Latest Updates
-
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ!
ಬೇಸಿಗೆ ರಜೆಯಲ್ಲಿ ಮಕ್ಕಳ ಬಗ್ಗೆ ಎಚ್ಚರ! ಈ ಕಾಯಿಲೆಗಳು ಹರಡುತ್ವೆ ಹುಷಾರ್!
ಬೇಸಿಗೆ ರಜೆ ಬಂತೂ ಅಂದ್ರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಪಠ್ಯ-ಪುಸ್ತಕಗಳನ್ನೆಲ್ಲಾ ಬದಿಗಿಟ್ಟು ಆಟವನ್ನೇ ಕಾಯಂ ಮಾಡಿಕೊಳ್ತಾರೆ. ಅದ್ರಲ್ಲೂ ಬೇಸಿಗೆ ರಜೆಯಲ್ಲಿ ಮಕ್ಕಳು ಒಳಗಡೆ ಇರೋದು ತುಂಬಾನೇ ಕಡಿಮೆ ಸ್ನೇಹಿತರ ಜೊತೆಗೂಡಿ ಹೊರಗಡೆ ಆಟವಾಡೋದಕ್ಕೆ ಹೋಗ್ತಾರೆ.

ಆದರೆ ಬೇಸಿಗೆಯಲ್ಲಿ ಅತೀ ಹೆಚ್ಚು ಹೊತ್ತು ಮಕ್ಕಳು ಹೊರಗಡೆ ಇರೋದು ಎಷ್ಟು ಅಪಾಯ ಅನ್ನೋದು ನಿಮಗೊತ್ತಾ? ಬೇಸಿಗೆ ಕಾಲದಲ್ಲಿ ಕೆಲವೊಂದು ಅಪಾಯಕಾರಿ ಕಾಯಿಲೆಗಳಿಗೆ ಮಕ್ಕಳು ತುತ್ತಾಗುತ್ತಾರೆ. ಹಾಗಾದ್ರೆ ಆ ಕಾಯಿಲೆಗಳು ಯಾವುದು ಅನ್ನೋದನ್ನ ನೋಡೋಣ.
1. ತಲೆ ಸುತ್ತುವುದು
ಮಕ್ಕಳು ಸೂರ್ಯನ ಬಿಸಿಲಿಗೆ ಹೆಚ್ಚು ಮೈಯೊಡ್ಡಿದಾಗ ತಲೆ ಸುತ್ತುತ್ತದೆ. ಇದರಿಂದ ಹೆಚ್ಚಾಗುವ ನಾಡಿ ಬಡಿತ, ದಿಗ್ಭ್ರಮೆ, ವಾಕರಿಕೆ, ಒಣ ಊದಿಕೊಂಡ ನಾಲಿಗೆ ಮತ್ತು ಕೆಂಪು ಚರ್ಮದಂತಹ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ. ಸೂರ್ಯನ ಬಿಸಿಲಿನ ಹೊಡೆತವು ರೋಗಿಯ ಪ್ರಜ್ಞಾಹೀನತೆಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸೋದು ಪೋಷಕರ ಕರ್ತವ್ಯ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹೊರಗಡೆ ಬಿಡಬೇಡಿ. ಹೆಚ್ಚು ನೀರು ಕುಡಿಸಿ ಮತ್ತು ದ್ರವಾಂಶ ಇರೋ ವಸ್ತುಗಳನ್ನು ತಿನ್ನಲು ಕೊಡಿ.
2. ಕಣ್ಣಿಗೆ ಹಾನಿಯುಂಟು ಮಾಡುತ್ತದೆ
ಸೂರ್ಯನ ಬಿಸಿಲಿನ ಕಿರಣ ನಿಮ್ಮ ಮಕ್ಕಳ ಕಣ್ಣಿಗೆ ಹಾನಿಯುಂಟು ಮಾಡಬಹುದು. ಮಗುವಿನ ಕಣ್ಣಿನ ಮಸೂರವು ವಯಸ್ಕರಿಗಿಂತ ಹೆಚ್ಚು ಪಾರದರ್ಶಕವಾಗಿರುವುದರಿಂದ ಮಕ್ಕಳ ಕಣ್ಣುಗಳು ಸೂರ್ಯನಿಂದ ಬರುವ ಹಾನಿಕಾರಕ ಯುವಿಎ ಮತ್ತು ಯುವಿಬಿ ಕಿರಣಗಳಿಂದ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಮಕ್ಕಳನ್ನು ಹೊರಗಡೆ ಬಿಸಿಲಿಗೆ ಬಿಡುವಾಗ ಸನ್ಗ್ಲಾನ್ ಮತ್ತು ಟೋಪಿ ಧರಿಸೋದನ್ನ ಕಡ್ಡಾಯಗೊಳಿಸಿ.
3. ಜೇನು ನೊಣಗಳು ಮಕ್ಕಳಿಗೆ ಹಾನಿ ಮಾಡಬಹುದು
ಜೋನು ನೊಣಗಳು ಬೇಸಿಗೆ ಸಮಯದಲ್ಲಿ ಹೆಚ್ಚು ದಾಳಿ ಮಾಡುತ್ತದೆ. ಹೀಗಾಗಿ ಹೊರಗಡೆ ಹೋದಾಗ ಜೇನು ಗೂಡಿನ ಬಳಿ ಯಾವುದೇ ರೀತಿ ತೊಂದರೆ ಮಾಡದಂತೆ ಮಕ್ಕಳಿಗೆ ತಿಳಿಸಿ. ಯಾಕಂದ್ರೆ ಒಂದು ವೇಳೆ ಜೇನು ನೊಣಗಳು ಮಕ್ಕಳ ಮೇಲೆ ದಾಳಿ ಮಾಡಿದ್ರೆ ಇದರಿಂದ ತೀವ್ರವಾದ ಅಪಾಯವನ್ನು ಎದುರಿಸಬೇಕಾಗುತ್ತದೆ.
