Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ

ಪರೀಕ್ಷಾ ದಿನಗಳಲ್ಲಿ ದೇಹ ಮತ್ತು ಮನಸ್ಸುಗಳೆರಡೂ ಪರೀಕ್ಷೆಗೆ ಒಳಗಾಗುತ್ತವೆ. ವ್ಯಕ್ತಿಯೊಬ್ಬನ ಇಡೀ ದೇಹದ ವ್ಯವಸ್ಥೆ ಗಮನಾರ್ಹ ಪ್ರಮಾಣದ ಒತ್ತಡ ತಾಳಿಕೊಳ್ಳಬೇಕಾಗುತ್ತದೆ. ದೀರ್ಘ ಸಮಯದ ಒತ್ತಡ ಎದುರಿಸಲು ವ್ಯಕ್ತಿಯ ಆಂತರಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು. ಇದರಿಂದ ಅಧ್ಯಯನಕ್ಕೆ ಹೆಚ್ಚು ಗಮನ ನೀಡಲು, ಓದಿನಲ್ಲಿ ಮನಸ್ಸು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ ಎಂದು ವಿಮ್ಹಾನ್ಸ್ನ ಮನಶಾಸ್ತ್ರಜ್ಞ ಸಲಹಾ ತಜ್ಞ ಡಾ. ಜಿತೇಂದ್ರ ನಾಗ್ಪಾಲ್ ಅವರು ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ. ಸಮತೋಲಿತ ಆಹಾರ ಸೇವನೆ ಮೂಲಕ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಕೂಡಿದ ಶಕ್ತಿವರ್ಧಕ ಪಾನೀಯ ಸೇವನೆಯೂ ತುಂಬ ಪ್ರಯೋಜನಕಾರಿಯಾಗಿರುತ್ತದೆ.
ದೇಹದ ಆಂತರಿಕ ಸಾಮರ್ಥ್ಯದ ನಿರ್ಲಕ್ಷ್ಯ ಸಲ್ಲ : ದೇಹದ ಆಂತರಿಕ ಸಾಮರ್ಥ್ಯ ತುಂಬ ಮಹತ್ವದ್ದು. ಅದರಲ್ಲೂ ಋತುಮಾನ ಏರಿಳಿತ ಸಂದರ್ಭಗಳಲ್ಲಿ ಹೆಚ್ಚು ಮಹತ್ವದ್ದು ಆಗಿರುತ್ತದೆ. ಪರೀಕ್ಷೆಗಳ ಮುಂಚೆ ಅಥವಾ ಪರೀಕ್ಷಾ ದಿನಗಳಲ್ಲಿ ದೈಹಿಕ ಆರೋಗ್ಯದಲ್ಲಿ ಹೆಚ್ಚುಕಡಿಮೆಯಾದರೆ, ಪರೀಕ್ಷೆಗಳಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದರೂ ಹಿಂದೆ ಬೀಳಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ದೇಹದ ಆಂತರಿಕ ಶಕ್ತಿಯನ್ನು ವೃದ್ಧಿಸಿಕೊಂಡಿರಬೇಕಾಗುತ್ತದೆ.
ಸರಿಯಾದ ಆಹಾರ ಸೇವನೆಯೇ ಮೂಲ ಮಂತ್ರ : ನೀವು ಸೇವಿಸುವ ಆಹಾರ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ದೈಹಿಕ ಚಟುವಟಿಕೆಗಳಂತೆ, ಸರಿಯಾದ ಆಹಾರ ಸೇವನೆಯು ದೇಹದ ಆಂತರಿಕ ಶಕ್ತಿ ಸಶಕ್ತವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತದೆ. ದೇಹದ ಪೋಷಕಾಂಶಗಳ ಬೇಡಿಕೆಯನ್ನು ಪೌಷ್ಟಿಕ ಶಕ್ತಿವರ್ಧಕ ಪಾನೀಯಗಳು ಸಮರ್ಥವಾಗಿ ಪೂರೈಸುತ್ತವೆ ಎಂದು ಭಾರತೀಯ ಆಹಾರಪಥ್ಯೆ ಸಂಘದ ಬೆಂಗಳೂರು ಘಟಕದ ಅಧ್ಯಕ್ಷರಾಗಿರುವ ಮತ್ತು ಅಪೊಲೊ ಆಸ್ಪತ್ರೆಯ ಮುಖ್ಯ ಪೋಷಕಾಂಶ ತಜ್ಞ ಡಾ. ಪ್ರಿಯಾಂಕಾ ರೋಹಟಗಿ ಅವರು ಅಭಿಪ್ರಾಯಪಡುತ್ತಾರೆ.
