Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ವಿಷು ದಿನ ವಿಷುಕಣಿ ವಿಶೇಷತೆಯೇನು? ಈ ಹಬ್ಬಕ್ಕ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಯುಗಾದಿ- ವಿಷು ಜೊತೆ ಜೊತೆಯಲ್ಲಿಯೇ ಬರುತ್ತದೆ. ಕರ್ನಾಟಕದಲ್ಲಿ ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸಿದರೆ ದಕ್ಷಿಣ ಕನ್ನಡ, ಕೇರಳದಲ್ಲಿ ವಿಷು ಹಬ್ಬ ಆಚರಿಸಲಾಗುವುದು. ಪಂಜಾಬ್ನಲ್ಲಿ ಬೈಸಾಕಿ, ತಮಿಳುನಾಡಿನಲ್ಲಿ ಪುತ್ತಾಂಡ್ ಅಂದರೆ ಹೊಸ ವರ್ಷ ಎಂದು ಆಚರಿಸಲಾಗುವುದು. ಈ ವರ್ಷ ವಿಷು ಹಬ್ಬವನ್ನು ಏಪ್ರಿಲ್ 14ರಂದು ಆಚರಿಸಲಾಗುವುದು.
ವಿಷು ಸಂಕ್ರಾಂತಿಯಂದು ವಿಷು ಹಬ್ಬವನ್ನು ಆಚರಿಸಲಾಗುವುದು, ಇದನ್ನು ಸುಗ್ಗಿಯ ಹಬ್ಬ ಎಂದು ಪರಿಗಣಿಸಲಾಗಿದೆ. ಈ ಹಬ್ಬ ಸಂಪತ್ತು ಪ್ರತಿನಿಧಿಸುತ್ತದೆ, ಈ ದಿನ ಏನನ್ನು ನಾವು ಮೊದಲು ಎದ್ದಾಗ ಕಾಣುತ್ತೇವೆ, ವರ್ಷ ಪೂರ್ತಿ ಹಾಗೆಯೇ ಇರಲಾಗುವುದು ಎಂದು ಹೇಳಲಾಗುವುದು, ಹಾಗಾಗಿಯೇ ಈ ದಿನ ವಿಷು ಕಣಿ ಇಡಲಾಗುವುದು.

ವಿಷುಕಣಿ
ವಿಷು ಕಣಿಯೆಂದರೆ ಒಂದು ತಟ್ಟೆಯಲ್ಲಿ ಹಣ್ಣು, ಹಂಪುಗಳು, ಧಾನ್ಯಗಳು, ಹೂವುಗಳು, ಚಿನ್ನ, ಬೆಳ್ಳಿಯ ಆಭರಣ, ನಾಣ್ಯಗಳು, ಕನ್ನಡಿ ಎಲ್ಲವನ್ನು ವಿಷುಕಣಿಯಾಗಿ ಇಡಲಾಗುವುದು. ಈ ರೀತಿ ವಿಷುಕಣಿಯನ್ನು ರಾತ್ರಿ ಮನೆಯಲ್ಲಿ ಅಮ್ಮಂದಿರು ಸಿದ್ಧ ಮಾಡುತ್ತಾರೆ. ಬೆಳಗ್ಗೆ ಬೇಗನೆ ಎದ್ದು ಖನ್ಣು ಬಿಡಬಶರದು, ಈ ವಿಷುಕಣಿಯನ್ನೇ ಮೊದಲು ನೋಡಬೇಕು. ಮನೆಯಲ್ಲಿ ಹಿರಿಯರು ಮಕ್ಕಳ ಕಣ್ಮುಚ್ಚಿ ಬಂದು ಈ ವಿಷುಕಣಿ ತೋರಿಸುತ್ತಾರೆ. ಈ ದಿನದ ಮಕ್ಕಳಿಗೆ ಹೊಸ ಉಡುಗೆಯನ್ನು ಹಾಕಲಾಗುವುದು, ಹಬ್ಬದ ಅಡುಗೆಯನ್ನು ಮಾಡಲಾಗುವುದು.
ವಿಷು ಕಾಣಿಕೆ
ಈ ದಿನ ಕೈ ನೀಟ ಎಂಬ ಪದ್ಧತಿ ಇದೆ. ಹಿರಿಯರ ಕಾಲಿಗೆ ಬಿದ್ದಾಗ ಅವರ ಮಕ್ಕಳಿಗೆ ಹಣವನ್ನು ನೀಡುತ್ತಾರೆ. ಇದನ್ನು ಕೈನೀಟಮ ಎಂದು ಕರೆಯಲಾಗುವುದು. ಇನ್ನು ಕೆಲಸದಲ್ಲಿರುವ ಮಕ್ಕಳು ತಂದೆ ತಾಯಿಗೆ ಹಣನೀಡಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ.
