Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮೊಳಕೆ ಬಂದ ಹೆಸರು ಬೇಳೆ ಪರೋಟ

ಹೆಸರುಕಾಳು 1 ಲೋಟ
ದೊಡ್ಡ ಈರುಳ್ಳಿ 2
ಟೊಮೇಟೊ 3
ಹಸಿಮೆಣಸಿನಕಾಯಿ 4
ಕೆಂಪು ಮೆಣಸಿನ ಪುಡಿ 2 ಚಮಚ
ಪುಡಿ ಉಪ್ಪು 2 ಚಮಚ
ಗರಂ ಮಸಾಲೆ ಪುಡಿ - 1 ಚಮಚ
ತಾಜಾ ತೆಂಗಿನಕಾಯಿ ತೂರಿ 4 ಚಮಚ
ಸಕ್ಕರೆ 2 ಚಮಚ (ಬೇಕಾದರೆ)
ಎಣ್ಣೆ 4 ಚಮಚ
ಮಾಡುವ ರೀತಿ :
ಮೊದಲು ಹೆಸರುಕಾಳನ್ನು ನೀರಿನಲ್ಲಿ ಎಂಟರಿಂದ ಹತ್ತು ಗಂಟೆಗಳ ಕಾಲ ನೆನೆಹಾಕಬೇಕು. ಶುದ್ದವಾದ ಬಿಳಿ ಮಲ್ಲಿನ ಬಟ್ಟೆಯಲ್ಲಿ ಅದನ್ನು ಸೋಸಿ ಕಟ್ಟಿಡಬೇಕು. 24 ಗಂಟೆಗಳಲ್ಲಿ ಮೊಳಕೆ ಬರುತ್ತದೆ. ಇಷ್ಟೊಂದು ಕೆಲ್ಸ ಯಾರು ಮಾಡ್ತಾರಪ್ಪಾ ಎನ್ನುವವರು ಮೊಳಕೆಬಂದ ಕಾಳನ್ನು ಹಾಪ್ ಕಾಂ ಮಳಿಗೆಯಿಂದ ತರಬಹುದು. ಮೊಳಕೆ ಕಾಳನ್ನು ಒಂದು ವಿಷಲ್ ಬರುವವರೆಗೆ ಬೇಯಿಸಿ. ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಬೇಳೆಯನ್ನು ನೀರನ್ನು ಸೇರಿಸದೆ ರುಬ್ಬಿಕೊಳ್ಳಿರಿ.
ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿರಿ. ಅದರಲ್ಲಿ ರುಬ್ಬಿಕೊಂಡ ಬೇಳೆಯನ್ನು ಸಣ್ಣ ಉರಿಯಲ್ಲಿ ನೀರು ಇಂಗುವವರೆಗೆ ಹುರಿಯಬೇಕು. ಇದನ್ನು ಸ್ಟೌವ್ ನಿಂದ ಇಳಿಸಿದ ನಂತರ ಒಣ ಮೆಣಸಿನಪುಡಿ ಉಪ್ಪು ಮುಂತಾದ ಒಣ ಸಾಮಗ್ರಿಗಳು ಹಾಗೂ ತೆಂಗಿನಕಾಯಿ ತುರಿಯೊಂದಿಗೆ ಬೆರೆಸಿರಿ.
ಪರೋಟಾ ಮಾಡುವುದಕ್ಕೆ ಗೋಧಿ ಹಿಟ್ಟು ಅರ್ಧ ಕೆಜಿ, ಮೈದಾ 100 ಗ್ರಾಂ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಬೇಕು. ಚೂರು ಚೂರೇ ಕೈ ಎಣ್ಣೆ ಮಾಡಿಕೊಂಡು ಚಪಾತಿ ಉಂಟೆಗಳನ್ನು ಮಾಡಿಕೊಂಡು ಲಟ್ಟಿಸಿದ ನಂತರ ಅದರ ಮೇಲೆ ಸ್ವಲ್ಪ ಒಣ ಗೋಧಿ ಹಿಟ್ಟನ್ನು ಸಿಂಪಡಿಸಿರಿ. ಇದನ್ನು ಸವರಿ, ಮಧ್ಯಕ್ಕೆ ಎರಡು ಸಲ ತ್ರಿಕೋನಾಕಾರ ಬರುವಂತೆ ಮಡಚಿರಿ. ಅರ್ಧ ಲಟ್ಟಿಸಿಕೊಂಡ ನಂತರ ರುಬ್ಬಿದ ಹೆಸರುಬೇಳೆ ಚಟ್ನಿಯನ್ನು ಹಿಟ್ಟಿನ ಮೇಲೆ ಇಟ್ಟು ಚೂರು ಗೋಧಿ ಹಿಟ್ಟನ್ನು ಲಟ್ಟಣಿಗೆಗೆ ಸವರಿಕೊಂಡು ನಿಧಾನವಾಗಿ ಲಟ್ಟಿಸಬೇಕು. ಈ ತಿಂಡಿ ಶಾಲೆಗೆ ಹೋಗುವ ಮಕ್ಕಳ ಡಬ್ಬಿ ಮತ್ತು ನಿಮ್ಮ ಊಟದ ಡಬ್ಬಿಗೆ ಆಗತ್ತೆ. ಮೊಸರು ಇದ್ದರೆ ಲೇಸು.
ತವ ಬಿಸಿ ಮಾಡಿಕೊಂಡು ಎಣ್ಣೆ ಹಾಕಿ ಚಪಾತಿಯನ್ನು ಬೇಯಿಸಿರಿ. ಬಿಸಿಬಿಸಿಯಾಗಿ ತಯಾರಿಸಿದ ಪರೋಟ ಬಡಿಸಿರಿ. ಈ ಪರೋಟಗಳನ್ನು ಉದ್ದುದ್ದವಾಗಿ ಮಡಚಿ, ನಂತರ ಅದನ್ನು ಉಂಡೆ ಮಾಡಿ ಮತ್ತೆ ಲಟ್ಟಿಸಿ ದಪ್ಪ ಪರೋಟ ಮಾಡಲೂಬಹುದು.



Click it and Unblock the Notifications