Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಹನುಮಂತನ ಈ ಬಗೆಯ ಫೋಟೋಗಳನ್ನು ಮನೆಯಲ್ಲಿಡಬಾರದು, ಇಡುವುದಾದರೆ ಯಾವ ಫೋಟೋ ಬಳಸಬಹುದು?
ಬದುಕಿನಲ್ಲಿ ಏನಾದರು ಕಷ್ಟ ಬಂದಾಗ ಹನುಮಂತನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಆ ಕಷ್ಟಗಳು ದೂರಾಗುವುದು, ಶನಿ ನೀಡುವ ಕಾಟ ಕೂಡ ಹನುಮಂತನ ಕೃಪೆಯಿಂದ ತಡೆಗಟ್ಟಬಹುದು ಎಂಬ ಬಲವಾದ ನಂಬಿಕೆ ಹನುಮಂತನ ಆರಾಧಿಸುವ ಭಕ್ತರಲ್ಲಿದೆ.
ಪ್ರತಿ ಮಂಗಳವಾರ ಹನುಮಂತನ ಪೂಜೆ ಮಾಡಿದರೆ ಶ್ರೇಷ್ಠ ಎಂದು ನಂಬಲಾಗುವುದು. ನೀವು ಹನುಮಂತನ ಭಕ್ತರಾಗಿದ್ದರೂ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುವುದು, ಅದರಲ್ಲಿಯೂ ಹನುಮಂತನ ಈ ಬಗೆಯ ಮೂರ್ತಿಗಳನ್ನು ಇಡಲೇಬಾರದು ಎಂದು ಎಂದು ಹೇಳಲಾಗುವುದು.

ಹನುಮಂತ ಎದೆಯನ್ನು ಸೀಳಿಕೊಂಡಿರುವ ಫೋಟೋ
ಪೌರಾಣಿಕ ಕತೆ ಪ್ರಕಾರ ಹನುಮಂತ ಶ್ರೀರಾಮನ ಮಹಾನ್ ಭಕ್ತ. ತಾನು ಶ್ರೀರಾಮನ ಎಷ್ಟುಆರಾಧಿಸುತ್ತೇನೆ ಎಂಬುವುದರ ಸಾಕ್ಷಿಯಾಗಿ ತನ್ನ ಎದೆಯನ್ನು ಸೀಳುತ್ತಾನೆ, ಅಲ್ಲಿ ಶ್ರೀರಾಮ-ಸೀತೆಯೇ ಕಾಣಿಸುತ್ತಾರೆ ಎಂಬ ಕತೆಯಿದೆ. ಆದರೆ ಈ ಬಗೆಯ ಫೋಟೋ ಮನೆಯಲ್ಲಿ ಇಒ
ಸಂಜೀವಿನಿ ಬೆಟ್ಟ ಎತ್ತಿಕೊಂಡು ಹಾರುತ್ತಿರುವ ಹನುಮಂತ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಈ ಫೋಟೋ ಅಸ್ಥಿರತೆ ಉಂಟು ಮಾಡುತ್ತದೆ, ಹಾಗಾಗಿ ಈ ಬಗೆಯ ಫೋಟೋವನ್ನು ಇಡಲೇಬಾರದು ಎಂದು ಹೇಳಲಾಗುವುದು.
ಲಂಕಾ ಸುಡುತ್ತಿರುವ ಹನುಮಂತ
ಸೀತೆಯ ರಕ್ಷಣೆಗೆ ಹೋಗುವ ಹನುಮಂತ ಲಂಕೆಯನ್ನು ಸುಟ್ಟು ಹಾಕುತ್ತಾನೆ, ಆದರೆ ಈ ಫೋಟೋ ಮನೆಯಲ್ಲಿಡಬಾರದು, ಇದು ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು
ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಎತ್ತಿಕೊಂಡಿರುವ ಫೋಟೋ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಹನುಮಂತ ತನ್ನ ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತುಕೊಂಡಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಹಾಗಾಗಿ ಹನುಮಂತನ ಪ್ರಭಾವ ನಿಮ್ಮ ಮನೆ ಮೇಲೆ ಇರುವುದಿಲ್ಲ, ಹಾಗಾಗಿ ಈ ಬಗೆಯ ಫೋಟೊ ಮನೆಯಲ್ಲಿರಬಾರದು.
ಬೆಡ್ ರೂಂನಲ್ಲಿ ಹನುಮಂತನ ಫೋಟೋಇಡಬಾರದು
ಹನುಮಂತ ಬ್ರಹ್ಮಚಾರಿ, ಹಾಗಾಗಿ ವಿವಾಹಿತರು ತಮ್ಮ ಬೆಡ್ ರೂಂನಲ್ಲಿ ಹನುಮಂತನ ಫೋಟೋ ಇಡಬಾರದು.
ಇದರ ಬದಲಿಗೆ ಮನೆಯಲ್ಲಿ ಹನುಮಂತನ ಯಾವ ಫೋಟೋ ಇಡಬಹುದು
ರಾಮ್ ದರ್ಬಾರ್ ಫೋಟೋ ಇಟ್ಟು ಪೂಜಿಸಬಹುದು. ಇದರಲ್ಲಿ ಶ್ರೀರಾಮ-ಸೀತೆ, ಲಕ್ಷ್ಮಣ ಇವರ ಜೊತೆಗೆ ಹನುಮಂತಕೂಡ ಇರುತ್ತಾನೆ, ಇಂಥ ಫೋಟೋ ಇಟ್ಟು ಪೂಜಿಸಿದರೆ ಮನೆಗೆ ಶ್ರೇಯಸ್ಸು ಉಂಟಾಗುವುದು.
ಹನುಮಂತನ ದೇವಾಲಯಕ್ಕೆ ಹೋಗಿ ಪೂಜಿಸುವುದು
ಹನುಮಂತನ ಆರಾಧಿಸಬೇಕೆಂದರೆ ಕೆಲವೊಂದು ಕಠಿಣ ನಿಯಮಗಳೀವೆ, ಅದರಂತೆ ಪೂಜೆಯನ್ನು ಮಾಡಬೇಕು, ಇಲ್ಲದಿದ್ದರೆ ದೋಷ ಉಂಟಾಗುವುದು, ಹಾಗಾಗಿ ಹನುಮಂತ ಮೂರ್ತಿಯನ್ನು ಮನೆಯಲ್ಲಿ ಪೂಜಿಸುವುದು ಒಳ್ಳೆಯದಲ್ಲ. ಹನುಮಂತನ ಭಕ್ತರು ಮಂಗಳವಾರ ಹಾಗೂ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ಬರಬಹುದು.
ಹನುಮಾನ್ ಚಾಲೀಸ ಪಠಿಸಿ
ಹನುಮಾನ್ ಕೃಪೆ ಪಡೆಯಲು ಮನೆಯಲ್ಲಿ ಹನುಮಂತನ ಫೋಟೋ ಇಡಬೇಡಿ ಬದಲಿಗೆ ನೀವು ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications