Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಹನುಮಂತನ ಈ ಬಗೆಯ ಫೋಟೋಗಳನ್ನು ಮನೆಯಲ್ಲಿಡಬಾರದು, ಇಡುವುದಾದರೆ ಯಾವ ಫೋಟೋ ಬಳಸಬಹುದು?
ಬದುಕಿನಲ್ಲಿ ಏನಾದರು ಕಷ್ಟ ಬಂದಾಗ ಹನುಮಂತನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಆ ಕಷ್ಟಗಳು ದೂರಾಗುವುದು, ಶನಿ ನೀಡುವ ಕಾಟ ಕೂಡ ಹನುಮಂತನ ಕೃಪೆಯಿಂದ ತಡೆಗಟ್ಟಬಹುದು ಎಂಬ ಬಲವಾದ ನಂಬಿಕೆ ಹನುಮಂತನ ಆರಾಧಿಸುವ ಭಕ್ತರಲ್ಲಿದೆ.
ಪ್ರತಿ ಮಂಗಳವಾರ ಹನುಮಂತನ ಪೂಜೆ ಮಾಡಿದರೆ ಶ್ರೇಷ್ಠ ಎಂದು ನಂಬಲಾಗುವುದು. ನೀವು ಹನುಮಂತನ ಭಕ್ತರಾಗಿದ್ದರೂ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುವುದು, ಅದರಲ್ಲಿಯೂ ಹನುಮಂತನ ಈ ಬಗೆಯ ಮೂರ್ತಿಗಳನ್ನು ಇಡಲೇಬಾರದು ಎಂದು ಎಂದು ಹೇಳಲಾಗುವುದು.

ಹನುಮಂತ ಎದೆಯನ್ನು ಸೀಳಿಕೊಂಡಿರುವ ಫೋಟೋ
ಪೌರಾಣಿಕ ಕತೆ ಪ್ರಕಾರ ಹನುಮಂತ ಶ್ರೀರಾಮನ ಮಹಾನ್ ಭಕ್ತ. ತಾನು ಶ್ರೀರಾಮನ ಎಷ್ಟುಆರಾಧಿಸುತ್ತೇನೆ ಎಂಬುವುದರ ಸಾಕ್ಷಿಯಾಗಿ ತನ್ನ ಎದೆಯನ್ನು ಸೀಳುತ್ತಾನೆ, ಅಲ್ಲಿ ಶ್ರೀರಾಮ-ಸೀತೆಯೇ ಕಾಣಿಸುತ್ತಾರೆ ಎಂಬ ಕತೆಯಿದೆ. ಆದರೆ ಈ ಬಗೆಯ ಫೋಟೋ ಮನೆಯಲ್ಲಿ ಇಒ
ಸಂಜೀವಿನಿ ಬೆಟ್ಟ ಎತ್ತಿಕೊಂಡು ಹಾರುತ್ತಿರುವ ಹನುಮಂತ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಈ ಫೋಟೋ ಅಸ್ಥಿರತೆ ಉಂಟು ಮಾಡುತ್ತದೆ, ಹಾಗಾಗಿ ಈ ಬಗೆಯ ಫೋಟೋವನ್ನು ಇಡಲೇಬಾರದು ಎಂದು ಹೇಳಲಾಗುವುದು.
ಲಂಕಾ ಸುಡುತ್ತಿರುವ ಹನುಮಂತ
ಸೀತೆಯ ರಕ್ಷಣೆಗೆ ಹೋಗುವ ಹನುಮಂತ ಲಂಕೆಯನ್ನು ಸುಟ್ಟು ಹಾಕುತ್ತಾನೆ, ಆದರೆ ಈ ಫೋಟೋ ಮನೆಯಲ್ಲಿಡಬಾರದು, ಇದು ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು
ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಎತ್ತಿಕೊಂಡಿರುವ ಫೋಟೋ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಹನುಮಂತ ತನ್ನ ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತುಕೊಂಡಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಹಾಗಾಗಿ ಹನುಮಂತನ ಪ್ರಭಾವ ನಿಮ್ಮ ಮನೆ ಮೇಲೆ ಇರುವುದಿಲ್ಲ, ಹಾಗಾಗಿ ಈ ಬಗೆಯ ಫೋಟೊ ಮನೆಯಲ್ಲಿರಬಾರದು.
ಬೆಡ್ ರೂಂನಲ್ಲಿ ಹನುಮಂತನ ಫೋಟೋಇಡಬಾರದು
ಹನುಮಂತ ಬ್ರಹ್ಮಚಾರಿ, ಹಾಗಾಗಿ ವಿವಾಹಿತರು ತಮ್ಮ ಬೆಡ್ ರೂಂನಲ್ಲಿ ಹನುಮಂತನ ಫೋಟೋ ಇಡಬಾರದು.
ಇದರ ಬದಲಿಗೆ ಮನೆಯಲ್ಲಿ ಹನುಮಂತನ ಯಾವ ಫೋಟೋ ಇಡಬಹುದು
ರಾಮ್ ದರ್ಬಾರ್ ಫೋಟೋ ಇಟ್ಟು ಪೂಜಿಸಬಹುದು. ಇದರಲ್ಲಿ ಶ್ರೀರಾಮ-ಸೀತೆ, ಲಕ್ಷ್ಮಣ ಇವರ ಜೊತೆಗೆ ಹನುಮಂತಕೂಡ ಇರುತ್ತಾನೆ, ಇಂಥ ಫೋಟೋ ಇಟ್ಟು ಪೂಜಿಸಿದರೆ ಮನೆಗೆ ಶ್ರೇಯಸ್ಸು ಉಂಟಾಗುವುದು.
ಹನುಮಂತನ ದೇವಾಲಯಕ್ಕೆ ಹೋಗಿ ಪೂಜಿಸುವುದು
ಹನುಮಂತನ ಆರಾಧಿಸಬೇಕೆಂದರೆ ಕೆಲವೊಂದು ಕಠಿಣ ನಿಯಮಗಳೀವೆ, ಅದರಂತೆ ಪೂಜೆಯನ್ನು ಮಾಡಬೇಕು, ಇಲ್ಲದಿದ್ದರೆ ದೋಷ ಉಂಟಾಗುವುದು, ಹಾಗಾಗಿ ಹನುಮಂತ ಮೂರ್ತಿಯನ್ನು ಮನೆಯಲ್ಲಿ ಪೂಜಿಸುವುದು ಒಳ್ಳೆಯದಲ್ಲ. ಹನುಮಂತನ ಭಕ್ತರು ಮಂಗಳವಾರ ಹಾಗೂ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ಬರಬಹುದು.
ಹನುಮಾನ್ ಚಾಲೀಸ ಪಠಿಸಿ
ಹನುಮಾನ್ ಕೃಪೆ ಪಡೆಯಲು ಮನೆಯಲ್ಲಿ ಹನುಮಂತನ ಫೋಟೋ ಇಡಬೇಡಿ ಬದಲಿಗೆ ನೀವು ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications