Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
BBK12: ಅದೃಷ್ಟ ಕೈಕೊಡ್ತು; 98 ದಿನಗಳ ಬಿಗ್ಬಾಸ್ ಜರ್ನಿ ಮುಗೀತು
ಬಿಗ್ಬಾಸ್ ಆಟದಲ್ಲಿ ಯಾವುದನ್ನು ಊಹಿಸೋಕೆ ಆಗೊಲ್ಲ. ಎಲ್ಲರ ನಿರೀಕ್ಷೆ ಮೀರಿ ಕೆಲವೊಮ್ಮೆ ಎಲಿಮಿನೇಷನ್ ನಡೆಯುತ್ತದೆ. ಕಳಪೆ ಎಂದುಕೊಂಡಿದ್ದವರು ಬಹಳ ದಿನ ಮನೆಯಲ್ಲಿ ಉಳಿದುಕೊಂಡುಬಿಡ್ತಾರೆ. ಪ್ರಬಲ ಸ್ಪರ್ಧಿ ಎಂದುಕೊಂಡವರು ಬೇಗ ಎಲಿಮಿನೇಟ್ ಆಗುತ್ತಾರೆ.
ಈ ಬಾರಿ ಬಿಗ್ಬಾಸ್ ಕನ್ನಡ ಸೀಸನ್ನಲ್ಲಿ ಕೂಡ ಕೆಲವರು ಅದೃಷ್ಟದಿಂದಲೇ ಉಳಿದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸ್ಪಂದನಾ ಹೆಸರು ಅದರಲ್ಲಿ ಮುಂಚೂಣಿಯಲ್ಲಿತ್ತು. ಆಕೆ ಅಷ್ಟೇನು ಚೆನ್ನಾಗಿ ಆಡ್ತಿಲ್ಲ. ಗ್ಲಾಮರ್ ಗೊಂಬೆಯಂತೆ ಮಿಂಚುವುದು ಬಿಟ್ಟರೆ ಬಿಗ್ಬಾಸ್ ಅಸಲಿ ಆಟ ಗೊತ್ತಿಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದರು.

ಸ್ಪಂದನಾಗಿಂತ ಪ್ರಬಲ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು ಹೇಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಚರ್ಚೆ ನಡೀತಿತ್ತು. ಅಂತೂ ಇದೀಗ ಸ್ಪಂದನಾ ಬಿಗ್ಬಾಸ್ ಜರ್ನಿ ಮುಗಿಸಿದ್ದಾರೆ. ಫಿನಾಲೆಗೆ ಇನ್ನೆರಡು ವಾರ ಇರುವಾಗಲೇ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಈ ಎಲಿಮಿನೇಷನ್ ಅಚ್ಚರಿ ವೀಕ್ಷಕರಿಗೆ ಅಚ್ಚರಿ ಅನ್ನಿಸಲೇ ಇಲ್ಲ.
ಕಳೆದ ವಾರವೇ ಸ್ಪಂದನಾ ಮನೆಯಿಂದ ಹೊರ ಬರಬೇಕಿತ್ತು. ಸೂರಜ್ ಅಥವಾ ಮಾಳು ಬದಲು ಆಕೆ ಎಲಿಮಿನೇಟ್ ಆಗಬೇಕಿತ್ತು ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಸುಳ್ಳಾಗಿತ್ತು. ಈ ವಾರ ಅನಿವಾರ್ಯವಾಗಿ ಸ್ಪಂದನಾ ಹೊರಬರುವಂತಾಯಿತು. ಈ ವಾರ ಧ್ರುವಂತ್, ಧನುಷ್, ರಘು, ಅಶ್ವಿನಿ, ಗಿಲ್ಲಿ, ರಾಶಿಕಾ, ಕಾವ್ಯಾ, ರಕ್ಷಿತಾ, ಸ್ಪಂದನಾ ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದರು. ಅಶ್ವಿನಿ ಸೇಫ್ ಆಗಿರುವುದನ್ನು ಶನಿವಾರವೇ ಸುದೀಪ್ ಖಚಿತಪಡಿಸಿದ್ದರು. ಇನ್ನು ಯಾರೆಲ್ಲಾ ಸೇಫ್ ಆಗಿದ್ದಾರೆ ಎಂದು ನಾಳಿನ ಸಂಚಿಕೆಯಲ್ಲಿ ಹೇಳ್ತೀನಿ ಎಂದಿದ್ದರು.
