Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಈ ರೀತಿ ಮಕ್ಕಳನ್ನು ಬೆಳೆಸಿದ್ರೆ ಮಕ್ಕಳು ದಾರಿ ತಪ್ಪೋದು ಗ್ಯಾರಂಟಿ!
ಎಲ್ಲಾ ಪೋಷಕರು ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಮಕ್ಕಳನ್ನು ಸಾಕುತ್ತಾರೆ. ಮಕ್ಕಳನ್ನು ಬೆಳೆಸೋದನ್ನು ಕೆಲವೊಂದು ಸಲ ಅವರು ತಮ್ಮ ಸ್ವಂತ ಅನುಭವಗಳಿಂದ ಕಲಿತುಕೊಂಡಿರುತ್ತಾರೆ. ಇನ್ನೂ ಕೆಲವು ಸಲ ತಮ್ಮ ಪೋಷಕರು ಅಥವಾ ಬೇರೆಯವರನ್ನು ನೋಡಿ, ಅಥವಾ ಹೇಳಿದ ಮಾತನ್ನು ಕೇಳಿ ಕಲಿತಿರುತ್ತಾರೆ.
ಪೋಷಕರು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ಅವರು ಮಕ್ಕಳನ್ನು ಬೆಳೆಸುವ ರೀತಿ ಯಾವುದೇ ಕಾರಣಕ್ಕೂ ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗದೇ ಇರೋ ರೀತಿಯಲ್ಲಿ ನೋಡಿಕೊಳ್ಳಬೇಕು. ಆದರೆ ಕೆಲವೊಂದು ಸಲ ಪೋಷಕರು ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿ ಅವರ ಭವಿಷ್ಯಕ್ಕೆ ತೊಂದರೆಯುಂಟು ಮಾಡಬಹುದು. ಅಷ್ಟಕ್ಕು ಪೋಷಕರು ಮಕ್ಕಳನ್ನು ಬೆಳೆಸುವಾಗ ಮಾಡುವ ತಪ್ಪುಗಳು ಯಾವುದು ಅನ್ನೋದನ್ನು ನೋಡೋಣ.

1. ಮಕ್ಕಳಿಗೆ ಸ್ಪಂದಿಸದೇ ಇರುವುದು
ಪೋಷಕರು ಅಂದ ಮೇಲೆ ಮಕ್ಕಳ ಬೇಕು-ಬೇಡಗಳಿಗೆ ಸ್ಪಂದಿಸಬೇಕು. ಹಾಗೂ ಅವರ ಬಗ್ಗೆ ಕಾಳಜಿ ಮಾಡಬೇಕು. ಆದರೆ ಕೆಲ ಮಕ್ಕಳಿಗೆ ಏನೇ ಆದ್ರೂ ಮಕ್ಕಳ ಬಗ್ಗೆ ಒಂಚೂರು ಕಾಳಜಿಯನ್ನೇ ಮಾಡೋದಿಲ್ಲ. ಮಕ್ಕಳ ಮಾತಿಗೆ ಕಿವಿಗೊಡೋದಾಗಲಿ, ಅವರಿಗೆ ಬುದ್ಧಿ ಹೇಳೋದನ್ನು ಎಂದಿಗೂ ಮಾಡೋದಿಲ್ಲ. ಮಕ್ಕಳು ಅವರಾಗಿಯೇ ಏನನ್ನಾದರೂ ಕೇಳಿದರೆ ಆ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದರಿಂದ ನಿಮ್ಮ ಮಕ್ಕಳು ಹಾಳಾಗುವ ಸಾಧ್ಯತೆಯೂ ಇರುತ್ತದೆ. ಇಲ್ಲದಿದ್ದರೆ ಅಪ್ಪ- ಅಮ್ಮನ ಪ್ರೀತಿ ಸಿಗಲಿಲ್ಲವೆಂದು ಖಿನ್ನತೆಗೂ ಒಳಗಾಗುವ ಅಪಾಯ ಹೆಚ್ಚಿದೆ.
2. ಪೋಷಕರು ಮಕ್ಕಳ ವೈಯಕ್ತಿಕ ಬದುಕಿನಲ್ಲಿ ಹೆಚ್ಚು ಮೂಗು ತೂರಿಸೋದು!
