Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಭಕ್ಕರಿಯ ಪ್ರೇಯಸಿ ಭಯಂಕರ ಖಾರದ ರಂಜಕ

ಎಣ್ಣೆಗಾಯಿ ಪಲ್ಯ, ಝುಣಕ, ಮಾಟವಾಡಿ ಪಲ್ಯಗಳನ್ನು ಬದಿಗಿಟ್ಟರೆ ಭಕ್ಕರಿ ಯ ನಿಜವಾದ ಪ್ರೇಯಸಿ ಅಂದರೆ ರಂಜಕ ಅರ್ಥಾತ್ ಕೆಂಪು ಮೆಣಸಿನಕಾಯಿ ಖಾರ ಚಟ್ನಿ. ಬಾಯಿಗಿಟ್ಟಾಗ ನಾಲಿಗೆ ಚುರುಗುಟ್ಟುತ್ತಿರುತ್ತದೆ, ಕಣ್ಣಲ್ಲಿ ಮತ್ತು ಮೂಗಲ್ಲಿ ಬಳಬಳನೆ ನೀರು ಸುರಿಯುತ್ತಿರುತ್ತದೆ ಆದರೆ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ. ಈ ಖಾರದ ರುಚಿ ಆಪರಿಯದ್ದು. ಖಾರದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದರೆ ಆಗಾಗ ಬಟ್ಟಲಲ್ಲಿ ತೆಗೆದು ಅದಕ್ಕೆ ಹಸಿ ಕೊಬ್ಬರಿಯನ್ನು ತುರಿದು ಹಾಕಬಹುದು.
ಗದಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಚಟ್ನಿಯನ್ನು ಜರೂರ ಮಾಡಿರುತ್ತಾರೆ. ಇಷ್ಟವಿದ್ದವರು ಒಮ್ಮೆ ರುಚಿ ನೋಡಿ. ಮತ್ತೊಂದು ವಿಷಯವೇನೆಂದರೆ ಸರಿಯಾಗಿ ತಯಾರಿಸಿ ಭದ್ರವಾಗಿ ಬಾಟಲಿಯಲ್ಲಿ ಬಂಧಿಸಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ, ನೀರನ್ನು ಮಾತ್ರ ಸೋಂಕಿಸಲೇಬಾರದು.
ಈ ಚಟ್ನಿಗೆ ರಂಜಕ ಅಂತ ಯಾಕೆ ಕರೆಯುತ್ತಾರೆಂದು ನನಗಂತೂ ತಿಳಿದಿಲ್ಲ. ಬಲ್ಲವರು ತಿಳಿದಿದ್ದರೆ ನಮಗೂ ತಿಳಿಸಿದರು ಉಪಕಾರವಾಗುತ್ತದೆ. ನೆನಪಿರಲಿ, ಇದಕ್ಕೆ ಬ್ಯಾಡಗಿ ಮೆಣಸಿನಕಾಯಿಯನ್ನೇ ಬಳಸಬೇಕು, ಗುಂಟೂರು ಮೆಣಸಿನಕಾಯಿ ಬಳಸಬಾರದು.
ರಂಜಕ್ಕೆ ಬೇಕಾದ ಪದಾರ್ಥಗಳು :
ಒಣ ಬ್ಯಾಡಗಿ ಮೆಣಸಿನಕಾಯಿ 1 ಕಿ.ಗ್ರಾಂ.
ಹರಳುಪ್ಪು 1/4 ಕಿ.ಗ್ರಾಂ.
ಹುಣಸೆಹಣ್ಣು ಅರ್ಧ ಬಟ್ಟಲು
ಇಂಗು ಸಣ್ಣ ಡಬ್ಬಿ
ಮೆಂತೆಕಾಳು 2 ಚಮಚ
ಸಾಸಿವೆ ಸ್ವಲ್ಪ
ತಯಾರಿಸುವ ವಿಧಾನ :
ತಯಾರಿಸುವ ಮುನ್ನ ನಿಮ್ಮ ಕೈಗಳಿಗೆ ಅಜೀಬಾತ್ ನೀರು ಸೋಂಕಿರಬಾರದು. ನೀರು ಹತ್ತಿದ್ದರೆ ಕೆಲಸ ಕೆಟ್ಟಿತೆಂದೇ ಅರ್ಥ. ಸೋ, ಕೈ ಒಣಒಣ ಆಗಿರಲಿ.
ಒಣ ಬ್ಯಾಡಗಿ ಮೆಣಸಿನಕಾಯಿಯ ತುಂಬುಗಳನ್ನು ತೆಗೆದಿಟ್ಟು ಅದಕ್ಕೆ ಹರಳುಪ್ಪು ಮತ್ತು ಹುಣಸೆಹಣ್ಣನ್ನು ಸೇರಿಸಿಡಿ. ಎರಡು ಗಂಟೆ ಅದರ ತಂಟೆಗೆ ಹೋಗಬೇಡಿ. ನಂತರ, ಮೆಂತೆ ಮತ್ತು ಸಾಸಿವೆಗೆ ಇಂಗನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ಪುಡಿಪುಡಿ ಮಾಡಿಟ್ಟುಕೊಳ್ಳಿ. ಇಂಗು ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೆ ತೊಂದರೆಯೇನಿಲ್ಲ. ಆರೋಗ್ಯಕ್ಕೂ ಒಳ್ಳೆಯದು.
ಇಷ್ಟೆಲ್ಲ ಮುಗಿದ ನಂತರ, ಬೆರೆಸಿಟ್ಟ ಬ್ಯಾಡಗಿ ಮೆಣಸಿನಕಾಯಿ ಮಿಶ್ರಣಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ಗಿರಿಗಿರಿ ಅನ್ನಿಸಿ. ಚಟ್ನಿ ತೀರ ಸಣ್ಣಗಾಗುವುದು ಬೇಡ, ತರಿತರಿಯಾಗಿದ್ದರೆ ಸಾಕು. ಅಷ್ಟೆ, ಬ್ರಹ್ಮಾಂಡ ಖಾರ ಬ್ಯಾಡಗಿ ಮೆಣಸಿನಕಾಯಿ ಚಟ್ನಿ ಅಥವಾ ರಂಜಕ ರೆಡಿ.
ಕಟಕು ಭಕ್ಕರಿಯನ್ನೇ ತಟ್ಟೆಯಾಗಿಸಿಕೊಂಡು ಮಧ್ಯದಲ್ಲಿ ಮುದ್ದೆ ರಂಜಕ ಹಾಕಿಸಿಕೊಂಡು ಖಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೇ ಸುಮ್ಮನೆ ಅದರ ರುಚಿಯನ್ನು ಆಸ್ವಾದಿಸಿ.



Click it and Unblock the Notifications