Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಬೇಸಿಗೆಯ ಬಿಸಿಗೆ ಗಣಕೆ ಹಣ್ಣಿನ ಪಾನಕ
ಇದು ರಣರಣ ಬೇಸಿಗೆ ದಿನಗಳು. ದೇಹಕ್ಕೆ ತಂಪು ಮಾಡಿಕೊಳ್ಳಲೇಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ಜ್ಯೂಸ್ ಸೇವಿಸಬೇಕು. ವೆರೈಟಿ ಹಣ್ಣುಗಳು ದೇಹಕ್ಕೆ ತಂಪು ಮಾಡುವುದರ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ.

ನಾವಿಲ್ಲಿ ಗಣಕೆ ಹಣ್ಣಿನಿಂದ ಪಾನಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಗಣಕೆ ಸೊಪ್ಪನ್ನು ನಾವು ಮಾರುಕಟ್ಟೆಯಲ್ಲಿ ಗಮನಿಸಿರುತ್ತೇವೆ. ಆದರೆ ಹಣ್ಣುಗಳು ಮಾರಾಟವಾಗುವುದಿಲ್ಲ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಹಣ್ಣುಗಳು ಲಭ್ಯವಿದ್ದರೆ ಖಂಡಿತ ಪಾನಕ ಮಾಡಿ ಸೇವಿಸುವುದನ್ನು ಮರೆಯಬೇಡಿ.
ಯುರೋಪಿಯನ್ ನೈಟ್ ಶೇಡ್,ಬ್ಲಾಕ್ ನೈಟ್ ಶೇಡ್, ಬ್ಲಾಕ್ ಬೆರ್ರೀ ನೈಟ್ ಶೇಡ್, ಸೋಲಾನಮ್ ನಿಗ್ರಮ್ ಎಂದು ಇಂಗ್ಲೀಷಿನಲ್ಲಿ ಕರೆಯಲಾಗುವ ಈ ಹಣ್ಣಿಗೆ ಕನ್ನಡದಲ್ಲಿ ಕಾಕೆ ಹಣ್ಣು, ಗಣಕೆ ಹಣ್ಣು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಹಾಗಾದ್ರೆ ಈ ಹಣ್ಣಿನಿಂದ ಪಾನಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Juice
Serves: 1
-
ಬೇಕಾಗುವ ಸಾಮಗ್ರಿಗಳು
. ಗಣಕೆ ಹಣ್ಣು - 40 ರಿಂದ 50 ಹಣ್ಣುಗಳು
. ಸಕ್ಕರೆ - ಮೂರೂ ಚಮಚ
. ಉಪ್ಪು - ಚಿಟಿಕೆ
. ಕಾಳುಮೆಣಸು - ಎರಡು
. ಜೀರಿಗೆ - 10 ಕಾಳುಗಳು
-
ಮಾಡುವ ವಿಧಾನ
ಚೆನ್ನಾಗಿ ತೊಳೆದ ಗಣಕೆ ಹಣ್ಣುಗಳು, ಸಕ್ಕರೆ, ಉಪ್ಪು, ಕಾಳುಮೆಣಸು, ಜೀರಿಗೆ ಯನ್ನು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಜ್ಯೂಸರ್ ನಲ್ಲಿ ಕೂಡ ಮಾಡಬಹುದು.
ನಂತರ ಸೋಸಿಕೊಂಡರೆ ಗಣಕೆ ಹಣ್ಣಿನ ಪಾನಕ ಸಿದ್ಧವಾಗುತ್ತದೆ.
- ಗಣಕೆ ಹಣ್ಣುಗಳ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ . ರಕ್ತದ ಕಣಗಳನ್ನು ಹೆಚ್ಚಿಸುವುದಕ್ಕೆ ಇದು ಸಹಕಾರಿ . ದೇಹದ ಟಾಕ್ಸಿಕ್ ಅಂಶವನ್ನು ಹೊರಹಾಕುವುದಕ್ಕೆ ಸಹಕಾರಿ. . ಹೊಟ್ಟೆ ನೋವಿರುವವರು ಇದನ್ನು ಸೇವಿಸುವುದು ಒಳ್ಳೆಯದು. . ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. . ಹಲ್ಲುನೋವಿರುವವರು ಈ ಹಣ್ಣುಗಳನ್ನು ಸೇವಿಸುವುದು ಒಳಿತು



Click it and Unblock the Notifications