Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕರುವಿನ ಮೇಲೆ ದಾಳಿ ಮಾಡಿದ ಹುಲಿ, ಪುಣ್ಯಕೋಟಿ ಮಾಡಿದ ಕಾರ್ಯನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು
ಪುಣ್ಯಕೋಟಿ ಕತೆ ನಿಮಗೆಲ್ಲಾ ಗೊತ್ತಿರಬಹುದು. ದುಷ್ಟ ವ್ಯಾಘ್ರನು ಹಸುವನ್ನು ತಿನ್ನಲು ಮುಂದಾದಾಗ ನನ್ನ ಕಂದನು ನನ್ನನ್ನು ಕಾಯುತ್ತಾ ಹಟ್ಟಿಯಲ್ಲಿದೆ, ಅದಕ್ಕೆ ಹಾಲುಣಿಸಿ ಬಂದ ನಿನಗೆ ಆಹಾರವಾಗುವೆ ಎಂದು ಹೇಳಿ ಆ ಪುಣ್ಯಕೋಟಿ ಕೊನೆಯ ಬಾರಿ ತನ್ನ ಕಂದನಿಗೆ ಹಾಲುಣಿಸಿ ಬರುತ್ತೇನೆ ಎಂದು ತೆರಳುತ್ತದೆ. ಆದರೆ ಈ ರಿಯಲ್ ಕತೆ ಕೂಡ ಪುಣ್ಯಕೋಟಿ ಹಾಗೂ ಹುಲಿಗೆ ಸಂಬಂಧಿಸಿದ್ದೇ ಆದರೆ ಇದರಲ್ಲಿರುವ ಟ್ವಿಸ್ಟ್ ಮಾತ್ರ ರೋಚಕ...
ಹುಲಿಯೊಂದು ಆಹಾರ ಹುಡುಕುತ್ತಾ ನಾಡಿಗೆ ಬಂದಿದೆ, ಅಲ್ಲಿ ಹಸುಗಳ ದಂಡು ಆಹಾರ ಮೇಯುತ್ತಿರುವುದನ್ನು ಕಂಡು ಸೀದಾ ಅವುಗಳತ್ತ ದಾಳಿ ಮಾಡಲು ಹೋಗುತ್ತದೆ. ಹುಲಿಯನ್ನು ನೋಡಿದ ತಕ್ಷಣ ಹಸುಗಳು ಪ್ರಾಣ ರಕ್ಷಣೆಗೆ ಓಡಿ ಹೋಗುತ್ತವೆ, ಆದರೆ ಪಾಪ ಕರುವೊಂದು ಹುಲಿ ಸಿಕ್ಕಾಕಿಕೊಳ್ಳುತ್ತದೆ. ಹುಲಿ ಕರುವನ್ನು ಹಿಡಿದು ಇನ್ನೇನು ಅದನ್ನು ಸಾಯಿಸಬೇಕು, ಅಷ್ಟರಲ್ಲಿ ಅದರ ತಾಯಿ ಕರುವಿನ ರಕ್ಷಣೆ ಓಡಿ ಮಾಡುತ್ತದೆ.

ತನ್ನ ಕರುವನ್ನು ದುಷ್ಟ ವ್ಯಾಘ್ರನ ವಿರುದ್ಧ ಸೆಣಸಿ ರಕ್ಷಣೆ ಮಾಡುತ್ತದೆ. ಹಸುವಿನ ದಾಳಿಯಿಂದ ಕಂಗಲಾದ ಹುಲಿ ಅಲ್ಲಿಂದ ಓಡಿ ಹೋಗುತ್ತದೆ. ಇದೀಗ ಈ ಅದ್ಭುತ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹೆತ್ತ ಕಂದನ ರಕ್ಷಣೆಗೆ ಪಾಪದ ಹಸು ಕೂಡ ಹುಲಿಯ ಜೊತೆ ಹೋರಾಡುತ್ತದೆ ಎಂದರೆ ಅದಲ್ಲವೇ ತಾಯ್ತನದ ಶಕ್ತಿ. ಎಂಥದ್ದೇ ಪರಿಸ್ಥಿತಿ ಬರಲಿ ಹೆತ್ತ ತಾಯಿ ತನ್ನ ಕಂದನ ಎಂದಿಗೂ ಬಿಟ್ಟುಕೊಡಲ್ಲ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಕೆಲವರು ಜನರಿರುವ ಪ್ರದೇಶಕ್ಕೆ ಹುಲಿ ಬಾರದಂತೆ ತಡೆಯಬೇಕಾಗಿದೆ. ವಿಶ್ವದ ಶೇ. 75ರಷ್ಟು ಹುಲಿ ಭಾರತದಲ್ಲಿದೆ, ಸದ್ಯಕ್ಕೆ ಹುಲಿಗಳ ಸಂಖ್ಯೆ 3200 ಇದೆ, ಇವುಗಳ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ. ಹುಲಿಗಳನ್ನು ಸಂರಕ್ಷಿತ ಕಾಡಿನಲ್ಲಿ ಬಿಡಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾವು ಮನುಷ್ಯರ ಕಾಡನ್ನು ನಾಶ ಪಡಿಸಿದರ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನೆಟ್ಟಿಗರನ್ನು ಪುಣ್ಯಕೋಟಿ ಕತೆ ನೆನಪು ಮಾಡುವಂತೆ ಮಾಡಿದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ....



Click it and Unblock the Notifications