Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ನಿಮ್ಮ ಮಗುವಿನ ಭಾವನೆಯನ್ನು ಗೌರವಿಸುತ್ತೀರಾ?
ಮಕ್ಕಳು ಅವರ ಭಾವನೆಗಳನ್ನು ವ್ಯಕ್ತ ಪಡಿಸುವ ವಿಷಯದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಕೆಲವೊಮ್ಮೆ ನಾವು ಹೇಳಿದ ಮಾತನ್ನು ಕೇಳುತ್ತಾರೆ, ಮತ್ತೆ ಕೆಲವೊಮ್ಮೆ ಹಠ ಹಿಡಿಯುವುದು, ನಮ್ಮ ಮಾತನ್ನು ಕೇಳದೆ ಇರುವುದು ಮಾಡುತ್ತವೆ.
ಆಗ ಕೋಪ ಬರುವುದು ಸಹಜ, ಆದರೂ ನಿಮ್ಮ ಕೋಪವನ್ನು ಬದಿಗೊತ್ತಿ. ಏಕೆಂದರೆ ಕೋಪದಿಂದ ನೀವು ಅವರನ್ನು ಬೈಯ್ಯುವುದು, ಹೊಡೆಯುವುದು ಮಾಡಿದರೆ ಅದು ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಮಕ್ಕಳ ವ್ಯಕ್ತಿತ್ವ ಬೆಳೆಯಲು ಅವರ ಭಾವನೆಗಳನ್ನು ವ್ಯಕ್ತ ಪಡಿಸಲು ಅವಕಾಶ ನಿಡಬೇಕು. ಕೆಲವು ಪೋಷಕರನ್ನು ನೋಡಿದ್ದೇನೆ, ನಾವು ಹೇಳಿದನ್ನು ಮಕ್ಕಳು ಕೇಳಬೇಕು, ಎದುರು ಒಂದೂ ಮಾತನಾಡಬಾರದು, ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರೂ ಅವರಿಗೆ ಮಕ್ಕಳು ನಮ್ಮ ಎದುರು ಮಾತನಾಡುತ್ತಿದ್ದಾರೆ ಎಂದು ಕೋಪ ಬರುತ್ತದೆ. ಈ ರೀತಿ ಕೋಪಕೊಳ್ಳುವುದರಿಂದ ಆ ಮಗು ಯಾವುದೇ ವಿಷಯವನ್ನು ತಂದೆ-ತಾಯಿ ಜೊತೆ ಹೇಳಲು ಇಷ್ಟ ಪಡುವುದಿಲ್ಲ, ಬೆಳೆದು ದೊಡ್ಡವನಾದ/ಳಾದ ಮೇಲೂ ಪೋಷಕರ ಜೊತೆ ತನ್ನ ಭಾವನೆಯನ್ನು ಹಂಚಿಕೊಳ್ಳುವುದಿಲ್ಲ.
ಆದ್ದರಿಂದ ಮಗು ಚಿಕ್ಕದಿರುವಾಗಲೇ ಅದರ ಭಾವನೆಗಳನ್ನು ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸಬೇಕು. ನಿಮ್ಮ ಮಾತಿಗೆ ಅವರು ಗೌರವ ಕೊಡಬೇಕೆಂದು ಬಯಸಿದರೆ ಸಾಲದು, ಅವರ ಭಾವನೆಗೂ ಗೌರವ ನೀಡಬೇಕು. ನಿಮಗೆ ಎಷ್ಟೇ ಕೆಲಸವಿರಲಿ, ಮಕ್ಕಳ ಶಾಲೆ ವಿಷಯ, ತನ್ನ ಸ್ನೇಹಿತರ ವಿಷಯ ಹೇಳಲು ಬರುವಾಗ ಸ್ವಲ್ಪ ಸಮಧಾನದಿಂದ ಕೇಳಿ. ಅವರ ಭಾವನೆಗೆ ಸ್ಪಂದಿಸಿ. ಈ ರೀತಿ ಮಾಡಿದರೆ ಮಕ್ಕಳು ನಿಮ್ಮಿಂದ ಯಾವುದೇ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುವುದಿಲ್ಲ.
ನಿಮ್ಮ ಮಗು ಬರೀ ಸಂತೋಷ ತಂದ ವಿಷಯವನ್ನು ಮಾತ್ರವಲ್ಲ, ತನಗೆ ದುಃಖ ತಂದ ವಿಷಯದ ಬಗ್ಗೆಯೂ ಹೇಳಬಹುದು. ಆಗ ಮಗುವಿಗೆ ಸಮಧಾನ ಹೇಳಬೇಕು, ಆ ವಿಷಯಗಳು ನಿಮಗೆ ಸಿಲ್ಲಿ ಅನಿಸಿದರೂ ಸಮಧಾನ ಮಾಡಲು ಮರೆಯಬಾರದು. ಅವರ ಹಿಂಜರಿಕೆಯನ್ನು ಧೈರ್ಯ ತುಂಬುತ್ತಾ ಹೋಗಕಲಾಡಿಸಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇಷ್ಟು ಪ್ರಯತ್ನ ನೀವು ಮಾಡಿದರೆ ಸಾಕು, ನಿಮ್ಮ ಮಗು ಒಬ್ಬ ಆದರ್ಶ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications