Latest Updates
-
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ
ಭಕ್ಕರಿಯ ಪ್ರೇಯಸಿ ಭಯಂಕರ ಖಾರದ ರಂಜಕ

ಎಣ್ಣೆಗಾಯಿ ಪಲ್ಯ, ಝುಣಕ, ಮಾಟವಾಡಿ ಪಲ್ಯಗಳನ್ನು ಬದಿಗಿಟ್ಟರೆ ಭಕ್ಕರಿ ಯ ನಿಜವಾದ ಪ್ರೇಯಸಿ ಅಂದರೆ ರಂಜಕ ಅರ್ಥಾತ್ ಕೆಂಪು ಮೆಣಸಿನಕಾಯಿ ಖಾರ ಚಟ್ನಿ. ಬಾಯಿಗಿಟ್ಟಾಗ ನಾಲಿಗೆ ಚುರುಗುಟ್ಟುತ್ತಿರುತ್ತದೆ, ಕಣ್ಣಲ್ಲಿ ಮತ್ತು ಮೂಗಲ್ಲಿ ಬಳಬಳನೆ ನೀರು ಸುರಿಯುತ್ತಿರುತ್ತದೆ ಆದರೆ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ. ಈ ಖಾರದ ರುಚಿ ಆಪರಿಯದ್ದು. ಖಾರದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದರೆ ಆಗಾಗ ಬಟ್ಟಲಲ್ಲಿ ತೆಗೆದು ಅದಕ್ಕೆ ಹಸಿ ಕೊಬ್ಬರಿಯನ್ನು ತುರಿದು ಹಾಕಬಹುದು.
ಗದಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಚಟ್ನಿಯನ್ನು ಜರೂರ ಮಾಡಿರುತ್ತಾರೆ. ಇಷ್ಟವಿದ್ದವರು ಒಮ್ಮೆ ರುಚಿ ನೋಡಿ. ಮತ್ತೊಂದು ವಿಷಯವೇನೆಂದರೆ ಸರಿಯಾಗಿ ತಯಾರಿಸಿ ಭದ್ರವಾಗಿ ಬಾಟಲಿಯಲ್ಲಿ ಬಂಧಿಸಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ, ನೀರನ್ನು ಮಾತ್ರ ಸೋಂಕಿಸಲೇಬಾರದು.
ಈ ಚಟ್ನಿಗೆ ರಂಜಕ ಅಂತ ಯಾಕೆ ಕರೆಯುತ್ತಾರೆಂದು ನನಗಂತೂ ತಿಳಿದಿಲ್ಲ. ಬಲ್ಲವರು ತಿಳಿದಿದ್ದರೆ ನಮಗೂ ತಿಳಿಸಿದರು ಉಪಕಾರವಾಗುತ್ತದೆ. ನೆನಪಿರಲಿ, ಇದಕ್ಕೆ ಬ್ಯಾಡಗಿ ಮೆಣಸಿನಕಾಯಿಯನ್ನೇ ಬಳಸಬೇಕು, ಗುಂಟೂರು ಮೆಣಸಿನಕಾಯಿ ಬಳಸಬಾರದು.
ರಂಜಕ್ಕೆ ಬೇಕಾದ ಪದಾರ್ಥಗಳು :
ಒಣ ಬ್ಯಾಡಗಿ ಮೆಣಸಿನಕಾಯಿ 1 ಕಿ.ಗ್ರಾಂ.
ಹರಳುಪ್ಪು 1/4 ಕಿ.ಗ್ರಾಂ.
ಹುಣಸೆಹಣ್ಣು ಅರ್ಧ ಬಟ್ಟಲು
ಇಂಗು ಸಣ್ಣ ಡಬ್ಬಿ
ಮೆಂತೆಕಾಳು 2 ಚಮಚ
ಸಾಸಿವೆ ಸ್ವಲ್ಪ
ತಯಾರಿಸುವ ವಿಧಾನ :
ತಯಾರಿಸುವ ಮುನ್ನ ನಿಮ್ಮ ಕೈಗಳಿಗೆ ಅಜೀಬಾತ್ ನೀರು ಸೋಂಕಿರಬಾರದು. ನೀರು ಹತ್ತಿದ್ದರೆ ಕೆಲಸ ಕೆಟ್ಟಿತೆಂದೇ ಅರ್ಥ. ಸೋ, ಕೈ ಒಣಒಣ ಆಗಿರಲಿ.
ಒಣ ಬ್ಯಾಡಗಿ ಮೆಣಸಿನಕಾಯಿಯ ತುಂಬುಗಳನ್ನು ತೆಗೆದಿಟ್ಟು ಅದಕ್ಕೆ ಹರಳುಪ್ಪು ಮತ್ತು ಹುಣಸೆಹಣ್ಣನ್ನು ಸೇರಿಸಿಡಿ. ಎರಡು ಗಂಟೆ ಅದರ ತಂಟೆಗೆ ಹೋಗಬೇಡಿ. ನಂತರ, ಮೆಂತೆ ಮತ್ತು ಸಾಸಿವೆಗೆ ಇಂಗನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ಪುಡಿಪುಡಿ ಮಾಡಿಟ್ಟುಕೊಳ್ಳಿ. ಇಂಗು ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೆ ತೊಂದರೆಯೇನಿಲ್ಲ. ಆರೋಗ್ಯಕ್ಕೂ ಒಳ್ಳೆಯದು.
ಇಷ್ಟೆಲ್ಲ ಮುಗಿದ ನಂತರ, ಬೆರೆಸಿಟ್ಟ ಬ್ಯಾಡಗಿ ಮೆಣಸಿನಕಾಯಿ ಮಿಶ್ರಣಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ಗಿರಿಗಿರಿ ಅನ್ನಿಸಿ. ಚಟ್ನಿ ತೀರ ಸಣ್ಣಗಾಗುವುದು ಬೇಡ, ತರಿತರಿಯಾಗಿದ್ದರೆ ಸಾಕು. ಅಷ್ಟೆ, ಬ್ರಹ್ಮಾಂಡ ಖಾರ ಬ್ಯಾಡಗಿ ಮೆಣಸಿನಕಾಯಿ ಚಟ್ನಿ ಅಥವಾ ರಂಜಕ ರೆಡಿ.
ಕಟಕು ಭಕ್ಕರಿಯನ್ನೇ ತಟ್ಟೆಯಾಗಿಸಿಕೊಂಡು ಮಧ್ಯದಲ್ಲಿ ಮುದ್ದೆ ರಂಜಕ ಹಾಕಿಸಿಕೊಂಡು ಖಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೇ ಸುಮ್ಮನೆ ಅದರ ರುಚಿಯನ್ನು ಆಸ್ವಾದಿಸಿ.



Click it and Unblock the Notifications