Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಶಕ್ತಿಶಾಲಿ ಕ್ಷೇತ್ರ, ವಿಶೇಷತೆಯೇನು?
ಸಾಕಷ್ಟು ಭಕ್ತರು ಕಷ್ಟ ಬಂದಾಗ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬರ್ತಾರೆ, ಆ ತಾಯಿಯನ್ನು ಭಕ್ತಿಯಿಂದ ಬೇಡಿದರೆ ಇಷ್ಟಾರ್ಥಗಳು ನೆರವೇರುವುದು, ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ದಸರಾ ಸಮಯ ಕೂಡ ಸಮೀಪಿಸುತ್ತಿದೆ, ಹಾಗಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯು ಹೆಚ್ಚಿರುತ್ತದೆ.
ನಾವಿಲ್ಲಿ ಈ ಚಾಮುಂಡಿ ಬೆಟ್ಟ, ಚಾಮುಂಡಿ ತಾಯಿಯ ಶಕ್ತಿ ಬಗ್ಗೆ ತಿಳಿಯೋಣ:

18 ಶಕ್ತಿ ಪೀಠಗಳಲ್ಲಿ ಚಾಮುಂಡಿ ಬೆಟ್ಟ ಒಂದಾಗಿದೆ
ನಮ್ಮ ದೇಶದಲ್ಲಿ ಇರುವ ಪ್ರಮುಖ ಶಕ್ತಿ ಪೀಠಗಳಲ್ಲಿ ಚಾಮುಂಡಿ ದೇವಿಯ ಸ್ಥಳ ಕೂಡ ಒಂದಾಗಿದೆ. ಇಲ್ಲಿ ಸತಿ ದೇವಿಯ ಕೂದಲು ಬಿದ್ದಿದೆ ಎಂದು ನಂಬಲಾಗಿದೆ. ಈ ಚಾಮುಂಡೇಶ್ವರಿ ದೇವಾಲಯವು ಸಾವಿರ ವರ್ಷಕ್ಕಿಂತಲೂ ಹಳೆಯ ದೇವಾಲಯವಾಗಿದೆ. ಪೌರಾಣಿಕ ಕತೆಯ ಪ್ರಕಾರ ಮಹಿಷಾಸುರ ಎಂಬ ರಾಕ್ಷಸನ್ನು ಸಂಹರಿಸಲು ಚಾಮುಂಡಿ ದೇವಿ ಅವತರಿಸಿದಳು ಎಂದು ಹೇಳಲಾಗುತ್ತದೆ. ಚಾಮುಂಡಿ ತನ್ನ ಭಕ್ತರನ್ನು ಸದಾ ರಕ್ಷಿಸುತ್ತಾಳೆ ಎಂಬ ನಂಬಿಕೆ ಹೊಂದಿದೆ.
ಚಾಮುಂಡೇಶ್ವರಿ ದೇವಿಯದು ಅಷ್ಟಭುಜಗಳ ಉಗ್ರರೂಪ
ಚಾಮುಂಡೇಶ್ವರಿ ಉಗ್ರ ರೂಪವನ್ನು ಹೊಂದಿರುವ ದೇವಿ ಸ್ವರೂಪವಾಗಿದೆ. ಎಂಟು ಕೈಗಳನನ್ನು ಹೊಂದಿರುವ ಉಗ್ರ ಸ್ವರೂಪಿಣಿ ರೂಪದಲ್ಲಿ ದೇವಿ ಕಂಗೊಳಿಸುತ್ತಾಳೆ, ಈ ದೇವಿಯ ಸ್ವರೂಪ ದುಷ್ಟರನ್ನು ಸಂಹರಿಸಿ, ಭಕ್ತರನ್ನು ರಕ್ಷಣೆ ಮಾಡುತ್ತೇನೆ ಎಂದು ತನ್ನ ಭಕ್ತರಿಗೆ ಅಭಯ ನೀಡುವ ರೀತಿಯಲ್ಲಿದೆ.
ಚಾಮುಂಡೇಶ್ವರಿ ದೇವಾಲಯದ ವಿಶೇಷತೆ
ಚಾಮುಂಡೇಶ್ವರಿ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ, ಈ ದೇವಾಲಯ ಹೆಬ್ಬಾಗಲು, ನಂತರ ಪ್ರವೇಶ ದ್ವಾರ, ಅಂತರಾಳ, ಗರ್ಭಗೃಹ, ಪ್ರಾಕಾರಗಳನ್ನು ಹೊಂದಿದೆ ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಎಂದು ಹೇಳಲಾಗುತ್ತಿದೆ, ಈ ಶಿಖರಗಳಲ್ಲಿ ಏಳು ಚಿನ್ನದ ಲೇಪಿತ ಕಲಶವನ್ನು ಕಾಣಬಹುದು.
ದೇವಾಲಯದ ಬೃಹತ್ ಹೆಬ್ಬಾಗಿಲನ್ನು ಇದಕ್ಕೆ ಬೆಳ್ಳಿಯ ತಗಡಿನ ಹೊದಿಕೆ ಇದೆ. ಈ ಬಾಗಿಲಿನಲ್ಲಿ ದೇವಿಯ ಹಲವು ಸ್ವರೂಪಗಳನ್ನು ಕೆತ್ತಲಾಗಿದೆ, ಅಲ್ಲದೆ ಈ ದೇವಾಲಯದಲ್ಲಿ ಅಷ್ಟದಿಕ್ಪಾಲರ ವಿಗ್ರಹಗಳಿವೆ. ಈ ದೇವಾಲಯದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಪುಟ್ಟ ವಿಗ್ರಹವಿದೆ.
ಪ್ರತಿನಿತ್ಯವೂ ಇಲ್ಲಿ ದೇವಿಯನ್ನು ಅಲಂಕರಿಸಿ ಪೂಜಿಸಲಾಗುವುದು
ಈ ಚಾಮುಂಡೇಶ್ವರಿ ದೇವಿಗೆ ಪ್ರತಿನಿತ್ಯ ಅಲಂಕರಿಸಿ ಪೂಜಿಸಲಾಗುವುದು, ಪ್ರತಿನಿತ್ಯ ಈ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ, ಇಲ್ಲಿ ನೆನೆಸಿದ್ದು ನೆರವೇರುವುದರಿಂದ ದೇವಿಶಕ್ತಿಯ ಮೇಲೆ ಅಚಲ ನಂಬಿಕೆಯಿದೆ ಭಕ್ತರಿಗೆ.
ದಸರಾ ಸಮಯದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನ ಚಾಮುಂಡೇಶ್ವರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ
ದಸರಾ ದಿನದಂದು 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಜಂಬೂ ಸವಾರಿ ವಿಶ್ವಪ್ರಸಿದ್ಧವಾಗಿದ್ದು ಈ ಸಮಯದಲ್ಲಿ ಮೈಸೂರಿನಲ್ಲಿ ಎಲ್ಲಿ ನೋಡಿದರೂ ಜನ ಸಾಗರವೇ.... ಅಲಂಕೃತಗೊಂಡ ದೇವಿಯನ್ನು ನೋಡುವುದೇ ಚೆಂದ.



Click it and Unblock the Notifications
