Latest Updates
-
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು?
ಮೊಳಕೆ ಬಂದ ಹೆಸರು ಬೇಳೆ ಪರೋಟ

ಹೆಸರುಕಾಳು 1 ಲೋಟ
ದೊಡ್ಡ ಈರುಳ್ಳಿ 2
ಟೊಮೇಟೊ 3
ಹಸಿಮೆಣಸಿನಕಾಯಿ 4
ಕೆಂಪು ಮೆಣಸಿನ ಪುಡಿ 2 ಚಮಚ
ಪುಡಿ ಉಪ್ಪು 2 ಚಮಚ
ಗರಂ ಮಸಾಲೆ ಪುಡಿ - 1 ಚಮಚ
ತಾಜಾ ತೆಂಗಿನಕಾಯಿ ತೂರಿ 4 ಚಮಚ
ಸಕ್ಕರೆ 2 ಚಮಚ (ಬೇಕಾದರೆ)
ಎಣ್ಣೆ 4 ಚಮಚ
ಮಾಡುವ ರೀತಿ :
ಮೊದಲು ಹೆಸರುಕಾಳನ್ನು ನೀರಿನಲ್ಲಿ ಎಂಟರಿಂದ ಹತ್ತು ಗಂಟೆಗಳ ಕಾಲ ನೆನೆಹಾಕಬೇಕು. ಶುದ್ದವಾದ ಬಿಳಿ ಮಲ್ಲಿನ ಬಟ್ಟೆಯಲ್ಲಿ ಅದನ್ನು ಸೋಸಿ ಕಟ್ಟಿಡಬೇಕು. 24 ಗಂಟೆಗಳಲ್ಲಿ ಮೊಳಕೆ ಬರುತ್ತದೆ. ಇಷ್ಟೊಂದು ಕೆಲ್ಸ ಯಾರು ಮಾಡ್ತಾರಪ್ಪಾ ಎನ್ನುವವರು ಮೊಳಕೆಬಂದ ಕಾಳನ್ನು ಹಾಪ್ ಕಾಂ ಮಳಿಗೆಯಿಂದ ತರಬಹುದು. ಮೊಳಕೆ ಕಾಳನ್ನು ಒಂದು ವಿಷಲ್ ಬರುವವರೆಗೆ ಬೇಯಿಸಿ. ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಬೇಳೆಯನ್ನು ನೀರನ್ನು ಸೇರಿಸದೆ ರುಬ್ಬಿಕೊಳ್ಳಿರಿ.
ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿರಿ. ಅದರಲ್ಲಿ ರುಬ್ಬಿಕೊಂಡ ಬೇಳೆಯನ್ನು ಸಣ್ಣ ಉರಿಯಲ್ಲಿ ನೀರು ಇಂಗುವವರೆಗೆ ಹುರಿಯಬೇಕು. ಇದನ್ನು ಸ್ಟೌವ್ ನಿಂದ ಇಳಿಸಿದ ನಂತರ ಒಣ ಮೆಣಸಿನಪುಡಿ ಉಪ್ಪು ಮುಂತಾದ ಒಣ ಸಾಮಗ್ರಿಗಳು ಹಾಗೂ ತೆಂಗಿನಕಾಯಿ ತುರಿಯೊಂದಿಗೆ ಬೆರೆಸಿರಿ.
ಪರೋಟಾ ಮಾಡುವುದಕ್ಕೆ ಗೋಧಿ ಹಿಟ್ಟು ಅರ್ಧ ಕೆಜಿ, ಮೈದಾ 100 ಗ್ರಾಂ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಬೇಕು. ಚೂರು ಚೂರೇ ಕೈ ಎಣ್ಣೆ ಮಾಡಿಕೊಂಡು ಚಪಾತಿ ಉಂಟೆಗಳನ್ನು ಮಾಡಿಕೊಂಡು ಲಟ್ಟಿಸಿದ ನಂತರ ಅದರ ಮೇಲೆ ಸ್ವಲ್ಪ ಒಣ ಗೋಧಿ ಹಿಟ್ಟನ್ನು ಸಿಂಪಡಿಸಿರಿ. ಇದನ್ನು ಸವರಿ, ಮಧ್ಯಕ್ಕೆ ಎರಡು ಸಲ ತ್ರಿಕೋನಾಕಾರ ಬರುವಂತೆ ಮಡಚಿರಿ. ಅರ್ಧ ಲಟ್ಟಿಸಿಕೊಂಡ ನಂತರ ರುಬ್ಬಿದ ಹೆಸರುಬೇಳೆ ಚಟ್ನಿಯನ್ನು ಹಿಟ್ಟಿನ ಮೇಲೆ ಇಟ್ಟು ಚೂರು ಗೋಧಿ ಹಿಟ್ಟನ್ನು ಲಟ್ಟಣಿಗೆಗೆ ಸವರಿಕೊಂಡು ನಿಧಾನವಾಗಿ ಲಟ್ಟಿಸಬೇಕು. ಈ ತಿಂಡಿ ಶಾಲೆಗೆ ಹೋಗುವ ಮಕ್ಕಳ ಡಬ್ಬಿ ಮತ್ತು ನಿಮ್ಮ ಊಟದ ಡಬ್ಬಿಗೆ ಆಗತ್ತೆ. ಮೊಸರು ಇದ್ದರೆ ಲೇಸು.
ತವ ಬಿಸಿ ಮಾಡಿಕೊಂಡು ಎಣ್ಣೆ ಹಾಕಿ ಚಪಾತಿಯನ್ನು ಬೇಯಿಸಿರಿ. ಬಿಸಿಬಿಸಿಯಾಗಿ ತಯಾರಿಸಿದ ಪರೋಟ ಬಡಿಸಿರಿ. ಈ ಪರೋಟಗಳನ್ನು ಉದ್ದುದ್ದವಾಗಿ ಮಡಚಿ, ನಂತರ ಅದನ್ನು ಉಂಡೆ ಮಾಡಿ ಮತ್ತೆ ಲಟ್ಟಿಸಿ ದಪ್ಪ ಪರೋಟ ಮಾಡಲೂಬಹುದು.



Click it and Unblock the Notifications