ಕೆಲವು ಪೋಷಕರಂತೂ ಮಕ್ಕಳ ಬಗ್ಗೆ ಅತಿಯಾಗಿ ಕಾಳಜಿ ಮಾಡುತ್ತಾರೆ. ಮಕ್ಕಳ ಪ್ರತಿಯೊಂದು ವಿಚಾರದಲ್ಲೂ ಪೋಷಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಕ್ಕಳಿಂದ ಒಂಚೂರು ತಪ್ಪಾಗದಂತೆ ಕಾಳಜಿ ವಹಿಸುತ್ತಾರೆ. ಎಲ್ಲಾ ವಿಚಾರಗಳಲ್ಲಿ ಅವರು ಪರಿಪೂರ್ಣರಾಗಿರಬೇಕೆಂದು ಪೋಷಕರು ಬಯಸುತ್ತಾರೆ. ಹೀಗಾಗಿ ಮಕ್ಕಳು ಪೋಷಕರ ಮೇಲೆ ಒಂದು ರೀತಿ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಮಕ್ಕಳಿಗೆ ಏಕಾಏಕಿ ಸಂಕಷ್ಟಗಳು ಎದುರಾದಾಗ ಅದನ್ನು ಯಾವ ರೀತಿ ಎದುರಿಸಬೇಕು ಅನ್ನೋದು ಅವರಿಗೆ ಗೊತ್ತಿರೋದಿಲ್ಲ.
3. ಮಕ್ಕಳಿಗೆ ಕಷ್ಟದ ಬಗ್ಗೆ ಗೊತ್ತು ಮಾಡಿಸದೇ ಇರುವುದು
ಇದು ಕೂಡ ಪೋಷಕರ ಅತಿಯಾದ ಕಾಳಜಿಯ ಒಂದು ಭಾಗವಷ್ಟೇ. ಇಲ್ಲಿ ಮಕ್ಕಳಿಗೆ ಕಷ್ಟಗಳು ಅಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಮಕ್ಕಳಿಗೆ ಯಾವುದಾದರೂ ಕಷ್ಟ ಎದುರಾಗೋ ಮೊದಲು ಪೋಷಕರು ಅದಕ್ಕೆ ಪರಿಹಾರ ಹುಡುಕಿರುತ್ತಾರೆ. ಮಕ್ಕಳು ಎಷ್ಟೇ ದೊಡ್ಡವರಾದ್ರೂ ಕೂಡ ಎಲ್ಲಾ ಕೆಲಸವನ್ನೂ ಪೋಷಕರೇ ಮಾಡುತ್ತಾರೆ. ಊಟ ಮಾಡಿದ ತಟ್ಟೆ ತೊಳೊಯೋದಕ್ಕೂ ಆ ಮಕ್ಕಳಿಗೆ ಗೊತ್ತಿರೋದಿಲ್ಲ. ಹೀಗೆ ಗಿಣಿಯಂತೆ ಸಾಕಿದ ಮಕ್ಕಳು ಭವಿಷ್ಯದಲ್ಲಿ ಎದುರಾಗೋ ದೊಡ್ಡ ದೊಡ್ಡ ಸಮಸ್ಯೆಗಳ ಮುಂದೆ ಕುಗ್ಗಿ ಹೋಗುತ್ತಾರೆ.
ಪೋಷಕರು ಮಾಡಬೇಕಾಗಿರೋದು ಏನು?
ಹುಟ್ಟುತ್ತಲೇ ಯಾರಿಗೂ ಯಾವ ವಿಚಾರದ ಬಗ್ಗೆನೂ ಗೊತ್ತಿರೋದಿಲ್ಲ. ಆದರೆ ಮಕ್ಕಳಿಗೆ ಅದನ್ನು ಹಂತ ಹಂತವಾಗಿ ಕಲಿಸಿ ಕೊಡೋದು ಪೋಷಕರ ಕರ್ತವ್ಯ. ಮಕ್ಕಳಿಗೆ ಕಷ್ಟ ಹಾಗೂ ಸುಖಕ್ಕಿರುವ ವ್ಯತ್ಯಾಸವನ್ನು ಮೊದಲು ಅರ್ಥ ಮಾಡಿಸಿ. ಕೆಲವೊಂದು ವಿಚಾರಗಳನ್ನು ಅವರಾಗಿಯೇ ಕಲಿಯೋದಕ್ಕೆ ಅವಕಾಶ ನೀಡಿ. ಆಗ ಅವರ ಯೋಚನಾ ಸಾಮರ್ಥ್ಯ ಹಾಗೂ ಕೌಶಲ್ಯಗಳು ಕೂಡ ಹೆಚ್ಚಾಗುತ್ತದೆ.
ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದೆ. ನಾವು ಯಾವ ರೀತಿಯ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬುತ್ತೇವೆಯೋ ದೊಡ್ಡವರಾದ ಮೇಲೆ ಅವರು ಕೂಡ ಅಂತಹದ್ದೇ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳನ್ನು ಬೆಳೆಸುವ ಹಂತದಲ್ಲಿ ಪೋಷಕರು ಜಾಗರೂಕರಾಗಿ ಇರಬೇಕು. ಹಾಗೂ ಯಾವುದೇ ಕಾರಣಕ್ಕೂ ತಪ್ಪು ಮಾಡಬೇಡಿ.



Click it and Unblock the Notifications












