Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ಗುರುವು ತಾಯಿ ಬಗ್ಗೆ ಹೇಳುತ್ತಿದ್ದಾರೆ, ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು: ವೀಡಿಯೋ ವೈರಲ್
ಒಂದು ಅದ್ಭುತ ಭಾಷಣ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಶಾಲಾ ಮಕ್ಕಳನ್ನು ಕೂರಿಸಿ ಗುರುಗಳು ತಂದೆ ತಾಯಿಯ ಮಹತ್ವದ ಬಗ್ಗೆ ಹೇಳುತ್ತಿದ್ದರೆ ಅದನ್ನು ಕೇಳಿದ ಮಕ್ಕಳ ಕಣ್ಣಿನಲ್ಲಿ ಕಣ್ಣೀರಧಾರೆ. ಒಂದೆರಡು ಮಕ್ಕಳಲ್ಲ, ಅಲ್ಲಿ ಕೂತಿದ್ದ ಮಕ್ಕಳು ಅಳಲು ಆರಂಭಿಸಿದರು, ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಆ ಭಾಷಣ ಕೇಳಿದ ಮಕ್ಕಳು ಮುಂದೆ ಖಂಡಿತ ಅವರು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಲ್ಲ, ಈ ಕ್ಷಣದಿಂದ ಅವರ ಕಣ್ಣಿಗೆ ತಾಯಿ-ತಂದೆ ದೇವರೆಂತೆ ಕಾಣಿಸಲಾರಂಭಿಸುತ್ತಾರೆ.

ಅಬ್ಬಾ ಮಕ್ಕಳಿಗೆ ಅವರ ಹುಟ್ಟು, ಅಮ್ಮ ಅದಕ್ಕೆ ಪಟ್ಟ ಕೆಲಸ ಹೇಳುತ್ತಿದ್ದಾರೆ ಅಲ್ಲಿರುವ ಮಕ್ಕಳ ಎದೆಗೆ ನಾಟುತ್ತಿತ್ತು, ಅಲ್ಲಿರುವ ಮಕ್ಕಳು ಅಯ್ಯೋ ನನ್ನ ತಾಯಿಗೆ ಹೀಗೆಲ್ಲಾ ಮಾಡಿದೆ, ಅವಳಿಗೆಷ್ಟು ಬೇಸರ ಮಾಡಿದೆ ಎಂಬ ಪಶ್ಚಾತಾಪ ಕಾಡಲಾರಂಭಿಸುತ್ತಿದ್ದಂತೆ ಅಳಲಾರಂಭಿಸುತ್ತಾರೆ. ಅಮ್ಮನ ಮಹತ್ವದ ಬಗ್ಗೆ ಆ ಗುರು ಹೇಳುತ್ತಿದ್ದರೆ ಅಯ್ಯೋ ನನ್ನ ಅಮ್ಮನಿಗೆ ನಾನು ಹೀಗೆ ನೋಯಿಸಿದೆ ಅಲ್ವಾ, ಇನ್ಮುಂದೆ ಯಾವುದೇ ಕಾರಣಕ್ಕೆ ನಾನು ನನ್ನ ತಾಯಿಯನ್ನು ನೋಯಿಸಲ್ಲ ಎಂದು ಆ ಮಕ್ಕಳು ಅಂದುಕೊಂಡಿರುತ್ತಾರೆ.
