Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಭಕ್ಕರಿಯ ಪ್ರೇಯಸಿ ಭಯಂಕರ ಖಾರದ ರಂಜಕ

ಎಣ್ಣೆಗಾಯಿ ಪಲ್ಯ, ಝುಣಕ, ಮಾಟವಾಡಿ ಪಲ್ಯಗಳನ್ನು ಬದಿಗಿಟ್ಟರೆ ಭಕ್ಕರಿ ಯ ನಿಜವಾದ ಪ್ರೇಯಸಿ ಅಂದರೆ ರಂಜಕ ಅರ್ಥಾತ್ ಕೆಂಪು ಮೆಣಸಿನಕಾಯಿ ಖಾರ ಚಟ್ನಿ. ಬಾಯಿಗಿಟ್ಟಾಗ ನಾಲಿಗೆ ಚುರುಗುಟ್ಟುತ್ತಿರುತ್ತದೆ, ಕಣ್ಣಲ್ಲಿ ಮತ್ತು ಮೂಗಲ್ಲಿ ಬಳಬಳನೆ ನೀರು ಸುರಿಯುತ್ತಿರುತ್ತದೆ ಆದರೆ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ. ಈ ಖಾರದ ರುಚಿ ಆಪರಿಯದ್ದು. ಖಾರದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದರೆ ಆಗಾಗ ಬಟ್ಟಲಲ್ಲಿ ತೆಗೆದು ಅದಕ್ಕೆ ಹಸಿ ಕೊಬ್ಬರಿಯನ್ನು ತುರಿದು ಹಾಕಬಹುದು.
ಗದಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಚಟ್ನಿಯನ್ನು ಜರೂರ ಮಾಡಿರುತ್ತಾರೆ. ಇಷ್ಟವಿದ್ದವರು ಒಮ್ಮೆ ರುಚಿ ನೋಡಿ. ಮತ್ತೊಂದು ವಿಷಯವೇನೆಂದರೆ ಸರಿಯಾಗಿ ತಯಾರಿಸಿ ಭದ್ರವಾಗಿ ಬಾಟಲಿಯಲ್ಲಿ ಬಂಧಿಸಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ, ನೀರನ್ನು ಮಾತ್ರ ಸೋಂಕಿಸಲೇಬಾರದು.
ಈ ಚಟ್ನಿಗೆ ರಂಜಕ ಅಂತ ಯಾಕೆ ಕರೆಯುತ್ತಾರೆಂದು ನನಗಂತೂ ತಿಳಿದಿಲ್ಲ. ಬಲ್ಲವರು ತಿಳಿದಿದ್ದರೆ ನಮಗೂ ತಿಳಿಸಿದರು ಉಪಕಾರವಾಗುತ್ತದೆ. ನೆನಪಿರಲಿ, ಇದಕ್ಕೆ ಬ್ಯಾಡಗಿ ಮೆಣಸಿನಕಾಯಿಯನ್ನೇ ಬಳಸಬೇಕು, ಗುಂಟೂರು ಮೆಣಸಿನಕಾಯಿ ಬಳಸಬಾರದು.
ರಂಜಕ್ಕೆ ಬೇಕಾದ ಪದಾರ್ಥಗಳು :
ಒಣ ಬ್ಯಾಡಗಿ ಮೆಣಸಿನಕಾಯಿ 1 ಕಿ.ಗ್ರಾಂ.
ಹರಳುಪ್ಪು 1/4 ಕಿ.ಗ್ರಾಂ.
ಹುಣಸೆಹಣ್ಣು ಅರ್ಧ ಬಟ್ಟಲು
ಇಂಗು ಸಣ್ಣ ಡಬ್ಬಿ
ಮೆಂತೆಕಾಳು 2 ಚಮಚ
ಸಾಸಿವೆ ಸ್ವಲ್ಪ
ತಯಾರಿಸುವ ವಿಧಾನ :
ತಯಾರಿಸುವ ಮುನ್ನ ನಿಮ್ಮ ಕೈಗಳಿಗೆ ಅಜೀಬಾತ್ ನೀರು ಸೋಂಕಿರಬಾರದು. ನೀರು ಹತ್ತಿದ್ದರೆ ಕೆಲಸ ಕೆಟ್ಟಿತೆಂದೇ ಅರ್ಥ. ಸೋ, ಕೈ ಒಣಒಣ ಆಗಿರಲಿ.
ಒಣ ಬ್ಯಾಡಗಿ ಮೆಣಸಿನಕಾಯಿಯ ತುಂಬುಗಳನ್ನು ತೆಗೆದಿಟ್ಟು ಅದಕ್ಕೆ ಹರಳುಪ್ಪು ಮತ್ತು ಹುಣಸೆಹಣ್ಣನ್ನು ಸೇರಿಸಿಡಿ. ಎರಡು ಗಂಟೆ ಅದರ ತಂಟೆಗೆ ಹೋಗಬೇಡಿ. ನಂತರ, ಮೆಂತೆ ಮತ್ತು ಸಾಸಿವೆಗೆ ಇಂಗನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ಪುಡಿಪುಡಿ ಮಾಡಿಟ್ಟುಕೊಳ್ಳಿ. ಇಂಗು ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೆ ತೊಂದರೆಯೇನಿಲ್ಲ. ಆರೋಗ್ಯಕ್ಕೂ ಒಳ್ಳೆಯದು.
ಇಷ್ಟೆಲ್ಲ ಮುಗಿದ ನಂತರ, ಬೆರೆಸಿಟ್ಟ ಬ್ಯಾಡಗಿ ಮೆಣಸಿನಕಾಯಿ ಮಿಶ್ರಣಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ಗಿರಿಗಿರಿ ಅನ್ನಿಸಿ. ಚಟ್ನಿ ತೀರ ಸಣ್ಣಗಾಗುವುದು ಬೇಡ, ತರಿತರಿಯಾಗಿದ್ದರೆ ಸಾಕು. ಅಷ್ಟೆ, ಬ್ರಹ್ಮಾಂಡ ಖಾರ ಬ್ಯಾಡಗಿ ಮೆಣಸಿನಕಾಯಿ ಚಟ್ನಿ ಅಥವಾ ರಂಜಕ ರೆಡಿ.
ಕಟಕು ಭಕ್ಕರಿಯನ್ನೇ ತಟ್ಟೆಯಾಗಿಸಿಕೊಂಡು ಮಧ್ಯದಲ್ಲಿ ಮುದ್ದೆ ರಂಜಕ ಹಾಕಿಸಿಕೊಂಡು ಖಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೇ ಸುಮ್ಮನೆ ಅದರ ರುಚಿಯನ್ನು ಆಸ್ವಾದಿಸಿ.



Click it and Unblock the Notifications
