Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಧಾಷ್ಟಮಿ: ಪ್ರಾಣ ಪ್ರಿಯೆ ರಾಧಾಳನ್ನು ಶ್ರೀಕೃಷ್ಣ ಮದುವೆಯಾಗಿಲ್ಲ ಏಕೆ?
ಭಾದ್ರಪದ ಮಾಸದ ಶುಕ್ಲ ಅಷ್ಟಮಿಯಂದು ರಾಧಾಷ್ಟಮಿಯನ್ನು ಆಚರಿಸಲಾಗುವುದು. ಈ ದಿನದಂದು ಕೃಷ್ಣ-ರಾಧೆಯನ್ನು ಅಲಂಕರಿಸಿ ಪೂಜಿಸಲಾಗುವುದು. ಈ ದಿನ ರಾಧಾ-ಕೃಷ್ಣರ ಕೀರ್ತನೆಗಳನ್ನು ಹಾಡಲಾಗುವುದು. ಕೃಷ್ಣ ಅಂದ ತಕ್ಷಣ ರಾಧೆ ನೆನಪಿಗೆ ಬರುತ್ತಾಳೆ. ಪವಿತ್ರ ಪ್ರೀತಿಯನ್ನು ಕೃಷ್ಣ-ರಾಧೆಯ ಪ್ರೀತಿಗೆ ಹೋಲಿಸಲಾಗುವುದು.

ಕೃಷ್ಣ-ರಾಧೆಯ ಪ್ರೀತಿಗೆ ಮಿತಿಯಿಲ್ಲ, ಅಷ್ಟೊಂದು ತೀವ್ರವಾಗಿತ್ತು ಅವರ ಪ್ರೀತಿ, ಪ್ರೇಮಿಗಳೆಂದರೆ ಕೃಷ್ಣ-ರಾಧೆಯ ರೀತಿ ಇರಬೇಕು ಎಂದು ಹೇಳಲಾಗುವುದು. ಕೃಷ್ಣ-ರಾಧೆ ಅಷ್ಟೊಂದು ಪ್ರೀತಿಸುತ್ತಿದ್ದರು ಏಕೆ ಅವರಿಬ್ಬರು ಮದುವೆಯಾಗಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಕೃಷ್ಣ-ರಾಧೆ ಏಕೆ ಮದುವೆಯಾಗಲಿಲ್ಲ ಎಂಬುವುದಕ್ಕೆ ಈ ಕಾರಣಗಳನ್ನು ಹೇಳಲಾಗುವುದು:
ಅವರಿಬ್ಬರ ಪ್ರೀತಿಗೆ ಮದುವೆ ಬಂಧ ಬೇಕಾಗಿಲ್ಲ
ಅವರು ಅವರ ಪ್ರೀತಿಯನ್ನು ತೋರಿಸಲು ಅವರಿಗೆ ಮದುವೆಯ ಬಂಧ ಬೇಕಾಗಿಲ್ಲ, ಕೃಷ್ಣ ಯಾರಿಂದ ಏನೂ ಬಯಸುವುದಿಲ್ಲ, ಮದುವೆಯಲ್ಲಿ ನಿರೀಕ್ಷೆಗಳು ಜಾಸ್ತಿ, ಅದೇ ಇವರು ಪವಿತ್ರ ಪ್ರೀತಿಯಲ್ಲಿ ಯಾವುದೇ ನಿರೀಕ್ಷೆಗಳಿಲ್ಲ, ಅಲ್ಲಿ ಪ್ರೀತಿಯಷ್ಟೇ, ಪವಿತ್ರವಾದ ಪ್ರೀತಿಯಷ್ಟೇ.
