Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ

ಪರೀಕ್ಷಾ ದಿನಗಳಲ್ಲಿ ದೇಹ ಮತ್ತು ಮನಸ್ಸುಗಳೆರಡೂ ಪರೀಕ್ಷೆಗೆ ಒಳಗಾಗುತ್ತವೆ. ವ್ಯಕ್ತಿಯೊಬ್ಬನ ಇಡೀ ದೇಹದ ವ್ಯವಸ್ಥೆ ಗಮನಾರ್ಹ ಪ್ರಮಾಣದ ಒತ್ತಡ ತಾಳಿಕೊಳ್ಳಬೇಕಾಗುತ್ತದೆ. ದೀರ್ಘ ಸಮಯದ ಒತ್ತಡ ಎದುರಿಸಲು ವ್ಯಕ್ತಿಯ ಆಂತರಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು. ಇದರಿಂದ ಅಧ್ಯಯನಕ್ಕೆ ಹೆಚ್ಚು ಗಮನ ನೀಡಲು, ಓದಿನಲ್ಲಿ ಮನಸ್ಸು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ ಎಂದು ವಿಮ್ಹಾನ್ಸ್ನ ಮನಶಾಸ್ತ್ರಜ್ಞ ಸಲಹಾ ತಜ್ಞ ಡಾ. ಜಿತೇಂದ್ರ ನಾಗ್ಪಾಲ್ ಅವರು ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ. ಸಮತೋಲಿತ ಆಹಾರ ಸೇವನೆ ಮೂಲಕ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಕೂಡಿದ ಶಕ್ತಿವರ್ಧಕ ಪಾನೀಯ ಸೇವನೆಯೂ ತುಂಬ ಪ್ರಯೋಜನಕಾರಿಯಾಗಿರುತ್ತದೆ.
ದೇಹದ ಆಂತರಿಕ ಸಾಮರ್ಥ್ಯದ ನಿರ್ಲಕ್ಷ್ಯ ಸಲ್ಲ : ದೇಹದ ಆಂತರಿಕ ಸಾಮರ್ಥ್ಯ ತುಂಬ ಮಹತ್ವದ್ದು. ಅದರಲ್ಲೂ ಋತುಮಾನ ಏರಿಳಿತ ಸಂದರ್ಭಗಳಲ್ಲಿ ಹೆಚ್ಚು ಮಹತ್ವದ್ದು ಆಗಿರುತ್ತದೆ. ಪರೀಕ್ಷೆಗಳ ಮುಂಚೆ ಅಥವಾ ಪರೀಕ್ಷಾ ದಿನಗಳಲ್ಲಿ ದೈಹಿಕ ಆರೋಗ್ಯದಲ್ಲಿ ಹೆಚ್ಚುಕಡಿಮೆಯಾದರೆ, ಪರೀಕ್ಷೆಗಳಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದರೂ ಹಿಂದೆ ಬೀಳಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ದೇಹದ ಆಂತರಿಕ ಶಕ್ತಿಯನ್ನು ವೃದ್ಧಿಸಿಕೊಂಡಿರಬೇಕಾಗುತ್ತದೆ.
ಸರಿಯಾದ ಆಹಾರ ಸೇವನೆಯೇ ಮೂಲ ಮಂತ್ರ : ನೀವು ಸೇವಿಸುವ ಆಹಾರ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ದೈಹಿಕ ಚಟುವಟಿಕೆಗಳಂತೆ, ಸರಿಯಾದ ಆಹಾರ ಸೇವನೆಯು ದೇಹದ ಆಂತರಿಕ ಶಕ್ತಿ ಸಶಕ್ತವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತದೆ. ದೇಹದ ಪೋಷಕಾಂಶಗಳ ಬೇಡಿಕೆಯನ್ನು ಪೌಷ್ಟಿಕ ಶಕ್ತಿವರ್ಧಕ ಪಾನೀಯಗಳು ಸಮರ್ಥವಾಗಿ ಪೂರೈಸುತ್ತವೆ ಎಂದು ಭಾರತೀಯ ಆಹಾರಪಥ್ಯೆ ಸಂಘದ ಬೆಂಗಳೂರು ಘಟಕದ ಅಧ್ಯಕ್ಷರಾಗಿರುವ ಮತ್ತು ಅಪೊಲೊ ಆಸ್ಪತ್ರೆಯ ಮುಖ್ಯ ಪೋಷಕಾಂಶ ತಜ್ಞ ಡಾ. ಪ್ರಿಯಾಂಕಾ ರೋಹಟಗಿ ಅವರು ಅಭಿಪ್ರಾಯಪಡುತ್ತಾರೆ.
