Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹೆರಿಗೆಯ ನಂತರದ ಕೂದಲುದುರುವಿಕೆ ತಡೆಯಲು ಐದು ವಿಧಾನಗಳು
ನೀವು ಈಗಷ್ಟೇ ಮಗುವನ್ನು ಪಡೆದು ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದೀರಾ? ಈ ಸಂತೋಷವನ್ನು ಅನುಭವಿಸುವುದರ ಜೊತೆಗೆ ನಿಮ್ಮ ದೇಹದ ಬಗ್ಗೆ ಕಾಳಜಿ ಕೂಡ ಅಷ್ಟೇ ಮುಖ್ಯವಾಗಿದೆ.ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರ ಮುಖದ ಕಾಂತಿಯನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಾರೆ ಆದರೆ ಕೂದಲಿನ ಕಾಳಜಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟಿರುತ್ತಾರೆ.ಮಗು ಹುಟ್ಟಿದ ನಂತರ ತಾಯಿಯ ಈಸ್ಟ್ರೋಜೆನ್ ಮಟ್ಟದಲ್ಲಿ ಏರುಪೇರು ಕಂಡು ಬರುವುದರಿಂದ ಕೂದಲುದುರುವಿಕೆ ಸಾಮಾನ್ಯ.ನೀವೂ ಕೂಡ ಕೂದಲಿನ ಆರೈಕೆಗೆ ಸರಿಯಾದ ಮಾರ್ಗ ಹುಡುಕುತ್ತಿದ್ದಲ್ಲಿ ಈ ಕೆಳಗೆ ನೀಡಲಾಗಿರುವ ಐದು ವಿಧಾನಗಳನ್ನು ಪಾಲಿಸಿ.

ಮೊಟ್ಟೆಯ ಬಿಳಿ ಭಾಗ
ನಿಮಗೆ ಬೇರೇನನ್ನು ಮಾಡಲು ಸಮಯವಿಲ್ಲದಿದ್ದರೆ ಮೂರು ಚಮಚ ಆಲೀವ್ ಎಣ್ಣೆಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಕೂದಲಿಗೆ ಹಚ್ಚಿ ಇದರಿಂದ ಸಿಗುವ ಫಲಿತಾಂಶ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ.ಇದು ನಿಮ್ಮ ಕೂದಲಿಗೆ ಬೇಕಾದ ನುಣುಪನ್ನು ನೀಡಿ ಕೂದಲ ಪೋಷಣೆ ಮಾಡುತ್ತದೆ.

ಮೆಂತೆ ಕಾಳು
ಕೂದಲು ಉದುರುವಿಕೆ ತಡೆಯುವಲ್ಲಿ ಮೆಂತೆ ಕಾಳು ಹೆಚ್ಚು ಕೆಲಸ ಮಾಡುತ್ತದೆ. ಮೆಂತೆಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ ಈ ನೀರನ್ನು ಕೂದಲಿಗೆ ಮರುದಿನ ಬೆಳಗ್ಗೆ ಹಚ್ಚಿ ಇದನ್ನು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಿ.ಇದು ಕೂದಲನ್ನು ಆರೋಗ್ಯಯುತವಾಗಿ ಮಾಡುವುದರ ಜೊತೆಗೆ ತಲೆಹೊಟ್ಟನ್ನು ಕೂಡ ಹೋಗಲಾಡಿಸುತ್ತದೆ.

ಮೊಸರು
ಇದು ಕೂದಲಿಗೆ ಅತ್ಯುತ್ತಮ ಟಾನಿಕ್.ಸ್ವಲ್ಪ ಕಡೆದ ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ.ಇದರಿಂದ ದೊರೆತ ಫಲಿತಾಂಶದಿಂದ ನೀವು ನಿಮ್ಮ ಕೂದಲನ್ನು ಇಷ್ಟಪಡಲು ಪ್ರಾರಂಭಿಸುತ್ತೀರಿ.

ಕಾಯಿ ಹಾಲು
ಕೊಬ್ಬರಿ ಎಣ್ಣೆ ಬಳಸುವುದರಿಂದ ಕೂದಲು ಉದುರುವಿಕೆ ತಡೆಯಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯ.ಆದರೆ ಹೆಚ್ಚಿನ ಜನರಿಗೆ ಕಾಯಿ ಹಾಲು ಬಳಸುವುದರಿಂದ ಕೂದಲು ಉದುರುವುದು ಮಾತ್ರವಲ್ಲ,ಕೂದಲ ಬೆಳವಣಿಗೆ ಕೂಡ ಹೆಚ್ಚುತ್ತದೆ ಎಂಬುದು ತಿಳಿದಿಲ್ಲ.ನಿಯಮಿತವಾಗಿ ಕೂದಲಿಗೆ ಕಾಯಿ ಹಾಲು ಬಳಸುವುದರಿಂದ ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ.

ಭೃ೦ಗರಾಜ ತೈಲ
ಎಲ್ಲೆಡೆ ಸುಲಭವಾಗಿ ದೊರಕುವ ಭೃ೦ಗರಾ ಅಥವಾ ಫಾಲ್ಸ್ ಡೈಸಿ ಎಂದೇ ಕರೆಯಲ್ಪಡುವ ಸಸ್ಯವು ಕೂದಲು ಉದುರುವಿಕೆ ತಡೆಯಲು ಅನುಕೂಲಕರ.ಒಂದು ಮುಷ್ಠಿ ಭೃಂಗರಾಜ ಎಲೆಗಳನ್ನು ತೆಗೆದುಕೊಳ್ಳಿ ನಂತರ ಇದನ್ನು ಸಂಪೂರ್ಣ ಪೇಸ್ಟ್ ತಯಾರಿಸಿಕೊಳ್ಳಿ.ಇದನ್ನು ಹಾಗೆಯೇ ಕೂದಲಿಗೆ ಹಚ್ಚಬಹುದು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಕೂಡ ಬಳಸಬಹುದು.



Click it and Unblock the Notifications









