Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ನಿಮಗೆ ಬಿಪಿಎಲ್ ಕಾರ್ಡ್ ಇದೆಯೇ? ಕ್ಯಾನ್ಸಲ್ ಆಗಿದೆಯೇ ಎಂದು ಪರಿಶೀಲಿಸಿ
ನಿಮ್ಮದು ಬಿಪಿಎಲ್ ಕಾರ್ಡ್ ಇದೆಯೇ? ಹಾಗಾದರೆ ಇನ್ಮುಂದೆ ನಿಮಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗಲಿದೆಯೇ ಎಂಬುವುದರ ಬಗ್ಗೆ ಪರಿಶೀಲನೆ ಮಾಡುವುದು ಒಳ್ಳೆಯದು. ಏಕೆಂದರೆ ಸರ್ಕಾರ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಲ್ ಕಾರ್ಡ್ ಮಾಡಿದೆ, ಈ ಮೂಲಕ ಬಿಪಿಎಲ್ ಸೌಲಭ್ಯ ಇನ್ಮುಂದೆ ಬಹುತೇಕರಿಗೆ ಪಡೆಯಲು ಸಾಧ್ಯವಿಲ್ಲ.

ಯಾರಿಗೆ ಬಿಪಿಎಲ್ ಕಾರ್ಡ್ ಇರಲ್ಲ
ಕುಟುಂಬದಲ್ಲಿ ಯಾರಾದರು ಸರ್ಕಾರಿ ಕೆಲಸದಲ್ಲಿದ್ದರೆ
ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ
ಕೃಷಿ ಭೂಮಿ 3 ಹೆಕ್ಟರ್ ಅಥವಾ ಹೆಚ್ಚಿದರೆ ಅವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಇರಲ್ಲ
ನಗರ ಪ್ರದೇಶದಲ್ಲಿ 1000ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಸ್ವಂತ ಮನೆ ಹೊಂದಿದ್ದರೆ ಈ ಸೌಲಭ್ಯವಿಲ್ಲ
ನಾಲ್ಕು ಚಕ್ರದ ವಾಹನ ಹೊಂದಿದ್ದರೆ ( ಯೆಲ್ಲೋ ಬೋರ್ಡ್ ವಾಹನಕ್ಕೆ ಇದು ಅನ್ವಯಿಸುವುದಿಲ್ಲ)
ಕುಟುಂಬದ ವಾರ್ಷಿಕ ಆದಾಯ 1. 20ಲಕ್ಷಕ್ಕಿಂತಲೂ ಅಧಿಕವಿದ್ದರೆ
ಇವರುಗಳು ಬಿಪಿಎಲ್ ಸೌಲಭ್ಯ ಪಡೆಯಲು ಅರ್ಹರಲ್ಲ.
ಇದೊಂದು ಒಳ್ಳೆ ನಿರ್ಧಾರ ಹೌದು
ಎಷ್ಟೋ ಜನರು ಬಡತನ ರೇಖೆಗಿಂತ ಕಡಿಮೆ ಇರುತ್ತಾರೆ, ಆದರೆ ಇನ್ನು ಕೆಲವರು ಬಡತನ ರೇಖೆಗಿಂತ ಮೇಲೆ ಇರುತ್ತಾರೆ, ಅವರು ಕೂಡ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ಮುಂದೆ ಅಂಥವರಿಗೆ ಈ ಬಿಪಿಎಲ್ ಸೌಲಭ್ ಸಿಗಲ್ಲ, ಇದೊಂದು ಉತ್ತಮ ನಿರ್ಧಾರವಾಗಿದೆ.ಬಿಪಿಎಲ್ ಕಾರ್ಡ್ ಇರುವರಿಗೆ ಸರ್ಕಾರದಿಂದ ಉಚಿತ ಅಕ್ಕಿ ಸೌಲಭ್ಯ ದೊರೆಯುತ್ತಿದೆ, ಆಸ್ಪತ್ರೆಗಳಲ್ಲಿ ಸೌಲಭ್ಯ ದೊರೆಯುತ್ತಿದೆ, ಆದರೆ ಎಪಿಎಲ್ ಅರ್ಹರಾಗಿರುವ ಎಷ್ಟೋ ಜನ ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ತುಂಬಾ ಆರ್ಥಿಕ ಹೊಡೆತ ಉಂಟಾಗುತ್ತಿದೆ. ಈಗ ಆ ಹೊರೆ ಕಡಿಎಯಾಗಲಿದೆ, ಅರ್ಹರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುವುದು.
