Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಕರುವಿನ ಮೇಲೆ ದಾಳಿ ಮಾಡಿದ ಹುಲಿ, ಪುಣ್ಯಕೋಟಿ ಮಾಡಿದ ಕಾರ್ಯನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು
ಪುಣ್ಯಕೋಟಿ ಕತೆ ನಿಮಗೆಲ್ಲಾ ಗೊತ್ತಿರಬಹುದು. ದುಷ್ಟ ವ್ಯಾಘ್ರನು ಹಸುವನ್ನು ತಿನ್ನಲು ಮುಂದಾದಾಗ ನನ್ನ ಕಂದನು ನನ್ನನ್ನು ಕಾಯುತ್ತಾ ಹಟ್ಟಿಯಲ್ಲಿದೆ, ಅದಕ್ಕೆ ಹಾಲುಣಿಸಿ ಬಂದ ನಿನಗೆ ಆಹಾರವಾಗುವೆ ಎಂದು ಹೇಳಿ ಆ ಪುಣ್ಯಕೋಟಿ ಕೊನೆಯ ಬಾರಿ ತನ್ನ ಕಂದನಿಗೆ ಹಾಲುಣಿಸಿ ಬರುತ್ತೇನೆ ಎಂದು ತೆರಳುತ್ತದೆ. ಆದರೆ ಈ ರಿಯಲ್ ಕತೆ ಕೂಡ ಪುಣ್ಯಕೋಟಿ ಹಾಗೂ ಹುಲಿಗೆ ಸಂಬಂಧಿಸಿದ್ದೇ ಆದರೆ ಇದರಲ್ಲಿರುವ ಟ್ವಿಸ್ಟ್ ಮಾತ್ರ ರೋಚಕ...
ಹುಲಿಯೊಂದು ಆಹಾರ ಹುಡುಕುತ್ತಾ ನಾಡಿಗೆ ಬಂದಿದೆ, ಅಲ್ಲಿ ಹಸುಗಳ ದಂಡು ಆಹಾರ ಮೇಯುತ್ತಿರುವುದನ್ನು ಕಂಡು ಸೀದಾ ಅವುಗಳತ್ತ ದಾಳಿ ಮಾಡಲು ಹೋಗುತ್ತದೆ. ಹುಲಿಯನ್ನು ನೋಡಿದ ತಕ್ಷಣ ಹಸುಗಳು ಪ್ರಾಣ ರಕ್ಷಣೆಗೆ ಓಡಿ ಹೋಗುತ್ತವೆ, ಆದರೆ ಪಾಪ ಕರುವೊಂದು ಹುಲಿ ಸಿಕ್ಕಾಕಿಕೊಳ್ಳುತ್ತದೆ. ಹುಲಿ ಕರುವನ್ನು ಹಿಡಿದು ಇನ್ನೇನು ಅದನ್ನು ಸಾಯಿಸಬೇಕು, ಅಷ್ಟರಲ್ಲಿ ಅದರ ತಾಯಿ ಕರುವಿನ ರಕ್ಷಣೆ ಓಡಿ ಮಾಡುತ್ತದೆ.

ತನ್ನ ಕರುವನ್ನು ದುಷ್ಟ ವ್ಯಾಘ್ರನ ವಿರುದ್ಧ ಸೆಣಸಿ ರಕ್ಷಣೆ ಮಾಡುತ್ತದೆ. ಹಸುವಿನ ದಾಳಿಯಿಂದ ಕಂಗಲಾದ ಹುಲಿ ಅಲ್ಲಿಂದ ಓಡಿ ಹೋಗುತ್ತದೆ. ಇದೀಗ ಈ ಅದ್ಭುತ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹೆತ್ತ ಕಂದನ ರಕ್ಷಣೆಗೆ ಪಾಪದ ಹಸು ಕೂಡ ಹುಲಿಯ ಜೊತೆ ಹೋರಾಡುತ್ತದೆ ಎಂದರೆ ಅದಲ್ಲವೇ ತಾಯ್ತನದ ಶಕ್ತಿ. ಎಂಥದ್ದೇ ಪರಿಸ್ಥಿತಿ ಬರಲಿ ಹೆತ್ತ ತಾಯಿ ತನ್ನ ಕಂದನ ಎಂದಿಗೂ ಬಿಟ್ಟುಕೊಡಲ್ಲ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಕೆಲವರು ಜನರಿರುವ ಪ್ರದೇಶಕ್ಕೆ ಹುಲಿ ಬಾರದಂತೆ ತಡೆಯಬೇಕಾಗಿದೆ. ವಿಶ್ವದ ಶೇ. 75ರಷ್ಟು ಹುಲಿ ಭಾರತದಲ್ಲಿದೆ, ಸದ್ಯಕ್ಕೆ ಹುಲಿಗಳ ಸಂಖ್ಯೆ 3200 ಇದೆ, ಇವುಗಳ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ. ಹುಲಿಗಳನ್ನು ಸಂರಕ್ಷಿತ ಕಾಡಿನಲ್ಲಿ ಬಿಡಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾವು ಮನುಷ್ಯರ ಕಾಡನ್ನು ನಾಶ ಪಡಿಸಿದರ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನೆಟ್ಟಿಗರನ್ನು ಪುಣ್ಯಕೋಟಿ ಕತೆ ನೆನಪು ಮಾಡುವಂತೆ ಮಾಡಿದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ....



Click it and Unblock the Notifications