Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಕರುವಿನ ಮೇಲೆ ದಾಳಿ ಮಾಡಿದ ಹುಲಿ, ಪುಣ್ಯಕೋಟಿ ಮಾಡಿದ ಕಾರ್ಯನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು
ಪುಣ್ಯಕೋಟಿ ಕತೆ ನಿಮಗೆಲ್ಲಾ ಗೊತ್ತಿರಬಹುದು. ದುಷ್ಟ ವ್ಯಾಘ್ರನು ಹಸುವನ್ನು ತಿನ್ನಲು ಮುಂದಾದಾಗ ನನ್ನ ಕಂದನು ನನ್ನನ್ನು ಕಾಯುತ್ತಾ ಹಟ್ಟಿಯಲ್ಲಿದೆ, ಅದಕ್ಕೆ ಹಾಲುಣಿಸಿ ಬಂದ ನಿನಗೆ ಆಹಾರವಾಗುವೆ ಎಂದು ಹೇಳಿ ಆ ಪುಣ್ಯಕೋಟಿ ಕೊನೆಯ ಬಾರಿ ತನ್ನ ಕಂದನಿಗೆ ಹಾಲುಣಿಸಿ ಬರುತ್ತೇನೆ ಎಂದು ತೆರಳುತ್ತದೆ. ಆದರೆ ಈ ರಿಯಲ್ ಕತೆ ಕೂಡ ಪುಣ್ಯಕೋಟಿ ಹಾಗೂ ಹುಲಿಗೆ ಸಂಬಂಧಿಸಿದ್ದೇ ಆದರೆ ಇದರಲ್ಲಿರುವ ಟ್ವಿಸ್ಟ್ ಮಾತ್ರ ರೋಚಕ...
ಹುಲಿಯೊಂದು ಆಹಾರ ಹುಡುಕುತ್ತಾ ನಾಡಿಗೆ ಬಂದಿದೆ, ಅಲ್ಲಿ ಹಸುಗಳ ದಂಡು ಆಹಾರ ಮೇಯುತ್ತಿರುವುದನ್ನು ಕಂಡು ಸೀದಾ ಅವುಗಳತ್ತ ದಾಳಿ ಮಾಡಲು ಹೋಗುತ್ತದೆ. ಹುಲಿಯನ್ನು ನೋಡಿದ ತಕ್ಷಣ ಹಸುಗಳು ಪ್ರಾಣ ರಕ್ಷಣೆಗೆ ಓಡಿ ಹೋಗುತ್ತವೆ, ಆದರೆ ಪಾಪ ಕರುವೊಂದು ಹುಲಿ ಸಿಕ್ಕಾಕಿಕೊಳ್ಳುತ್ತದೆ. ಹುಲಿ ಕರುವನ್ನು ಹಿಡಿದು ಇನ್ನೇನು ಅದನ್ನು ಸಾಯಿಸಬೇಕು, ಅಷ್ಟರಲ್ಲಿ ಅದರ ತಾಯಿ ಕರುವಿನ ರಕ್ಷಣೆ ಓಡಿ ಮಾಡುತ್ತದೆ.

ತನ್ನ ಕರುವನ್ನು ದುಷ್ಟ ವ್ಯಾಘ್ರನ ವಿರುದ್ಧ ಸೆಣಸಿ ರಕ್ಷಣೆ ಮಾಡುತ್ತದೆ. ಹಸುವಿನ ದಾಳಿಯಿಂದ ಕಂಗಲಾದ ಹುಲಿ ಅಲ್ಲಿಂದ ಓಡಿ ಹೋಗುತ್ತದೆ. ಇದೀಗ ಈ ಅದ್ಭುತ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹೆತ್ತ ಕಂದನ ರಕ್ಷಣೆಗೆ ಪಾಪದ ಹಸು ಕೂಡ ಹುಲಿಯ ಜೊತೆ ಹೋರಾಡುತ್ತದೆ ಎಂದರೆ ಅದಲ್ಲವೇ ತಾಯ್ತನದ ಶಕ್ತಿ. ಎಂಥದ್ದೇ ಪರಿಸ್ಥಿತಿ ಬರಲಿ ಹೆತ್ತ ತಾಯಿ ತನ್ನ ಕಂದನ ಎಂದಿಗೂ ಬಿಟ್ಟುಕೊಡಲ್ಲ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಕೆಲವರು ಜನರಿರುವ ಪ್ರದೇಶಕ್ಕೆ ಹುಲಿ ಬಾರದಂತೆ ತಡೆಯಬೇಕಾಗಿದೆ. ವಿಶ್ವದ ಶೇ. 75ರಷ್ಟು ಹುಲಿ ಭಾರತದಲ್ಲಿದೆ, ಸದ್ಯಕ್ಕೆ ಹುಲಿಗಳ ಸಂಖ್ಯೆ 3200 ಇದೆ, ಇವುಗಳ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ. ಹುಲಿಗಳನ್ನು ಸಂರಕ್ಷಿತ ಕಾಡಿನಲ್ಲಿ ಬಿಡಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾವು ಮನುಷ್ಯರ ಕಾಡನ್ನು ನಾಶ ಪಡಿಸಿದರ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನೆಟ್ಟಿಗರನ್ನು ಪುಣ್ಯಕೋಟಿ ಕತೆ ನೆನಪು ಮಾಡುವಂತೆ ಮಾಡಿದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ....



Click it and Unblock the Notifications











