Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಈ ಪರಿಸ್ಥಿತಿಗಳಿದ್ದರೆ ಅಬಾರ್ಷನ್ ಅವಶ್ಯಕ
ಗರ್ಭಪಾತ ಮಾಡಿಸುವುದು ಕಾನೂನಿನ ಪ್ರಕಾರ ತಪ್ಪು. ಆದರೆ ಗರ್ಭದಲ್ಲಿರುವ ಮಗು ಸರಿಯಾಗಿ ಬೆಳವಣಿಗೆ ಹೊಂದದಿದ್ದರೆ, ತಾಯಿಗೆ ಏನಾದರೂ ಆರೋಗ್ಯದ ಸಮಸ್ಯೆ ಇದ್ದರೆ ಗರ್ಭಪಾತ ಮಾಡಿಸಬಹುದು ಎಂಬ ಕಾನೂನು ಇದೆ.
ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ಅಬಾರ್ಷನ್ ಮಾಡಿಸದಿದ್ದರೆ ತಾಯಿಯ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಒಂದು ವೇಳೆ ಮಗು ಹುಟ್ಟಿದರೂ ಅಂತಹ ಮಗು ಆರೋಗ್ಯದಿಂದ ಕೂಡಿರುವುದಿಲ್ಲ. ಆದ್ದರಿಂದ ಈ ಕೆಳಗಿನ ಸಂದರ್ಭಗಳಲ್ಲಿ ಅಬಾರ್ಷನ್ ಒಳ್ಳೆಯದು:

ಗರ್ಭಿಣಿಯಾಗಿದ್ದಾಗ ಚಿಕನ್ ಫಾಕ್ಸ್ ಬಂದರೆ
ಗರ್ಭಿಣಿಯಾಗಿದ್ದಾಗ ಚಿಕನ್ ಫಾಕ್ಸ್ ಬಂದರೆ ಕೂಡಲೇ ಅಬಾರ್ಷನ್ ಮಾಡಿಸುವುದು ಒಳ್ಳೆಯದು. ಏಕೆಂದರೆ ಚಿಕನ್ ಪಾಕ್ಸ್ ವೈರಸ್ ದೇಹದಲ್ಲಿ ಕಡಿಮೆಯೆಂದರೂ 3 ತಿಂಗಳಕಾಲ ಇರುತ್ತದೆ. ಇವು ಗರ್ಭದಲ್ಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಅಬಾರ್ಷನ್ ಮಾಡಿಸಿದರೆ ಒಳ್ಳೆಯದು.
ಕ್ಯಾನ್ಸರ್
ಗರ್ಭಿಣಿಯಾಗಿದ್ದಾಗ ಕ್ಯಾನ್ಸರ್ ಎಂದು ಗೊತ್ತಾದರೆ ಕೂಡಲೇ ಅಬಾರ್ಷನ್ ಮಾಡಿಸಬೇಕು. ಇಲ್ಲದಿದ್ದರೆ ಕ್ಯಾನ್ಸರ್ ಗೆ ತೆಗೆದುಕೊಳ್ಳುವ ಚಿಕಿತ್ಸೆ ಮಗುವಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಮಗುವಿನಲ್ಲಿ ನ್ಯೂನತೆ ಇದ್ದರೆ
ಸ್ಕ್ಯಾನಿಂಗ್ ಮಾಡಿಸಿದಾಗ ಮಗುವಿನಲ್ಲಿ ನ್ಯೂನತೆ ಇದ್ದರೆ ಗರ್ಭಪಾತ ಮಾಡಿಸುವುದು ಒಳ್ಳೆಯದು.
ಗರ್ಭಪಾತವಾಗುವ ಸಾಧ್ಯತೆ ಇದ್ದರೆ
ಅನಾರೋಗ್ಯದ ಕಾರಣದಿಂದ ಗರ್ಭಪಾತವಾಗುವ ಸಾಧ್ಯತೆ 99% ಇದ್ದರೆ ಅಬಾರ್ಷನ್ ಮಾಡಿಸಬೇಕು. ಇಲ್ಲದಿದ್ದರೆ ಗರ್ಭಪಾತವಾಗಿ ಮಹಿಳೆಯ ಸ್ಥಿತಿ ಚಿಂತಾಜನಕವಾಗುವುದು.
ಲೈಂಗಿಕ ಕಾಯಿಲೆ ಇದ್ದರೆ
ಲೈಂಗಿಕ ಕಾಯಿಲೆ ಇದ್ದರೆ ಅದು ಮಗುವಿಗೆ ಬರುವ ಸಾಧ್ಯತೆ ಹೆಚ್ಚು. ಮಗುವಿಗೆ ಕೂಡ ಆ ಕಾಯಿಲೆ ಬರಬಹುದೆಂದು ವೈದ್ಯರು ಹೇಳಿದರೆ ಅಬಾರ್ಷನ್ ಮಾಡಿಸುವುದು ಒಳ್ಳೆಯದು.
ಮಧುಮೇಹವಿದ್ದರೆ
ಮಧುಮೇಹಿ ಗರ್ಭಿಣಿಯ ರಕ್ತದಲ್ಲಿ ಸಕ್ಕರೆಯಂಶ ಅಧಿಕವಾದರೆ ಅಬಾರ್ಷನ್ ಮಾಡಿಸುವುದು ತಾಯಿಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಥೈರಾಯ್ಡ್ ಅಧಿಕವಾದರೆ
ಥೈರಾಯ್ಡ್ ಕಾಯಿಲೆ ಅಧಿಕವಾದರೆ ಗರ್ಭಪಾತವಾಗುವುದು, ಇದರ ಬದಲು ಗರ್ಭಪಾತ ಮಾಡಿಸಿದರೆ ಮಹಿಳೆಯ ಪ್ರಾಣವನ್ನು ಕಾಪಾಡಬಹುದು.



Click it and Unblock the Notifications