Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆರಿಗೆಯ ನಂತರದ ಕೂದಲುದುರುವಿಕೆ ತಡೆಯಲು ಐದು ವಿಧಾನಗಳು
ನೀವು ಈಗಷ್ಟೇ ಮಗುವನ್ನು ಪಡೆದು ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದೀರಾ? ಈ ಸಂತೋಷವನ್ನು ಅನುಭವಿಸುವುದರ ಜೊತೆಗೆ ನಿಮ್ಮ ದೇಹದ ಬಗ್ಗೆ ಕಾಳಜಿ ಕೂಡ ಅಷ್ಟೇ ಮುಖ್ಯವಾಗಿದೆ.ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರ ಮುಖದ ಕಾಂತಿಯನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಾರೆ ಆದರೆ ಕೂದಲಿನ ಕಾಳಜಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟಿರುತ್ತಾರೆ.ಮಗು ಹುಟ್ಟಿದ ನಂತರ ತಾಯಿಯ ಈಸ್ಟ್ರೋಜೆನ್ ಮಟ್ಟದಲ್ಲಿ ಏರುಪೇರು ಕಂಡು ಬರುವುದರಿಂದ ಕೂದಲುದುರುವಿಕೆ ಸಾಮಾನ್ಯ.ನೀವೂ ಕೂಡ ಕೂದಲಿನ ಆರೈಕೆಗೆ ಸರಿಯಾದ ಮಾರ್ಗ ಹುಡುಕುತ್ತಿದ್ದಲ್ಲಿ ಈ ಕೆಳಗೆ ನೀಡಲಾಗಿರುವ ಐದು ವಿಧಾನಗಳನ್ನು ಪಾಲಿಸಿ.

ಮೊಟ್ಟೆಯ ಬಿಳಿ ಭಾಗ
ನಿಮಗೆ ಬೇರೇನನ್ನು ಮಾಡಲು ಸಮಯವಿಲ್ಲದಿದ್ದರೆ ಮೂರು ಚಮಚ ಆಲೀವ್ ಎಣ್ಣೆಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಕೂದಲಿಗೆ ಹಚ್ಚಿ ಇದರಿಂದ ಸಿಗುವ ಫಲಿತಾಂಶ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ.ಇದು ನಿಮ್ಮ ಕೂದಲಿಗೆ ಬೇಕಾದ ನುಣುಪನ್ನು ನೀಡಿ ಕೂದಲ ಪೋಷಣೆ ಮಾಡುತ್ತದೆ.

ಮೆಂತೆ ಕಾಳು
ಕೂದಲು ಉದುರುವಿಕೆ ತಡೆಯುವಲ್ಲಿ ಮೆಂತೆ ಕಾಳು ಹೆಚ್ಚು ಕೆಲಸ ಮಾಡುತ್ತದೆ. ಮೆಂತೆಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ ಈ ನೀರನ್ನು ಕೂದಲಿಗೆ ಮರುದಿನ ಬೆಳಗ್ಗೆ ಹಚ್ಚಿ ಇದನ್ನು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಿ.ಇದು ಕೂದಲನ್ನು ಆರೋಗ್ಯಯುತವಾಗಿ ಮಾಡುವುದರ ಜೊತೆಗೆ ತಲೆಹೊಟ್ಟನ್ನು ಕೂಡ ಹೋಗಲಾಡಿಸುತ್ತದೆ.

ಮೊಸರು
ಇದು ಕೂದಲಿಗೆ ಅತ್ಯುತ್ತಮ ಟಾನಿಕ್.ಸ್ವಲ್ಪ ಕಡೆದ ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ.ಇದರಿಂದ ದೊರೆತ ಫಲಿತಾಂಶದಿಂದ ನೀವು ನಿಮ್ಮ ಕೂದಲನ್ನು ಇಷ್ಟಪಡಲು ಪ್ರಾರಂಭಿಸುತ್ತೀರಿ.

ಕಾಯಿ ಹಾಲು
ಕೊಬ್ಬರಿ ಎಣ್ಣೆ ಬಳಸುವುದರಿಂದ ಕೂದಲು ಉದುರುವಿಕೆ ತಡೆಯಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯ.ಆದರೆ ಹೆಚ್ಚಿನ ಜನರಿಗೆ ಕಾಯಿ ಹಾಲು ಬಳಸುವುದರಿಂದ ಕೂದಲು ಉದುರುವುದು ಮಾತ್ರವಲ್ಲ,ಕೂದಲ ಬೆಳವಣಿಗೆ ಕೂಡ ಹೆಚ್ಚುತ್ತದೆ ಎಂಬುದು ತಿಳಿದಿಲ್ಲ.ನಿಯಮಿತವಾಗಿ ಕೂದಲಿಗೆ ಕಾಯಿ ಹಾಲು ಬಳಸುವುದರಿಂದ ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ.

ಭೃ೦ಗರಾಜ ತೈಲ
ಎಲ್ಲೆಡೆ ಸುಲಭವಾಗಿ ದೊರಕುವ ಭೃ೦ಗರಾ ಅಥವಾ ಫಾಲ್ಸ್ ಡೈಸಿ ಎಂದೇ ಕರೆಯಲ್ಪಡುವ ಸಸ್ಯವು ಕೂದಲು ಉದುರುವಿಕೆ ತಡೆಯಲು ಅನುಕೂಲಕರ.ಒಂದು ಮುಷ್ಠಿ ಭೃಂಗರಾಜ ಎಲೆಗಳನ್ನು ತೆಗೆದುಕೊಳ್ಳಿ ನಂತರ ಇದನ್ನು ಸಂಪೂರ್ಣ ಪೇಸ್ಟ್ ತಯಾರಿಸಿಕೊಳ್ಳಿ.ಇದನ್ನು ಹಾಗೆಯೇ ಕೂದಲಿಗೆ ಹಚ್ಚಬಹುದು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಕೂಡ ಬಳಸಬಹುದು.



Click it and Unblock the Notifications