ರಾಧಾ ರುಕ್ಮಣಿ ಒಂದೇ
ಇನ್ನು ಕೆಲವರು ರಾಧಾ-ರುಕ್ಮಣಿ ಒಂದೇ ಎಂದು ಹೇಳಲಾಗುವುದು. ರುಕ್ಮಿಣಿ ಭೀಷ್ಮ- ವಿಧರ್ಭಗೆ ಜನಿಸಿದ ಮಗಳು ರುಕ್ಮಣಿ. ರುಕ್ಮಣಿ ಲಕ್ಷ್ಮಿಯ ಅವತಾರ ಎಂದು ಹೇಳಲಾಗುವುದು, ಸ್ರೀ ಕೃಷ್ಣನನ್ನು ಶ್ರೀ ವಿಷ್ಣುವಿನ 8ನೇ ಅವತಾರ ಎಂದು ಹೇಳಲಾಗುತ್ತಿದ್ದು ಈ ರಾಧೆ- ಕೃಷ್ಣ ಬೇರೆ-ಬೇರೆಯಲ್ಲ, ಇಬ್ಬರು ಒಂದೇ ಎಂದು ಹೇಳಲಾಗುವುದು.
ರಾಧಾಗೆ ಅಯಾನ್ನ ಮದುವೆಯಾಗಬೇಕೆಂಬ ನಿಯಮಿವಿತ್ತು
ಶ್ರೀ ವಿಷ್ಣುವಿನ ಭಕ್ತನೊಬ್ಬ ಕಠಿಣ ತಪಸ್ಸು ಮಾಡುತ್ತಾನೆ, ಅವನ ಪ್ರೀತಿಗೆ ಮೆಚ್ಚಿದ ಶ್ರೀ ವಿಷ್ಣು ನಿನಗೆ ಏನು ಬೇಕು ಎಂಬ ವರ ಕೇಳುತ್ತಾನೆ, ಅದಕ್ಕೆ ಮುಂದಿನ ಜನ್ಮದಲ್ಲಿ ಲಕ್ಷ್ಮಿಯನ್ನು ಮದುವೆಯಾಗುವ ಆಸೆ ವ್ಯಕ್ತಿ ಪಡಿಸುತ್ತಾನೆ, ಲಕ್ಷ್ಮಿ ರಾಧೆಯಾಗಿ ಜನಿಸುತ್ತಾಳೆ. ರಾಧೆ ಕೃಷ್ಣನನ್ನು ಪ್ರೀತಿಸುತ್ತಾಳೆ, ಆದರೆ ಅಯಾನ್ ಶ್ರೀ ವಿಷ್ಣುವಿನ ವರ ಪಡೆದ ಕಾರಣಕ್ಕೆ ರಾಧೆ ಅಯಾನ್ನ ಮದುವೆಯಾಗುತ್ತಾಳೆ, ಆದರೆ ಅಯಾನ್ ಶಿಖಂಡಿಯಾಗಿರುತ್ತಾನೆ. ರಾಧೆ ಆತನ ಜೊತೆಗಿರುತ್ತಾಳೆ, ಆದರೆ ಆಕೆಯ ಸಂಪೂರ್ಣ ಧ್ಯಾನ ಶ್ರೀ ಕೃಷ್ಣ ಮೇಲಿರುತ್ತದೆ, ಸದಾ ಶ್ರೀ ಕೃಷ್ಣ ಧ್ಯಾನದಲ್ಲಿಯೇ ಕಳೆಯುತ್ತಾಳೆ.
ರಾಧಾ ಎಂಬುವುದು ಕಾಲ್ಪನಿಕವಷ್ಟೇ ಎಂಬ ವಾದವೂ ಇದೆ
ಶ್ರೀಮದ್ ಬಾಗವತಂ ಅಥವಾ ಮಹಾಭಾರತದಲ್ಲಿ ಅಥವಾ ಹರಿವಂಶಮ್ನಲ್ಲಿ ರಾಧೆಯ ಉಲ್ಲೇಖವಿಲ್ಲ.ಾಚಾರ್ಯ ನಿಂಬಾರಕ್ ಅಮತ್ತು ಜಯದೇವ ಎಂಬ ಕವಿಯ ಕಲ್ಪನೆಯಲ್ಲಿ ಮೂಡಿದ್ದು ರಾಧೆ ಎಂಬ ವಾದವೂ ಇದೆ.
