Latest Updates
-
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ!
ಹನುಮಂತನ ಈ ಬಗೆಯ ಫೋಟೋಗಳನ್ನು ಮನೆಯಲ್ಲಿಡಬಾರದು, ಇಡುವುದಾದರೆ ಯಾವ ಫೋಟೋ ಬಳಸಬಹುದು?
ಬದುಕಿನಲ್ಲಿ ಏನಾದರು ಕಷ್ಟ ಬಂದಾಗ ಹನುಮಂತನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಆ ಕಷ್ಟಗಳು ದೂರಾಗುವುದು, ಶನಿ ನೀಡುವ ಕಾಟ ಕೂಡ ಹನುಮಂತನ ಕೃಪೆಯಿಂದ ತಡೆಗಟ್ಟಬಹುದು ಎಂಬ ಬಲವಾದ ನಂಬಿಕೆ ಹನುಮಂತನ ಆರಾಧಿಸುವ ಭಕ್ತರಲ್ಲಿದೆ.
ಪ್ರತಿ ಮಂಗಳವಾರ ಹನುಮಂತನ ಪೂಜೆ ಮಾಡಿದರೆ ಶ್ರೇಷ್ಠ ಎಂದು ನಂಬಲಾಗುವುದು. ನೀವು ಹನುಮಂತನ ಭಕ್ತರಾಗಿದ್ದರೂ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುವುದು, ಅದರಲ್ಲಿಯೂ ಹನುಮಂತನ ಈ ಬಗೆಯ ಮೂರ್ತಿಗಳನ್ನು ಇಡಲೇಬಾರದು ಎಂದು ಎಂದು ಹೇಳಲಾಗುವುದು.

ಹನುಮಂತ ಎದೆಯನ್ನು ಸೀಳಿಕೊಂಡಿರುವ ಫೋಟೋ
ಪೌರಾಣಿಕ ಕತೆ ಪ್ರಕಾರ ಹನುಮಂತ ಶ್ರೀರಾಮನ ಮಹಾನ್ ಭಕ್ತ. ತಾನು ಶ್ರೀರಾಮನ ಎಷ್ಟುಆರಾಧಿಸುತ್ತೇನೆ ಎಂಬುವುದರ ಸಾಕ್ಷಿಯಾಗಿ ತನ್ನ ಎದೆಯನ್ನು ಸೀಳುತ್ತಾನೆ, ಅಲ್ಲಿ ಶ್ರೀರಾಮ-ಸೀತೆಯೇ ಕಾಣಿಸುತ್ತಾರೆ ಎಂಬ ಕತೆಯಿದೆ. ಆದರೆ ಈ ಬಗೆಯ ಫೋಟೋ ಮನೆಯಲ್ಲಿ ಇಒ
ಸಂಜೀವಿನಿ ಬೆಟ್ಟ ಎತ್ತಿಕೊಂಡು ಹಾರುತ್ತಿರುವ ಹನುಮಂತ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಈ ಫೋಟೋ ಅಸ್ಥಿರತೆ ಉಂಟು ಮಾಡುತ್ತದೆ, ಹಾಗಾಗಿ ಈ ಬಗೆಯ ಫೋಟೋವನ್ನು ಇಡಲೇಬಾರದು ಎಂದು ಹೇಳಲಾಗುವುದು.
ಲಂಕಾ ಸುಡುತ್ತಿರುವ ಹನುಮಂತ
ಸೀತೆಯ ರಕ್ಷಣೆಗೆ ಹೋಗುವ ಹನುಮಂತ ಲಂಕೆಯನ್ನು ಸುಟ್ಟು ಹಾಕುತ್ತಾನೆ, ಆದರೆ ಈ ಫೋಟೋ ಮನೆಯಲ್ಲಿಡಬಾರದು, ಇದು ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು
ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಎತ್ತಿಕೊಂಡಿರುವ ಫೋಟೋ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಹನುಮಂತ ತನ್ನ ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತುಕೊಂಡಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಹಾಗಾಗಿ ಹನುಮಂತನ ಪ್ರಭಾವ ನಿಮ್ಮ ಮನೆ ಮೇಲೆ ಇರುವುದಿಲ್ಲ, ಹಾಗಾಗಿ ಈ ಬಗೆಯ ಫೋಟೊ ಮನೆಯಲ್ಲಿರಬಾರದು.
ಬೆಡ್ ರೂಂನಲ್ಲಿ ಹನುಮಂತನ ಫೋಟೋಇಡಬಾರದು
ಹನುಮಂತ ಬ್ರಹ್ಮಚಾರಿ, ಹಾಗಾಗಿ ವಿವಾಹಿತರು ತಮ್ಮ ಬೆಡ್ ರೂಂನಲ್ಲಿ ಹನುಮಂತನ ಫೋಟೋ ಇಡಬಾರದು.
ಇದರ ಬದಲಿಗೆ ಮನೆಯಲ್ಲಿ ಹನುಮಂತನ ಯಾವ ಫೋಟೋ ಇಡಬಹುದು
ರಾಮ್ ದರ್ಬಾರ್ ಫೋಟೋ ಇಟ್ಟು ಪೂಜಿಸಬಹುದು. ಇದರಲ್ಲಿ ಶ್ರೀರಾಮ-ಸೀತೆ, ಲಕ್ಷ್ಮಣ ಇವರ ಜೊತೆಗೆ ಹನುಮಂತಕೂಡ ಇರುತ್ತಾನೆ, ಇಂಥ ಫೋಟೋ ಇಟ್ಟು ಪೂಜಿಸಿದರೆ ಮನೆಗೆ ಶ್ರೇಯಸ್ಸು ಉಂಟಾಗುವುದು.
ಹನುಮಂತನ ದೇವಾಲಯಕ್ಕೆ ಹೋಗಿ ಪೂಜಿಸುವುದು
ಹನುಮಂತನ ಆರಾಧಿಸಬೇಕೆಂದರೆ ಕೆಲವೊಂದು ಕಠಿಣ ನಿಯಮಗಳೀವೆ, ಅದರಂತೆ ಪೂಜೆಯನ್ನು ಮಾಡಬೇಕು, ಇಲ್ಲದಿದ್ದರೆ ದೋಷ ಉಂಟಾಗುವುದು, ಹಾಗಾಗಿ ಹನುಮಂತ ಮೂರ್ತಿಯನ್ನು ಮನೆಯಲ್ಲಿ ಪೂಜಿಸುವುದು ಒಳ್ಳೆಯದಲ್ಲ. ಹನುಮಂತನ ಭಕ್ತರು ಮಂಗಳವಾರ ಹಾಗೂ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ಬರಬಹುದು.
ಹನುಮಾನ್ ಚಾಲೀಸ ಪಠಿಸಿ
ಹನುಮಾನ್ ಕೃಪೆ ಪಡೆಯಲು ಮನೆಯಲ್ಲಿ ಹನುಮಂತನ ಫೋಟೋ ಇಡಬೇಡಿ ಬದಲಿಗೆ ನೀವು ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications