Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಹನುಮಂತನ ಈ ಬಗೆಯ ಫೋಟೋಗಳನ್ನು ಮನೆಯಲ್ಲಿಡಬಾರದು, ಇಡುವುದಾದರೆ ಯಾವ ಫೋಟೋ ಬಳಸಬಹುದು?
ಬದುಕಿನಲ್ಲಿ ಏನಾದರು ಕಷ್ಟ ಬಂದಾಗ ಹನುಮಂತನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಆ ಕಷ್ಟಗಳು ದೂರಾಗುವುದು, ಶನಿ ನೀಡುವ ಕಾಟ ಕೂಡ ಹನುಮಂತನ ಕೃಪೆಯಿಂದ ತಡೆಗಟ್ಟಬಹುದು ಎಂಬ ಬಲವಾದ ನಂಬಿಕೆ ಹನುಮಂತನ ಆರಾಧಿಸುವ ಭಕ್ತರಲ್ಲಿದೆ.
ಪ್ರತಿ ಮಂಗಳವಾರ ಹನುಮಂತನ ಪೂಜೆ ಮಾಡಿದರೆ ಶ್ರೇಷ್ಠ ಎಂದು ನಂಬಲಾಗುವುದು. ನೀವು ಹನುಮಂತನ ಭಕ್ತರಾಗಿದ್ದರೂ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುವುದು, ಅದರಲ್ಲಿಯೂ ಹನುಮಂತನ ಈ ಬಗೆಯ ಮೂರ್ತಿಗಳನ್ನು ಇಡಲೇಬಾರದು ಎಂದು ಎಂದು ಹೇಳಲಾಗುವುದು.

ಹನುಮಂತ ಎದೆಯನ್ನು ಸೀಳಿಕೊಂಡಿರುವ ಫೋಟೋ
ಪೌರಾಣಿಕ ಕತೆ ಪ್ರಕಾರ ಹನುಮಂತ ಶ್ರೀರಾಮನ ಮಹಾನ್ ಭಕ್ತ. ತಾನು ಶ್ರೀರಾಮನ ಎಷ್ಟುಆರಾಧಿಸುತ್ತೇನೆ ಎಂಬುವುದರ ಸಾಕ್ಷಿಯಾಗಿ ತನ್ನ ಎದೆಯನ್ನು ಸೀಳುತ್ತಾನೆ, ಅಲ್ಲಿ ಶ್ರೀರಾಮ-ಸೀತೆಯೇ ಕಾಣಿಸುತ್ತಾರೆ ಎಂಬ ಕತೆಯಿದೆ. ಆದರೆ ಈ ಬಗೆಯ ಫೋಟೋ ಮನೆಯಲ್ಲಿ ಇಒ
ಸಂಜೀವಿನಿ ಬೆಟ್ಟ ಎತ್ತಿಕೊಂಡು ಹಾರುತ್ತಿರುವ ಹನುಮಂತ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಈ ಫೋಟೋ ಅಸ್ಥಿರತೆ ಉಂಟು ಮಾಡುತ್ತದೆ, ಹಾಗಾಗಿ ಈ ಬಗೆಯ ಫೋಟೋವನ್ನು ಇಡಲೇಬಾರದು ಎಂದು ಹೇಳಲಾಗುವುದು.
ಲಂಕಾ ಸುಡುತ್ತಿರುವ ಹನುಮಂತ
ಸೀತೆಯ ರಕ್ಷಣೆಗೆ ಹೋಗುವ ಹನುಮಂತ ಲಂಕೆಯನ್ನು ಸುಟ್ಟು ಹಾಕುತ್ತಾನೆ, ಆದರೆ ಈ ಫೋಟೋ ಮನೆಯಲ್ಲಿಡಬಾರದು, ಇದು ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು
ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಎತ್ತಿಕೊಂಡಿರುವ ಫೋಟೋ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಹನುಮಂತ ತನ್ನ ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತುಕೊಂಡಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಹಾಗಾಗಿ ಹನುಮಂತನ ಪ್ರಭಾವ ನಿಮ್ಮ ಮನೆ ಮೇಲೆ ಇರುವುದಿಲ್ಲ, ಹಾಗಾಗಿ ಈ ಬಗೆಯ ಫೋಟೊ ಮನೆಯಲ್ಲಿರಬಾರದು.
ಬೆಡ್ ರೂಂನಲ್ಲಿ ಹನುಮಂತನ ಫೋಟೋಇಡಬಾರದು
ಹನುಮಂತ ಬ್ರಹ್ಮಚಾರಿ, ಹಾಗಾಗಿ ವಿವಾಹಿತರು ತಮ್ಮ ಬೆಡ್ ರೂಂನಲ್ಲಿ ಹನುಮಂತನ ಫೋಟೋ ಇಡಬಾರದು.
ಇದರ ಬದಲಿಗೆ ಮನೆಯಲ್ಲಿ ಹನುಮಂತನ ಯಾವ ಫೋಟೋ ಇಡಬಹುದು
ರಾಮ್ ದರ್ಬಾರ್ ಫೋಟೋ ಇಟ್ಟು ಪೂಜಿಸಬಹುದು. ಇದರಲ್ಲಿ ಶ್ರೀರಾಮ-ಸೀತೆ, ಲಕ್ಷ್ಮಣ ಇವರ ಜೊತೆಗೆ ಹನುಮಂತಕೂಡ ಇರುತ್ತಾನೆ, ಇಂಥ ಫೋಟೋ ಇಟ್ಟು ಪೂಜಿಸಿದರೆ ಮನೆಗೆ ಶ್ರೇಯಸ್ಸು ಉಂಟಾಗುವುದು.
ಹನುಮಂತನ ದೇವಾಲಯಕ್ಕೆ ಹೋಗಿ ಪೂಜಿಸುವುದು
ಹನುಮಂತನ ಆರಾಧಿಸಬೇಕೆಂದರೆ ಕೆಲವೊಂದು ಕಠಿಣ ನಿಯಮಗಳೀವೆ, ಅದರಂತೆ ಪೂಜೆಯನ್ನು ಮಾಡಬೇಕು, ಇಲ್ಲದಿದ್ದರೆ ದೋಷ ಉಂಟಾಗುವುದು, ಹಾಗಾಗಿ ಹನುಮಂತ ಮೂರ್ತಿಯನ್ನು ಮನೆಯಲ್ಲಿ ಪೂಜಿಸುವುದು ಒಳ್ಳೆಯದಲ್ಲ. ಹನುಮಂತನ ಭಕ್ತರು ಮಂಗಳವಾರ ಹಾಗೂ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ಬರಬಹುದು.
ಹನುಮಾನ್ ಚಾಲೀಸ ಪಠಿಸಿ
ಹನುಮಾನ್ ಕೃಪೆ ಪಡೆಯಲು ಮನೆಯಲ್ಲಿ ಹನುಮಂತನ ಫೋಟೋ ಇಡಬೇಡಿ ಬದಲಿಗೆ ನೀವು ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications