Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ವಿಷು ದಿನ ವಿಷುಕಣಿ ವಿಶೇಷತೆಯೇನು? ಈ ಹಬ್ಬಕ್ಕ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಯುಗಾದಿ- ವಿಷು ಜೊತೆ ಜೊತೆಯಲ್ಲಿಯೇ ಬರುತ್ತದೆ. ಕರ್ನಾಟಕದಲ್ಲಿ ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸಿದರೆ ದಕ್ಷಿಣ ಕನ್ನಡ, ಕೇರಳದಲ್ಲಿ ವಿಷು ಹಬ್ಬ ಆಚರಿಸಲಾಗುವುದು. ಪಂಜಾಬ್ನಲ್ಲಿ ಬೈಸಾಕಿ, ತಮಿಳುನಾಡಿನಲ್ಲಿ ಪುತ್ತಾಂಡ್ ಅಂದರೆ ಹೊಸ ವರ್ಷ ಎಂದು ಆಚರಿಸಲಾಗುವುದು. ಈ ವರ್ಷ ವಿಷು ಹಬ್ಬವನ್ನು ಏಪ್ರಿಲ್ 14ರಂದು ಆಚರಿಸಲಾಗುವುದು.
ವಿಷು ಸಂಕ್ರಾಂತಿಯಂದು ವಿಷು ಹಬ್ಬವನ್ನು ಆಚರಿಸಲಾಗುವುದು, ಇದನ್ನು ಸುಗ್ಗಿಯ ಹಬ್ಬ ಎಂದು ಪರಿಗಣಿಸಲಾಗಿದೆ. ಈ ಹಬ್ಬ ಸಂಪತ್ತು ಪ್ರತಿನಿಧಿಸುತ್ತದೆ, ಈ ದಿನ ಏನನ್ನು ನಾವು ಮೊದಲು ಎದ್ದಾಗ ಕಾಣುತ್ತೇವೆ, ವರ್ಷ ಪೂರ್ತಿ ಹಾಗೆಯೇ ಇರಲಾಗುವುದು ಎಂದು ಹೇಳಲಾಗುವುದು, ಹಾಗಾಗಿಯೇ ಈ ದಿನ ವಿಷು ಕಣಿ ಇಡಲಾಗುವುದು.

ವಿಷುಕಣಿ
ವಿಷು ಕಣಿಯೆಂದರೆ ಒಂದು ತಟ್ಟೆಯಲ್ಲಿ ಹಣ್ಣು, ಹಂಪುಗಳು, ಧಾನ್ಯಗಳು, ಹೂವುಗಳು, ಚಿನ್ನ, ಬೆಳ್ಳಿಯ ಆಭರಣ, ನಾಣ್ಯಗಳು, ಕನ್ನಡಿ ಎಲ್ಲವನ್ನು ವಿಷುಕಣಿಯಾಗಿ ಇಡಲಾಗುವುದು. ಈ ರೀತಿ ವಿಷುಕಣಿಯನ್ನು ರಾತ್ರಿ ಮನೆಯಲ್ಲಿ ಅಮ್ಮಂದಿರು ಸಿದ್ಧ ಮಾಡುತ್ತಾರೆ. ಬೆಳಗ್ಗೆ ಬೇಗನೆ ಎದ್ದು ಖನ್ಣು ಬಿಡಬಶರದು, ಈ ವಿಷುಕಣಿಯನ್ನೇ ಮೊದಲು ನೋಡಬೇಕು. ಮನೆಯಲ್ಲಿ ಹಿರಿಯರು ಮಕ್ಕಳ ಕಣ್ಮುಚ್ಚಿ ಬಂದು ಈ ವಿಷುಕಣಿ ತೋರಿಸುತ್ತಾರೆ. ಈ ದಿನದ ಮಕ್ಕಳಿಗೆ ಹೊಸ ಉಡುಗೆಯನ್ನು ಹಾಕಲಾಗುವುದು, ಹಬ್ಬದ ಅಡುಗೆಯನ್ನು ಮಾಡಲಾಗುವುದು.
ವಿಷು ಕಾಣಿಕೆ
ಈ ದಿನ ಕೈ ನೀಟ ಎಂಬ ಪದ್ಧತಿ ಇದೆ. ಹಿರಿಯರ ಕಾಲಿಗೆ ಬಿದ್ದಾಗ ಅವರ ಮಕ್ಕಳಿಗೆ ಹಣವನ್ನು ನೀಡುತ್ತಾರೆ. ಇದನ್ನು ಕೈನೀಟಮ ಎಂದು ಕರೆಯಲಾಗುವುದು. ಇನ್ನು ಕೆಲಸದಲ್ಲಿರುವ ಮಕ್ಕಳು ತಂದೆ ತಾಯಿಗೆ ಹಣನೀಡಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ.
ವರ್ಷ ಪೂರ್ತಿ ಸೌಭಾಗ್ಯ ನೀಡುತ್ತೆ ಎಂಬ ನಂಬಿಕೆ
ಈ ಹಬ್ಬವನ್ನು ವಿಷುಕಣಿ ನೋಡುವ ಮೂಲಕ ಆಚರಿಸುವುದರಿಂದ ವರ್ಷವಿಡೀ ಸೌಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ. ಈ ಹಬ್ಬದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸಲಾಗುವುದು. ಶ್ರೀಕೃಷ್ಣನಿಗೆ ಪ್ರಿಯವಾದ ಗೋಲ್ಡನ್ ಶವರ್ ( ಕೊಂದೆ ಹೂವು, ಸ್ವರ್ಣ ಪುಷ್ಪ) ಹೂವುಗಳಿಂದ ವಿಷು ಕಣಿ ಅಲಂಕರಿಸಲಾಗುವುದು. ಈ ಹೂವು ಶ್ರೀಕೃಷ್ಣನಿಗೆ ತುಂಬಾನೇ ಪ್ರಿಯವಾದ ಹೂವು ಆಗಿರುವುದರಿಂದ ಇದನ್ನು ವಿಷುಕಣಿಗೆ ಇಡುತ್ತಾರೆ. ಶ್ರೀಕೃಷ್ಣ ಫೋಟೋದ ಮುಂದೆ ವಿಷುಕಣಿ ಇಡಲಾಗುವುದು. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಪೌರಾಣಿಕ ಹಿನ್ನೆಲೆ
ವಿಷು ದಿನದಂದು ಶ್ರೀಕೃಷ್ಣ ದೇವರು ನರಕಾಸುರನನ್ನು ವಧಿಸಿದರು ಎಂಬ ಪ್ರತೀತಿ ಇದೆ. ಇನ್ನು ಇನ್ನೊಂದು ಪುರಾಣ ಕಥೆ ಹೇಳುವಂತೆ ಸೂರ್ಯನನ್ನು ಪೂರ್ವದಿಂದ ಉದಯಿಸಲು ರಾವಣ ಬಿಡುತ್ತಿರಲಿಲ್ಲವಂತೆ ಅಂತೆಯೇ ರಾವಣನ ಮರಣದ ದಿನ ಅದುವೇ ವಿಷು ದಿನವಾಗಿದೆ ಈ ದಿನ ಸೂರ್ಯನು ಪೂರ್ವದಿಂದ ಉದಯಿಸಲು ಆರಂಭಿಸಿದ ಎಂಬುದಾಗಿ ಪುರಾಣಗಳು ಹೇಳುತ್ತಿವೆ. ಸೂರ್ಯನು ಪುನರ್ ಉದಯಿಸಲು ಆರಂಭಿಸಿದ ಕಾಲವೆಂದೇ ಈ ದಿನವನ್ನು ಕೊಂಡಾಡಲಾಗುತ್ತದೆ. ಇಂದಿನ ಲೇಖನದಲ್ಲಿ ವಿಷು ದಿನದ ಇನ್ನಷ್ಟು ಮಹತ್ವ ಅಂಶಗಳನ್ನು ನಾವು ತಿಳಿದುಕೊಳ್ಳೋಣ.
ವಿಷು ದಿನದಂದು ಸ್ಪೆಷಲ್ ಖಾದ್ಯಗಳು
ವಿಷು ದಿನದಂದು ವಿಷು ಕಂಙಿ ಅಂದರೆ ಗಂಜಿ ಮಾಡಲಾಗುವುದು, ಇದನ್ನು ಹಾಲು, ಕಾಳು ಮೆಣಸು ಹಾಕಿ ಮಾಡಲಾಗುವುದು. ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುವುದು, ಆವಿಲ್, ಉಪ್ಪೇರಿ ಹೀಗೆ ತುಂಬಾ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಹಬ್ಬವನ್ನು ಮಾಡಲಾಗುವುದು.
1. ವಿಷು ಹಬ್ಬದ ಶುಭಾಶಯಗಳು
2. ಈ ವಿಷು ವರ್ಷ ಪೂರ್ತಿ ನಿಮಗೆ ಸಂತೋಷ, ಸಮೃದ್ಧಿ ನೀಡಲಿ, ವಿಷ್ಟು ಹಬ್ಬದ ಶುಭಾಶಯಗಳು
3. ವಿಷು ಕಣಿಯಂತೆ ನಿಮ್ಮ ಬದುಕು ಸುಂದರವಾಗಿರಲಿ, ಸಂಪತ್ತು ಹೆಚ್ಚಲಿ
4. ಈ ವಿಷು ನಿಮ್ಮ ಬದುಕಿನಲ್ಲಿ ಹೊಸತನ ತುಂಬಲಿ, ವಿಷುಕಣಿಯಂತೆ ಸಮೃದ್ಧಿ ಹೆಚ್ಚಾಗುವುದು
5. ತುಳುನಾಡಿನ ಜನತೆಗೆ ಬಿಸು ಹಬ್ಬದ ಶುಭಾಶಯಗಳು



Click it and Unblock the Notifications