ಈಗ ಲಕ್ಷಾಂತರ ಮಂದಿಯ ಬಿಪಿಎಲ್ ಕ್ಯಾನ್ಸಲ್ ಆಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುವುದು ಮಾತ್ರ ಅರ್ಹರಷ್ಟೇ ಈ ಕಾರ್ಡ್ ಸೌಲಭ್ಯ ಪಡೆಯುವಂತಾಗುವುದು.
ರೇಷನ್ ಅಕ್ಕಿ ಎಷ್ಟೋ ಜನರಿಗೆ ಹೊಟ್ಟೆ ತುಂಬಿಸುವ ಆಹಾರ, ಆದರೆ ಇನ್ನು ಕೆಲವರು ಉಚಿತ ಅಕ್ಕಿ ದೊರೆಯುತ್ತಿದೆ ಎಂದು ಖರೀದಿಸಿ ಮನೆಯಲ್ಲಿ ನಾಯಿ, ಕೋಳಿ, ದನಕ್ಕೆ ಆಹಾರ ನೀಡುತ್ತಿದ್ದಾರೆ. ರೇಷನ್ ಅಕ್ಕಿಯಿಂದಾಗಿ ಎಷ್ಟೋ ಕುಟುಂಬಗಳು ಹಸಿವಿನಿಂದ ಮಲಗುವುದು ತಪ್ಪುತ್ತಿದೆ. ದುಡಿಯಲು ಅಸಮರ್ಥವಾಗಿರುವವರಿಗೆ ಈ ರೇಷನ್ ಅಕ್ಕಿ ವರದಾನವಾಗಿದೆ. ಸರ್ಕಾರವು ಈಗ ಮಾಡಿರುವ ಕಾರ್ಯ ಒಳ್ಳೆಯದೇ, ಆದರೆ ಕೆಲವೊಂದು ಕುಟುಂಬಕ್ಕೆ ಇದರ ಅಗ್ಯತ ತುಂಬಾನೇ ಇರುತ್ತದೆ, ಅಂಥ ಕುಟುಂಬವನ್ನು ಗುರುತಿಸುವ ಪ್ರಯತ್ನ ಮಾಡಬೇಕಾಗುತ್ತದೆ, ಅವರಿಗೆ ಮತ್ತಷ್ಟು ಉಚಿತ ಸೌಲಭ್ಯ ನೀಡುವ ಕಾರ್ಯ ಮಾಡಬೇಕು. ಈಗ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡುತ್ತಿದೆ, ಕೆಲವರಿಗೆ ವಯಸ್ಸಾಗಿರುತ್ತದೆ, ದುಡಿದು ತಂದು ಹಾಕುವವರು ಇರಲ್ಲ, ಅಂಥ ಕುಟುಂಬ ಗುರುತಿಸಿ ಅವರಿಗೆ ಒಬ್ಬ ಸದಸ್ಯನಿಗೆ 10-12 ಕೆಜಿ ಅಕ್ಕಿ ಕೊಟ್ಟರೆ ಅವರ ಜೀವನ ಮತ್ತಷ್ಟು ಸುಲಭವಾಗುವುದು.
ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆದರೆ ಏನಾಗುತ್ತೆ?
ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆದರೆ ಅವರಿಗೆ ಎಪಿಎಲ್ ಕಾರ್ಡ್ ಸಿಗಲಿದೆ, ಎಪಿಎಲ್ ಕಾರ್ಡ್ ಇರುವವರಿಗೆ ಯಾವುದೇ ಬದಲಾವಣೆಯಾಗುವುದಿಲ್ಲ.
ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆದರೆ ಏನಾಗುತ್ತೆ?
ನೀವು ಬಿಪಿಎಲ್ ಕಾರ್ಡ್ನ ಮಾನದಂಡದೊಳಗಡೆ ಇರದಿದ್ದರೆ ಬಿಪಿಎಲ್ ಸೌಲಭ್ಯ ಪಡೆಯುವಂತಿಲ್ಲ, ಒಂದು ವೇಳೆ ಪಡೆದರೆಪ್ರತಿ ಕೆಜಿಗೆ 33 ರುಪಾಯಿಯಂತೆ ದಂಡ ಕಟ್ಟಬೇಕಾಗುತ್ತದೆ. ದಂಡ ಪಾವತಿ ಮಾಡಲು ನಿರಾಕರಿಸಿದವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



Click it and Unblock the Notifications