Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಶಿವನ ತಲೆ ಮೇಲೆ ಅರ್ಧ ಚಂದ್ರ ಏಕಿದೆ..? ಇದರ ಹಿಂದಿದೆ ಸುಂದರ ಕಥೆ.!
ಮಹಾಶಿವರಾತ್ರಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಅಂದು ಶಿವನಿಗೆ ವಿಶೇಷ ರೀತಿಯಲ್ಲಿ ಪೂಜಿಸುವುದು ಸೇರಿ ಶಿವನ ಆಶೀರ್ವಾದ ಪಡೆಯಲು ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ. ರಾತ್ರಿಯಿಡಿ ಜಾಗರಣೆ ಮಾಡಿ ವಿಶೇಷ ಖಾದ್ಯ ಅರ್ಪಿಸಿ ಪೂಜಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬವು ನಾಳೆ ಮಾರ್ಚ್ 8ರಂದು ಆರಂಭವಾಗುತ್ತಿದೆ.
ಇನ್ನು ಈ ಶಿವರಾತ್ರಿಯಲ್ಲಿ ನಾವು ಶಿವನ ಕುರಿತ ಕೆಲವು ಅಚ್ಚರಿ ಅಂಶಗಳನ್ನು ತಿಳಿದುಕೊಳ್ಳೋಣ. ಅದರಲ್ಲೂ ಶಿವನ ತಲೆಯ ಮೇಲೆ ಅರ್ಧ ಚಂದ್ರ ಏಕಿದೆ? ಎಂಬುದನ್ನು ನೀವೆಂದಾದರು ಯೋಚಿಸಿದ್ದೀರಾ? ಹಾಗಾದರೆ ನಾವಿಂದು ನಿಮಗೆ ಹೇಳುತ್ತೇವೆ ನೋಡಿ. ಈ ಅರ್ಧ ಚಂದ್ರನ ಹಿಂದಿರುವ ಕಥೆ ಏನು ಎಂಬುದನ್ನು ನೋಡಿ.

ಭಗವಾನ್ ಶಿವನ ತಲೆಯ ಮೇಲಿನ ಅರ್ಧಚಂದ್ರಾಕೃತಿಯು ಅವನ ಒಟ್ಟಾರೆ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಅಲಂಕರಿಸುತ್ತದೆ. ನೀವು ಶಿವನ ಬಹುತೇಕ ಎಲ್ಲಾ ಫೋಟೋಗಳು, ಮೂರ್ತಿಗಳಲ್ಲೂ ನಂದಿ ಹಾಗೂ ಅರ್ಧ ಚಂದ್ರ ಹಾಗೂ ಗಂಗೆಯನ್ನು ಕಾಣಬಹುದು. ಹಾಗಾದ್ರೆ ಇದರ ಹಿಂದಿರುವ ಕಥೆ ಏನು ಗೊತ್ತಾ? ಈ ಶಿವನ ತಲೆ ಮೇಲಿರುವ ಅರ್ಧ ಚಂದ್ರನಿಗೆ ಬಹಳ ಮಹತ್ವವಿದೆ. ಹೀಗಾಗಿ ಶಿವನಿಗೆ ಚಂದ್ರಶೇಖರ ಎಂಬ ಹೆಸರೂ ಸಹ ಬಂದಿದೆ.
ದಕ್ಷ ಎಂಬಾತನಿಗೆ 27 ಮಂದಿ ಹೆಣ್ಣು ಮಕ್ಕಳಿದ್ದರಂತೆ. ಅವರನ್ನು ಚಂದ್ರ ದೇವರು ಮದುವೆಯಾದನಂತೆ, ಆದರೆ ಈ ದಕ್ಷನ ಮಗಳಲ್ಲಿ ರೋಹಿಣಿ ಎಂಬಾಕೆಯನ್ನು ಮಾತ್ರ ಚಂದ್ರ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆಕೆಗೆ ತನ್ನೆಲ್ಲಾ ಪ್ರೀತಿ ನೀಡುತ್ತಿದ್ದ ಇತರ 26 ಮಡದಿಯರನ್ನು ಕಡೆಗಣಿಸಿದ ಎಂಬ ಕಥೆ ಇದೆ. ಹೀಗಾಗಿ ಈ 26 ಮಡದಿಯರು ತನ್ನ ತಂದೆ ದಕ್ಷನಲ್ಲಿ ದೂರು ನೀಡಿದರು. ಇದರಿಂದ ಕೋಪಗೊಂಡ ದಕ್ಷ ಚಂದ್ರನ ಮೇಲೆ ಮುನಿಸಿಕೊಂಡ.
