Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮಹಾಶಿವರಾತ್ರಿಯಂದು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ.!
ಮಹಾಶಿವರಾತ್ರಿ ಶಿವನನ್ನು ಒಲಿಸಿಕೊಳ್ಳಲು ಮತ್ತು ಅವನ ಆಶೀರ್ವಾದ ಪಡೆಯಲು ಇರುವ ಪವಿತ್ರ ದಿನವಾಗಿದೆ. ಈ ವರ್ಷ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬ ಬಂದಿದೆ. ಈ ವರ್ಷ, ಇದನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು, ಅಂದರೆ ಮಾರ್ಚ್ 8 ರಂದು ಆಚರಿಸಲಾಗುತ್ತದೆ.
ಪದ್ಮರಾಜರಾತ್ರಿ ಎಂದೂ ಕರೆಯುವ ಶಿವರಾತ್ರಿ 2024 ಸಾಲಿನಲ್ಲಿ ಮಾರ್ಚ್ 8ರಂದು ಆಚರಿಸಲಾಗುತ್ತಿದೆ. ಆಡಂಬರ ಬಯಸದ ಶಿವ ಶುದ್ಧ ಮನಸ್ಸಿನಿಂದ, ಶುಭ್ರ ಬಟ್ಟೆತೊಟ್ಟು ಪೂಜಿಸಿ. ಈ ದಿನ ಬೆಳಿಗ್ಗೆಯೇ ಶಿವಲಿಂಗಕ್ಕೆ ಹಾಲು, ತುಪ್ಪ, ಜೇನುತುಪ್ಪ, ಗಂಧ, ಅರಿಶಿನ, ಗಂಗಾಜಲದಲ್ಲಿ ಅಭಿಷೇಕ ಮಾಡಿದರೆ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ.

ಈ ದಿನದೊಂದಿಗೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ಅನುಸರಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ ಮತ್ತು ಮಂಗಳಕರವಾಗಿರುತ್ತದೆ. ಈ ಹಬ್ಬವು ಭಗವಾನ್ ಶಿವನನ್ನು ಬಹಳ ವೈಭವದಿಂದ ಪೂಜಿಸಲು ಸಮರ್ಪಿಸಲಾಗಿದೆ. ಹಾಗಾದರೆ ಶಿವನ ಆರಾಧನೆಯ ಈ ಶುಭದಿನದಂದು ನಾವು ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು ಎಂಬುದನ್ನು ನೋಡಿ.
ಮಹಾಶಿವರಾತ್ರಿಯ ದಿನಂದು ಏನು ಮಾಡಬೇಕು?
ಮಹಾಶಿವರಾತ್ರಿಯ ದಿನದಂದು ಉಪವಾಸವನ್ನು ಆಚರಿಸಲು ಮತ್ತು ಸಂತೋಷ ಮತ್ತು ಸಮೃದ್ಧಿ ವೃದ್ಧಿಗೆ ಶಿವನ ಆರಾಧಿಸಲಾಗುತ್ತದೆ. ಹೀಗಾಗಿ ಇಂದು ಶಿವನ ಆರಾಧನೆ ಚಾಚು ತಪ್ಪದೆ ಮಾಡಿ.
ಅಲ್ಲದೆ, ಶಿವನ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಶಿವಲಿಂಗಕ್ಕೆ ನೀರನ್ನು ಅರ್ಪಿಸಿ.
ವ್ರತ ಕಥಾವನ್ನು ಆಲಿಸಿ ಅಥವಾ ಪಠಿಸಿ ಮತ್ತು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯನ್ನು ಧ್ಯಾನಿಸಿ.
ಶಿವನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಪಡೆಯಲು ನೀವು ಬೆಲ್ಪತ್ರೆ ಮತ್ತು ಹೂವುಗಳನ್ನು ಪೂಜಿಸುವಾಗ ಬಳಸಬೇಕು.
ಮಹಾಶಿವರಾತ್ರಿಯಂದು ಅಗತ್ಯವಿರುವವರಿಗೆ ಸಿಹಿತಿಂಡಿಗಳು, ಆಹಾರ, ಬಟ್ಟೆಯನ್ನು ದಾನ ಮಾಡುವುದರಿಂದ ಶ್ರೇಯಾಭಿವೃದ್ಧಿಯಾಗಲಿದೆ.