ಚಿಕ್ಕ ಪ್ರಾಯದಲ್ಲಿ ತಾಯಿ-ತಂದೆಯ ಮೌಲ್ಯವನ್ನು ಹೀಗೆ ಮನಸ್ಸಿಗೆ ನಾಟುವಂತೆ ಹೇಳುವ ಅವಶ್ಯಕತೆ ಇದೆ
ಆ ಗುರು ಮುಖ್ಯವಾಗಿ ಹೆತ್ತ ತಾಯಿಯ ಮಹತ್ವ ಹೇಳುತ್ತಿದ್ದರು. ತಾಯಿಯನ್ನು ಹೇಗೆ ನಮ್ಮ ಕೆಲಸದವರಂತೆ ನಡೆಸಿಕೊಳ್ಳುತ್ತೇವೆ, ಅದೇ ಅವಳು ನಮ್ಮನ್ನು ಈ ಭೂಮಿಗೆ ತರುವಾಗ, ತಂದ ಮೇಲೆ ಬೆಳೆಸಲು ಎಷ್ಟೊಂದು ಕಷ್ಟಪಟ್ಟಿದ್ದಾಳೆ ಎಂಬುವುದನ್ನು ಮನಸ್ಸಿಗೆ ನಾಟುವಂತೆ ಹೇಳಿದ್ದಾರೆ, ಇದನ್ನು ಕೇಳುತ್ತಿದ್ದಂತೆ ಅಮ್ಮ ನಮ್ಮ ಬದುಕಿನ ದೇವತೆ ಎಂದು ಅರಿತುಕೊಳ್ಳುತ್ತಾರೆ, ಎಲ್ಲಾ ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಅಮ್ಮನ ಮನಸ್ಸಿಗೆ ನೋವಾಗುವ ಮಾತಗಳನ್ನಾಡಿರುತ್ತಾರೆ, ಅದನ್ನು ನೆನೆದು ಬಿಕ್ಕಿ ಬಿಕ್ಕಿ ಅಳಲಾರಂಭಿಸುತ್ತಾರೆ.
ಪೋಷಕರ ಮೇಲೆ ಚಿಕ್ಕ ಪ್ರಾಯದಲ್ಲಿ ಪ್ರೀತಿ ಮೂಡಿದರೆ ನಂತರ ಅವರನ್ನು ವೃದ್ದಾಶ್ರಮಕ್ಕೆ ಬಿಡಲ್ಲ
ವರ್ಷದಿಂದ ವರ್ಷಕ್ಕೆ ವೃದ್ಧಾಶ್ರಮಗಳು ಹೆಚ್ಚಾಗುವುದನ್ನು ನೋಡುವಾಗ ಅಯ್ಯೋ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಕಾಡುವುದು, ಅಷ್ಟು ಕಷ್ಟಪಟ್ಟು ಸಾಕಿದ ಪೋಷಕರನ್ನು ವೃದ್ದಾಶ್ರಮಕ್ಕೆ ಬಿಡುತ್ತಾರಲ್ಲಾ ಎಂದು ಆ ಮಕ್ಕಳ ಮೇಲೆ ಬೇಸರ ಮೂಡುತ್ತೆ, ಆದರೆ ಆ ಮಕ್ಕಳಿಗೆ ತನ್ನ ತಂದೆ-ತಾಯಿಯ ಬೆಲೆ ಗೊತ್ತಿರಲ್ಲ, ಹೀಗಾಗಿ ವಯಸಸ್ಸು ಕಾಲದಲ್ಲಿ ಅವರಿಗೆ ಆಸರೆಯಾಗಲ್ಲ.
ಇಂಥ ಪ್ರೇರಣಾತ್ಮಕ ಮಾತುಗಳನ್ನು ಕೇಳಿ ಬೆಳೆಯಬೇಕು ಮಕ್ಕಳು
ಈ ಭಾಷಣ ಕೇಳಿ ಅತ್ತ ಅಷ್ಟೂ ಮಕ್ಕಳು ಮುಂದೆ ತನ್ನ ತಾಯಿಗೆ ನೋವುಂಟು ಮಾಡುವ ಕಾರ್ಯ ಮಾಡಲ್ಲ, ಏಕೆಂದರೆ ಗುರುಗಳು ತಮ್ಮ ಮಾತುಗಳ ಮೂಲಕ ಮಕ್ಕಳ ಮನಸ್ಸಿನಲ್ಲಿ ತಾಯಿಗ ಭದ್ರ ಸ್ಥಾನ ಕೊಡಿಸಿದ್ದಾರೆ.
ಈಗೀನ ಮಕ್ಕಳು ಬಿದ್ಧಿವಂತರು, ಆದರೆ ಅವರಿಗೆ ಇಂಥ ಬದುಕಿನ ಪಾಠಗಳನ್ನೂ ಹೇಳಿಕೊಡಬೇಕು.



Click it and Unblock the Notifications