ಕೃಷ್ಣ ರಾಧೆಯನ್ನು ಮದುವೆಯಾಗದೆ ರುಕ್ಮಣಿಯನ್ನು ಮದುವೆಯಾಗಿದ್ದು ಏಕೆ?
ರುಕ್ಮಣಿ ವಿಧರ್ಭ ಹೊಟ್ಟೆಯಲ್ಲಿ ಜನಿಸಿದಾಗ ರಾಕ್ಷಸಿ ಪೂತನಿ ಮಗುವಿಗೆ ತನ್ನ ಹಾಲುಣಿಸಲು ಪ್ರಯತ್ನಿಸುತ್ತಾಳೆ, ಆ ಮಗು ತಿರಸ್ಕಾರ ಮಾಡಿದಾಗ ಮಗುವನ್ನು ಎತ್ತಿಕೊಂಡು ಹಾರಿ ಹೋಗುತ್ತಾಳೆ, ಆದರೆ ಆ ಮಗು ತುಂಬಾ ತೂಕವಾಗಿ ಬೆಳೆಯುತ್ತೆ, ಪೂತನಿ ಎತ್ತಿಕೊಂಡು ಹಾರಲು ಸಾಧ್ಯವಾಗದಷ್ಟು ಭಾರವಾಗುತ್ತಾಳೆ, ಆವಾಗ ಆ ಮಗುವನ್ನು ಕೆಳಗೆ ಹಾಕಲಾಗುವುದು, ಆ ಮಗು ಹೋಗಿ ತಾವರೆ ಮೇಲೆ ಬೀಳುತ್ತದೆ, ತಾವರೆಯಲ್ಲಿದ್ದ ಮುದ್ದಾದ ಮಗುವನ್ನು ನೋಡಿದ ವೃಷಾಭಾನು ಹಾಗೂ ಕೀರ್ತಿ ಮಗುವನ್ನು ತಂದು ರಾಧೆ ಎಂಬ ಹೆಸರಿನಲ್ಲಿ ಬೆಳೆಸುತ್ತಾರೆ. ತುಂಬಾ ವರ್ಷವಾದ ಮೇಲೆ ರಾಧೆ ವಿದರ್ಭ ಬಳಿ ಬರುತ್ತಾಳೆ, ನಂತರ ರುಕ್ಮಣಿಯನ್ನು ಮದುವೆಯಾಗುತ್ತಾಳೆ, ಹೀಗಾಗಿ ರಾಧೆ-ರುಕ್ಮಣಿ ಒಂದೇ ಹೇಳಲಾಗುವುದು.
ಏನೇ ಆಗಲಿ ರಾಧೆ ನಮಗೆ ಪ್ರೀತಿಯ ಸಂದೇಶವನ್ನು ಸಾರುತ್ತಾಳೆ, ಇವರ ಜೋಡಿ ಪ್ರೇಮಿಗಳೆಂದರೆ ಹೀಗಿರಬೇಕು ಎಂಬ ಆದರ್ಶವನ್ನು ಮೂಡಿಸುತ್ತದೆ, ರಾಧೆ ಎಂದೆಂದಿಗೂ ಕೃಷ್ನ ಪ್ರಿಯಳು, ಕೃಷ್ಣನೇ ರಾಧೆಯ ಸರ್ವಸ್ವ, ಹಾಗಾಗಿ ಪ್ರೀತಿಯೆಂದರೆ ಕೃಷ್ಣ-ರಾಧೆಯರಂತೆ ಇರಬೇಕು ಎಂದು ಹೇಳುವುದು.



Click it and Unblock the Notifications