ವರ್ಷ ಪೂರ್ತಿ ಸೌಭಾಗ್ಯ ನೀಡುತ್ತೆ ಎಂಬ ನಂಬಿಕೆ
ಈ ಹಬ್ಬವನ್ನು ವಿಷುಕಣಿ ನೋಡುವ ಮೂಲಕ ಆಚರಿಸುವುದರಿಂದ ವರ್ಷವಿಡೀ ಸೌಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ. ಈ ಹಬ್ಬದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸಲಾಗುವುದು. ಶ್ರೀಕೃಷ್ಣನಿಗೆ ಪ್ರಿಯವಾದ ಗೋಲ್ಡನ್ ಶವರ್ ( ಕೊಂದೆ ಹೂವು, ಸ್ವರ್ಣ ಪುಷ್ಪ) ಹೂವುಗಳಿಂದ ವಿಷು ಕಣಿ ಅಲಂಕರಿಸಲಾಗುವುದು. ಈ ಹೂವು ಶ್ರೀಕೃಷ್ಣನಿಗೆ ತುಂಬಾನೇ ಪ್ರಿಯವಾದ ಹೂವು ಆಗಿರುವುದರಿಂದ ಇದನ್ನು ವಿಷುಕಣಿಗೆ ಇಡುತ್ತಾರೆ. ಶ್ರೀಕೃಷ್ಣ ಫೋಟೋದ ಮುಂದೆ ವಿಷುಕಣಿ ಇಡಲಾಗುವುದು. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಪೌರಾಣಿಕ ಹಿನ್ನೆಲೆ
ವಿಷು ದಿನದಂದು ಶ್ರೀಕೃಷ್ಣ ದೇವರು ನರಕಾಸುರನನ್ನು ವಧಿಸಿದರು ಎಂಬ ಪ್ರತೀತಿ ಇದೆ. ಇನ್ನು ಇನ್ನೊಂದು ಪುರಾಣ ಕಥೆ ಹೇಳುವಂತೆ ಸೂರ್ಯನನ್ನು ಪೂರ್ವದಿಂದ ಉದಯಿಸಲು ರಾವಣ ಬಿಡುತ್ತಿರಲಿಲ್ಲವಂತೆ ಅಂತೆಯೇ ರಾವಣನ ಮರಣದ ದಿನ ಅದುವೇ ವಿಷು ದಿನವಾಗಿದೆ ಈ ದಿನ ಸೂರ್ಯನು ಪೂರ್ವದಿಂದ ಉದಯಿಸಲು ಆರಂಭಿಸಿದ ಎಂಬುದಾಗಿ ಪುರಾಣಗಳು ಹೇಳುತ್ತಿವೆ. ಸೂರ್ಯನು ಪುನರ್ ಉದಯಿಸಲು ಆರಂಭಿಸಿದ ಕಾಲವೆಂದೇ ಈ ದಿನವನ್ನು ಕೊಂಡಾಡಲಾಗುತ್ತದೆ. ಇಂದಿನ ಲೇಖನದಲ್ಲಿ ವಿಷು ದಿನದ ಇನ್ನಷ್ಟು ಮಹತ್ವ ಅಂಶಗಳನ್ನು ನಾವು ತಿಳಿದುಕೊಳ್ಳೋಣ.
ವಿಷು ದಿನದಂದು ಸ್ಪೆಷಲ್ ಖಾದ್ಯಗಳು
ವಿಷು ದಿನದಂದು ವಿಷು ಕಂಙಿ ಅಂದರೆ ಗಂಜಿ ಮಾಡಲಾಗುವುದು, ಇದನ್ನು ಹಾಲು, ಕಾಳು ಮೆಣಸು ಹಾಕಿ ಮಾಡಲಾಗುವುದು. ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುವುದು, ಆವಿಲ್, ಉಪ್ಪೇರಿ ಹೀಗೆ ತುಂಬಾ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಹಬ್ಬವನ್ನು ಮಾಡಲಾಗುವುದು.
1. ವಿಷು ಹಬ್ಬದ ಶುಭಾಶಯಗಳು
2. ಈ ವಿಷು ವರ್ಷ ಪೂರ್ತಿ ನಿಮಗೆ ಸಂತೋಷ, ಸಮೃದ್ಧಿ ನೀಡಲಿ, ವಿಷ್ಟು ಹಬ್ಬದ ಶುಭಾಶಯಗಳು
3. ವಿಷು ಕಣಿಯಂತೆ ನಿಮ್ಮ ಬದುಕು ಸುಂದರವಾಗಿರಲಿ, ಸಂಪತ್ತು ಹೆಚ್ಚಲಿ
4. ಈ ವಿಷು ನಿಮ್ಮ ಬದುಕಿನಲ್ಲಿ ಹೊಸತನ ತುಂಬಲಿ, ವಿಷುಕಣಿಯಂತೆ ಸಮೃದ್ಧಿ ಹೆಚ್ಚಾಗುವುದು
5. ತುಳುನಾಡಿನ ಜನತೆಗೆ ಬಿಸು ಹಬ್ಬದ ಶುಭಾಶಯಗಳು



Click it and Unblock the Notifications



