Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬಿಸಿಲು ಹೆಚ್ಚಿರುವ ಈ ಸಮಯದಲ್ಲಿ ಮಕ್ಕಳಿಗೆ ಈ ಆಹಾರ ನೀಡುವುದನ್ನು ತಪ್ಪಿಸಿ
ಬೇಸಿಗೆ ಕಾಲ ಬಂದಿದ್ದು, ಬಿಸಿಲನ್ನು ಎದುರಿಸಲು ಎಲ್ಲರೂ ತಯಾರಿ ಆರಂಭಿಸಿದ್ದಾರೆ. ಈ ಋತುವಿನಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಹೊಟ್ಟೆಯ ತೊಂದರೆ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಾಗುತ್ತದೆ. ಕೆಲವು ಆಹಾರಗಳು ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡಿದರೆ, ಇನ್ನು ಕೆಲವು ಆಹಾರಗಳನ್ನು ತಿನ್ನುವುದರಿಂದ ಈ ಋತುವಿನಲ್ಲಿ ಆರೋಗ್ಯ ಹದಗೆಡುವುದು. ಇದು ಮಕ್ಕಳ ಆರೋಗ್ಯಕ್ಕೂ ಅನ್ವಯಿಸುತ್ತದೆ.
ಬೇಸಿಗೆಯ ಋತುವಿನಲ್ಲಿ ದೇಹವನ್ನು ಹೈಡ್ರೀಕರಿಸುವುದು ಅವಶ್ಯಕ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು. ಅದರಲ್ಲೂ ಮಗುವಿನ ರೋಗನಿರೋಧಕ ಶಕ್ತಿ ಈಗಾಗಲೇ ದುರ್ಬಲವಾಗಿರುವುದರಿಂದ, ಈ ಋತುವಿನಲ್ಲಿ ಅವರಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ನೀರಿನ ಸಹಾಯದಿಂದ, ನೀವು ಈ ಋತುವಿನಲ್ಲಿ ಮಕ್ಕಳ ದೇಹವನ್ನು ತೇವಾಂಶದಿಂದ ಇಡಬಹುದು, ಆದರೆ ಕೆಲವು ಆಹಾರಗಳು ಈ ಸಮಯದಲ್ಲಿ ಅವರ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಅಂತಹ ಆಹಾರಗಳನ್ನು ಕಡಿಮೆ ಮಾಡಬೇಕು.
ಈ ಲೇಖನದಲ್ಲಿ, ಬೇಸಿಗೆಯಲ್ಲಿ ಮಕ್ಕಳಿಗೆ ಯಾವ ಪದಾರ್ಥಗಳನ್ನು ನೀಡಬಾರದು ಎಂಬುದನ್ನು ನಾವು ನಿಮಗೆ ತಿಳಿಸಲಿದ್ದೇವೆ.

ಹೆಚ್ಚು ಉಪ್ಪು:
ಉಪ್ಪನ್ನು ಆಹಾರಕ್ಕೆ ರುಚಿ ನೀಡಲು ಬಳಸಲಾಗುತ್ತದೆ. ಅಧಿಕ ಉಪ್ಪು ಸೇವನೆಯಿಂದ ವಾಯು, ಅಧಿಕ ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು. ಜೊತೆಗೆ ದೇಹದಲ್ಲಿ ಹೆಚ್ಚು ಸೋಡಿಯಂ ಇದ್ದಾಗ, ಅದು ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಅಷ್ಟೇ ಅಲ್ಲ, ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಇದರರ್ಥ ದೇಹವು ಜೀವಕೋಶಗಳಿಂದ ನೀರನ್ನು ಹೊರಹಾಕಲು ಪ್ರಾರಂಭಿಸುತ್ತದೆ. ಆದ್ದರಿಂದ ಮಕ್ಕಳು ಸೇರಿದಂತೆ ಹಿರಿಯರ ಆಹಾರದಲ್ಲಿ ಹೆಚ್ಚು ಉಪ್ಪನ್ನು ಹಾಕಬಾರದು.

