Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಶಿರಸಿಭವನದಲ್ಲಿ ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನಿ

* ತೇಜಸ್ವಿನಿ ಹೆಗಡೆ, ಬೆಂಗಳೂರು
ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನಿಯು ಬಹು ಉಪಯೋಗಿಯಾಗಿದೆ. ತಯಾರಿಸಲೂ ಬಲು ಸುಲಭ. ತುಂಬಾ ಸ್ವಾದಭರಿತ ಹಾಗೂ ಆರೋಗ್ಯಕರವಾದುದು ಕೂಡ. ಇದನ್ನು ತಯಾರಿಸಲು ಬಳಸುವ ಬೆಳ್ಳುಳ್ಳಿ ಗ್ಯಾಸ್ಟ್ರಿಕ್ ಸಮಸ್ಯೆ, ರಕ್ತ ಶುದ್ಧೀಕರಣಕ್ಕೆ ತುಂಬಾ ಉಪಯುಕ್ತವಾದರೆ ಕರಿಮೆಣಸಿನ ಕಾಳು(Pepper) ಶೀತ, ಕೆಮ್ಮಿಗೆ ರಾಮಬಾಣ. ಹಾಗಾಗಿಯೇ ಈ ಚಟ್ನಿಯನ್ನು ಬಾಣಂತಿಯರ ಚಟ್ನಿಯೆಂದೂ ಹೇಳುತ್ತಾರೆ. ಬಾಣಂತಿಯರು ಈ ಚಟ್ನಿಯನ್ನು ಊಟದ ಪ್ರಾರಂಭದಲ್ಲಿ ಒಂದು ಚಮಚ ಚಟ್ನಿಗೆ ಒಂದು ಚಮಚ ತುಪ್ಪವನ್ನು ಹಾಕಿ ಸೇವಿಸಿದರೆ ಕ್ಷೇಮ.
ಬೇಕಾಗುವ ಸಾಮಗ್ರಿಗಳು:
1. ಬೆಳ್ಳುಳ್ಳಿ - 10 ಎಸಳು (ಸುಮಾರು ಒಂದು ಗಡ್ಡೆ)
2. ಅಪ್ಪೆಮಿಡಿ - ಮೂರು (3)
3. ಕಡ್ಡಿಮೆಣಸು (ಕೆಂಪು ಮೆಣಸು) - 2
4. ತೆಂಗಿನ ಕಾಯಿ - ಅರ್ಧ ಭಾಗ.
5. ಕರಿಮೆಣಸಿನ ಕಾಳು (Pepper) - 1 ಚಮಚ. ವಿ.ಸೂ: 1) ಈ ಚಟ್ನಿಯನ್ನು ಬಾಣಂತಿಯರಿಗಾಗಿಯೇ ತಯಾರಿಸುವಾಗ, ಕೇವಲ ಕರಿಮೆಣಸನ್ನೇ ಬೇಕಿದ್ದರೆ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಹಾಕಿ. ಕೆಂಪುಮೆಣಸನ್ನು ಬಳಸದಿದ್ದರೆ ಒಳ್ಳೆಯದು. 2) ಉಪ್ಪಿನಲ್ಲಿ ಹಾಕಿದ ಮಿಡಿಯನ್ನೇ ಬಳಸುವುದರಿಂದ ಮೇಲಿನಿಂದ ಉಪ್ಪನ್ನು ಹಾಕದಿದ್ದರೆ ಒಳಿತು.
ತಯಾರಿಸುವ ವಿಧಾನ :
1. ಮೊದಲಿಗೆ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಸಿಪ್ಪೆಯನ್ನು ಸುಲಿದಿಟ್ಟುಕೊಳ್ಳಬೇಕು. ಅಪ್ಪೆಮಿಡಿಗಳನ್ನು ಚೆನ್ನಾಗಿ ತೊಳೆದು ಸಣ್ಣ ಚೂರಾಗಿಸಿಟ್ಟುಕೊಳ್ಳಬೇಕು.
2. ಬಾಣಲೆಗೆ 2 ಚಮಚ ತೆಂಗಿನೆಣ್ಣೆಯನ್ನು ಹಾಕಿ ಮೊದಲಿಗೆ ಬೆಳ್ಳುಳ್ಳಿಯನ್ನು ಹುರಿಯಬೇಕು. ಬೆಳ್ಳುಳ್ಳಿ ಎಸಳುಗಳು ಕಂದುಬಣ್ಣಕ್ಕೆ ತಿರುಗತೊಡಗಿದ್ದಾಗ, ಕಡ್ಡಿಮೆಣಸು ಚೂರುಗಳು ಹಾಗೂ ಮಾವಿನಮಿಡಿ ಚೂರುಗಳನ್ನು ಹಾಕಿ, ಮಿಡಿಯ ಚೂರುಗಳು ತುಸು ಬಾಡುವತನಕ ಹುರಿಯಬೇಕು.
3. ಹುರಿದ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿ ಹಾಗೂ ಕಾಳುಮೆಣಸನ್ನು ಜೊತೆಗೆ ಹಾಕಿ ನುಣ್ಣನೆ ರುಬ್ಬಬೇಕು. ಬಾಯಲ್ಲಿ ನೀರೂರಿಸುವ, ಆರೋಗ್ಯಕರ ಚಟ್ನಿ ಈಗ ತಿನ್ನಲು ರೆಡಿ.
ಈ ಚಟ್ನಿಯನ್ನು ತಯಾರಿಸಿದ ನಂತರ ಸ್ವಲ್ಪ ನೀರನ್ನು ಹಾಕಿ ಕುದಿಸಿ, ಆರಿಸಿ, ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಫ್ರಿಜ್ನಲ್ಲಿಟ್ಟರೆ, ಚಟ್ನಿ ಒಂದುವಾರದವರೆಗೂ ಬಳಕೆಗೆ ಬರುತ್ತದೆ. ಅದರ ಸ್ವಾದವೂ ಕೆಡುವುದಿಲ್ಲ.



Click it and Unblock the Notifications