ಹೀಗೆ ಮುನಿಸಿಕೊಂಡಿದ್ದ ದಕ್ಷ ಚಂದ್ರನಿಗೆ ಶಾಪ ಕೊಟ್ಟನಂತೆ. ನಿನ್ನೆಲ್ಲಾ ಹೊಳಪು ಮಸುಕಾಗಲಿ, ನೀನು ಹೊಳಪನ್ನು ಕಳೆದುಕೊಂಡು ಬೂದಿಯಾಗುವಂತೆ ಶಾಪ ನೀಡಿದನಂತೆ. ಈ ಶಾಪಕ್ಕೆ ಹೆದರಿದ ಚಂದ್ರ ದೇವ ತಕ್ಷಣ ಸಹಾಯ ಕೋರಿ ಬ್ರಹ್ಮನ ಬಳಿ ತೆರಳಿದ. ಆದರೆ ಬ್ರಹ್ಮ ನಿನ್ನನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲ, ಆದರೆ ಆ ಶಿವನಿಂದ ಸಾಧ್ಯವಿದೆ ಎಂದನು. ಶಿವನ ಬಳಿ ತೆರಳಿದ ಚಂದ್ರ ತನ್ನ ಶಾಪದ ಬಗ್ಗೆ ತಿಳಿಸಿದ. ಆದರೆ ಶಾಪವೂ ಈಗಾಗಲೇ ಚಂದ್ರನನ್ನು ಮಸುಕಾಗಿಸುತ್ತಿದೆ. ಹೀಗಾಗಿ ನೀನು 15 ದಿನ ಬೆಳಕಾಗಿಯೂ ಇನ್ನು 15 ದಿನ ಮಂಕಾಗಿ ಇಡೀ ಭೂಮಂಡಲ ಬೆಳಗುವಂತೆ ತಿಳಿಸಿದ.
ಹೀಗಾಗಿ 15 ದಿನಕ್ಕೊಮ್ಮೆ ಅಮಾವಾಸ್ಯೆ ಹಾಗೂ 15 ದಿನಕ್ಕೊಮ್ಮೆ ಹುಣ್ಣಿಮೆ ಬರುತ್ತಿದೆ ಎಂಬ ಉಲ್ಲೇಖವಿದೆ. ಇದಾದ ಬಳಿಕ ಶಿವನಿಗೆ ಚಂದ್ರಶೇಖರ ಎಂಬ ಹೆಸರೂ ಸಹ ಬಂದಿದೆ. ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.
ಹಣೆಯಲ್ಲಿರುವ ತಿಲಕ
ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ. ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ.
ಶಿವನ ಕೈಯಲ್ಲಿರುವ ಜಪಮಾಲೆ
ದೇವರ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.
ಶಿವನೇಕೆ ಹುಲಿಯ ಚರ್ಮ ಏಕೆ ಧರಿಸುತ್ತಾನೆ?
ಶಿವ ಪುರಾಣದ ಪ್ರಕಾರ ಶಿವನು ಸಂಚಾರ ಪ್ರಿಯನಾಗಿದ್ದನು. ಸದಾಕಾಲ ಪ್ರಪಂಚವನ್ನು ಸುತ್ತುತ್ತಿದ್ದನು. ಒಮ್ಮೆ ಅತ್ಯಂತ ಶಕ್ತಿವಂತರಾದ ಋಷಿಗಳ ಆಶ್ರಮವನ್ನು ಹೊಂದಿರುವ ಅರಣ್ಯವೊಂದರೊಳಗೆ ಹೋದನು. ಆ ಸಮಯದಲ್ಲಿ ಋಷಿಗಳ ಸಕಿಯರು ಶಿವನ ಕಂಡು ಆಕರ್ಷಿತರಾದರಂತೆ. ಹೀಗಾಗಿ ಶಿವನಿಗೆ ಪಾಠ ಕಲಿಸಬೇಕು ಇನ್ನೆಂದು ಈ ದಾರಿಯಲ್ಲಿ ಬರಬಾರದೆಂದು ದಾರಿಯಲ್ಲಿ ದೊಡ್ಡ ಹೊಂಡೆ ತೆಗೆದು ಶಿವ ಆ ಹೊಂಡದಲ್ಲಿ ಬೀಳುವಂತೆ ಮಾಡಿದರು.
ಇದೇ ಹೊಂಡಕ್ಕೆ ಹುಲಿಯೊಂದು ಬಿದ್ದು ಶಿವನ ಮೇಲೆ ಎರಗಿತ್ತಂತೆ. ಆದರೆ ಶಿವ ಆ ಹುಲಿಯನ್ನು ಸಂಹಾರ ಮಾಡಿ ಹುಲಿಯ ಚರ್ಮವನ್ನು ವಿಜಯದ ಸಂಕೇತವಾಗಿ ಮೈ ಮೇಲೆ ಹೊದ್ದು ಮಲಗಿದನಂತೆ. ಹೀಗಾಗಿ ಆತನ ಬಳಿ ಯಾವಾಗಲು ನಾವು ಹುಲಿಯ ಚರ್ಮ ನೋಡಬಹುದು.



Click it and Unblock the Notifications
