Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಅಘೋರಿ ಯಾರು? ಕುಂಭಮೇಳದಲ್ಲಿ ಇವರೇ ಪ್ರಮುಖ ಆಕರ್ಷಣೆ, ಏಕೆ?
ಅಘೋರಿಗಳನ್ನು ಕೆಲವರು ನೋಡಿರುತ್ತಾರೆ ಆದರೆ ಎಲ್ಲರಿಗೂ ಈ ಅಘೋರಿಗಳ ಬಗ್ಗೆ ಓದಿಯೋ ಅಥವಾ ಯಾರಾದರು ಹೇಳಿರುವುದನ್ನು ಕೇಳಿ ಗೊತ್ತಿರುತ್ತದೆ. ಅಘೋರಿಗಳು ಮನುಷ್ಯರೇ ಆದರು ಸಾಮಾನ್ಯ ಜನರಿಗೆ ಅವರನ್ನು ನೋಡುವಾಗ ಭಯ ಉಂಟಾಗುತ್ತೆ.
ಅವರನ್ನು ಕುತೂಹಲದಿಂದ ಕಣ್ಣುಗಳಿಂದ ನೋಡುತ್ತೇವೆ, ಅದಕ್ಕೆ ಕಾರಣವ ಅವರ ವೇಷ ಭೂಷಣ ಮಾತ್ರವಲ್ಲ ಅವರ ಆಚಾರಗಳು ಕೂಡ, ಯಾವುದೋ ಶಕ್ತಿ ಅವರನ್ನು ಆವರಿಸಿಕೊಂಡಿದೆ ಎಂದನಿಸುವುದು.

ಅಘೋರಿಗಳು ಹಿಮಾಲಯದಲ್ಲಿ ಕಂಡು ಬರುತ್ತಾರೆ, ಇನ್ನು ಕೆಲವೊಂದು ಧಾರ್ಮಿಕ ಆಚರಣೆಗಳಲ್ಲಿ ಕಂಡು ಬರುತ್ತಾರೆ, ಅದರಲ್ಲಿಯೂ ಕುಂಭಮೇಳ ನಡೆಯುವಾಗ ಸಾಕಷ್ಟು ಸಂಖ್ಯೆಯಲ್ಲಿ ಅಘೋರಿಗಳು ಬರುತ್ತಾರೆ. ಯಾರು ಈ ಅಘೋರಿಗಳು, ಈ ಅಘೋರಿಗಳ ವಿಶೇಷತೆಯೇನು? ಎಂದು ನೋಡೋಣ ಬನ್ನಿ:
ಅಘೋರಿಗಳು ಎಂದರೇನು?
ಅಘೋರಿಗಳು ಶಿವ ಭಕ್ತರು, ಮೋಕ್ಷ ಪಡೆಯುವುದೇ ಅವರ ಪ್ರಮುಖ ಗುರಿಯಾಗಿರುತ್ತದೆ, ಅಘೋರಿ ಎಂಬು ಸಂಸ್ಕೃತ ಪದ, ಅಘೋರ ಎಂಬುವುದು ಭಯವಿಲ್ಲದವರು ಎಂದರ್ಥ, ಇವರಿಗೆ ಯಾವುದೇ ಭಯವಿರಲ್ಲ, ಇವರಿಗೆ ಯಾವುದೇ ಭಾವನಾತ್ಮಕ ಬಾಂಧವ್ಯ ಇರಲ್ಲ, ಸಮಾಜದ ಯಾವುದೇ ನಿಯಮಗಳು ಕಟ್ಟುಪಾಡುಗಳಿಲ್ಲ.
ಅಘೋರಿಗಳ ನಿಯಮಗಳು ತುಂಬಾನೇ ವಿಚಿತ್ರವಾಗಿರುತ್ತದೆ?
ಅಘೋರಿಗಳನ್ನು ನೋಡುವಾಗಲೇ ಅವರು ಅಘೋರಿಗಳು ಎಂದು ಗೊತ್ತಾಗುತ್ತದೆ. ಅಘೋರಿಗಳನ್ನು ನೋಡುವಾಗಲೇ ಅವರು ಅಘೋರಿಗಳು ಎಂದು ಗೊತ್ತಾಗುವುದು. ಅವರ ಮೈಪೂರ್ತಿ ಬೂದಿಯನ್ನು ಮೆತ್ತಿರುತ್ತಾರೆ. ಇವರು ವಾಮಾಚರ, ಮಂತ್ರಗಳನ್ನು ಅಭ್ಯಾಸ ಮಾಡುತ್ತಿರುತ್ತಾರೆ, ಅಲ್ಲದೆ ಇವರು ಶವ ಸಂಭೋಗ ಮಾಡುತ್ತಾರೆ, ಸತ್ತ ಮನುಷ್ಯ ಮಾಂಸವನ್ನು ಭಕ್ಷ್ಯ ಮಾಡುತ್ತಾರೆ, ಶವದ ಮೇಲೆ ಕುಳಿತು ಇವರು ಪೂಜೆಗಳನ್ನು ಮಾಡುತ್ತಾರೆ. ಅಘೋರಿಗಳಿಗೆ ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ. ಇವರು ಗಾಂಜಾ ಸೇವಿಸುತ್ತಾರೆ.