4. ಸ್ವಿಮ್ಮರ್ಸ್ ಇಯರ್
ಸ್ವಿಮ್ಮರ್ಸ್ ಇಯರ್ ಇದೊಂದು ರೀತಿಯ ಸೋಂಕಾಗಿದ್ದು ಇದು ಕಿವಿಯಲ್ಲಿ ನೀರು ಉಳಿದುಕೊಂಡಾಗ ಉಂಟಾಗುತ್ತದೆ. ಕಿವಿಯಲ್ಲಿ ನೀರು ಉಳಿದುಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳು ಈಜು ಮುಗಿಸಿ ಬಂದ ಮೇಲೆ ಅವರ ಕಿವಿಯ ಒಳಗಡೆ ನೀರು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಗಮನಿಸದಿದ್ದರೆ ಕಿವಿಯ ಒಳಗಡೆ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಾಗಿ ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ಈಜಾಡಲು ಹೋದಾಗ ಇಯರ್ ಪ್ಲಗ್ಗಳನ್ನು ಕೊಡೋದನ್ನು ಮರೀಬೇಡಿ.
5. ಮೈಯಲ್ಲಿ ದದ್ದು ಉಂಟಾಗುತ್ತದೆ
ಬೇಸಿಗೆಯಲ್ಲಿ ಮಕ್ಕಳ ಮೃಮೇಲೆ ಮೇಲೆ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ದದ್ದು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಲೆ, ಕುತ್ತಿಗೆ ಮತ್ತು ಭುಜಗಳ ಮೇಲೆ ಬೆವರು ನಿಂತಾಗ ಈ ರೀತಿ ದದ್ದುಗಳು ಉಂಟಾಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ದಪ್ಪಗಿರುವ ಬಟ್ಟೆಗಳನ್ನು ಧರಿಸಲೇಬಾರದು. ಆದಷ್ಟು ಕಾಟನ್ ಹಾಗೂ ತೆಲುವಾದ ಬಟ್ಟೆಗಳನ್ನೇ ಮಕ್ಕಳಿಗೆ ನೀಡಿ.
6. ಜ್ವರ
ಬೇಸಿಗೆ ಕಾಲದಲ್ಲಿ ಜ್ವರ ಹಾಗೂ ಶೀತದ ಸಾಮಾನ್ಯ ಗುಣ ಲಕ್ಷಣಗಳನ್ನು ನೋಡಬಹುದು. ಇನ್ನೂ ವಸಂತ ಬೇಸಿಗೆಯ ಸಮಯದಲ್ಲಿ ರೋಗ ಉಲ್ಬಣ ಗೊಳ್ಳುತ್ತದೆ. ಇದು ಕೆಲವು ಮಕ್ಕಳಲ್ಲಿ ಸಣ್ಣ ಪ್ರಮಾಣದಲ್ಲಿರಬಹುದು. ಇನ್ನೂ ಕೆಲವರಲ್ಲಿ ತೀವ್ರವಾಗಿರುತ್ತದೆ.
7. ಆಹಾರವು ವಿಷವಾಗುವ ಸಾಧ್ಯತೆಯಿದೆ
ಫುಡ್ ಪಾಯಿಸನಿಂಗ್ ಬೇಸಿಗೆಯಲ್ಲಿ ಇದು ಹೆಚ್ಚಾಗಿರುತ್ತದೆ. ಶಾಖವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೆಯೇ ಈ ವೇಳೆ ಆಹಾರವು ವಿಷವಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನೂ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿದಾಗ ಆಹಾರ ವಿಷವಾಗಿ ಪರಿವರ್ತನೆಯಾಗುತ್ತದೆ. ಈ ಆಹಾರವು ಹೊಟ್ಟೆಗೆ ಹೋದಾಗ ಸೂಕ್ಷ್ಮಾಣು ಜೀವಿಗಳು ಜೀರ್ಣಾಂಗ ವ್ಯೂಹದಲ್ಲಿ ಬೆಳಯುತ್ತದೆ. ಇದರಿಂದಾಗಿ ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಕೆಲವು ಸಂದರ್ಭಗಳಲ್ಲಿ ಜ್ವರ ಬರುವ ಸಾಧ್ಯತೆ ಕೂಡ ಇದೆ.
ಬೇಸಿಗೆ ಕಾಲದಲ್ಲಿ ಮಕ್ಕಳ ಮೇಲೆ ಒಂದು ಕಣ್ಣಿಡೋದು ಪೋಷಕರ ಕರ್ತವ್ಯ. ಇತ್ತೀಚಿನ ಕಾಲದಲ್ಲಿ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿರೋದ್ರಿಂದ ನಮ್ಮ ಜಾಗ್ರತೆಯಲ್ಲಿ ನಾವಿರಬೇಕು.



Click it and Unblock the Notifications