ಚಹಾ-ಕಾಫಿ:
ಮಕ್ಕಳು ಚಹಾ ಮತ್ತು ಕಾಫಿಯನ್ನು ಇಷ್ಟಪಡುವುದು ಅಪರೂಪ, ಆದರೆ ನಿಮ್ಮ ಮಗು ಈ ಪಾನೀಯಗಳನ್ನು ಇಷ್ಟಪಟ್ಟರೆ, ಅವರಿಗೆ ಅದರ ಸೇವನೆಯನ್ನು ಮಿತಿಗೊಳಿಸಬೇಕು. ಚಹಾ ಅಥವಾ ಕಾಫಿಯಂತಹ ಬಿಸಿ ಪಾನೀಯಗಳು ಶಾಖದ ವಿರುದ್ಧ ಹೋರಾಡಲು ಒಳ್ಳೆಯದಲ್ಲ. ಇವು ದೇಹದ ಉಷ್ಣತೆಯನ್ನು ಹೆಚ್ಚಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಬದಲಾಗಿ ಮಗುವಿಗೆ ಮಜ್ಜಿಗೆ, ನಿಂಬೆ ಪಾನಕ ಮತ್ತು ತೆಂಗಿನ ನೀರು ಇತ್ಯಾದಿಗಳನ್ನು ನೀಡಿ.

ಮಸಾಲೆಗಳು:
ಬೇಸಿಗೆಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು, ಇದು ಆರೋಗ್ಯಕ್ಕೆ ಕೆಟ್ಟದ್ದು. ಮಸಾಲೆಯುಕ್ತ ಆಹಾರವು ಕ್ಯಾಪ್ಸೈಸಿನ್ ಅನ್ನು ಹೊಂದಿರುತ್ತದೆ, ಇದು ಪಿತ್ತ ದೋಷಕ್ಕೆ ಋಣಾತ್ಮಕವಾಗಿ ಪರಿಣಾಮ ಬೀರುವ ಮೂಲಕ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಇದು ಅತಿಯಾದ ಬೆವರುವಿಕೆ, ದದ್ದು, ನೀರಿನ ಕೊರತೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ, ಮಕ್ಕಳೊಂದಿಗೆ, ಇಡೀ ಕುಟುಂಬವು ಆಹಾರದಲ್ಲಿ ಮಸಾಲೆಗಳನ್ನು ಹೆಚ್ಚು ಬಳಸಬಾರದು.

ಉಪ್ಪಿನಕಾಯಿ:
ಉಪ್ಪಿನಕಾಯಿ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ, ಆದರೆ ಉಪ್ಪಿನಕಾಯಿಯನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇದಲ್ಲದೆ, ಅವುಗಳಲ್ಲಿ ಸೋಡಿಯಂ ಕೂಡ ಅಧಿಕವಾಗಿದ್ದು, ಇದು ನೀರಿನ ಧಾರಣ, ಉಬ್ಬುವಿಕೆ ಮತ್ತು ವಾಯು ಉಂಟು ಮಾಡುವುದು/ ಜೊತೆಗೆ ಇದು ಅಜೀರ್ಣಕ್ಕೂ ಕಾರಣವಾಗಬಹುದು.

ಹಾಗಾದರೆ, ಮಕ್ಕಳಿಗೆ ತಿನ್ನಲು ಏನು ನೀಡಬೇಕು?:
ಬಿಸಿಲಲ್ಲಿ ಆಟವಾಡಿ ಮಕ್ಕಳು ಮನೆಗೆ ಬಂದಾಗ ತಣ್ಣೀರು ಕುಡಿಯಲು ಬಿಡಬಾರದು. ಹೊರಗಿನಿಂದ ಬಂದ 10 ರಿಂದ 15 ನಿಮಿಷಗಳ ನಂತರ ಸರಳ ನೀರನ್ನು ಕುಡಿಯಿರಿ. ಶಾಖದಿಂದ ಬಂದ ತಕ್ಷಣ ತಣ್ಣೀರಿನಿಂದ ಸ್ನಾನ ಮಾಡಬೇಡಿ. ತಣ್ಣನೆಯ ಜ್ಯೂಸ್ ಅಥವಾ ಐಸ್ ಕ್ರೀಮ್ ಅನ್ನು ನೀಡಬೇಡಿ. ಈ ಎಲ್ಲಾ ಅಂಶಗಳು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ, ಕಲ್ಲಂಗಡಿ ರಸ, ನಿಂಬೆ ಪಾನಕ, ಮಜ್ಜಿಗೆ, ತೆಂಗಿನ ನೀರು, ಮೋಸಂಬಿ ರಸವನ್ನು ಕುಡಿಯಿರಿ ಆದರೆ ಅದಕ್ಕೆ ಮಸಾಲೆ ಅಥವಾ ಸಕ್ಕರೆ ಸೇರಿಸಬೇಡಿ.



Click it and Unblock the Notifications