ಏನನ್ನು ಸೇವಿಸಬೇಕು
* ಮನೆಯಲ್ಲಿ ಸಿದ್ಧಪಡಿಸಿದ ಆಹಾರ
* ಹಣ್ಣು ಮತ್ತು ತರಕಾರಿ
* ಸಲಾಡ್ ಮತ್ತು ಬೇಯಿಸಿದ ಕುರುಕಲು ತಿಂಡಿ (ಸ್ನ್ಯಾಕ್ಸ್)
* ಹಾರ್ಲಿಕ್ಸ್ನಂತಹ ಪೋಷಕಾಂಶಯುಕ್ತ ಶಕ್ತಿವರ್ಧಕ ಪಾನೀಯ
* ಸಾಕಷ್ಟು ಪ್ರಮಾಣದಲ್ಲಿ ನೀರು
* ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ
ಏನನ್ನು ಸೇವಿಸಬಾರದು
* ತಂಬಾಕು ಉತ್ಪನ್ನಗಳು
* ವೈದ್ಯರು ಶಿಫಾರಸು ಮಾಡದ ಔಷಧಿಗಳು
ಸಾಧಾರಣ ಆಹಾರ
* ಬಾಹ್ಯ ಆಹಾರ
* ಕರಿದ ಮತ್ತು ತೈಲಭರಿತ ಸ್ನ್ಯಾಕ್ಸ್
ಸಮತೋಲಿತ ಆಹಾರ
* ಬೆಳಗಿನ ತಿಂಡಿ : ಪೂರ್ಣಪ್ರಮಾಣದ ಧಾನ್ಯ ಓಟ್ಸ್, 1 ಹಣ್ಣು, 1 ಮೊಟ್ಟೆ ಮತ್ತು 5ರಿಂದ 8 ಬಾದಾಮಿ.
* ಮಧ್ಯಾಹ್ನದ ಊಟದ ಮುಂಚೆ ಮಧ್ಯಂತರದಲ್ಲಿ - ಹಾರ್ಲಿಕ್ಸ್ನಂತಹ ಆರೋಗ್ಯಕರ ಪೇಯ, ಒಂದು ಲೋಟದಷ್ಟು ಹಣ್ಣಿನ ರಸ.
* ಊಟ : ಸೋಯಾ ಮತ್ತು ಗೋಧಿ ಹಿಟ್ಟಿನ 2 ಚಪಾತಿ. ಮೊಳಕೆ ಒಡೆದ ಕಾಳು 1 ಬಟ್ಟಲು, ಬೇಳೆ 1 ಬಟ್ಟಲು, ಮೊಸರು, ತರಕಾರಿ ಮತ್ತು ಸಲಾಡ್.
* ಚಹ : ಆರೋಗ್ಯಕರ ಪೇಯ, ಹಣ್ಣಿನ ರಸ, 8ರಿಂದ 10 ಒಣದ್ರಾಕ್ಷಿ ಅಥವಾ ತಾಜಾ ಹಣ್ಣಿನ ರಸ.
* ರಾತ್ರಿ ಊಟ : ಒಂದು ಬಟ್ಟಲು ಅಕ್ಕಿ, ಸೋಯಾ ಮತ್ತು ಗೋಧಿ ಹಿಟ್ಟಿನ 2 ಚಪಾತಿ. ಬೇಳೆ ಸಾರು ಅಥವಾ ಮೀನು. ತರಕಾರಿ ಮತ್ತು ಸಲಾಡ್
* ಊಟದ ನಂತರ : ಒಂದು ಲೋಟ ಹಾಲು ಅಥವಾ ಹಣ್ಣಿನ ರಸ.



Click it and Unblock the Notifications