Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಶಿವನ ತಲೆ ಮೇಲೆ ಅರ್ಧ ಚಂದ್ರ ಏಕಿದೆ..? ಇದರ ಹಿಂದಿದೆ ಸುಂದರ ಕಥೆ.!
ಮಹಾಶಿವರಾತ್ರಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಅಂದು ಶಿವನಿಗೆ ವಿಶೇಷ ರೀತಿಯಲ್ಲಿ ಪೂಜಿಸುವುದು ಸೇರಿ ಶಿವನ ಆಶೀರ್ವಾದ ಪಡೆಯಲು ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ. ರಾತ್ರಿಯಿಡಿ ಜಾಗರಣೆ ಮಾಡಿ ವಿಶೇಷ ಖಾದ್ಯ ಅರ್ಪಿಸಿ ಪೂಜಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬವು ನಾಳೆ ಮಾರ್ಚ್ 8ರಂದು ಆರಂಭವಾಗುತ್ತಿದೆ.
ಇನ್ನು ಈ ಶಿವರಾತ್ರಿಯಲ್ಲಿ ನಾವು ಶಿವನ ಕುರಿತ ಕೆಲವು ಅಚ್ಚರಿ ಅಂಶಗಳನ್ನು ತಿಳಿದುಕೊಳ್ಳೋಣ. ಅದರಲ್ಲೂ ಶಿವನ ತಲೆಯ ಮೇಲೆ ಅರ್ಧ ಚಂದ್ರ ಏಕಿದೆ? ಎಂಬುದನ್ನು ನೀವೆಂದಾದರು ಯೋಚಿಸಿದ್ದೀರಾ? ಹಾಗಾದರೆ ನಾವಿಂದು ನಿಮಗೆ ಹೇಳುತ್ತೇವೆ ನೋಡಿ. ಈ ಅರ್ಧ ಚಂದ್ರನ ಹಿಂದಿರುವ ಕಥೆ ಏನು ಎಂಬುದನ್ನು ನೋಡಿ.

ಭಗವಾನ್ ಶಿವನ ತಲೆಯ ಮೇಲಿನ ಅರ್ಧಚಂದ್ರಾಕೃತಿಯು ಅವನ ಒಟ್ಟಾರೆ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಅಲಂಕರಿಸುತ್ತದೆ. ನೀವು ಶಿವನ ಬಹುತೇಕ ಎಲ್ಲಾ ಫೋಟೋಗಳು, ಮೂರ್ತಿಗಳಲ್ಲೂ ನಂದಿ ಹಾಗೂ ಅರ್ಧ ಚಂದ್ರ ಹಾಗೂ ಗಂಗೆಯನ್ನು ಕಾಣಬಹುದು. ಹಾಗಾದ್ರೆ ಇದರ ಹಿಂದಿರುವ ಕಥೆ ಏನು ಗೊತ್ತಾ? ಈ ಶಿವನ ತಲೆ ಮೇಲಿರುವ ಅರ್ಧ ಚಂದ್ರನಿಗೆ ಬಹಳ ಮಹತ್ವವಿದೆ. ಹೀಗಾಗಿ ಶಿವನಿಗೆ ಚಂದ್ರಶೇಖರ ಎಂಬ ಹೆಸರೂ ಸಹ ಬಂದಿದೆ.
ದಕ್ಷ ಎಂಬಾತನಿಗೆ 27 ಮಂದಿ ಹೆಣ್ಣು ಮಕ್ಕಳಿದ್ದರಂತೆ. ಅವರನ್ನು ಚಂದ್ರ ದೇವರು ಮದುವೆಯಾದನಂತೆ, ಆದರೆ ಈ ದಕ್ಷನ ಮಗಳಲ್ಲಿ ರೋಹಿಣಿ ಎಂಬಾಕೆಯನ್ನು ಮಾತ್ರ ಚಂದ್ರ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆಕೆಗೆ ತನ್ನೆಲ್ಲಾ ಪ್ರೀತಿ ನೀಡುತ್ತಿದ್ದ ಇತರ 26 ಮಡದಿಯರನ್ನು ಕಡೆಗಣಿಸಿದ ಎಂಬ ಕಥೆ ಇದೆ. ಹೀಗಾಗಿ ಈ 26 ಮಡದಿಯರು ತನ್ನ ತಂದೆ ದಕ್ಷನಲ್ಲಿ ದೂರು ನೀಡಿದರು. ಇದರಿಂದ ಕೋಪಗೊಂಡ ದಕ್ಷ ಚಂದ್ರನ ಮೇಲೆ ಮುನಿಸಿಕೊಂಡ.