ಏನನ್ನು ಸೇವಿಸಬೇಕು
* ಮನೆಯಲ್ಲಿ ಸಿದ್ಧಪಡಿಸಿದ ಆಹಾರ
* ಹಣ್ಣು ಮತ್ತು ತರಕಾರಿ
* ಸಲಾಡ್ ಮತ್ತು ಬೇಯಿಸಿದ ಕುರುಕಲು ತಿಂಡಿ (ಸ್ನ್ಯಾಕ್ಸ್)
* ಹಾರ್ಲಿಕ್ಸ್ನಂತಹ ಪೋಷಕಾಂಶಯುಕ್ತ ಶಕ್ತಿವರ್ಧಕ ಪಾನೀಯ
* ಸಾಕಷ್ಟು ಪ್ರಮಾಣದಲ್ಲಿ ನೀರು
* ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ
ಏನನ್ನು ಸೇವಿಸಬಾರದು
* ತಂಬಾಕು ಉತ್ಪನ್ನಗಳು
* ವೈದ್ಯರು ಶಿಫಾರಸು ಮಾಡದ ಔಷಧಿಗಳು
ಸಾಧಾರಣ ಆಹಾರ
* ಬಾಹ್ಯ ಆಹಾರ
* ಕರಿದ ಮತ್ತು ತೈಲಭರಿತ ಸ್ನ್ಯಾಕ್ಸ್
ಸಮತೋಲಿತ ಆಹಾರ
* ಬೆಳಗಿನ ತಿಂಡಿ : ಪೂರ್ಣಪ್ರಮಾಣದ ಧಾನ್ಯ ಓಟ್ಸ್, 1 ಹಣ್ಣು, 1 ಮೊಟ್ಟೆ ಮತ್ತು 5ರಿಂದ 8 ಬಾದಾಮಿ.
* ಮಧ್ಯಾಹ್ನದ ಊಟದ ಮುಂಚೆ ಮಧ್ಯಂತರದಲ್ಲಿ - ಹಾರ್ಲಿಕ್ಸ್ನಂತಹ ಆರೋಗ್ಯಕರ ಪೇಯ, ಒಂದು ಲೋಟದಷ್ಟು ಹಣ್ಣಿನ ರಸ.
* ಊಟ : ಸೋಯಾ ಮತ್ತು ಗೋಧಿ ಹಿಟ್ಟಿನ 2 ಚಪಾತಿ. ಮೊಳಕೆ ಒಡೆದ ಕಾಳು 1 ಬಟ್ಟಲು, ಬೇಳೆ 1 ಬಟ್ಟಲು, ಮೊಸರು, ತರಕಾರಿ ಮತ್ತು ಸಲಾಡ್.
* ಚಹ : ಆರೋಗ್ಯಕರ ಪೇಯ, ಹಣ್ಣಿನ ರಸ, 8ರಿಂದ 10 ಒಣದ್ರಾಕ್ಷಿ ಅಥವಾ ತಾಜಾ ಹಣ್ಣಿನ ರಸ.
* ರಾತ್ರಿ ಊಟ : ಒಂದು ಬಟ್ಟಲು ಅಕ್ಕಿ, ಸೋಯಾ ಮತ್ತು ಗೋಧಿ ಹಿಟ್ಟಿನ 2 ಚಪಾತಿ. ಬೇಳೆ ಸಾರು ಅಥವಾ ಮೀನು. ತರಕಾರಿ ಮತ್ತು ಸಲಾಡ್
* ಊಟದ ನಂತರ : ಒಂದು ಲೋಟ ಹಾಲು ಅಥವಾ ಹಣ್ಣಿನ ರಸ.



Click it and Unblock the Notifications