Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕರುವಿನ ಮೇಲೆ ದಾಳಿ ಮಾಡಿದ ಹುಲಿ, ಪುಣ್ಯಕೋಟಿ ಮಾಡಿದ ಕಾರ್ಯನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು
ಪುಣ್ಯಕೋಟಿ ಕತೆ ನಿಮಗೆಲ್ಲಾ ಗೊತ್ತಿರಬಹುದು. ದುಷ್ಟ ವ್ಯಾಘ್ರನು ಹಸುವನ್ನು ತಿನ್ನಲು ಮುಂದಾದಾಗ ನನ್ನ ಕಂದನು ನನ್ನನ್ನು ಕಾಯುತ್ತಾ ಹಟ್ಟಿಯಲ್ಲಿದೆ, ಅದಕ್ಕೆ ಹಾಲುಣಿಸಿ ಬಂದ ನಿನಗೆ ಆಹಾರವಾಗುವೆ ಎಂದು ಹೇಳಿ ಆ ಪುಣ್ಯಕೋಟಿ ಕೊನೆಯ ಬಾರಿ ತನ್ನ ಕಂದನಿಗೆ ಹಾಲುಣಿಸಿ ಬರುತ್ತೇನೆ ಎಂದು ತೆರಳುತ್ತದೆ. ಆದರೆ ಈ ರಿಯಲ್ ಕತೆ ಕೂಡ ಪುಣ್ಯಕೋಟಿ ಹಾಗೂ ಹುಲಿಗೆ ಸಂಬಂಧಿಸಿದ್ದೇ ಆದರೆ ಇದರಲ್ಲಿರುವ ಟ್ವಿಸ್ಟ್ ಮಾತ್ರ ರೋಚಕ...
ಹುಲಿಯೊಂದು ಆಹಾರ ಹುಡುಕುತ್ತಾ ನಾಡಿಗೆ ಬಂದಿದೆ, ಅಲ್ಲಿ ಹಸುಗಳ ದಂಡು ಆಹಾರ ಮೇಯುತ್ತಿರುವುದನ್ನು ಕಂಡು ಸೀದಾ ಅವುಗಳತ್ತ ದಾಳಿ ಮಾಡಲು ಹೋಗುತ್ತದೆ. ಹುಲಿಯನ್ನು ನೋಡಿದ ತಕ್ಷಣ ಹಸುಗಳು ಪ್ರಾಣ ರಕ್ಷಣೆಗೆ ಓಡಿ ಹೋಗುತ್ತವೆ, ಆದರೆ ಪಾಪ ಕರುವೊಂದು ಹುಲಿ ಸಿಕ್ಕಾಕಿಕೊಳ್ಳುತ್ತದೆ. ಹುಲಿ ಕರುವನ್ನು ಹಿಡಿದು ಇನ್ನೇನು ಅದನ್ನು ಸಾಯಿಸಬೇಕು, ಅಷ್ಟರಲ್ಲಿ ಅದರ ತಾಯಿ ಕರುವಿನ ರಕ್ಷಣೆ ಓಡಿ ಮಾಡುತ್ತದೆ.

ತನ್ನ ಕರುವನ್ನು ದುಷ್ಟ ವ್ಯಾಘ್ರನ ವಿರುದ್ಧ ಸೆಣಸಿ ರಕ್ಷಣೆ ಮಾಡುತ್ತದೆ. ಹಸುವಿನ ದಾಳಿಯಿಂದ ಕಂಗಲಾದ ಹುಲಿ ಅಲ್ಲಿಂದ ಓಡಿ ಹೋಗುತ್ತದೆ. ಇದೀಗ ಈ ಅದ್ಭುತ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹೆತ್ತ ಕಂದನ ರಕ್ಷಣೆಗೆ ಪಾಪದ ಹಸು ಕೂಡ ಹುಲಿಯ ಜೊತೆ ಹೋರಾಡುತ್ತದೆ ಎಂದರೆ ಅದಲ್ಲವೇ ತಾಯ್ತನದ ಶಕ್ತಿ. ಎಂಥದ್ದೇ ಪರಿಸ್ಥಿತಿ ಬರಲಿ ಹೆತ್ತ ತಾಯಿ ತನ್ನ ಕಂದನ ಎಂದಿಗೂ ಬಿಟ್ಟುಕೊಡಲ್ಲ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಕೆಲವರು ಜನರಿರುವ ಪ್ರದೇಶಕ್ಕೆ ಹುಲಿ ಬಾರದಂತೆ ತಡೆಯಬೇಕಾಗಿದೆ. ವಿಶ್ವದ ಶೇ. 75ರಷ್ಟು ಹುಲಿ ಭಾರತದಲ್ಲಿದೆ, ಸದ್ಯಕ್ಕೆ ಹುಲಿಗಳ ಸಂಖ್ಯೆ 3200 ಇದೆ, ಇವುಗಳ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ. ಹುಲಿಗಳನ್ನು ಸಂರಕ್ಷಿತ ಕಾಡಿನಲ್ಲಿ ಬಿಡಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾವು ಮನುಷ್ಯರ ಕಾಡನ್ನು ನಾಶ ಪಡಿಸಿದರ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನೆಟ್ಟಿಗರನ್ನು ಪುಣ್ಯಕೋಟಿ ಕತೆ ನೆನಪು ಮಾಡುವಂತೆ ಮಾಡಿದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ....



Click it and Unblock the Notifications