇಡಿ.
ನಮ್ಮ ಕಾಲೇಜು ಸೂಪರಿಂಟೆಂಡೆಂಟು ಸೋಮಶೇಖರ್ ಅವರ ಹೆಂಡತಿ ಆಗಾಗ ಅಮಲ್ದಾರ್ ಉಪ್ಪಿಟ್ಟು ತಯಾರಿಸುತ್ತಾರೆ. ಹಾಲು ಕಾಯಿಸಿದ ಕೆನೆಯನ್ನು ನಿತ್ಯ ಜೋಪಾನವಾಗಿ ತೆಗೆದಿಟ್ಟು ಒಂದು ಭಾನುವಾರ ಬೆಣ್ಣೆ ಕಡೆದು ತುಪ್ಪಕಾಯಿಸಿ ಅಮಲ್ದಾರ್ ಉಪ್ಪಿಟ್ಟು ಮಾಡುವುದು ಅವರ ಮನೆಯ ಸ್ಪೆಷಲ್. ಹಾಗಾಗಿ ಸೋಮಣ್ಣನವರು ನಮ್ಮ ಜತೆ ಹೋಟೆಲ್ ಊಟ ಮಾಡಲಿಲ್ಲವೆನ್ನಿ. ಇನ್ನೊಂದು ಅಂಶವೆಂದರೆ, ಅಮಲ್ದಾರ್ ಜಗನ್ನಾಥರಾಯರು ಆಗಾಗ ತುಪ್ಪದ ಗುಣಮಟ್ಟದ ಬಗೆಗೆ ತಮ್ಮದೇ ಆದ ವ್ಯಾಖ್ಯೆ ಕೊಡುತ್ತಿದ್ದರಂತೆ. ಅವರ ಪ್ರಕಾರ, ಮನೆಯಲ್ಲಿ ಮಾಡಿದ ಗಟ್ಟಿಯಾದ ತುಪ್ಪವನ್ನು ಒಂದು ಚಮಚ ಅಂಗೈಮೇಲೆ ಹಾಕಿದರೆ ಅದು ದೇಹದ ಶಾಖಕ್ಕೆ ಕರಗುತ್ತದಂತೆ. ಹಾಗೆ ಕರಗಿದರೆ ಒಳ್ಳೆ ತುಪ್ಪ ಇಲ್ಲದಿದ್ದರೆ ಅದರಲ್ಲೇನೋ ದೋಷವಿದೆ.
ಊರಿಗೆ ವಾಪಸ್ಸು ಬಂದನಂತರ ಸೋಮಣ್ಣನವರು ಹೇಳಿದ ಉಪ್ಪಿಟ್ಟಿನ ಬಗ್ಗೆ ನನ್ನ ಹೆಂಡತಿಗೂ ಹೇಳಿದೆ. ಅವಳು ನಕ್ಕಳು. ನೀನೂ ಮಾಡೆ ಎಂದೆ. ಮಾಡ್ತೀನಿ ಆದರೆ ತುಪ್ಪ ಆಕಳಹಾಲಿನದೋ, ಎಮ್ಮೆ ಹಾಲಿನದೋ ಎಂದು ಕೇಳಿದಳು. ನನಗೆ ಏನೂ ಹೇಳಲು ಗೊತ್ತಾಗದೆ ಸುಮ್ಮನಾಗಿಬಿಟ್ಟೆ.
ದೇವರೇ, ನಮ್ಮನ್ನು ಈ ಉಪ್ಪಿಟ್ಟಿನಿಂದ ಕಾಪಾಡಪ್ಪಾ...!
ಇದು ಉಪ್ಪಿಟ್ಟನ್ನು ಗೇಲಿ ಮಾಡೋರಿಗೆ ಮಾತ್ರ!
ಡಬ್ಬಲ್ ಡಿಲೈಟ್ ಉಪ್ಪಿಟ್ಟು ರೊಟ್ಟಿ ಸಾಬೂದಾಣಿ ಖಿಚಡಿ :
ಇದು ಏಕಾದಶಿ ಪರಿಹಾರ



Click it and Unblock the Notifications