ಅಘೋರಿಗಳು ಒಂದೇ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ
ಅಘೋರಿಗಳು ಯಾವುದೇ ಒಂದೇ ಸ್ಥಳದಲ್ಲಿ ನೆಲೆ ನಿಲ್ಲುವುದಿಲ್ಲ, ವಾರಾಣಸಿ, ಕಾಶಿ, ಹಿಮಾಲಯ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಇವರು ಮದ್ಯ, ಮಾಂಸ, ಗಾಂಜಾ ಇವೆಲ್ಲವನ್ನೂ ಸೇವಿಸುತ್ತಾರೆ. ಇವರು ತಮ್ಮ ಜೊತೆ ಯಾವಾಗಲೂ ಮಾನವನ ತಲೆಬುರುಡೆಗಳನ್ನು ತಮ್ಮ ಜೊತೆ ಇಟ್ಟುಕೊಳ್ಳುತ್ತಾರೆ, ಅಲ್ಲದೆ ಮೈಗ ಬಟ್ಟೆ ಧರಿಸಿದೆ ಮೈಗೆ ಬೂದಿ ಮೆತ್ತಿ ಸುತ್ತಾಡುತ್ತಿರುತ್ತಾರೆ. ಕೆಲವರು ಖಾವಿ ವಸ್ತ್ರ ಧರಿಸಿರುತ್ತಾರೆ.
ಅಘೋರಿಗಳು ಸತ್ತಾಗ ಅವರನ್ನು ನಮ್ಮಂತೆ ಶವ ಸಂಸ್ಕಾರ ಮಾಡುವುದಿಲ್ಲ
ಅಘೋರಿಗಳು ಸತ್ತಾಗ ಅವರನ್ನು ನಮ್ಮಂತೆ ಹೂಳುವುದು ಅಥವಾ ಸುಡುವುದು ಮಾಡುವುದಿಲ್ಲ, ಅದರ ಬದಲಿಗೆ ಅವರ ಶವವನ್ನು ಗಂಗಾನದಿಯಲ್ಲಿ ತೇಲಿ ಬಿಡಲಾಗುವುದು. ಅಘೋರಿಗಳು ತಮ್ಮ ಸಾವನ್ನು ತಾವೇ ನಿಶ್ಚಯ ಮಾಡುತ್ತಾರೆ. ಇವರು ಸಾವಿನ ಸಮಯ ಸಮೀಪಿಸಿದಾಗ ಹಿಮಾಲಯದಲ್ಲಿ ಲೀನವಾಗುತ್ತಾರೆ ಎಂದು ಹೇಳಲಾಗುವುದು.
ಕುಂಭ ಮೇಳದಲ್ಲಿ ಗಮನ ಸೆಳೆಯುವ ಅಘೋರಿಗಳು
ಕುಂಭ ಮೇಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಘೋರಿಗಳು ಬರ್ತಾರೆ, ಅವರನ್ನು ನೋಡಲೆಂದೇ ತುಂಬಾ ಜನ ಬರುತ್ತಾರೆ. ಕುಂಭ ಮೇಳಕ್ಕೆ ಬರುವ ಅಘೋರಿಗಳು ಅಲ್ಲಿ, ಪೂಜೆ, ವಿವಿಧ ಭಂಗಿಯಲ್ಲಿ ಧ್ಯಾನ ಅಂತ ಗಮನ ಸೆಳೆಯುತ್ತಾರೆ. ಕುಂಭ ಮೇಳಕ್ಕೆ ಬರುವ ವಿದೇಶಿಗರಿಗಂತೂ ಇವರೇ ಪ್ರಮುಖ ಆಕರ್ಷಣೆ, ಇವರ ಬಗ್ಗೆ ಡಾಕ್ಯೂಮೆಂಟ್ ಮಾಡುತ್ತಾರೆ. ಕೆಲವರು ಇವರ ಬಗ್ಗೆ ತಪ್ಪಾಗಿ ಕೂಡ ಮಾತನಾಡುತ್ತಾರೆ, ಆದರೆ ಅಘೋರಿಗಳು ಯಾರನ್ನೂ ಹೆದರುವುದಿಲ್ಲ, ಯಾರ ಬಗ್ಗೆ ಕೂಡ ಕೇರ್ ಮಾಡುವುದಿಲ್ಲ.



Click it and Unblock the Notifications