ಹೀಗೆ ಮುನಿಸಿಕೊಂಡಿದ್ದ ದಕ್ಷ ಚಂದ್ರನಿಗೆ ಶಾಪ ಕೊಟ್ಟನಂತೆ. ನಿನ್ನೆಲ್ಲಾ ಹೊಳಪು ಮಸುಕಾಗಲಿ, ನೀನು ಹೊಳಪನ್ನು ಕಳೆದುಕೊಂಡು ಬೂದಿಯಾಗುವಂತೆ ಶಾಪ ನೀಡಿದನಂತೆ. ಈ ಶಾಪಕ್ಕೆ ಹೆದರಿದ ಚಂದ್ರ ದೇವ ತಕ್ಷಣ ಸಹಾಯ ಕೋರಿ ಬ್ರಹ್ಮನ ಬಳಿ ತೆರಳಿದ. ಆದರೆ ಬ್ರಹ್ಮ ನಿನ್ನನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲ, ಆದರೆ ಆ ಶಿವನಿಂದ ಸಾಧ್ಯವಿದೆ ಎಂದನು. ಶಿವನ ಬಳಿ ತೆರಳಿದ ಚಂದ್ರ ತನ್ನ ಶಾಪದ ಬಗ್ಗೆ ತಿಳಿಸಿದ. ಆದರೆ ಶಾಪವೂ ಈಗಾಗಲೇ ಚಂದ್ರನನ್ನು ಮಸುಕಾಗಿಸುತ್ತಿದೆ. ಹೀಗಾಗಿ ನೀನು 15 ದಿನ ಬೆಳಕಾಗಿಯೂ ಇನ್ನು 15 ದಿನ ಮಂಕಾಗಿ ಇಡೀ ಭೂಮಂಡಲ ಬೆಳಗುವಂತೆ ತಿಳಿಸಿದ.
ಹೀಗಾಗಿ 15 ದಿನಕ್ಕೊಮ್ಮೆ ಅಮಾವಾಸ್ಯೆ ಹಾಗೂ 15 ದಿನಕ್ಕೊಮ್ಮೆ ಹುಣ್ಣಿಮೆ ಬರುತ್ತಿದೆ ಎಂಬ ಉಲ್ಲೇಖವಿದೆ. ಇದಾದ ಬಳಿಕ ಶಿವನಿಗೆ ಚಂದ್ರಶೇಖರ ಎಂಬ ಹೆಸರೂ ಸಹ ಬಂದಿದೆ. ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.
ಹಣೆಯಲ್ಲಿರುವ ತಿಲಕ
ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ. ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ.
ಶಿವನ ಕೈಯಲ್ಲಿರುವ ಜಪಮಾಲೆ
ದೇವರ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.
ಶಿವನೇಕೆ ಹುಲಿಯ ಚರ್ಮ ಏಕೆ ಧರಿಸುತ್ತಾನೆ?
ಶಿವ ಪುರಾಣದ ಪ್ರಕಾರ ಶಿವನು ಸಂಚಾರ ಪ್ರಿಯನಾಗಿದ್ದನು. ಸದಾಕಾಲ ಪ್ರಪಂಚವನ್ನು ಸುತ್ತುತ್ತಿದ್ದನು. ಒಮ್ಮೆ ಅತ್ಯಂತ ಶಕ್ತಿವಂತರಾದ ಋಷಿಗಳ ಆಶ್ರಮವನ್ನು ಹೊಂದಿರುವ ಅರಣ್ಯವೊಂದರೊಳಗೆ ಹೋದನು. ಆ ಸಮಯದಲ್ಲಿ ಋಷಿಗಳ ಸಕಿಯರು ಶಿವನ ಕಂಡು ಆಕರ್ಷಿತರಾದರಂತೆ. ಹೀಗಾಗಿ ಶಿವನಿಗೆ ಪಾಠ ಕಲಿಸಬೇಕು ಇನ್ನೆಂದು ಈ ದಾರಿಯಲ್ಲಿ ಬರಬಾರದೆಂದು ದಾರಿಯಲ್ಲಿ ದೊಡ್ಡ ಹೊಂಡೆ ತೆಗೆದು ಶಿವ ಆ ಹೊಂಡದಲ್ಲಿ ಬೀಳುವಂತೆ ಮಾಡಿದರು.
ಇದೇ ಹೊಂಡಕ್ಕೆ ಹುಲಿಯೊಂದು ಬಿದ್ದು ಶಿವನ ಮೇಲೆ ಎರಗಿತ್ತಂತೆ. ಆದರೆ ಶಿವ ಆ ಹುಲಿಯನ್ನು ಸಂಹಾರ ಮಾಡಿ ಹುಲಿಯ ಚರ್ಮವನ್ನು ವಿಜಯದ ಸಂಕೇತವಾಗಿ ಮೈ ಮೇಲೆ ಹೊದ್ದು ಮಲಗಿದನಂತೆ. ಹೀಗಾಗಿ ಆತನ ಬಳಿ ಯಾವಾಗಲು ನಾವು ಹುಲಿಯ ಚರ್ಮ ನೋಡಬಹುದು.



Click it and Unblock the Notifications