ಭಾನುವಾರದ ಎಪಿಸೋಡ್ನಲ್ಲಿ ಸರಳವಾಗಿಯೇ ಎಲಿಮಿನೇಷನ್ ನಡೀತು. ಯಾವುದೇ ಆಕ್ಟಿವಿಟಿ ಇಲ್ಲದೇ ಸಿಂಪಲ್ ಆಗಿ ಸ್ಪಂದನಾ ಔಟ್ ಎನ್ನುವುದನ್ನು ಸುದೀಪ್ ಹೇಳಿದ್ದರು. ಅಂತಿಮವಾಗಿ ಎಲ್ಲರನ್ನು ಸೇಫ್ ಮಾಡಿ ರಾಶಿಕಾ ಹಾಗೂ ಸ್ಪಂದನಾ ಹೆಸರು ಫೈನಲ್ ಮಾಡಿದ್ದರು. ಬಳಿಕ ಸ್ಪಂದನಾ ಹೆಸರು ಹೇಳಿ ಎಲಿಮಿನೇಟ್ ಆಗಿರುವುದನ್ನು ಘೋಷಿಸಿದ್ದರು. ಅಲ್ಲಿಗೆ 98 ದಿನಗಳ ಸ್ಪಂದನಾ ಬಿಗ್ಬಾಸ್ ಜರ್ನಿ ಮುಗಿದಿದೆ.
ಕಾವ್ಯಾ ಜೊತೆ ಸ್ಪಂದನಾಗೆ ಒಳ್ಳೆ ಒಡನಾಟ ಇತ್ತು. ಇನ್ನುಳಿದಂತೆ ಧನುಷ್, ಗಿಲ್ಲಿ ಜೊತೆಗೂ ಆತ್ಮೀಯ ಸ್ನೇಹ ಇತ್ತು. ಔಟ್ ಆಗಿ ಬಂದ ಬಳಿಕ ಬಿಗ್ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸ್ಪಂದನಾ ಹೇಳಿದ್ದಾರೆ. ಸ್ಪಂದನಾ ಎಲಿಮಿನೇಟ್ ಬಳಿಕ ಬಿಗ್ಬಾಸ್ ಮನೆಯಲ್ಲಿ 8 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರದ ನಡುವೆ ಮತ್ತೊಂದು ಎಲಿಮಿನೇಷನ್ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.
ಸದ್ಯ ಮನೆಯಲ್ಲಿ ಗಿಲ್ಲಿ, ಅಶ್ವಿನಿ, ಕಾವ್ಯಾ, ರಕ್ಷಿತಾ, ಧ್ರುವಂತ್, ಧನುಷ್, ರಘು, ರಾಶಿಕಾ ಉಳಿದುಕೊಂಡಿದ್ದಾರೆ. ಯಾರು ಫಿನಾಲೆವರೆಗೂ ಹೋಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಸ್ಪಂದನಾ ಆಟವನ್ನು ಗಂಭೀರವಾಗಿ ಪರಿಗಣಿಸಿ ಆಡಲು ಪ್ರಾರಂಭಿಸಿದ್ದರು. ಆದರೆ ಅದಾಗಲೇ ವೀಕ್ಷಕರಿಂದ ಆಕೆಯ ಬಗ್ಗೆ ನಿರಾಸೆ ಇತ್ತು. ಬರೀ ಅದೃಷ್ಟದಿಂದ ಉಳಿದುಕೊಂಡಿದ್ದಾಳೆ ಎನ್ನುವ ಮಾತು ಕೇಳಿಬರ್ತಿತ್ತು.
ಕಳೆದ ವಾರ ಸುದೀಪ್ ಬಿಗ್ಬಾಸ್ ಪಂಚಾಯ್ತಿಗೆ ಬಂದಿರಲಿಲ್ಲ. 'ಮಾರ್ಕ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಫ್ಯಾಮಿಲಿ ರೌಂಡ್ ಬೆನ್ನಲ್ಲೇ ಡಬಲ್ ಎಲಿಮಿನೇಷನ್ ನಡೆದಿತ್ತು. ಸೂರಜ್ ಹಾಗೂ ಮಾಳು ಬಿಗ್ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದರು. ಶನಿವಾರದ ಪಂಚಾಯ್ತಿ ವೇಳೆ ಇಬ್ಬರನ್ನು ವೇದಿಕೆಗೆ ಕರೆಸಿ ಸುದೀಪ್ ಬಿಗ್ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದರು. ಕ್ಯಾಪ್ಟನ್ ಗಿಲ್ಲಿಯ ಬಗ್ಗೆ ಸಾಕಷ್ಟು ಚರ್ಚೆ ನಡೀತು. ಗಿಲ್ಲಿಗೆ ಕೊಂಚ ಕ್ಲಾಸ್ ತಗೊಂಡಿದ್ದ ಸುದೀಪ್ ಬಳಿಕ ಆತನ ಆಟದ ಬಗ್ಗೆ ಮೆಚ್ಚಿಕೊಂಡಿದ್ದರು.
Credit: Filmibeat



Click it and Unblock the Notifications