ಶಿವನ ಮೆಚ್ಚಿಸಲು ನೀವು ಈ ದಿನದಂದು ಭಜನೆ-ಕೀರ್ತನೆಯನ್ನು ಸಮರ್ಪಿತವಾಗಿ ಮಾಡಬೇಕು. ಜೊತೆಗೆ ಶಿವನ ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿರುವ ಶಿವನ ಮೂರ್ತಿ ಇಲ್ಲವೆ ಪೋಟೋಗೆ ಹಣತೆ ಹಚ್ಚಿ.
ಶಿವನಿಗೆ ಪ್ರಿಯವಾದ ವಾಹನವಾದ ನಂದಿಗೆ ಸಾಧ್ಯವಾದಷ್ಟು ಆಹಾರ ನೀಡಿ, ಇಲ್ಲವೆ ನಂದಿಯ ಕಾಲು ತೊಳೆದು ಪೂಜೆ ಮಾಡಿದರೆ ಒಳಿತಾಗಲಿದೆ.
ಈ ದಿನದಂದು ಶಿವನ ದೇವಾಲಯಕ್ಕೆ ತೆರಳಲು ಸಾಧ್ಯವಾಗದಿದ್ದರೆ ಗಣಪತಿ ದೇವಾಲಯದಲ್ಲೂ ಪೂಜೆ ನೆರವೇರಿಸಬಹುದು.
ಮಹಾಶಿವರಾತ್ರಿಯಂದು ಯಾವ ಕೆಲಸ ಮಾಡಬಾರದು?
ನೀವು ಮಹಾಶಿವರಾತ್ರಿಯಂದು ಮಾಂಸ ಅಥವಾ ಮದ್ಯವನ್ನು ಸೇವಿಸಬಾರದು ಮತ್ತು ಸಾತ್ವಿಕ ಆಹಾರವನ್ನು ಅನುಸರಿಸಬೇಕು.
ಶಿವರಾತ್ರಿಯಂದು ಸುಳ್ಳು ಹೇಳುವುದು, ಮೋಸ ಮಾಡುವ ಕೆಲಸಕ್ಕೆ ಕೈ ಹಾಕಬೇಡಿ.
ವಿಶೇಷವಾಗಿ ಈ ದಿನದಂದು ನೀವು ಯಾವುದೇ ಪಕ್ಷಿ ಅಥವಾ ಪ್ರಾಣಿಯನ್ನು ನೋಯಿಸಿದರೆ ಅದು ಶಿವನನ್ನು ಕೆರಳಿಸುತ್ತದೆ ಎಂದು ನಂಬಲಾಗಿದೆ.
ನೀವು ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಯಾವುದೇ ಘರ್ಷಣೆಗಳಲ್ಲಿ ಪಾಲ್ಗೊಳ್ಳಬಾರದು.
ಶಿವಲಿಂಗಕ್ಕೆ ನೀರನ್ನು ಅರ್ಪಿಸಲು ತಾಮ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಲೋಹವನ್ನು ನೀವು ಬಳಸಬಾರದು (ಶಿವಲಿಂಗದ ಜಲ ಅಭಿಷೇಕವನ್ನು ನಿರ್ವಹಿಸುವ ಪಠಣಗಳು).
ಒಂದು ವೇಳೆ ನೀವು ಶಿವನ ಅಷ್ಟೋತ್ತರ ಮತ್ತು ಶಿವನ ಮಂತ್ರ ಪಠಿಸುವುದಾದರೆ ತಪ್ಪು ತಪ್ಪಾಗಿ ಪಠಿಸಬಾರದು. ಪಠಿಸದಿದ್ದರೂ ಏಣು ಹಾನಿಯಿಲ್ಲ. ಆದರೆ ತಪ್ಪಾಗಿ ಪಠಿಸಬೇಡಿ.
ಇಂದು ನಂದಿ ಇಲ್ಲವೆ ಹಸು, ಗೋವುಗಳಿಗೆ ಹೊಡೆಯುವುದು, ಗಾಯಗೊಳಿವುದನ್ನು ಮಾಡಲೇಬೇಡಿ. ಇದರಿಂದ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.



Click it and Unblock the Notifications